ಜಗಿತ್ಯಾಲ (ತೆಲಂಗಾಣ): ಸ್ನೇಹಿತರಿಂದ ನಿರಂತರ ಮಾನಸಿಕ ಕಿರುಕುಳಕ್ಕೆ ಒಳಗಾಗಿ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಜಗಿತ್ಯಾಲ ಜಿಲ್ಲೆ ಗ್ರಾಮೀಣ ಮಂಡಲದಲ್ಲಿ ನಡೆದಿದ್ದು, ಇದೊಂದು ಆತ್ಮವಿದ್ರಾವಕ ಚಿಂತೆ ಮೂಡಿಸಿದೆ.

ಕಿರುಕುಳದಿಂದ ಸಾವಿಗೆ ಶರಣಾದ ಯುವತಿಯನ್ನು ಕಾಟಿಪಲ್ಲಿ ನಿತ್ಯಾ (21) ಎಂದು ಗುರುತಿಸಲಾಗಿದೆ. ಹೈದರಾಬಾದ್‌ನ ರಿಷಿ ಮಹಿಳಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಟೆಕ್ ಮೂರನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ನಿತ್ಯಾ, ಕಾಲೇಜು ಮತ್ತು ಹಾಸ್ಟೆಲ್‌ ಪಠ್ಯಜೀವನದಲ್ಲಿ ಸ್ನೇಹಿತರಾದ ವೈಷ್ಣವಿ ಮತ್ತು ಸಂಜನಾ ಅವರಿಂದ ಹನಿಸು, ನಿಂದನೆ, ತಿರಸ್ಕಾರಗಳಿಗೆ ಗುರಿಯಾಗುತ್ತಿದ್ದಳು ಎನ್ನಲಾಗಿದೆ.

ನಿತ್ಯಾ ಮೇಲಿನ ಈ ಕಿರುಕುಳ ಅವಳ ಮಾನಸಿಕ ಸ್ಥಿತಿಗೆ ಹಾನಿ ಮಾಡಿದ್ದು, ಓದಿನಲ್ಲಿಯೂ ಹಿಂದಿಕ್ಕುವಂತಾಗಿದೆ. ಈ ಮಾನಸಿಕ ಆಘಾತದ ಮಧ್ಯೆ ಜುಲೈ 1ರಂದು ನಿತ್ಯಾ ತನ್ನ ಮನೆಗೆ ಬಂದಿದ್ದಳು. ಜುಲೈ 2ರಂದು ಮನೆಯವರು ಹೊರಗೆ ಇದ್ದ ಸಂದರ್ಭ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಅಸ್ವಸ್ಥಗೊಂಡ ನಿತ್ಯಾಳನ್ನು ಕೂಡಲೇ ಜಗಿತ್ಯಾಲದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕರೀಂನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಜುಲೈ 5 ರಂದು ಬೆಳಿಗ್ಗೆ ನಿತ್ಯಾ ಮೃತಪಟ್ಟಳು.

ಈ ಕುರಿತು ನಿತ್ಯಾಳ ತಂದೆ ಕಾಟಿಪಲ್ಲಿ ತಿರುಪತಿ ನೀಡಿದ ದೂರಿನಡಿ ಪ್ರಕರಣ ದಾಖಲಾಗಿದ್ದು, ಪ್ರಕರಣವನ್ನು ತನಿಖೆ ನಡೆಸುತ್ತಿರುವ ಗ್ರಾಮೀಣ ಪೊಲೀಸ್ ಠಾಣೆಯ ಸಬ್‌ ಇನ್ಸ್‌ಪೆಕ್ಟರ್ ಸುಧಾಕರ್ ಮಾಹಿತಿ ನೀಡಿದ್ದಾರೆ.

ಈ ಘಟನೆ ಹೈದರಾಬಾದ್‌ನಲ್ಲಿ ವಿದ್ಯಾರ್ಥಿನಿಯರ ಸುರಕ್ಷತೆ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುವ ಮಾನಸಿಕ ಕಿರುಕುಳದ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಅಗತ್ಯತೆಯ ಬಗ್ಗೆ ಮತ್ತೆ ಪ್ರಶ್ನೆ ಎತ್ತಿದೆ.

Related News

error: Content is protected !!