Categories: CrimeLatest

ಚಿತ್ರದುರ್ಗದಲ್ಲಿ ಖಾಕಿ ಹೆಸರಲ್ಲಿ ದರೋಡೆ: ನಕಲಿ ಪೊಲೀಸ್ ಅರೆಸ್ಟ್!

ಚಿತ್ರದುರ್ಗ ನಗರದಲ್ಲಿ ನಕಲಿ ಪೊಲೀಸ್ ಹೆಸರಿನಲ್ಲಿ ದರೋಡೆ ನಡೆಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ.

ದಿನಾಂಕ 05.04.2026 ರಂದು ಸುಲ್ತಾನಿಪುರ ಗ್ರಾಮದ ಸಲೀಂ ಎ (ತಂದೆ ಅಬ್ದುಲ್ಲಾ) ಅವರು ಚಿತ್ರದುರ್ಗ ನಗರದ ಅಜಾದ್ ಮಿಲ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಈ ವೇಳೆ ಕಪ್ಪು ಬಣ್ಣದ ಟಿವಿಎಸ್ ರೈಡರ್ ಬೈಕ್ (ಕೆಎ-09-ಕೆಎ-1181)ನಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ, “ನಾನು ಪೊಲೀಸ್, ಸ್ಟೇಷನ್‌ಗೆ ಹೋಗೋಣ” ಎಂದು ಬೆದರಿಕೆ ಹಾಕಿ ಸಲೀಂ ಅವರನ್ನು ತನ್ನ ಬೈಕ್‌ನಲ್ಲಿ ಕೂರಿಸಿಕೊಂಡಿದ್ದಾನೆ.

ನಂತರ ಅವರನ್ನು ನಗರದ ಎಪಿಎಂಸಿ ಮಾರ್ಕೆಟ್ ಒಳಗೆ ಕರೆದುಕೊಂಡು ಹೋಗಿ ಬೈಕ್ ನಿಲ್ಲಿಸಿ, ಕಪಾಳಕ್ಕೆ ಹೊಡೆದು ಬೆದರಿಸಿ, ಜೇಬಿನಲ್ಲಿದ್ದ ವಿವೋ ಕಂಪನಿಯ ಮೊಬೈಲ್ ಫೋನ್ ಹಾಗೂ ₹8,700 ನಗದು ಹಣವನ್ನು ಬಲವಂತವಾಗಿ ಕಿತ್ತುಕೊಂಡು ಪರಾರಿಯಾಗಿದ್ದಾನೆ.

ಈ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಮೊ.ನಂ: 75/2026 ಪ್ರಕರಣವನ್ನು ಬಿ.ಎನ್.ಎಸ್-2023ರ ಕಲಂ 309(4) ಅಡಿ 11.04.2026 ರಂದು ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದರು.

ಆರೋಪಿಯನ್ನು ಪತ್ತೆಹಚ್ಚಲು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ರಂಜಿತ್ ಕುಮಾರ್ ಬಂಡಾರು (ಐಪಿಎಸ್) ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ. ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ, ಡಿ.ವೈ.ಎಸ್.ಪಿ ಅರುಣ್ ನಾಗೇಗೌಡ ಅವರ ಉಸ್ತುವಾರಿಯಲ್ಲಿ, ಕೋಟೆ ಪೊಲೀಸ್ ಠಾಣೆಯ ಪಿ.ಐ ಪ್ರಕಾಶಗೌಡ ಪಾಟೀಲ ಅವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು.

ತನಿಖೆ ಮುಂದುವರಿಸಿದ ಪೊಲೀಸರಿಗೆ 11.04.2026 ರಂದು ಚಿತ್ರದುರ್ಗ ನಗರದ ಜೆಎಂಐಟಿ ಸರ್ಕಲ್ ಬಳಿ ಬಿಗ್ ಬಾಸ್ ಹೋಟೆಲ್ ಹತ್ತಿರ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ಸು ಸಿಕ್ಕಿದೆ. ಬಂಧಿತನನ್ನು ಚಿತ್ರದುರ್ಗ ನಗರದ ಐಯುಡಿಪಿ ಲೇಔಟ್ ನಿವಾಸಿ ರಮೇಶ್ (ತಂದೆ ರಂಗಸ್ವಾಮಿ) ಎಂದು ಗುರುತಿಸಲಾಗಿದೆ.

ಬಂಧನದ ವೇಳೆ ಆರೋಪಿಯ ಬಳಿಯಿಂದ ದೂರುದಾರನ ಮೊಬೈಲ್ ಫೋನ್ ಸೇರಿದಂತೆ ಇನ್ನೂ 4 ಮೊಬೈಲ್‌ಗಳು, ಕೃತ್ಯಕ್ಕೆ ಬಳಸಿದ ಮೋಟಾರ್ ಸೈಕಲ್ ಹಾಗೂ “ಕ್ರೈಂ ಸ್ಟೋರಿ ನ್ಯೂಸ್ 24×7” ಮತ್ತು “ಕರ್ನಾಟಕ ಪತ್ರಿಕಾ ಶಕ್ತಿ ಕೇಂದ್ರ” ಎಂಬ ನಕಲಿ ಗುರುತಿನ ಚೀಟಿಗಳನ್ನು ವಶಪಡಿಸಿಕೊಂಡಿದ್ದಾರೆ.

ನಂತರ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ.

ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.

ಭ್ರಷ್ಟರ ಬೇಟೆ

Recent Posts

ಅಂಕೋಲ: ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊತ್ತಿ ಉರಿದ ಪೆಟ್ರೋಲಿಯಂ ಟ್ಯಾಂಕರ್ – ಸಂಚಾರ ಸ್ಥಗಿತ

ಅಂಕೋಲ: ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಕಂಚಿನಬಾಗಿಲು ಬಳಿ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಪೆಟ್ರೋಲಿಯಂ ಉತ್ಪನ್ನ ಹೊತ್ತೊಯ್ಯುತ್ತಿದ್ದ ಟ್ಯಾಂಕರ್…

6 hours ago

ಮುಂಡಗೋಡದಲ್ಲಿ ಯೂರಿಯಾ ಸಂಕಷ್ಟ ತಡೆಗೆ ಸಭೆ: ತಾಲೂಕು ರೈತರಿಗೆ ಮೊದಲ ಆದ್ಯತೆ ನೀಡಲು ಸೂಚನೆ

ಮುಂಡಗೋಡ: ಶಿರಸಿಯ ಕೃಷಿ ಉಪ ನಿರ್ದೇಶಕರಾದ ಪಾಂಡು ಅವರ ನೇತೃತ್ವದಲ್ಲಿ ಮುಂಡಗೋಡ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಬುಧವಾರ ರಸಗೊಬ್ಬರ ಮಾರಾಟಗಾರರ…

6 hours ago

ಸೋಷಿಯಲ್ ಮೀಡಿಯಾ ಪ್ರೇಮದ ಸೆಳೆತ: 40ರ ಮಹಿಳೆಗಾಗಿ ಮನೆಬಿಟ್ಟು ಓಡಿದ 21ರ ಯುವಕ!

ಇತ್ತೀಚಿನ ದಿನಗಳಲ್ಲಿ ಪ್ರೇಮದ ಪರಿಕಲ್ಪನೆಗಳು ಬದಲಾಗುತ್ತಿದ್ದು, ವಯಸ್ಸಿನ ಅಂತರವನ್ನೇ ಮೀರಿ ಸಂಬಂಧಗಳು ರೂಪುಗೊಳ್ಳುತ್ತಿರುವುದು ಗಮನಾರ್ಹ. ಹಿಂದೆ ಸಾಮಾನ್ಯವಾಗಿ ಹುಡುಗ ಹುಡುಗಿಗಿಂತ…

10 hours ago

‘ಮರ್ಯಾದೆ’ ಹೆಸರಿನ ಕ್ರೌರ್ಯ: ಪ್ರೀತಿಸಿದ ತಂಗಿಗೆ ವಿಷ ಕುಡಿಸಿ ಕೊಂದ ಅಣ್ಣಂದಿರು!

ಬೆಳಗಾವಿ: ರಾಜ್ಯದಲ್ಲಿ ಕಾನೂನು ಕಠಿಣವಾಗಿದ್ದರೂ, ‘ಮರ್ಯಾದೆ’ ಹೆಸರಿನಲ್ಲಿ ನಡೆಯುವ ಹತ್ಯೆಗಳು ಕಡಿಮೆಯಾಗುತ್ತಿಲ್ಲ. ಇತ್ತೀಚೆಗೆ ಹುಬ್ಬಳ್ಳಿ ಘಟನೆಯ ಬೆನ್ನಲ್ಲೇ, ಈಗ ಬೆಳಗಾವಿ…

17 hours ago

ಪಾರ್ಕ್‌ನಲ್ಲಿ ಪ್ರೇಯಸಿಯೊಂದಿಗೆ ಪತಿ ಸಿಕ್ಕಿಬಿದ್ದ! ಪತ್ನಿ ಶೂನಿಂದ ದಾಳಿ..!

ಪಾರ್ಕ್‌ನಲ್ಲಿ ಪ್ರೇಯಸಿಯೊಂದಿಗೆ ಏಕಾಂತವಾಗಿ ಸಮಯ ಕಳೆಯುತ್ತಿದ್ದ ಪತಿಯೊಬ್ಬನು, ಪತ್ನಿಯ ಕೈಗೆ ಸಿಕ್ಕಿಬಿದ್ದ ರೋಚಕ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ…

1 day ago

“ನಿನ್ನ ವಿರುದ್ಧ ಹೈಕಮಾಂಡ್ ಅಸಮಾಧಾನ, ನೀನೇ ಸರಿಪಡಿಸ್ಕೋ” – ಜಮೀರ್‌ಗೆ ಸಿಎಂ ಸಿದ್ದರಾಮಯ್ಯ ಖಡಕ್ ಎಚ್ಚರಿಕೆ

ಬೆಂಗಳೂರುದಲ್ಲಿರುವ ಕಾವೇರಿ ನಿವಾಸದಲ್ಲಿ Siddaramaiah ಮತ್ತು Zameer Ahmed Khan ನಡುವಿನ ಭೇಟಿಯು ರಾಜ್ಯ ರಾಜಕೀಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. Indian…

2 days ago