ಉಜ್ವಲ ಭವಿಷ್ಯದ ಕನಸಿನೊಂದಿಗೆ ಉನ್ನತ ಶಿಕ್ಷಣಕ್ಕಾಗಿ ಕೆನಡಾಕ್ಕೆ ತೆರಳಿದ್ದ ಭಾರತೀಯ ವಿದ್ಯಾರ್ಥಿನಿಯೊಬ್ಬಳು ಹತ್ಯೆಯಾಗಿರುವ ಘಟನೆ ಆಘಾತ ಮೂಡಿಸಿದೆ. ಪಂಜಾಬ್ನ ಲುಧಿಯಾನ ಮೂಲದ 23 ವರ್ಷದ ದಮನ್ಪ್ರೀತ್ ಕೌರ್ ಅವರನ್ನು ಎಡ್ಮಂಟನ್ನಲ್ಲಿ ಅವರ ಲಿವ್-ಇನ್ ಸಂಗಾತಿ ಕೊಲೆ ಮಾಡಿರುವ ಆರೋಪದಡಿ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.
ಮಾಹಿತಿಯ ಪ್ರಕಾರ, ದಮನ್ಪ್ರೀತ್ ಕೌರ್ ಸುಮಾರು ಐದು ವರ್ಷಗಳ ಹಿಂದೆ ಸ್ಟೂಡೆಂಟ್ ವೀಸಾದ ಮೇಲೆ ಕೆನಡಾಕ್ಕೆ ತೆರಳಿದ್ದರು. ಜುಲೈ 9ರಂದು ಎಡ್ಮಂಟನ್ನ ಸಿಲ್ವರ್ಬೆರಿ ಪ್ರದೇಶದ ನಿವಾಸದಲ್ಲಿ ಗಂಭೀರ ಗಾಯಗೊಂಡ ಸ್ಥಿತಿಯಲ್ಲಿ ಅವರು ಪತ್ತೆಯಾಗಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಜುಲೈ 12ರಂದು ಅವರು ಮೃತಪಟ್ಟಿದ್ದಾರೆ.
ಜುಲೈ 14ರಂದು ನಡೆದ ಮರಣೋತ್ತರ ಪರೀಕ್ಷೆಯಲ್ಲಿ ದಮನ್ಪ್ರೀತ್ ಅವರ ಸಾವಿಗೆ ಕತ್ತು ಹಿಸುಕಿರುವುದೇ ಕಾರಣ ಎಂಬುದು ದೃಢಪಟ್ಟಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅವರೊಂದಿಗೆ ವಾಸವಿದ್ದ 22 ವರ್ಷದ ರಿತೇಶ್ ಕುಮಾರ್ ಎಂಬಾತನನ್ನು ಕೆನಡಾ ಪೊಲೀಸರು ಬಂಧಿಸಿದ್ದು, ಆತನ ವಿರುದ್ಧ ಎರಡನೇ ಹಂತದ ಕೊಲೆ (Second-degree Murder) ಆರೋಪ ದಾಖಲಿಸಲಾಗಿದೆ. ಇದನ್ನು ‘ಇಂಟಿಮೇಟ್ ಪಾರ್ಟ್ನರ್ ಹೋಮಿಸೈಡ್’ ಪ್ರಕರಣ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ದಮನ್ಪ್ರೀತ್ ಅವರ ಶಿಕ್ಷಣ ಹಾಗೂ ವಿದೇಶಿ ಕನಸಿಗಾಗಿ ಪೋಷಕರು ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದರು. ಕುಟುಂಬಕ್ಕೆ ಆಸರೆಯಾಗಬೇಕಿದ್ದ ಮಗಳ ಅಕಾಲಿಕ ಮರಣದಿಂದ ಕುಟುಂಬ ತೀವ್ರ ದುಃಖಕ್ಕೆ ಒಳಗಾಗಿದೆ. ಮೃತದೇಹವನ್ನು ಭಾರತಕ್ಕೆ ತರಲು ‘ಗೋ ಫಂಡ್ ಮೀ’ (GoFundMe) ಮೂಲಕ ಆರ್ಥಿಕ ನೆರವು ಸಂಗ್ರಹಿಸಲಾಗುತ್ತಿದ್ದು, 20,000 ಕೆನಡಿಯನ್ ಡಾಲರ್ ಗುರಿಯಲ್ಲಿ ಈಗಾಗಲೇ 18,000 ಡಾಲರ್ಗಿಂತ ಹೆಚ್ಚು ಹಣ ಸಂಗ್ರಹವಾಗಿದೆ ಎಂದು ತಿಳಿದುಬಂದಿದೆ.
ಇತ್ತೀಚಿನ ದಿನಗಳಲ್ಲಿ ಕೆನಡಾದಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಹಲವು ಅಹಿತಕರ ಘಟನೆಗಳು ವರದಿಯಾಗುತ್ತಿರುವ ಹಿನ್ನೆಲೆ, ಅಲ್ಲಿರುವ ಭಾರತೀಯ ಸಮುದಾಯ ಹಾಗೂ ವಿದ್ಯಾರ್ಥಿಗಳ ಸುರಕ್ಷತೆ ಕುರಿತು ಮತ್ತೆ ಆತಂಕ ವ್ಯಕ್ತವಾಗಿದೆ.
ಕೇರಳ: ಜೀವನದಲ್ಲಿ ಎದುರಾಗುವ ಕಷ್ಟಗಳು ಮತ್ತು ವೈಫಲ್ಯಗಳು ನಮ್ಮ ಗುರಿಯನ್ನು ತಡೆಯಲು ಸಾಧ್ಯವಿಲ್ಲ ಎಂಬುದನ್ನು ಕೇರಳ ಮೂಲದ ಐಎಎಸ್ ಅಧಿಕಾರಿ…
ಬೆಳಗಾವಿ: ಅಥಣಿ ತಾಲೂಕಿನ ಗಾಂಧಿ ಮಾರ್ಕೆಟ್ ಪ್ರದೇಶದಲ್ಲಿರುವ ವೆಂಕಟೇಶ್ವರ ಲಾಡ್ಜ್ನಲ್ಲಿ ಅಕ್ರಮವಾಗಿ ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ…
ಆಂಧ್ರ ಪ್ರದೇಶದ ಕಾಕಿನಾಡ ಜಿಲ್ಲೆಯ ಗೊಲ್ಲಪ್ರೋಲು ಪ್ರದೇಶದಲ್ಲಿ ಪ್ರೇಮ ವೈಫಲ್ಯದಿಂದ ಮನನೊಂದಿದ್ದ ಯುವತಿಯೊಬ್ಬಳು, ತಾನು ಪ್ರೀತಿಸಿದ್ದ ಯುವಕನಿಗೆ ವೀಡಿಯೊ ಕಾಲ್…
ಬೆಂಗಳೂರು: ಸಾರಿಗೆ ಸಚಿವ ಭೈರತಿ ಸುರೇಶ್ ಅವರನ್ನು ಬಿಎಂಟಿಸಿ ಬಸ್ನಿಂದ ಕೆಳಗಿಳಿಸಿದ್ದ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಕಂಡಕ್ಟರ್ ರಾಮಕೃಷ್ಣ ಅವರಿಗೆ ಮತ್ತೊಂದು…
ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಫಾಲೋವರ್ಸ್, ಲೈಕ್ಸ್ ಮತ್ತು ವೈರಲ್ ಖ್ಯಾತಿ ಗಳಿಸುವ ಹುಚ್ಚು ಕೆಲವರನ್ನು ವಿಚಿತ್ರ ಹಾಗೂ ವಿವಾದಾತ್ಮಕ ಕೃತ್ಯಗಳತ್ತ…
ಹೈದರಾಬಾದ್ನ ಐಟಿ ಕಾರಿಡಾರ್ನಲ್ಲಿ 'ವೈಫ್ ಎಕ್ಸ್ಚೇಂಜ್' ಹೆಸರಿನಲ್ಲಿ ರಹಸ್ಯ ಪಾರ್ಟಿಗಳು ನಡೆಯುತ್ತಿವೆ ಎಂಬ ಗಂಭೀರ ಆರೋಪವನ್ನು ನಟಿ ಮಾಧವಿಲತಾ ಮಾಡಿದ್ದಾರೆ.…