Latest

ರೇಷನ್ ಕಾರ್ಡ್ ನಲ್ಲಿ ದತ್ತ ಬದಲು ಕುತ್ತಾ; ಸಿಟ್ಟಿಗೆದ್ದು ಅಧಿಕಾರಿಯ ಮುಂದೆ ಬೊಗಳಿದ ವ್ಯಕ್ತಿ.

ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯ ಶ್ರೀಕಾಂತ್ ಕುಮಾರ್ ದತ್ತಾ ಇದೀಗ ಅಧಿಕಾರಿಗಳ ಎದುರು ಪ್ರತಿಭಟನೆ ಮಾಡಿದ್ದಾರೆ. ಶ್ರೀಕಾಂತ್ ದತ್ತಾ ಅವರ ಪಡಿತರ ಚೀಟಿಯಲ್ಲಿನ ತಪ್ಪು ಅವರ ಈ ಸಿಟ್ಟಿಗೆ ಕಾರಣವಾಗಿದೆ.
ಶ್ರೀಕಾಂತ್ ಅವರ ಪಡಿತರ ಚೀಟಿಯಲ್ಲಿ ದತ್ತಾ ಬದಲಿಗೆ ಕುತ್ತಾ ಎಂದು ಬರೆಯಲಾಗಿದೆ. ಪಡಿತರ ಚೀಟಿಯಲ್ಲಿನ ಈ ತಪ್ಪಿನಿಂದಾಗಿ ಶ್ರೀಕಾಂತ್ ತೀವ್ರ ಕೋಪಗೊಂಡರು. ಈ ವೇಳೆ ಬಿಡಿಒ ಅವರ ಮುಂದೆ ಬೊಗಳಿ ಪ್ರತಿಭಟನೆ ನಡೆಸಿದರು. ಮತ್ತೊಂದೆಡೆ ಇದೆಲ್ಲ ಕ್ಯಾಮರಾದಲ್ಲಿ ಸೆರೆಯಾಗುತ್ತಿತ್ತು. ಇದೀಗ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಘಟನೆಯ ನಂತರ, ಪಡಿತರ ಚೀಟಿಯಲ್ಲಿ ನನ್ನ ಉಪನಾಮವನ್ನು ಮೂರು ಬಾರಿ ತಪ್ಪಾಗಿ ಬರೆಯಲಾಗಿದೆ ಎಂದು ಶ್ರೀಕಾಂತ್ ದತ್ತಾ ಹೇಳಿದ್ದಾರೆ. ಮೊದಲ ಎರಡು ಬಾರಿ ಶ್ರೀಕಾಂತ್ ಮಂಡಲ್ ಮತ್ತು ಶ್ರೀಕಾಂತಿ ಎಂದು ಬರೆದಿದ್ದರೆ ಈ ಬಾರಿ ಶ್ರೀಕಾಂತ್ ದತ್ತಾ ಎಂಬ ನನ್ನ ಹೆಸರನ್ನು ಶ್ರೀಕಾಂತ್ ಕುತ್ತಾ ಎಂದು ಬರೆಯಲಾಗಿದೆ. ನಾನು ಮತ್ತೆ ಅರ್ಜಿ ಹಾಕಿದೆ, ಅಲ್ಲಿ ನಾನು ಜಂಟಿ BDO ಅವರನ್ನು ನೋಡಿದೆ, ಆಗ ನನ್ನ ಸಿಟ್ಟನ್ನು ಹೊರಹಾಕಿದೆ ಎಂದಿದ್ದಾರೆ. ಆದರೆ ಅವರು ನನ್ನ ಪ್ರಶ್ನೆಗೆ ಉತ್ತರಿಸದೆ ಅಲ್ಲಿಂದ ಹೊರಟು ಹೋದರು. ನಮ್ಮಂತಹ ಜನಸಾಮಾನ್ಯರು ಎಷ್ಟು ಬಾರಿ ಕೆಲಸ ಬಿಟ್ಟು ಈ ರೀತಿಯ ತಪ್ಪುಗಳನ್ನು ತಿದ್ದಲು ಅರ್ಜಿ ಸಲ್ಲಿಸಲು ಹೋಗುತ್ತಾರೆ ಹೇಳಿ! ಎಂದು ಹೇಳಿದರು. ಈ ಸಂಪೂರ್ಣ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಭ್ರಷ್ಟರ ಬೇಟೆ

Recent Posts

ಟೊರೊಂಟೊದಲ್ಲಿ ಭಾರತೀಯ ಮೂಲದ ಯುವತಿ ಹತ್ಯೆ: 7 ತಿಂಗಳ ಬಳಿಕ ಆಪ್ತ ವ್ಯಕ್ತಿ ಅರೆಸ್ಟ್‌!

ಟೊರೊಂಟೊ: ಕೆನಡಾದ ಟೊರೊಂಟೊದಲ್ಲಿ ಭಾರತೀಯ ಮೂಲದ 30 ವರ್ಷದ ಯುವತಿ ಹಿಮಾಂಶಿ ಖುರಾನಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು…

5 hours ago

ಇನ್‌ಸ್ಟಾಗ್ರಾಂ ಪ್ರೇಮಿಗಾಗಿ 6 ತಿಂಗಳ ಕಂದಮ್ಮನನ್ನೇ ಕೊಲ್ಲಿಸಿದ ತಾಯಿ! ಮೀರಾಟ್‌ನಲ್ಲಿ ಬೆಚ್ಚಿಬೀಳಿಸಿದ ಘಟನೆ

ಮೀರಾಟ್: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಪ್ರೇಮಿಗಾಗಿ ತಾಯಿಯೊಬ್ಬಳು ತನ್ನ ಆರು ತಿಂಗಳ ಹಸುಗೂಸಿನ ಸಾವಿಗೆ ಕಾರಣಳಾದ ಆರೋಪ ಕೇಳಿಬಂದಿದ್ದು, ಉತ್ತರ…

5 hours ago

ಹುಬ್ಬಳ್ಳಿ–ಅಂಕೋಲಾ ರೈಲ್ವೆ ಯೋಜನೆಗೆ ಭೂಸ್ವಾಧೀನ ಅಧಿಕೃತ ಚಾಲನೆ

163 ಕಿ.ಮೀ. ಉದ್ದದ ಯೋಜನೆ; ಉತ್ತರ ಕನ್ನಡದ 40 ಗ್ರಾಮಗಳು ಭೂಸ್ವಾಧೀನ ವ್ಯಾಪ್ತಿಗೆ ಉತ್ತರ ಕನ್ನಡ: ಹಲವು ವರ್ಷಗಳಿಂದ ನನೆಗುದಿಗೆ…

5 hours ago

ಪಾಂಡೆಗಾಂವ–ಕಂಗೋಳಿ ರಸ್ತೆ ಕೆಸರಿನ ಹೊಂಡ: ಜನರ ಆಕ್ರೋಶ, ಕಾಮಗಾರಿ ವಿಳಂಬವಾದರೆ ರಸ್ತೆ ತಡೆ ಎಚ್ಚರಿಕೆ

ಮಳೆ ಬಂದರೆ ಕೆಸರುಗದ್ದೆ; ವಿದ್ಯಾರ್ಥಿಗಳು, ವೃದ್ಧರು, ರೋಗಿಗಳ ಸಂಚಾರಕ್ಕೆ ಸಂಕಷ್ಟ — ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ ಕಾಗವಾಡ: ಬೆಳಗಾವಿ…

5 hours ago

ಜಾತ್ರೆಯಲ್ಲಿ ಮಹಿಳೆಯ ಮಂಗಳಸೂತ್ರ ಕಳವು: ಮೂವರು ಆರೋಪಿಗಳ ಬಂಧನ

₹4.50 ಲಕ್ಷ ಮೌಲ್ಯದ ಚಿನ್ನ, ಕೃತ್ಯಕ್ಕೆ ಬಳಸಿದ್ದ ಬೈಕ್ ವಶ ಹಳಿಯಾಳ: ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಮಹಿಳೆಯೊಬ್ಬರ ಕೊರಳಲ್ಲಿದ್ದ ಚಿನ್ನದ…

20 hours ago

ಬೈಕ್‌ನಲ್ಲಿ ಕರೆದೊಯ್ದು ಹಣ ಕಸಿದು ಜೀವ ಬೆದರಿಕೆ: 24 ಗಂಟೆಯಲ್ಲೇ ಆರೋಪಿ ಬಂಧನ

ಸಿಸಿಟಿವಿ ಹಾಗೂ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯ ಪತ್ತೆ; ಬೈಕ್, ಹಣ ವಶ ಹೊನ್ನಾವರ: ಬ್ಯಾಂಕ್‌ನಿಂದ ಹಣ ಪಡೆದು ಹೊರಬಂದ…

20 hours ago