Categories: CrimeLatest

ಮಲತಾಯಿ ಜೊತೆ ಆಕ್ರಮ ಸಂಬಂಧ, ಬೇರೆ ಮದುವೆಯಾಗಲು ಹೊರಟ ಸವತಿ ಮಗನನ್ನು ಕೊಲ್ಲಿಸೇ ಬಿಟ್ಟಳು..!

ತೆಲಂಗಾಣದ ನಿರ್ಮಲ್ ಜಿಲ್ಲೆಯಲ್ಲಿ ತಾಯಿ-ಮಗನ ಪವಿತ್ರ ಬಾಂಧವ್ಯಕ್ಕೆ ಕಳಂಕ ತರುವಂತಹ ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ ಬಂದಿದೆ. ಸವತಿ ಮಗನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯೊಬ್ಬಳು, ಆತ ಸಂಬಂಧ ಕಡಿದು ಬೇರೆ ಮದುವೆಯಾಗಲು ಮುಂದಾದ ಹಿನ್ನೆಲೆಯಲ್ಲಿ ₹6 ಲಕ್ಷ ಸುಪಾರಿ ನೀಡಿ ಕೊಲೆ ಮಾಡಿಸಿರುವುದು ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ.

ಮೃತನನ್ನು ನಿರ್ಮಲ್ ನಗರದ ಆಟೋ ಚಾಲಕ ಅಸ್ಲಾಂ ಖಾನ್ (28) ಎಂದು ಗುರುತಿಸಲಾಗಿದೆ. ಸುಮಾರು 17 ವರ್ಷಗಳ ಹಿಂದೆ ಅಸ್ಲಾಂನ ತಂದೆ ಅನ್ವರಿ ಬೇಗಂ (41) ಅವರನ್ನು ಎರಡನೇ ವಿವಾಹವಾಗಿದ್ದರು. ಒಂದೇ ಮನೆಯಲ್ಲಿದ್ದ ಸಂದರ್ಭದಲ್ಲಿ ಅಸ್ಲಾಂ ಹಾಗೂ ಅನ್ವರಿ ಬೇಗಂ ನಡುವೆ ಅನೈತಿಕ ಸಂಬಂಧ ಬೆಳೆದಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಕೆಲ ದಿನಗಳ ಹಿಂದೆ ಅಸ್ಲಾಂ ಈ ಸಂಬಂಧವನ್ನು ಸಂಪೂರ್ಣವಾಗಿ ಕೊನೆಗೊಳಿಸಿ ಬೇರೆ ಮದುವೆಯಾಗಲು ನಿರ್ಧರಿಸಿದ್ದ. ಇದರಿಂದ ಆಕ್ರೋಶಗೊಂಡ ಅನ್ವರಿ ಬೇಗಂ, ಮದುವೆಯಾಗದಂತೆ ಬೆದರಿಕೆ ಹಾಕಿದ್ದಳು ಎನ್ನಲಾಗಿದೆ. ಈ ವಿಷಯವನ್ನು ಅಸ್ಲಾಂ ತನ್ನ ಚಿಕ್ಕಪ್ಪನಿಗೆ ತಿಳಿಸಿದ ಬಳಿಕ ಕುಟುಂಬದಲ್ಲಿ ಕಲಹ ಉಂಟಾಗಿ, ಆತ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದ್ದ.

ಅಸ್ಲಾಂ ತನಗೆ ಶಾಶ್ವತವಾಗಿ ದೂರವಾಗುತ್ತಿದ್ದಾನೆ ಎಂಬ ಸೇಡಿನಿಂದ ಅನ್ವರಿ ಬೇಗಂ ಕೊಲೆ ಸಂಚು ರೂಪಿಸಿದ್ದಳು. ಮಹಾರಾಷ್ಟ್ರ ಮೂಲದ ಸುಪಾರಿ ಹಂತಕ ಮುಖೀದ್ ಎಂಬಾತನೊಂದಿಗೆ ₹6 ಲಕ್ಷಕ್ಕೆ ಒಪ್ಪಂದ ಮಾಡಿಕೊಂಡು ₹50,000 ಮುಂಗಡ ಹಣ ನೀಡಿದ್ದಳು. ತನ್ನ ಸಹೋದರ ಶೇಖ್ ಮಹಮ್ಮದ್‌ನನ್ನೂ ಸಂಚಿನಲ್ಲಿ ಭಾಗಿಯಾಗುವಂತೆ ಮಾಡಿ, ಅಸ್ಲಾಂನ ಫೋಟೋ, ಆಟೋ ಸಂಖ್ಯೆ ಹಾಗೂ ದಿನನಿತ್ಯದ ಚಲನವಲನದ ಮಾಹಿತಿಯನ್ನು ಹಂತಕರಿಗೆ ತಲುಪಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಜುಲೈ 15ರಂದು ಬೆಳಿಗ್ಗೆ ವೈಎಸ್ಆರ್ ಕಾಲೋನಿ ಬಳಿ ಆಟೋದಲ್ಲಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಅಸ್ಲಾಂನನ್ನು ಕಾರಿನಲ್ಲಿ ಬಂದ ದುಷ್ಕರ್ಮಿಗಳು ಅಡ್ಡಗಟ್ಟಿ ಬಲವಂತವಾಗಿ ಕೆಳಗಿಳಿಸಿದರು. ಬಳಿಕ ಕತ್ತಿಯಿಂದ ಮನಬಂದಂತೆ ಹಲ್ಲೆ ನಡೆಸಿ ಪರಾರಿಯಾದರು. ಗಂಭೀರವಾಗಿ ಗಾಯಗೊಂಡಿದ್ದ ಅಸ್ಲಾಂ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟನು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನಿರ್ಮಲ್ ಜಿಲ್ಲಾ ಎಸ್‌ಪಿ ಜಾನಕಿ ಶರ್ಮಿಳಾ ಅವರ ನೇತೃತ್ವದಲ್ಲಿ ನಾಲ್ಕು ವಿಶೇಷ ಪೊಲೀಸ್ ತಂಡಗಳನ್ನು ರಚಿಸಿ ತನಿಖೆ ನಡೆಸಲಾಯಿತು. ವಿಚಾರಣೆ ವೇಳೆ ಪ್ರಮುಖ ಆರೋಪಿ ಅನ್ವರಿ ಬೇಗಂ ಕೊಲೆ ಸಂಚಿನ ಬಗ್ಗೆ ಬಾಯ್ಬಿಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಅನ್ವರಿ ಬೇಗಂ, ಮುಖೀದ್, ಅಫ್ರೋಜ್, ಸಾಯಿನಾಥ್ ಪವಾರ್, ಶೇಖ್ ಸಾಹಿದ್ ಹಾಗೂ ಶೇಖ್ ಮಹಮ್ಮದ್ ಸೇರಿ ಒಟ್ಟು ಆರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಭ್ರಷ್ಟರ ಬೇಟೆ

Recent Posts

ಮೀಸಲಾತಿ ಕುರಿತು ಅವಹೇಳನಕಾರಿ ಹೇಳಿಕೆ: ನಿರೂಪಕ ಅರುಣ್ ಬಡಿಗೇರ್ ವಿರುದ್ಧ ನೆಲಮಂಗಲದಲ್ಲಿ ದೂರು ದಾಖಲು

ನೆಲಮಂಗಲ: ಮೀಸಲಾತಿ ಕುರಿತು ಅವಹೇಳನಕಾರಿ ಹಾಗೂ ಸಮಾಜದಲ್ಲಿ ದ್ವೇಷ ಮತ್ತು ವಿಭಜನೆಗೆ ಕಾರಣವಾಗುವ ರೀತಿಯ ಹೇಳಿಕೆಗಳನ್ನು ನೀಡಿದ ಆರೋಪದಡಿ ಖಾಸಗಿ…

12 hours ago

MLC ಸ್ಥಾನ ಕೊಡಿಸುವುದಾಗಿ ₹1.5 ಕೋಟಿ ವಂಚನೆ; ಕಾಂಗ್ರೆಸ್ ನಾಯಕರ ಹೆಸರು ಬಳಸಿ ಮಹಿಳೆಗೆ ಮೋಸ, ಲೈಂಗಿಕ ಕಿರುಕುಳ ಆರೋಪ!

ಬೆಂಗಳೂರು: ಕಾಂಗ್ರೆಸ್‌ನ ಪ್ರಭಾವಿ ನಾಯಕರ ಮಾಧ್ಯಮ ಸಲಹೆಗಾರ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ, MLC ಸ್ಥಾನ ಕೊಡಿಸುವುದಾಗಿ ನಂಬಿಸಿ ಮಹಿಳೆಯೊಬ್ಬರಿಗೆ ₹1.50…

12 hours ago

ಮದುವೆಯಾಗು ಎಂದು ಪೀಡಿಸುತ್ತಿದ್ದ ಪ್ರಿಯತಮೆಯನ್ನೇ ಬೈಕ್ ನಲ್ಲಿ ಎಳೆದುಕೊಂಡು ಹೋದ ಪ್ರಿಯಕರ! 100 ಮೀಟರ್ ಭೀಕರ ದೃಶ್ಯ ವೈರಲ್

ಬಿಹಾರ: ಮದುವೆಯಾಗುವ ಭರವಸೆ ನೀಡಿ ಬಳಿಕ ನಿರಾಕರಿಸಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಜಗಳವು ಭೀಕರ ಸ್ವರೂಪ ಪಡೆದುಕೊಂಡಿದ್ದು, ಮಹಿಳೆಯೊಬ್ಬರನ್ನು ಬೈಕ್‌ನಲ್ಲಿ…

12 hours ago

4 ವರ್ಷಗಳಾದರೂ ಬಯಲಾಗದ ACF ಸಾವು ರಹಸ್ಯ: ಪತ್ನಿ ಆರೋಪಿಯೇ, ಅಥವಾ ನಿರಪರಾಧಿಯೇ?

ಒಡಿಶಾ: ನಾಲ್ಕು ವರ್ಷಗಳ ಹಿಂದೆ ನಡೆದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF) ಸೌಮ್ಯರಂಜನ್ ಮೊಹಾಪಾತ್ರ ಅವರ ಅನುಮಾನಾಸ್ಪದ ಸಾವು ಪ್ರಕರಣ…

12 hours ago

ಹುಟ್ಟಿದ ಎರಡು ದಿನದಲ್ಲೇ ಮಗುವನ್ನು ಆಸ್ಪತ್ರೆಯಲ್ಲಿ ಬಿಟ್ಟು ತಾಯಿ ನಾಪತ್ತೆ; NICUನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಂದಮ್ಮ

ಚಿಕ್ಕಬಳ್ಳಾಪುರದಲ್ಲಿ ಮನಕಲಕುವ ಘಟನೆಯೊಂದು ಬೆಳಕಿಗೆ ಬಂದಿದ್ದು, ಜನಿಸಿದ ಕೇವಲ ಎರಡು ದಿನಗಳ ಗಂಡು ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ತಾಯಿ ನಾಪತ್ತೆಯಾಗಿರುವ…

12 hours ago

ಕನಸಿನ ಮನೆಯ ಸಾಲವೇ ಕುಟುಂಬಕ್ಕೆ ಸಾವಿನ ಉರುಳು; ಪತ್ನಿ, ಮಕ್ಕಳ ಬಳಿಕ ಪತಿಯೂ ಕೊನೆಯುಸಿರು

ಕೋಲಾರ ತಾಲೂಕಿನ ಬೆಗ್ಲಿಬೆಣಜೇನಹಳ್ಳಿ ಗ್ರಾಮದಲ್ಲಿ ಸಾಲದ ಹೊರೆ ಮತ್ತು ಬಡ್ಡಿ ಕಿರುಕುಳದಿಂದ ಒಂದೇ ಕುಟುಂಬ ಸಂಪೂರ್ಣವಾಗಿ ನಾಶವಾದ ಮನಕಲಕುವ ಘಟನೆ…

12 hours ago