Latest

ನೈಕಿ, ಪೂಮಾ ಹೆಸರಿನಲ್ಲಿ ನಕಲಿ ಬಟ್ಟೆ ದಂಧೆ: ಸಿದ್ದಾಪುರದಲ್ಲಿ ಬೃಹತ್ ದಾಳಿ

ಬೆಂಗಳೂರು: ನಗರದ ಸಿದ್ದಾಪುರದಲ್ಲಿ ಹೆಸರಾಂತ ಬ್ರ್ಯಾಂಡ್‌ಗಳ ನಕಲಿ ಬಟ್ಟೆಗಳ ದಂಧೆ ಬೆಳಕಿಗೆ ಬಂದಿದೆ. ನೈಕಿ ಮತ್ತು ಪೂಮಾ ಸಂಸ್ಥೆಗಳ ಹೆಸರಿನಲ್ಲಿ ನಕಲಿ ಬಟ್ಟೆ ಮಾರಾಟ ಮಾಡುತ್ತಿದ್ದ ದೊಡ್ಡ ಮಾಪದಾರದ ಗೋಡೌನ್ ಮೇಲೆ ಸಿದ್ದಾಪುರ ಪೊಲೀಸರು ದಾಳಿ ನಡೆಸಿದ್ದು, ಲಕ್ಷಾಂತರ ಮೌಲ್ಯದ ಬಟ್ಟೆಗಳನ್ನು ವಶಪಡಿಸಿಕೊಂಡಿದ್ದಾರೆ.

ಆಧಿಕೃತ ಮಾಹಿತಿಯಂತೆ, ಸಿದ್ದಾಪುರದ ಭೈರಸಂದ್ರದಲ್ಲಿರುವ ಗೋಡೌನ್‌ನಲ್ಲಿ ನೈಕಿ, ಪೂಮಾ ಬ್ರ್ಯಾಂಡ್ ಹೆಸರು ಬಳಸಿ ಶರ್ಟ್, ಪ್ಯಾಂಟ್, ಟೀ-ಶರ್ಟ್, ಟ್ರಾಕ್ ಪ್ಯಾಂಟ್, ಒಳಉಡುಪು ಸೇರಿದಂತೆ ವಿವಿಧ ಬಟ್ಟೆಗಳನ್ನು ನಕಲಿ ರೂಪದಲ್ಲಿ ತಯಾರಿಸಿ ಮಾರಾಟ ಮಾಡಲಾಗುತ್ತಿತ್ತು. ಸುಮಾರು ₹8,000 ಮೌಲ್ಯದ ಬಟ್ಟೆಗಳನ್ನು ಕೇವಲ ₹2,000ಕ್ಕೆ ಸೇಲ್ ಮಾಡಲಾಗುತ್ತಿತ್ತು ಎನ್ನಲಾಗಿದೆ.

ಈ ದಂಧೆ ಹಿಂದಿರುವ ವ್ಯಕ್ತಿಯಾಗಿ ಅವಿನಾಶ್ ಎಂಬುವವರನ್ನು ಗುರುತಿಸಲಾಗಿದೆ. ದೆಹಲಿಯಿಂದ ನಕಲಿ ಬಟ್ಟೆಗಳನ್ನು ಸಾಗತ್ತಿಸಿ, ಬೆಂಗಳೂರಿನಲ್ಲಿ ಅವುಗಳನ್ನು ಪಕ್ಕಾ ಬ್ರ್ಯಾಂಡ್‌ಗಳ ಲುಕ್‌ನಲ್ಲಿಗೆ ತಂದು ಮಾರಾಟ ಮಾಡುತ್ತಿದ್ದತನಕ ಮಾಹಿತಿ ಲಭ್ಯವಾಗಿದೆ.

ನೈಕಿ ಹಾಗೂ ಪೂಮಾ ಕಂಪನಿಗಳ ಪ್ರತಿನಿಧಿ ಶ್ರೀಜಿತ್ ಅವರು ನೀಡಿದ ದೂರಿನ ಮೇಲೆ ಸಿದ್ದಾಪುರ ಪೊಲೀಸರು ತಕ್ಷಣದ ಕ್ರಮವಾಗಿ ದಾಳಿ ನಡೆಸಿದ್ದು, ನಕಲಿ ಬಟ್ಟೆಗಳಿಂದ ತುಂಬಿದ್ದ ಗೋಡೌನ್‌ನ್ನು ಸೀಜ್ ಮಾಡಿದ್ದಾರೆ. ಪ್ರಕರಣವನ್ನು ಕಾಫಿರೈಟ್ಸ್ ಕಾಯ್ದೆಯಡಿ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

ಈ ಘಟನೆ ಸಿಟಿಯಲ್ಲಿ ನಕಲಿ ಬ್ರ್ಯಾಂಡ್ ದಂಧೆಯ ಅಸ್ತಿತ್ವವನ್ನು ಮತ್ತೊಮ್ಮೆ ದೃಢಪಡಿಸಿದ್ದು, ಗ್ರಾಹಕರು ಹೆಚ್ಚಿನ ಜಾಗೃತೆಯಿಂದ ಶಾಪಿಂಗ್ ಮಾಡಬೇಕಾದ ಅವಶ್ಯಕತೆ ಎತ್ತಿಹಿಡಿದಿದೆ.

nazeer ahamad

Recent Posts

ಅಟ್ರಾಸಿಟಿ ಪ್ರಕರಣದಲ್ಲಿ ಆರೋಪಿಗಳ ಬಂಧನಕ್ಕೆ ಲಂಚ ಬೇಡಿಕೆ: ಸಿಪಿಐ ಲೋಕಾಯುಕ್ತ ಬಲೆಗೆ

ಅಟ್ರಾಸಿಟಿ ಪ್ರಕರಣದ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವ ವಿಚಾರದಲ್ಲಿ ಲಂಚ ಸ್ವೀಕರಿಸಿದ ಆರೋಪದಡಿ ಗುರುಮಠಕಲ್ ಪೊಲೀಸ್ ಠಾಣೆಯ ಸಿಪಿಐ ವೀರಣ್ಣ…

6 hours ago

ಕರ್ಕಶ ಶಬ್ದದ ಬೈಕ್ ವಿಚಾರಕ್ಕೆ ಪೊಲೀಸರ ಮೇಲೆಯೇ ವಿದ್ಯಾರ್ಥಿಗಳ ಹಲ್ಲೆ

ಚಿಕ್ಕಬಳ್ಳಾಪುರ ನಗರ ಹೊರವಲಯದ ಬೀಡಗಾನಹಳ್ಳಿ ಸಮೀಪದ ನಾಗಾರ್ಜುನ ಕಾಲೇಜು ಬಳಿ ಕರ್ತವ್ಯದಲ್ಲಿದ್ದ ಎಎಸ್‌ಐ ಹಾಗೂ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಕಾಲೇಜು…

13 hours ago

ಕ್ಯಾಂಟಿನ್‌ನಲ್ಲಿ ವೇಶ್ಯಾವಾಟಿಕೆ ದಂಧೆ: ಬೆಳ್ತಂಗಡಿಯಲ್ಲಿ ಪೊಲೀಸರ ದಾಳಿ, ಮೂವರು ಬಂಧನ

ಬೆಳ್ತಂಗಡಿ ಪಟ್ಟಣದಲ್ಲಿ ಅಕ್ರಮವಾಗಿ ನಿರ್ಮಾಣಗೊಂಡಿದ್ದ ಕ್ಯಾಂಟಿನ್‌ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆ ಮೇಲೆ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿರುವ ಘಟನೆ…

13 hours ago

ಒಂದು ವರ್ಷದ ನಿರೀಕ್ಷೆಗೆ ತೆರೆ: ಭಟ್ಕಳಕ್ಕೆ ಖಾಯಂ ಎಸಿ, ಜೆ. ಮಹೇಶ್ ಅಧಿಕಾರ ಸ್ವೀಕಾರ

ಭಟ್ಕಳ: ಸುಮಾರು ಒಂದು ವರ್ಷದಿನಿಂದ ಖಾಲಿಯಾಗಿದ್ದ ಭಟ್ಕಳ ಉಪ ವಿಭಾಗಾಧಿಕಾರಿ (ಎಸಿ) ಹುದ್ದೆಗೆ ಕೊನೆಗೂ ಸರ್ಕಾರ ಅಧಿಕಾರಿಯನ್ನು ನೇಮಕ ಮಾಡಿದ್ದು,…

1 day ago

ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ. ಸುಧಾಕರ್ ನಿಧನ; ರಾಜಕೀಯ ವಲಯದಲ್ಲಿ ಶೋಕದ ಛಾಯೆ

ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರಾಗಿದ್ದ ಡಿ. ಸುಧಾಕರ್ (65) ಅವರು ಅನಾರೋಗ್ಯದಿಂದ ಇಂದು ಮುಂಜಾನೆ ನಿಧನರಾಗಿದ್ದಾರೆ. ಕಳೆದ…

2 days ago

ಆಂಟಿ ಹಿಂದೆ ಹೋದವನ ದುರಂತ ಅಂತ್ಯ: ಲಿವ್-ಇನ್ ಸಂಗಾತಿಯ ಕಿರುಕುಳಕ್ಕೆ ಯುವಕ ಆತ್ಮಹತ್ಯೆ!

ಸೋಶಿಯಲ್ ಮೀಡಿಯಾದಲ್ಲಿ ಆರಂಭವಾದ ಪ್ರೇಮಕಥೆಯೊಂದು ದುರಂತ ಅಂತ್ಯ ಕಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾದ ಮಹಿಳೆಯೊಂದಿಗೆ ಲಿವ್-ಇನ್…

2 days ago