Latest

ಮುಸ್ಲಿಂ ಮಹಿಳೆಯರಿಗೆ ಖುಲಾ ಮೂಲಕ ಮದುವೆ ವಿಸರ್ಜನೆಗೆ ಪತಿಯ ಒಪ್ಪಿಗೆ ಅಗತ್ಯವಿಲ್ಲ: ತೆಲಂಗಾಣ ಹೈಕೋರ್ಟ್ ಸ್ಪಷ್ಟನೆ

ಹೈದ್ರಾಬಾದ್: ಮುಸ್ಲಿಂ ಮಹಿಳೆಯೊಬ್ಬಳು ಖುಲಾ ಮೂಲಕ ಮದುವೆ ಮುಕ್ತಗೊಳಿಸಲು ನಿರ್ಧರಿಸಿದರೆ, ಆ ನಿರ್ಧಾರಕ್ಕೆ ಪತಿಯ ಅನುಮತಿ ಬೇಕೆಂಬ ನಿಬಂಧನೆ ಇಲ್ಲ ಎಂಬ ಮಹತ್ವದ ತೀರ್ಪು ತೆಲಂಗಾಣ ಹೈಕೋರ್ಟ್ ನೀಡಿದೆ.

ಮುಸ್ಲಿಂ ಪಾರಂಪರಿಕ ನಿಯಮಗಳಲ್ಲಿ ಖುಲಾ ಎಂಬುದು ಪತ್ನಿಗೆ ನೀಡಲ್ಪಟ್ಟಿರುವ ಮದುವೆ ವಿಸರ್ಜನೆಯ ವಿಧಿ. ಪತ್ನಿಯು ವೈವಾಹಿಕ ಜೀವನ ಮುಂದುವರಿಸಲು ಇಚ್ಛೆ ಇಲ್ಲದೆ ಇದ್ದರೆ, ಖುಲಾ ಮೂಲಕ ಸಂಬಂಧ ಅಂತ್ಯಗೊಳಿಸಬಹುದು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ನೀಡಿದ ಹೊಸ ತೀರ್ಪು ಮುಸ್ಲಿಂ ಮಹಿಳೆಯರ ಹಕ್ಕಿಗೆ ಬಲ ನೀಡುವಂತಾಗಿದೆ.

ಈ ತೀರ್ಪು ನ್ಯಾಯಮೂರ್ತಿಗಳು ಮೌಶುಮಿ ಭಟ್ಟಾಚಾರ್ಯ ಮತ್ತು ಬಿ.ಆರ್. ಮಧುಸೂಧನ್ ರಾವ್ ನೇತೃತ್ವದ ಪೀಠದಿಂದ ಬಂದಿದೆ. ಪತ್ನಿಯು ಖುಲಾ ಘೋಷಿಸಿದರೆ ಅದು ತಕ್ಷಣದಿಂದಲೇ ಪರಿಣಾಮಕಾರಿ ಆಗುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ನ್ಯಾಯಾಲಯ ತನ್ನ ತೀರ್ಪಿನಲ್ಲಿ, “ಖುಲಾ ಮಾಡುವ ತೀರ್ಮಾನ ಪತ್ನಿಯ ಸ್ವತಂತ್ರ ನಿರ್ಧಾರವಾಗಿದ್ದು, ಇದಕ್ಕೆ ಪತಿಯ ಒಪ್ಪಿಗೆ ಅಥವಾ ಧಾರ್ಮಿಕ ಗಣ್ಯರ ಅನುಮತಿ ಅಗತ್ಯವಿಲ್ಲ. ಮುಫ್ತಿ ಅಥವಾ ದಾರ್-ಉಲ್-ಖಾಜಾ ನೀಡುವ ಖುಲಾನಾಮ ಕಾನೂನಾತ್ಮಕವಾಗಿ ಬಾಧ್ಯತೆ ಸೃಷ್ಟಿಸುವುದಿಲ್ಲ. ಅದು ಕೇವಲ ಸಲಹೆಯೆಂದಷ್ಟೆ,” ಎಂದು ಸ್ಪಷ್ಟಪಡಿಸಿದೆ.

ಇನ್ನು ಖುಲಾ ಪ್ರಕ್ರಿಯೆ ಸಂಬಂಧಿತ ಯಾವುದೇ ವಿವಾದದ ಬಗ್ಗೆ ನ್ಯಾಯಾಲಯಗಳೇ ಅಂತಿಮ ತೀರ್ಪು ನೀಡಬಲ್ಲವು. ದಾಂಪತ್ಯ ಬದುಕನ್ನು ಮುಕ್ತಗೊಳಿಸುವ ಹಕ್ಕು ಪತ್ನಿಯ ವ್ಯಕ್ತಿಗತ ಆಯ್ಕೆ ಎನಿಸಿ, ನ್ಯಾಯಾಲಯ ಈ ನಿರ್ಧಾರ ತೆಗೆದುಕೊಂಡಿದೆ.

nazeer ahamad

Recent Posts

ಮುಖ್ಯಮಂತ್ರಿಗಳ ಸೂಚನೆ ಕಟ್ಟುನಿಟ್ಟಾಗಿ ಪಾಲಿಸಿ: ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ

ಕಾರವಾರ: ಜಿಲ್ಲೆಯಲ್ಲಿ ಪಾರದರ್ಶಕ, ಜನಪರ ಹಾಗೂ ಪರಿಣಾಮಕಾರಿ ಆಡಳಿತ ನೀಡಲು ಎಲ್ಲಾ ಸರ್ಕಾರಿ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಮುಖ್ಯಮಂತ್ರಿಗಳು…

13 hours ago

ಬಸ್‌ನಲ್ಲಿ ಅಸಭ್ಯವಾಗಿ ಯುತಿಯ ಮೈ ಮುಟ್ಟಿ ಕಿರುಕುಳ; ಧೈರ್ಯವಾಗಿ ವಿಡಿಯೋ ಮಾಡಿದ ಯುವತಿ, ಆರೋಪಿಯನ್ನು ಕೆಳಗಿಳಿಸಿದ ಕಂಡಕ್ಟರ್!

ಮಾರುಕಟ್ಟೆಯಿಂದ ಮನೆಗೆ ತೆರಳಲು ಖಾಸಗಿ ಬಸ್ ಹತ್ತಿದ್ದ ಯುವತಿಗೆ ಮಾರ್ಗಮಧ್ಯೆ ಕಿರುಕುಳ ನೀಡಿದ ಘಟನೆ ನಡೆದಿದೆ. ಬಸ್ ಚಲಿಸಲು ಆರಂಭಿಸಿದ…

13 hours ago

₹65 ಸಾವಿರ ಸಂಬಳದ ಮುಖ್ಯೋಪಾಧ್ಯಾಯರಿಗೆ ಶಾಲೆಗೆ ಬರಲು ಸಮಯವಿಲ್ಲ; ₹4,500ಕ್ಕೆ ಯುವತಿಯನ್ನು ನೇಮಿಸಿ ಪಾಠ ಮಾಡಿಸಿದ ‘ಸರ್ಕಾರಿ ಶಾಲೆ’ ವಂಚನೆ!

ಮಧ್ಯಪ್ರದೇಶ: ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಣ ವ್ಯವಸ್ಥೆಯನ್ನೇ ಅಣಕಿಸುವಂತಹ ಆಘಾತಕಾರಿ ಪ್ರಕರಣವೊಂದು ಮಧ್ಯಪ್ರದೇಶದ ಮುರೈನಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ತಿಂಗಳಿಗೆ ₹65…

13 hours ago

ಇನ್‌ಸ್ಟಾಗ್ರಾಮ್ ಕ್ಯೂಟ್ ಕಪಲ್ ಕಥೆಗೆ ಬಿಗ್ ಟ್ವಿಸ್ಟ್: ಕೋಟ್ಯಾಧಿಪತಿ ಪತ್ನಿ ಕಂಡಕ್ಟರ್ ಜೊತೆ ಪರಾರಿ ಆರೋಪ!

ಸೋಷಿಯಲ್ ಮೀಡಿಯಾದಲ್ಲಿ ಸದಾ ನಗುನಗುತ್ತಾ ಕಾಣಿಸಿಕೊಳ್ಳುತ್ತಿದ್ದ ಕೇರಳದ ಜನಪ್ರಿಯ ಜೋಡಿ ಅಖಿಲ್ (Akhil NRD) ಮತ್ತು ಮೇಘಾ ಅವರ ದಾಂಪತ್ಯ…

13 hours ago

ಟೊರೊಂಟೊದಲ್ಲಿ ಭಾರತೀಯ ಮೂಲದ ಯುವತಿ ಹತ್ಯೆ: 7 ತಿಂಗಳ ಬಳಿಕ ಆಪ್ತ ವ್ಯಕ್ತಿ ಅರೆಸ್ಟ್‌!

ಟೊರೊಂಟೊ: ಕೆನಡಾದ ಟೊರೊಂಟೊದಲ್ಲಿ ಭಾರತೀಯ ಮೂಲದ 30 ವರ್ಷದ ಯುವತಿ ಹಿಮಾಂಶಿ ಖುರಾನಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು…

2 days ago

ಇನ್‌ಸ್ಟಾಗ್ರಾಂ ಪ್ರೇಮಿಗಾಗಿ 6 ತಿಂಗಳ ಕಂದಮ್ಮನನ್ನೇ ಕೊಲ್ಲಿಸಿದ ತಾಯಿ! ಮೀರಾಟ್‌ನಲ್ಲಿ ಬೆಚ್ಚಿಬೀಳಿಸಿದ ಘಟನೆ

ಮೀರಾಟ್: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಪ್ರೇಮಿಗಾಗಿ ತಾಯಿಯೊಬ್ಬಳು ತನ್ನ ಆರು ತಿಂಗಳ ಹಸುಗೂಸಿನ ಸಾವಿಗೆ ಕಾರಣಳಾದ ಆರೋಪ ಕೇಳಿಬಂದಿದ್ದು, ಉತ್ತರ…

2 days ago