Categories: CrimeLatest

ಒಂಟಿ ಯುವತಿಯ ಮನೆಗೆ ನುಗ್ಗಲು ಯತ್ನಿಸಿದ ಡೆಲಿವರಿ ಬಾಯ್? ಬೆಂಗಳೂರಿನಲ್ಲಿ ಬೆಚ್ಚಿಬೀಳಿಸಿದ ಘಟನೆ!

ಬೆಂಗಳೂರು: ನಗರದ ಅಪಾರ್ಟ್‌ಮೆಂಟ್‌ನಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಯುವತಿಗೆ ಪಾರ್ಸಲ್ ಡೆಲಿವರಿ ವೇಳೆ ಆತಂಕಕಾರಿ ಅನುಭವ ಎದುರಾಗಿರುವ ಘಟನೆ ಬೆಳಕಿಗೆ ಬಂದಿದೆ. ಉಬರ್ ಪಾರ್ಸಲ್ ಸೇವೆಯ ಮೂಲಕ ಸ್ನೇಹಿತೆಯ ಜ್ಯಾಕೆಟ್ ಹಿಂತಿರುಗಿಸಲು ಬುಕ್ಕಿಂಗ್ ಮಾಡಿದ್ದ ವೇಳೆ ಡೆಲಿವರಿ ಎಕ್ಸಿಕ್ಯೂಟಿವ್ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ.

ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಆನೇರಿ ಠಕ್ಕರ್, ಡೆಲಿವರಿ ಸಿಬ್ಬಂದಿ ಮದ್ಯದ ಅಮಲಿನಲ್ಲಿದ್ದಂತೆ ಕಂಡುಬಂದಿದ್ದಾನೆ ಎಂದು ತಿಳಿಸಿದ್ದಾರೆ. ಪಾರ್ಸಲ್ ಹಸ್ತಾಂತರಿಸಿದ ನಂತರ ಅಲ್ಲಿಂದ ತೆರಳಬೇಕಿದ್ದ ಆತ, ಮನೆ ಒಳಗೆ ಫೋನ್ ಚಾರ್ಜ್ ಮಾಡಲು ಅವಕಾಶ ನೀಡುವಂತೆ ಕೇಳಿದ್ದಾನೆ. ಅಲ್ಲದೆ, ಬಾಲ್ಕನಿಯಲ್ಲಿ ಸಿಗರೇಟ್ ಸೇದಲು ಅನುಮತಿ ನೀಡುವಂತೆಯೂ ಒತ್ತಾಯಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಡೆಲಿವರಿ ಸಿಬ್ಬಂದಿಯ ಈ ವರ್ತನೆಯಿಂದ ಅನುಮಾನಗೊಂಡ ಯುವತಿ ತಕ್ಷಣ ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಅಪಾರ್ಟ್‌ಮೆಂಟ್‌ನ ಭದ್ರತಾ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಬಳಿಕ ಸೆಕ್ಯೂರಿಟಿ ಗಾರ್ಡ್ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದು, ಯಾವುದೇ ಅನಾಹುತ ಸಂಭವಿಸದಂತೆ ನೋಡಿಕೊಂಡಿದ್ದಾರೆ.

ಈ ಘಟನೆ ನಗರದಲ್ಲಿ ಮಹಿಳೆಯರ ಸುರಕ್ಷತೆ ಹಾಗೂ ಆನ್‌ಲೈನ್ ಡೆಲಿವರಿ ಸೇವೆಗಳ ವಿಶ್ವಾಸಾರ್ಹತೆ ಕುರಿತು ಮತ್ತೆ ಚರ್ಚೆಗೆ ಕಾರಣವಾಗಿದೆ. ಒಂಟಿಯಾಗಿ ವಾಸಿಸುವ ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂಬ ಅಭಿಪ್ರಾಯಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿವೆ.

ಭ್ರಷ್ಟರ ಬೇಟೆ

Recent Posts

ಪ್ಯಾಕಿಂಗ್ ಕೆಲಸದ ಆಮಿಷಕ್ಕೆ ಕೋಟಿ ಕೋಟಿ ವಂಚನೆ: ದಂಪತಿ ಬಂಧನ, ಹಲವು ಜಿಲ್ಲೆಗಳಲ್ಲಿ ಪ್ರಕರಣ ದಾಖಲು!

ಬೆಂಗಳೂರು: ಮನೆದಲ್ಲೇ ಕುಳಿತು ಬೂದುಬತ್ತಿ, ಮೆಣದಬತ್ತಿ ಹಾಗೂ ಪೇಪರ್ ಪ್ಲೇಟ್ ಪ್ಯಾಕಿಂಗ್ ಕೆಲಸ ನೀಡಿ ಹೆಚ್ಚಿನ ಆದಾಯ ಗಳಿಸಬಹುದು ಎಂದು…

23 hours ago

₹5 ಲಕ್ಷ ಸಾಲ ವಾಪಸ್ ಕೇಳಿದ್ದಕ್ಕೆ ರೇಪ್ ಕೇಸ್ ಬೆದರಿಕೆ? ಮಾನಸಿಕ ಕಿರುಕುಳಕ್ಕೆ ನೊಂದು ಯುವಕ ಆತ್ಮಹತ್ಯೆ; ಕುಟುಂಬದ ಗಂಭೀರ ಆರೋಪ

ಮಂಡ್ಯ: ಸಾಲವಾಗಿ ನೀಡಿದ್ದ ಹಣವನ್ನು ಮರಳಿ ಕೇಳಿದ್ದಕ್ಕೆ ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ ವಿವಾಹಿತೆಯ ಮಾನಸಿಕ ಕಿರುಕುಳದಿಂದ…

23 hours ago

ಹುಟ್ಟುಹಬ್ಬದ ಸಂಭ್ರಮ ದುರಂತದಲ್ಲಿ ಅಂತ್ಯ: ನೆಲಮಂಗಲದಲ್ಲಿ ಕಾರು ಪಲ್ಟಿ, ಇಬ್ಬರು ಸಾವು..!

ಬೆಂಗಳೂರು ಗ್ರಾಮಾಂತರ: ಹುಟ್ಟುಹಬ್ಬದ ಸಂಭ್ರಮ ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದ ಸ್ನೇಹಿತರ ತಂಡ ಭೀಕರ ರಸ್ತೆ ಅಪಘಾತಕ್ಕೆ ಗುರಿಯಾಗಿದ್ದು, ಇಬ್ಬರು…

23 hours ago

ರೋಡ್ ರೇಜ್ ವಿವಾದದ ಬಳಿಕ ಮಾಲೂರು ನ್ಯಾಯಾಧೀಶೆ ಗಾಯತ್ರಿಗೆ ಬೀದರ್ ವರ್ಗಾವಣೆ; ಹೈಕೋರ್ಟ್ ಆಡಳಿತಾತ್ಮಕ ಕ್ರಮ

ಬೆಂಗಳೂರು: ಸಾರ್ವಜನಿಕರೊಂದಿಗೆ ರಸ್ತೆ ಮಧ್ಯೆ ಮಾತಿನ ಚಕಮಕಿ ನಡೆಸಿ ಅಧಿಕಾರ ದುರ್ಬಳಕೆ ಆರೋಪಕ್ಕೆ ಗುರಿಯಾಗಿದ್ದ ಹಾಗೂ ಹೈಕೋರ್ಟ್‌ನಿಂದ ತೀವ್ರ ತರಾಟೆಗೆ…

23 hours ago

ರಾಪಿಡೋ ಚಾಲಕನ ನಿರ್ಲಕ್ಷ್ಯಕ್ಕೆ ಯುವತಿಯ ಬದುಕೇ ಚಿಂದಿ: 20 ಲಕ್ಷ ಚಿಕಿತ್ಸಾ ವೆಚ್ಚ, ನ್ಯಾಯಕ್ಕಾಗಿ ಕಣ್ಣೀರಿನ ಹೋರಾಟ!

ಬೆಂಗಳೂರು: ಆನ್‌ಲೈನ್ ಬೈಕ್ ಟ್ಯಾಕ್ಸಿ ಸೇವೆಗಳ ಸುರಕ್ಷತೆ ಕುರಿತು ಮತ್ತೆ ಪ್ರಶ್ನೆಗಳು ಮೂಡುವಂತ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ರಾಪಿಡೋ ಬೈಕ್…

23 hours ago

ನಡತೆ ಶಂಕೆಗೆ ಸಹಜೀವನ ಸಂಗಾತಿಯ ಹತ್ಯೆ: ಐದು ದಿನಗಳ ಬಳಿಕ ಪಶ್ಚಾತ್ತಾಪದಿಂದ ಪೊಲೀಸರಿಗೆ ಶರಣಾದ ಆರೋಪಿ

ಮೈಸೂರು ತಾಲೂಕಿನ ಭುಗತಗಳ್ಳಿ ಗ್ರಾಮದಲ್ಲಿ ನಡತೆ ಶಂಕೆಯಿಂದ ನಡೆದಿರುವ ಭೀಕರ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಸಿದ್ದರಾಜು (64) ಎಂಬಾತ…

23 hours ago