ಯಲ್ಲಾಪುರದಲ್ಲಿ ಭೀಕರ ಅನಾಹುತ ದೀ 27 ರಂದು ಮದ್ಯಾಹ್ನ 3 ರ ಸುಮಾರಿಗೆ ಯಲ್ಲಾಪುರದ ನಾಯ್ಕನಕೆರೆ ಹತ್ತಿರ ಸಿದ್ಧಿ ವಿನಾಯಕ ಟ್ರೇಡರ್ಸ್ ಎದುರಿಗೆ N H 63 ರಸ್ತೆಯ ಮೇಲೆ ಬುಲೆರೋ ಪಿಕ್ ಅಪ್ ವಾಹನ ಗಾಡಿ ನಂಬರ್ KA 25 AB 8002 ವಾಹನ ಚಾಲಕ ದಿನೇಶ ತಂದೆ ಚದರಸಿಂಗ ಈತನು ತನ್ನ ವಾಹನವನ್ನು ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆಗೆ ಅತಿವೇಗ ಹಾಗೂ ಚಾಲನೆ ಮಾಡಿಕೊಂಡು ನಿಷ್ಕಾಳಜಿಯಿಂದ ಬಂದವನು ತನ್ನ ಮುಂದೆ ಹೋಗುತ್ತಿದ್ದ ಟ್ರಕ್ ನ್ನು ಓವರ್ ಟೇಕ್ ಮಾಡಿದ್ದು ಅಲ್ಲದೆ ತನ್ನ ರಸ್ತೆಯ ಬಲಬದಿಗೆ ಹೋಗಿದ್ದು ತನ್ನ ವೇಗವನ್ನು ನಿಯಂತ್ರಿಸಲಾಗದೆ ಯಲ್ಲಾಪುರ ಟೌನ್ ಕಡೆಯಿಂದ ನಾಯ್ಕನಕೆರೆ ಕಡೆಗೆ ಸಚಿನ್ ಇವರು ತನ್ನ ವಾಹನವನ್ನು ಬಲಭಾಗದಿಂದ ತನ್ನ ಬದಿಯಿಂದ ಚಲಾಯಿಸಿಕೊಂಡು ಬರುತ್ತಿದ್ದ ಮೋಟಾರ್ ಸೈಕಲ್ ಗಾಡಿ ನಂ KA 31 R 5917 ದ್ವಿಚಕ್ರ ವಾಹನ ಅಪಘಾತ ಪಡಿಸಿದ್ದರಿಂದಲೇ ಈ ಅಪಘಾತವಾಗಿ , ಮೋಟಾರ್ ಸೈಕಲ್ ಸವಾರನದ ಸಚಿನ ಈತನ ತಲೆ ಒಡೆದು , ಮೆದುಳು ಮಾಂಸ ಹೊರಬಂದಿದ್ದು ಬಲ ಕಾಲು ಮುರಿದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ, ಮೋಟಾರ್ ಹಿಂಬದಿ ಸವಾರ ದೀಪಕ ಈತನ ಕಾಲಿಗೆ , ಕೈ ಗೆ ಮತ್ತು ತಲೆಗೆ ಗಂಭೀರ ಸ್ವರೂಪದ ಗಾಯಪೆಟ್ಟು ಪಡಿಸಿ , ಎರಡೂ ವಾಹನಗಳನ್ನು ಜಖಂಗೊಳಿಸಿದ್ದಾನೆ . ಸದರಿ ಬುಲೆರೋ ಪಿಕ್ ಅಪ್ ವಾಹನದ ಚಾಲಕನ ಮೇಲೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ.
ವರದಿ : ಶ್ರೀಪಾದ್ ಎಸ್ ಏಚ್
ರಾಜಧಾನಿ ಬೆಂಗಳೂರಿನಲ್ಲಿ ಡ್ರಗ್ಸ್ ಮಾಫಿಯಾ ವಿರುದ್ಧ ಪೊಲೀಸರು ಭರ್ಜರಿ ಕಾರ್ಯಾಚರಣೆ ಮುಂದುವರೆಸಿದ್ದು, ನಾಲ್ವರು ವಿದೇಶಿಯರು ಸೇರಿದಂತೆ ಒಟ್ಟು 16 ಮಂದಿಯನ್ನು…
ಕೊಡಗು ಜಿಲ್ಲಾ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿದ್ದ 68 ವರ್ಷದ ಚೆಂಗಪ್ಪ ಅವರ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸುಮಾರು 20…
ಶಿವಾಜಿನಗರದಲ್ಲಿರುವ ಬೌರಿಂಗ್ ಆಸ್ಪತ್ರೆ ಆವರಣದ ಗೋಡೆ ಕುಸಿತದಿಂದ ಸಂಭವಿಸಿದ ಭೀಕರ ದುರಂತದ ಸ್ಥಳಕ್ಕೆ ಬುಧವಾರ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ,…
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದಲ್ಲಿ ಭ್ರೂಣಲಿಂಗ ಪತ್ತೆ ಮತ್ತು ಅಕ್ರಮ ಸ್ಕ್ಯಾನಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ವೈದ್ಯರನ್ನು ಬಂಧಿಸಿರುವ ಘಟನೆ…
ಭೂಸ್ವಾಧೀನ ಸಂಬಂಧಿತ ಬಾಕಿ ಕಂದಾಯ ಪ್ರಕರಣವನ್ನು ಪರಿಹರಿಸಲು ಲಂಚ ಪಡೆಯುತ್ತಿದ್ದ ವೇಳೆ ಕೆಎಎಸ್ ಅಧಿಕಾರಿಯೊಬ್ಬರು ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದ ಘಟನೆ…
ಇತ್ತೀಚಿನ ದಿನಗಳಲ್ಲಿ ದಾಂಪತ್ಯ ಜೀವನ ಸಣ್ಣಪುಟ್ಟ ವಿಚಾರಗಳಿಗೂ ಕುಸಿಯುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಹೊಂದಾಣಿಕೆಯ ಕೊರತೆ, ಅಕ್ರಮ ಸಂಬಂಧಗಳು ಸೇರಿದಂತೆ ಹಲವು…