Latest

ಎಸ್ಪಿ ಸುಮನ್ ಪನ್ನೆಕರ್ ಸಿಐಡಿಗೆ ವರ್ಗಾವಣೆ,ಜಿಲ್ಲೆಯ ನೂತನ ಎಸ್ಪಿಯಾಗಿ ವಿಷ್ಣುವರ್ಧನ ನೇಮಕ…!

ಕಾರವಾರ: ಕಳೆದ ಒಂದು ವರ್ಷದ ಹಿಂದೆಯಷ್ಟೇ ಉತ್ತರ ಕನ್ನಡ‌ ಜಿಲ್ಲೆಗೆ ಆಗಮಿಸಿ ತಮ್ಮ ಕಾನೂನಿನ ಚೌಕಟ್ಟಿನ ಅಡಿಯಲ್ಲಿ ಕೆಲಸಗಳನ್ನು ಮಾಡುತ್ತಾ ಜಿಲ್ಲೆಯಲ್ಲಿನ ಮಟ್ಕಾದಂತಹ ಅದೆಷ್ಟೋ ಅಕ್ರಮ ಚಟುವಟಿಕೆಗಳಿಗೆ ಸಂಪೂರ್ಣ ಬ್ರೇಕ್ ಹಾಕಿದ್ದರು.ಹೀಗಾಗಿ ಇವರನ್ನು ಜಿಲ್ಲೆಯ ಜನರು ದಕ್ಷ ಎಸ್ಪಿ ಎಂದೆ ಕರೆಯುತ್ತಿದ್ದರು.ಯಾವಾಗ ಈ ಅಧಿಕಾರಿ ಭ್ರಷ್ಟರ ಮಾತುಗಳಿಗೆ ಬೆಲೆ ಕೊಡದೆ ಕೆಲಸ ಮಾಡಲು ಪ್ರಾರಂಭಿಸಿದರೋ ಅಂದಿನಿಂದಲೇ ಇವರ ವರ್ಗಾವಣೆಗೆ ಸ್ಕೆಚ್ಅನ್ನು ಹಾಕಿದ್ದರು ಎನ್ನಲಾಗಿದೆ.ಕಳೆದ ಎರಡು ತಿಂಗಳ ಹಿಂದೆಯೇ ಎಸ್ ಪಿ ಮೇಡಂ ಅವರ ವರ್ಗಾವಣೆಯ ಮಾತುಗಳು ಕೇಳಿ ಬಂದಿದ್ದವು ಆಗ ಜಿಲ್ಲೆಯ ಅದಷ್ಟೋ ಶುದ್ಧ ಮನಸ್ಸುಗಳು ಸಾಮಾಜಿಕ ಜಾಲತಾಣಗಳ ಮೂಲಕ ಎಸ್ ಪಿ ಮೇಡಂ ಅವರನ್ನು ವರ್ಗಾವಣೆ ಮಾಡದಂತೆ ಆಕ್ರೋಶವನ್ನೂ ಸಹ ಹೊರಹಾಕಿದ್ದವು.
ತಮ್ಮ ಇಲಾಖೆಯಲ್ಲಿಯೇ ಇರುವ ಕೆಲವು ಅಧಿಕಾರಿಗಳು ಇವರ ಕಾರ್ಯವೈಕರಿಯ ಬಗ್ಗೆ ಒಳಗೊಳಗೆ ಕೈ ಹಿಸುಕಿಕೊಳ್ಳುವಂತಾಗಿತ್ತು ಮತ್ತು ಅಕ್ರಮ ದಂದೇಕೋರರು ಈ ಅಧಿಕಾರಿ ಯಾವಾಗ ಹೋಗುತ್ತಾರೆಯೋ ಮಾರಾಯ ಎಂಬ ಮಾತುಗಳನ್ನು ಆಡುತ್ತಾ ಎಸ್ ಪಿ ಮೇಡಂ ಅವರ ದಕ್ಷತೆಗೆ ಬೆಚ್ಚಿಬಿದ್ದಿದ್ದರು.
ಅದೇನೆ ಇರಲಿ ಸರ್ಕಾರ ದಕ್ಷ ಅಧಿಕಾರಿಗಳಿಗೆ ಸಂಪೂರ್ಣ ಬೆಂಬಲ ಕೊಡುತ್ತಾ ಒಳ್ಳೆಯ ಆಡಳಿತವನ್ನು ನಡೆಸುವಲ್ಲಿ ಸಹಕಾರವನ್ನು ಕೊಡಬೇಕಿತ್ತು ಆದರೆ ರಾಜ್ಯದಲ್ಲಿಯೇ ಇವರೊಬ್ಬರ ವರ್ಗಾವಣೆ ಆದೇಶವನ್ನು ಮಾಡಿರುವುದು ದಕ್ಷ ಅಧಿಕಾರಿಗಳಿಗೆ ಬೆಲೆ ಇಲ್ಲ ಎನ್ನುವುದು ಸಾಬೀತಾಗಿದೆ.
ವರದಿ:ಮಂಜುನಾಥ ಹರಿಜನ.

ಭ್ರಷ್ಟರ ಬೇಟೆ

Recent Posts

ಕುಡಿತದ ದುರಂತ ಅಂತ್ಯ: ಆಸ್ತಿ ಹಣದ ಜಗಳಕ್ಕೆ ತಾಯಿಯನ್ನೇ ಕೊಂದ ಮಗಳು-ಮೊಮ್ಮಗ!

ಬೆಂಗಳೂರು ನಗರದ ಕೆಂಗೇರಿ ಠಾಣಾ ವ್ಯಾಪ್ತಿಯ ಸುಭಾಷ್ ನಗರದಲ್ಲಿ ನಡೆದ ಭೀಕರ ಘಟನೆ ಒಂದು ಕುಟುಂಬದ ದುಸ್ಥಿತಿಯನ್ನು ಬಯಲಿಗೆಳೆದಿದೆ. ಮದ್ಯಪಾನದ…

1 hour ago

ವಿದ್ಯಾರ್ಥಿಗಳೊಂದಿಗೆ ಅಕ್ರಮ ಸಂಬಂಧ: ಪ್ರೌಢಶಾಲಾ ಶಿಕ್ಷಕಿ ಬಂಧನ

ಅಮೆರಿಕದ ಜಾರ್ಜಿಯಾ ರಾಜ್ಯದಲ್ಲಿ ಅಪ್ರಾಪ್ತ ವಿದ್ಯಾರ್ಥಿಗಳೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಆರೋಪದ ಮೇಲೆ ಪ್ರೌಢಶಾಲಾ ಶಿಕ್ಷಕಿಯೊಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ…

1 hour ago

ಬಿಡದಿ ಟೌನ್‌ಶಿಪ್‌ ವಿರೋಧ ನಾಟಕ: ಅಲ್ಲಿ ಅನಿತಾ ಕುಮಾರಸ್ವಾಮಿ 100 ಎಕರೆ ಜಮೀನಿದೆ, ಕುಮಾರಸ್ವಾಮಿ ವಿರುದ್ಧ ಎಂ.ಬಿ. ಪಾಟೀಲ್ ವಾಗ್ದಾಳಿ

ಬೆಂಗಳೂರು: ಬಿಡದಿ ಟೌನ್‌ಶಿಪ್ ಯೋಜನೆಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವ್ಯಕ್ತಪಡಿಸುತ್ತಿರುವ ವಿರೋಧ ರಾಜಕೀಯ ಪ್ರೇರಿತವಾಗಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್…

5 hours ago

ಆದಾಯ ಮೀರಿ ಆಸ್ತಿ ಗಳಿಕೆ ಆರೋಪ: ಆರ್‌ಡಿಪಿಆರ್ ಎಇಇ ತಿಪ್ಪೇಸ್ವಾಮಿ ಮನೆ ಮೇಲೆ ಲೋಕಾಯುಕ್ತ ದಾಳಿ

ಬಳ್ಳಾರಿ: ಆದಾಯಕ್ಕಿಂತ ಅಧಿಕ ಪ್ರಮಾಣದಲ್ಲಿ ಆಸ್ತಿ ಸಂಪಾದಿಸಿರುವ ಆರೋಪದ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (ಆರ್‌ಡಿಪಿಆರ್) ಇಲಾಖೆಯ ಸಹಾಯಕ…

5 hours ago

ಸಚಿವ ಸತೀಶ್ ಜಾರಕಿಹೊಳಿ ಅಳಿಯ ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ಮನೆ ಸೇರಿ 6 ಕಡೆ ಇಡಿ ದಾಳಿ

ಬೆಳಗಾವಿ: ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ಅವರ ನಿವಾಸ ಸೇರಿದಂತೆ ರಾಜ್ಯದ ವಿವಿಧ ಆರು ಸ್ಥಳಗಳಲ್ಲಿ ಜಾರಿ…

5 hours ago

ಮದುವೆಗೆ ಕೆಲವೇ ದಿನ ಬಾಕಿ… ಭಾವಿ ಪತ್ನಿಯಿಂದಲೇ 400 ಅಡಿ ಕಣಿವೆಗೆ ತಳ್ಳಿ ಹತ್ಯೆ!

ಪುಣೆಯಲ್ಲಿ ನಡೆದ ಭೀಕರ ಘಟನೆ ಒಂದು ದೇಶವನ್ನೇ ಬೆಚ್ಚಿಬೀಳಿಸಿದೆ. ಮದುವೆಗೆ ಸಕಲ ಸಿದ್ಧತೆಗಳು ನಡೆಯುತ್ತಿದ್ದ ಸಂದರ್ಭದಲ್ಲಿ, ತನ್ನನ್ನು ಮದುವೆಯಾಗಬೇಕಿದ್ದ ಯುವಕನನ್ನೇ…

5 hours ago