ನಮಗೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಉತ್ತರಕನ್ನಡ ಜಿಲ್ಲೆ ಮಲೆನಾಡು ಪ್ರದೇಶ ದಟ್ಟ ಕಾಡಿನಿಂದ ಹಾಗೂ ಹಲವಾರು ರೀತಿಯ ಪ್ರಾಣಿಗಳು ಇರುವ ಜಿಲ್ಲೆಯಾಗಿದೆ. ಇದೊಂದು ಘಟನೆ ಭಟ್ಕಳ ತಾಲೂಕಿನಲ್ಲಿ ನಡೆದಿದೆ. ವೆಂಕಟ್ರಮಣ ನಾಯ್ಕ ಎನ್ನುವ ವ್ಯಕ್ತಿ ಅನಧಿಕೃತವಾಗಿ ಅರಣ್ಯ ನಾಶಗೊಳಿಸಿ ರಸ್ತೆ ನಿರ್ಮಾಣಮಾಡಿದ್ದಾರೆ .
ತಾಲೂಕಿನ ತಲಗೊಡು ಕೋಟೆಮನೆ ಭಾಗದಲ್ಲಿ ಕರ್ಗದ್ದೆ ನಿವಾಸಿಯಾದ ವೆಂಕಟ್ರಮಣ ನಾಯ್ಕ ಎಂಬಾತ 150ಮೀ ರಸ್ತೆಯನ್ನು ಅರಣ್ಯ ಸಂಪತ್ತನ್ನು ನಾಶ ಮಾಡಿ ತನ್ನ ಮಣ್ಣಿನ ಲಾರಿಯನ್ನು ಸಾಗಿಸಲು ಅಲ್ಲಿದ್ದ ಮರಗಿಡಗಳನ್ನು ಕಡಿದು ರಸ್ತೆ ನಿರ್ಮಿಸಿದ್ದಾನೆ. ಅವನ ಮಾಲ್ಕಿ ಜಾಗಕ್ಕೆ ಹೋಗಲು ಬೇರೆ ರಸ್ತೆಗಳಿದ್ದರು ಕೂಡ ಇತ ಈ ಗ್ರಾಮದ ಜನರಿಗೆ ತೊಂದರೆಯಾಗುವಂತೆ ಇಲ್ಲಿಯೇ ರಸ್ತೆ ನಿರ್ಮಿಸಿದ್ದಾರೆ ಇದು ಅಲ್ಲಿದ್ದ ಗ್ರಾಮದ ನಿವಾಸಿಗಳಿಗೆ ತುಂಬಾ ತೊಂದರೆಯಾಗಿದ್ದು. ತಮ್ಮ ಕೃಷಿ ಜಮಿನಾದ ಸರಿಸುಮಾರು 500 ಎಕರೆ ಕೃಷಿ ಭೂಮಿ ಇದ್ದಿದ್ದರಿಂದ ಅಲ್ಲಿನ ಕೃಷಿ ಕಾರ್ಯಗಳಿಗೆ ತೊಂದರೆಯಾಗುತ್ತದೆ ಎಂದು ಸಾರ್ವಜನಿಕರು ಪ್ರತಿಭಟನೆ ನಡೆಸಿ ಸಂಬಂದ ಪಟ್ಟ ಅಧಿಕಾರಿಗಳಿಗೆ ಇಲ್ಲಿ ರಸ್ತೆಯ ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಷಯ ತಿಳಿದ ಆರ್ ಎಫ್ ಓ ಶರತ್ ಶೆಟ್ಟಿಯವರು ಪರವಾನಿಗೆ ಇಲ್ಲದೆ ಅನಧಿಕೃತವಾಗಿ ಅರಣ್ಯ ನಾಶ ಮಾಡಿ ರಸ್ತೆ ನಿರ್ಮಿಸಿದ ವೆಂಕಟ್ರಮಣ ನಾಯ್ಕ ವಿರುದ್ಧ ಪ್ರಕರಣ ದಾಖಲಿಸಿ ಕೊಂಡು ಅಲ್ಲಿ ನಿರ್ಮಿಸಿದ ರಸ್ತೆಗೆ ಗುಂಡಿಗಳನ್ನು ತೆಗೆದು ವಾಹನ ಹೋಗದಂತೆ ನಿಲ್ಲಿಸಲಾಗಿದೆ.
ವರದಿ :ಶ್ರೀಪಾದ್ ಹೆಗಡೆ
ಕನ್ನಡ ಚಿತ್ರರಂಗದ ದಿಗ್ಗಜ ಡಾ. ರಾಜ್ಕುಮಾರ್ ಅವರ ಸಮಾಧಿಗೆ ಮೀಸಲಾದ 2.5 ಎಕರೆ ಭೂಮಿ ವಿಚಾರವಾಗಿ ನಟ ಚೇತನ್ ಅಹಿಂಸಾ…
ಪ್ರೀತಿಯ ವಿಚಾರವಾಗಿ ಉಂಟಾದ ಮನಸ್ತಾಪವು ಭೀಕರ ಹಲ್ಲೆಗೆ ತಿರುಗಿದ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ. ಯುವಕರ ಗುಂಪೊಂದು 17 ವರ್ಷದ…
ಬೆಂಗಳೂರು ನಗರದ ಪ್ರಮುಖ ವಸತಿ ಪ್ರದೇಶಗಳಲ್ಲಿ ಒಂದಾದ HSR Layout ಇತ್ತೀಚೆಗೆ ವಿಭಿನ್ನ ಕಾರಣಕ್ಕೆ ಸುದ್ದಿಯಲ್ಲಿದೆ. ಯುವತಿಯೊಬ್ಬಳ ವಿಚಾರವಾಗಿ ಹಳೆಯ…
ಕೇರಳದ ಕಣ್ಣೂರು ಜಿಲ್ಲೆ ವ್ಯಾಪ್ತಿಯ ಕೇಳಕಂ ಸಮೀಪದ ಕಾಣಿಚಾರ್ನಲ್ಲಿ ಮನಕಲಕುವ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಮಾದಕ ವ್ಯಸನಕ್ಕೆ ಒಳಗಾಗಿದ್ದ…
ವಿಜಯಪುರ ಜಿಲ್ಲೆಯಲ್ಲಿ ರಿಯಲ್ ಎಸ್ಟೇಟ್ ಏಜೆಂಟ್ ಹಾಗೂ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ರಾಜು ಬಾಪು ಖರಿ (48) ಅವರನ್ನು…
ಅಮೆರಿಕದ ಪ್ರಜೆಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾಡಳಿತ ತುರ್ತು ಕ್ರಮ ಕೈಗೊಂಡಿದ್ದು, ಕುಟ್ಟಾ ಗ್ರಾಮದಲ್ಲಿರುವ…