ಬೆಳಗಾವಿ ಜಿಲ್ಲೆಯ ಬೈರನಟ್ಟಿ ಗ್ರಾಮದಲ್ಲಿ ಬ್ಯಾಂಕ್ ಸಿಬ್ಬಂದಿಗಳ ಕಿರುಕುಳಕ್ಕೆ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಪಾರ್ವತೆಮ್ಮ ಸೋಮಪ್ಪ ಮುತ್ನಾಳ ಎಂಬ 50 ವರ್ಷದ ಮಹಿಳೆ ಮಗನಾದ ದೇಮಪ್ಪ ಖಾಸಗಿ ಬ್ಯಾಂಕ್ ಮುಚ್ಚಂಡಿಯಿಂದ ಎಮ್ಮೆಯ ಮೇಲೆ ಸಾಲವನ್ನು ತೆಗೆದುಕೊಂಡಿದು. ಇಲ್ಲಿಯವರೆಗೂ ಕಂತುಗಳನ್ನು ಕಟ್ಟುತ್ತಾ ಬಂದಿದ. ಈ ತಿಂಗಳು ಅಂದರೆ ಫೆಬ್ರುವರಿ ತಿಂಗಳ ಕಂತು ಕಟ್ಟುವುದು ತಡವಾದರಿಂದ ದಿನಾಂಕ 15/02/2024 ರ ಬೆಳಿಗ್ಗೆ 10 ಘಂಟೆ ಸುಮಾರಿಗೆ ಖಾಸಗಿ ಬ್ಯಾಂಕ್ ಸಿಬ್ಬಂದಿಯಾದ ಸೋಮು ಕಿರಗಾವ ಹಾಗೂ ಹೆಸರು ಗೊತ್ತಿರದ ಇನ್ನೊಬ್ಬ ಸಿಬ್ಬಂದಿ, ಇಬ್ಬರು ಪದೇ ಪದೇ ಮನೆಗೆ ಬಂದು ಒಬ್ಬಳೇ ಇದ್ದಾಗ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ ಎಂದು ಮಹಿಳೆ ಆರೋಪಿಸಿರುತ್ತಾರೆ.
ಮರ್ಯಾದೆಗೆ ಹೆದರಿ, ಬೈಯಬೇಡಿ ನಾನು ಏನಾದರೂ ಕುಡಿದು ಸಾಯ್ತೀನಿ ನೋಡಿ ಎಂದಾಗ ಬ್ಯಾಂಕಿನ ಸಿಬ್ಬಂದಿ ನೀನು ವಿಷ ಕುಡಿದು ಸಾಯಿ ಆಗ ನಿನ್ನ ಮಗ ಬರುತ್ತಾನಲ್ಲ ಅವ ಬಂದ ಮೇಲೆ ಸಾಲ ವಸೂಲಿ ಮಾಡುತ್ತೇವೆ ಎಂದು ವಿಷ ಕುಡಿಯಲು ಬ್ಯಾಂಕ್ನ ಸಿಬ್ಬಂದಿಯೇ ಪ್ರಚೋದಿಸಿರುತ್ತಾನೆ ಎಂದು ಮಹಿಳೆ ಆರೋಪಿಸಿರುತ್ತಾರೆ.
ಮಹಿಳೆಯು ವಿಷ ಸೇವಿಸಿದ್ದು ಸ್ಥಳದಿಂದ ಬ್ಯಾಂಕ್ ನ ಸಿಬ್ಬಂದಿಗಳು ಪರಾರಿಯಾಗಿರುತ್ತಾರೆ. ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು ನೇಸರಗಿ ಠಾಣ ಪೊಲೀಸರು ದೂರನ್ನು ದಾಖಲಿಸಿಕೊಂಡಿರುತ್ತಾರೆ.
ವರದಿ: ಸಂಗಪ್ಪ ಚಲವಾದಿ
ಇಂದು ಬೆಂಗಳೂರಿನಲ್ಲಿ ‘ಟಾಕ್ಸಿಕ್’ ಟ್ರೇಲರ್ ಬಿಡುಗಡೆ ಕಾರ್ಯಕ್ರಮ | ಆಗಸ್ಟ್ 26ರಂದು ವಿಶ್ವಾದ್ಯಂತ ತೆರೆಗೆ ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್…
ಅಮೃತಸರ: ಉನ್ನತ ಶಿಕ್ಷಣಕ್ಕಾಗಿ ದೂರದ ನಗರಕ್ಕೆ ಮಕ್ಕಳನ್ನು ಕಳುಹಿಸುವ ಪೋಷಕರು ಅವರ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿರುತ್ತಾರೆ. ಆದರೆ ಕೆಲವೊಮ್ಮೆ…
ಹೆತ್ತ ಮಕ್ಕಳ ಸುಖ-ಸಂತೋಷಕ್ಕಾಗಿ ತಮ್ಮ ಇಡೀ ಜೀವನವನ್ನೇ ತ್ಯಾಗ ಮಾಡುವ ತಂದೆ-ತಾಯಿಯರಿಗೆ ವೃದ್ಧಾಪ್ಯದಲ್ಲಿ ಸಿಗುವ ಪ್ರತಿಫಲ ಕೆಲವೊಮ್ಮೆ ಎಷ್ಟು ನೋವಿನದ್ದಾಗಿರುತ್ತದೆ…
ಮಂಡ್ಯದಲ್ಲಿ ರಸ್ತೆ ಅಪಘಾತವೆಂದು ಆರಂಭದಲ್ಲಿ ದಾಖಲಾಗಿದ್ದ ಯುವತಿಯ ಸಾವಿನ ಪ್ರಕರಣ ಇದೀಗ ಮಹತ್ವದ ತಿರುವು ಪಡೆದುಕೊಂಡಿದೆ. ಆರಂಭದಲ್ಲಿ ಸಾಮಾನ್ಯ ಅಪಘಾತ…
ಕನ್ನೌಜ್ (ಉತ್ತರ ಪ್ರದೇಶ): ಶಿಕ್ಷಣ ಕ್ಷೇತ್ರದ ಗೌರವಕ್ಕೆ ಧಕ್ಕೆ ತರುವಂತಹ ಘಟನೆಯೊಂದು ಉತ್ತರ ಪ್ರದೇಶದ ಕನ್ನೌಜ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.…
ಬೆಂಗಳೂರು: ನಗರದ ಅಪಾರ್ಟ್ಮೆಂಟ್ನಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಯುವತಿಗೆ ಪಾರ್ಸಲ್ ಡೆಲಿವರಿ ವೇಳೆ ಆತಂಕಕಾರಿ ಅನುಭವ ಎದುರಾಗಿರುವ ಘಟನೆ ಬೆಳಕಿಗೆ ಬಂದಿದೆ.…