Latest

ತ್ರಿಷಾ ಕೃಷ್ಣನ್‌ ವೈಯಕ್ತಿಕ ನಿರ್ಧಾರ: ಮದುವೆ ಇಚ್ಛೆಯಿಲ್ಲ, ಸ್ವತಂತ್ರ ಜೀವನವೇ ಪ್ರೀತಿಯ ಆಯ್ಕೆ

ದಕ್ಷಿಣ ಭಾರತದ ಬಹುಭಾಷಾ ಚಿತ್ರರಂಗದಲ್ಲಿ ತನ್ನ ಹಿರಿದಾದ ಹೆಸರನ್ನು ಸ್ಥಾಪಿಸಿಕೊಂಡಿರುವ ತ್ರಿಷಾ ಕೃಷ್ಣನ್‌ ಇತ್ತೀಚೆಗೆ ನೀಡಿರುವ ವೈಯಕ್ತಿಕ ಹೇಳಿಕೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ಎದ್ದಿದೆ. “ನಾನು ಮದುವೆಯಾಗಬೇಕೆಂಬ ಒತ್ತಡಕ್ಕೆ ತಲೆಬಗ್ಗುವ ಇಚ್ಛೆ ಇಲ್ಲ. ಮದುವೆಯ ನಂತರ ಅತೃಪ್ತ ಜೀವನವೇನಾದರೂ ಎದುರಾಗಬೇಕೆಂದಿಲ್ಲ. ಪ್ರೀತಿಯಿಂದ ಕೂಡಿದ ಶುದ್ಧ ಜೀವನ ನನಗೆ ಬೇಕು,” ಎಂಬುದಾಗಿ 41 ವರ್ಷದ ತ್ರಿಷಾ ಸ್ಪಷ್ಟವಾಗಿ ತಿಳಿಸಿದ್ದಾರೆ.

1999ರಲ್ಲಿ ಮಿಸ್ ಚೆನ್ನೈ ಪಡೆದ ಬಳಿಕ ಚಲನಚಿತ್ರ ಲೋಕಕ್ಕೆ ಕಾಲಿಟ್ಟ ತ್ರಿಷಾ, ‘ಸಾಮಿ’, ‘ಗಿಲ್ಲಿ’, ‘ವರ್ಷಂ’, ‘ಪೊನ್ನಿಯಿನ್ ಸೆಲ್ವನ್’, ಮತ್ತು ಕನ್ನಡದ ‘ಪವರ್‌’ ಸೇರಿದಂತೆ ಅನೇಕ ಸೂಪರ್‌ಹಿಟ್‌ ಸಿನಿಮಾಗಳಲ್ಲಿ ತಮ್ಮ ಅಭಿನಯ ಮತ್ತು ಆಕರ್ಷಕ ನಿರೂಪಣೆಯಿಂದ ದಕ್ಷಿಣ ಭಾರತದ ಪ್ರಖ್ಯಾತ ತಾರೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ವೃತ್ತಿಪರ ಬದುಕಿನಲ್ಲಿ ನಿರಂತರ ಯಶಸ್ಸುಗಳನ್ನು ಕಂಡು ಬಂದಿರುವ ತ್ರಿಷಾ, ವೈಯಕ್ತಿಕ ಜೀವನದಲ್ಲಿ ಮದುವೆ ಸಂಬಂಧಿತ ಜಗ್ಗಾಟದಿಂದ ಯಾವಾಗಲೂ ದೂರವಿರುವಂತೆ ಕಾಣಿಸುತ್ತಿದ್ದಾರೆ. ನಟ ಸಿಂಬು, ವಿಜಯ್‌, ಹಾಗೂ ರಾಣಾ ದಗ್ಗುಬಾಟಿಯೊಂದಿಗೆ ಅವರ ಸಂಬಂಧದ ವದಂತಿಗಳು ಹಲವು ಬಾರಿ ಸುದ್ದಿ ಮಾಡಿದವು. ಅಲ್ಲದೇ ಉದ್ಯಮಿ ವರುಣ್‌ ಜೊತೆ ನಿಶ್ಚಿತಾರ್ಥವೊಂದೂ ನಡೆದಿದ್ದು, ನಂತರ ವೈಯಕ್ತಿಕ ಕಾರಣಗಳಿಂದ ಅದು ವಿಫಲವಾಯಿತು ಎಂಬುದೂ ಬಹಿರಂಗವಾಗಿದೆ.

ಈ ಎಲ್ಲ ವಿಚಾರಗಳಿಗೆ ತ್ರಿಷಾ ಈ ಬಾರಿ ಸ್ಪಷ್ಟ ಉತ್ತರ ನೀಡಿದ್ದಾರೆ. “ನಾನು ಸಿಂಗಲ್ ಆಗಿರುವುದರಿಂದಲೇ ನನ್ನ ಬದುಕು ಹೆಚ್ಚು ನಿರಾಳವಾಗಿದೆ. ವೈಯಕ್ತಿಕ ಬದುಕು ನನಗಿಷ್ಟಮಾದ ರೀತಿಯಲ್ಲಿ ಸಾಗುತ್ತಿರುವುದು ನನಗೆ ಸಂತೋಷ ನೀಡುತ್ತದೆ. ಪ್ರೀತಿಯ ಬದಲಿಗೆ ಮದುವೆಯ ಅನುಭವ ಬೇಕೆಂಬುದು ನನ್ನ ನಿರ್ಧಾರವಲ್ಲ,” ಎಂದು ಅವರು ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಪ್ರಸ್ತುತ ತ್ರಿಷಾ ‘ವಿಶ್ವಂಭರ’, ‘ಗುಡ್ ಬ್ಯಾಡ್ ಅಗ್ಲಿ’ ಹಾಗೂ ‘ವಿಡಾಮುಯರ್ಚಿ’ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದು, ತಮ್ಮ ಚಿತ್ರರಂಗದ ಚೈತನ್ಯ ಇನ್ನೂ ಕಮ್ಮಿಯಾಗಿಲ್ಲ ಎಂಬುದನ್ನು ತಮ್ಮ ಹೊಸ ಕೆಲಸಗಳಿಂದ ಸಾಬೀತುಪಡಿಸುತ್ತಿದ್ದಾರೆ. ವೃತ್ತಿ ಹಾಗೂ ವೈಯಕ್ತಿಕ ಬದುಕಿನಲ್ಲಿ ತಮ್ಮದೇ ಆದ ಮಾರ್ಗದಲ್ಲಿ ಸಾಗುತ್ತಿರುವ ತ್ರಿಷಾ, ಇಂದಿನ ಯುವ ತಲೆಮಾರಿಗೆ ಪ್ರೇರಣೆಯಾಗಿ ಪರಿಣಮಿಸಿದ್ದಾರೆ.

nazeer ahamad

Recent Posts

ಮುಖ್ಯಮಂತ್ರಿಗಳ ಸೂಚನೆ ಕಟ್ಟುನಿಟ್ಟಾಗಿ ಪಾಲಿಸಿ: ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ

ಕಾರವಾರ: ಜಿಲ್ಲೆಯಲ್ಲಿ ಪಾರದರ್ಶಕ, ಜನಪರ ಹಾಗೂ ಪರಿಣಾಮಕಾರಿ ಆಡಳಿತ ನೀಡಲು ಎಲ್ಲಾ ಸರ್ಕಾರಿ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಮುಖ್ಯಮಂತ್ರಿಗಳು…

12 hours ago

ಬಸ್‌ನಲ್ಲಿ ಅಸಭ್ಯವಾಗಿ ಯುತಿಯ ಮೈ ಮುಟ್ಟಿ ಕಿರುಕುಳ; ಧೈರ್ಯವಾಗಿ ವಿಡಿಯೋ ಮಾಡಿದ ಯುವತಿ, ಆರೋಪಿಯನ್ನು ಕೆಳಗಿಳಿಸಿದ ಕಂಡಕ್ಟರ್!

ಮಾರುಕಟ್ಟೆಯಿಂದ ಮನೆಗೆ ತೆರಳಲು ಖಾಸಗಿ ಬಸ್ ಹತ್ತಿದ್ದ ಯುವತಿಗೆ ಮಾರ್ಗಮಧ್ಯೆ ಕಿರುಕುಳ ನೀಡಿದ ಘಟನೆ ನಡೆದಿದೆ. ಬಸ್ ಚಲಿಸಲು ಆರಂಭಿಸಿದ…

12 hours ago

₹65 ಸಾವಿರ ಸಂಬಳದ ಮುಖ್ಯೋಪಾಧ್ಯಾಯರಿಗೆ ಶಾಲೆಗೆ ಬರಲು ಸಮಯವಿಲ್ಲ; ₹4,500ಕ್ಕೆ ಯುವತಿಯನ್ನು ನೇಮಿಸಿ ಪಾಠ ಮಾಡಿಸಿದ ‘ಸರ್ಕಾರಿ ಶಾಲೆ’ ವಂಚನೆ!

ಮಧ್ಯಪ್ರದೇಶ: ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಣ ವ್ಯವಸ್ಥೆಯನ್ನೇ ಅಣಕಿಸುವಂತಹ ಆಘಾತಕಾರಿ ಪ್ರಕರಣವೊಂದು ಮಧ್ಯಪ್ರದೇಶದ ಮುರೈನಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ತಿಂಗಳಿಗೆ ₹65…

12 hours ago

ಇನ್‌ಸ್ಟಾಗ್ರಾಮ್ ಕ್ಯೂಟ್ ಕಪಲ್ ಕಥೆಗೆ ಬಿಗ್ ಟ್ವಿಸ್ಟ್: ಕೋಟ್ಯಾಧಿಪತಿ ಪತ್ನಿ ಕಂಡಕ್ಟರ್ ಜೊತೆ ಪರಾರಿ ಆರೋಪ!

ಸೋಷಿಯಲ್ ಮೀಡಿಯಾದಲ್ಲಿ ಸದಾ ನಗುನಗುತ್ತಾ ಕಾಣಿಸಿಕೊಳ್ಳುತ್ತಿದ್ದ ಕೇರಳದ ಜನಪ್ರಿಯ ಜೋಡಿ ಅಖಿಲ್ (Akhil NRD) ಮತ್ತು ಮೇಘಾ ಅವರ ದಾಂಪತ್ಯ…

12 hours ago

ಟೊರೊಂಟೊದಲ್ಲಿ ಭಾರತೀಯ ಮೂಲದ ಯುವತಿ ಹತ್ಯೆ: 7 ತಿಂಗಳ ಬಳಿಕ ಆಪ್ತ ವ್ಯಕ್ತಿ ಅರೆಸ್ಟ್‌!

ಟೊರೊಂಟೊ: ಕೆನಡಾದ ಟೊರೊಂಟೊದಲ್ಲಿ ಭಾರತೀಯ ಮೂಲದ 30 ವರ್ಷದ ಯುವತಿ ಹಿಮಾಂಶಿ ಖುರಾನಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು…

1 day ago

ಇನ್‌ಸ್ಟಾಗ್ರಾಂ ಪ್ರೇಮಿಗಾಗಿ 6 ತಿಂಗಳ ಕಂದಮ್ಮನನ್ನೇ ಕೊಲ್ಲಿಸಿದ ತಾಯಿ! ಮೀರಾಟ್‌ನಲ್ಲಿ ಬೆಚ್ಚಿಬೀಳಿಸಿದ ಘಟನೆ

ಮೀರಾಟ್: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಪ್ರೇಮಿಗಾಗಿ ತಾಯಿಯೊಬ್ಬಳು ತನ್ನ ಆರು ತಿಂಗಳ ಹಸುಗೂಸಿನ ಸಾವಿಗೆ ಕಾರಣಳಾದ ಆರೋಪ ಕೇಳಿಬಂದಿದ್ದು, ಉತ್ತರ…

1 day ago