Latest

ತ್ರಿಷಾ ಕೃಷ್ಣನ್‌ ವೈಯಕ್ತಿಕ ನಿರ್ಧಾರ: ಮದುವೆ ಇಚ್ಛೆಯಿಲ್ಲ, ಸ್ವತಂತ್ರ ಜೀವನವೇ ಪ್ರೀತಿಯ ಆಯ್ಕೆ

ದಕ್ಷಿಣ ಭಾರತದ ಬಹುಭಾಷಾ ಚಿತ್ರರಂಗದಲ್ಲಿ ತನ್ನ ಹಿರಿದಾದ ಹೆಸರನ್ನು ಸ್ಥಾಪಿಸಿಕೊಂಡಿರುವ ತ್ರಿಷಾ ಕೃಷ್ಣನ್‌ ಇತ್ತೀಚೆಗೆ ನೀಡಿರುವ ವೈಯಕ್ತಿಕ ಹೇಳಿಕೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ಎದ್ದಿದೆ. “ನಾನು ಮದುವೆಯಾಗಬೇಕೆಂಬ ಒತ್ತಡಕ್ಕೆ ತಲೆಬಗ್ಗುವ ಇಚ್ಛೆ ಇಲ್ಲ. ಮದುವೆಯ ನಂತರ ಅತೃಪ್ತ ಜೀವನವೇನಾದರೂ ಎದುರಾಗಬೇಕೆಂದಿಲ್ಲ. ಪ್ರೀತಿಯಿಂದ ಕೂಡಿದ ಶುದ್ಧ ಜೀವನ ನನಗೆ ಬೇಕು,” ಎಂಬುದಾಗಿ 41 ವರ್ಷದ ತ್ರಿಷಾ ಸ್ಪಷ್ಟವಾಗಿ ತಿಳಿಸಿದ್ದಾರೆ.

1999ರಲ್ಲಿ ಮಿಸ್ ಚೆನ್ನೈ ಪಡೆದ ಬಳಿಕ ಚಲನಚಿತ್ರ ಲೋಕಕ್ಕೆ ಕಾಲಿಟ್ಟ ತ್ರಿಷಾ, ‘ಸಾಮಿ’, ‘ಗಿಲ್ಲಿ’, ‘ವರ್ಷಂ’, ‘ಪೊನ್ನಿಯಿನ್ ಸೆಲ್ವನ್’, ಮತ್ತು ಕನ್ನಡದ ‘ಪವರ್‌’ ಸೇರಿದಂತೆ ಅನೇಕ ಸೂಪರ್‌ಹಿಟ್‌ ಸಿನಿಮಾಗಳಲ್ಲಿ ತಮ್ಮ ಅಭಿನಯ ಮತ್ತು ಆಕರ್ಷಕ ನಿರೂಪಣೆಯಿಂದ ದಕ್ಷಿಣ ಭಾರತದ ಪ್ರಖ್ಯಾತ ತಾರೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ವೃತ್ತಿಪರ ಬದುಕಿನಲ್ಲಿ ನಿರಂತರ ಯಶಸ್ಸುಗಳನ್ನು ಕಂಡು ಬಂದಿರುವ ತ್ರಿಷಾ, ವೈಯಕ್ತಿಕ ಜೀವನದಲ್ಲಿ ಮದುವೆ ಸಂಬಂಧಿತ ಜಗ್ಗಾಟದಿಂದ ಯಾವಾಗಲೂ ದೂರವಿರುವಂತೆ ಕಾಣಿಸುತ್ತಿದ್ದಾರೆ. ನಟ ಸಿಂಬು, ವಿಜಯ್‌, ಹಾಗೂ ರಾಣಾ ದಗ್ಗುಬಾಟಿಯೊಂದಿಗೆ ಅವರ ಸಂಬಂಧದ ವದಂತಿಗಳು ಹಲವು ಬಾರಿ ಸುದ್ದಿ ಮಾಡಿದವು. ಅಲ್ಲದೇ ಉದ್ಯಮಿ ವರುಣ್‌ ಜೊತೆ ನಿಶ್ಚಿತಾರ್ಥವೊಂದೂ ನಡೆದಿದ್ದು, ನಂತರ ವೈಯಕ್ತಿಕ ಕಾರಣಗಳಿಂದ ಅದು ವಿಫಲವಾಯಿತು ಎಂಬುದೂ ಬಹಿರಂಗವಾಗಿದೆ.

ಈ ಎಲ್ಲ ವಿಚಾರಗಳಿಗೆ ತ್ರಿಷಾ ಈ ಬಾರಿ ಸ್ಪಷ್ಟ ಉತ್ತರ ನೀಡಿದ್ದಾರೆ. “ನಾನು ಸಿಂಗಲ್ ಆಗಿರುವುದರಿಂದಲೇ ನನ್ನ ಬದುಕು ಹೆಚ್ಚು ನಿರಾಳವಾಗಿದೆ. ವೈಯಕ್ತಿಕ ಬದುಕು ನನಗಿಷ್ಟಮಾದ ರೀತಿಯಲ್ಲಿ ಸಾಗುತ್ತಿರುವುದು ನನಗೆ ಸಂತೋಷ ನೀಡುತ್ತದೆ. ಪ್ರೀತಿಯ ಬದಲಿಗೆ ಮದುವೆಯ ಅನುಭವ ಬೇಕೆಂಬುದು ನನ್ನ ನಿರ್ಧಾರವಲ್ಲ,” ಎಂದು ಅವರು ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಪ್ರಸ್ತುತ ತ್ರಿಷಾ ‘ವಿಶ್ವಂಭರ’, ‘ಗುಡ್ ಬ್ಯಾಡ್ ಅಗ್ಲಿ’ ಹಾಗೂ ‘ವಿಡಾಮುಯರ್ಚಿ’ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದು, ತಮ್ಮ ಚಿತ್ರರಂಗದ ಚೈತನ್ಯ ಇನ್ನೂ ಕಮ್ಮಿಯಾಗಿಲ್ಲ ಎಂಬುದನ್ನು ತಮ್ಮ ಹೊಸ ಕೆಲಸಗಳಿಂದ ಸಾಬೀತುಪಡಿಸುತ್ತಿದ್ದಾರೆ. ವೃತ್ತಿ ಹಾಗೂ ವೈಯಕ್ತಿಕ ಬದುಕಿನಲ್ಲಿ ತಮ್ಮದೇ ಆದ ಮಾರ್ಗದಲ್ಲಿ ಸಾಗುತ್ತಿರುವ ತ್ರಿಷಾ, ಇಂದಿನ ಯುವ ತಲೆಮಾರಿಗೆ ಪ್ರೇರಣೆಯಾಗಿ ಪರಿಣಮಿಸಿದ್ದಾರೆ.

nazeer ahamad

Recent Posts

ಮೊರಾರ್ಜಿ ವಸತಿ ಶಾಲೆಯ ಬಾಲಕಿ ಗರ್ಭಿಣಿ! ವರ್ಷಪೂರ್ತಿ ಅತ್ಯಾಚಾರ: ಕಾಮುಕನ ವಿರುದ್ಧ ಪೋಕ್ಸೋ ಕೇಸ್

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನಕಲುಕುವ ಘಟನೆ ಬೆಳಕಿಗೆ ಬಂದಿದ್ದು, ಮೊರಾರ್ಜಿ ವಸತಿ ಶಾಲೆಯಲ್ಲಿ…

2 hours ago

ಮನೆ ಮಾಲೀಕರಿಗೇ ಶಾಕ್ ಕೊಟ್ಟ ಬಾಡಿಗೆದಾರರು! ಮನೆ ಖಾಲಿ ಇದ್ದ ವೇಳೆ 45 ಗ್ರಾಂ ಚಿನ್ನ ದೋಚಿದ ದಂಪತಿ ಅರೆಸ್ಟ್

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಆವರ್ತಿ ಗ್ರಾಮದಲ್ಲಿ ನಿವೃತ್ತ ಶಿಕ್ಷಕರ ಮನೆಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಬೈಲುಕೊಪ್ಪ ಪೊಲೀಸರು ಭೇದಿಸಿದ್ದು,…

2 hours ago

ಅಸ್ಸಾಂಗೆ ಮಾಹಿತಿ ನೀಡದೆ ತೆರಳಿದ ಪ್ರಕರಣ: ಹುಳಿಯಾರು ಠಾಣೆಯ ಮೂವರು ಪೊಲೀಸ್ ಸಿಬ್ಬಂದಿ ಅಮಾನತು

ತುಮಕೂರು ಜಿಲ್ಲೆಯ ಹುಳಿಯಾರು ಪೊಲೀಸ್ ಠಾಣೆಯ ಪಿಎಸ್ಐ ಸೇರಿದಂತೆ ಮೂವರು ಪೊಲೀಸ್ ಸಿಬ್ಬಂದಿಯನ್ನು ಕರ್ತವ್ಯ ಲೋಪದ ಆರೋಪದಡಿ ಅಮಾನತುಗೊಳಿಸಲಾಗಿದೆ. ವಂಚನೆ…

12 hours ago

ರಾಜಾಜಿನಗರದಲ್ಲಿ ಭೀಕರ ಅವಘಡ: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರದ ಕೊಂಬೆ, ಸವಾರ ಕೋಮಾದಲ್ಲಿ

ಬೆಂಗಳೂರು ನಗರದಲ್ಲಿ ರಸ್ತೆ ಬದಿಯ ಅಪಾಯಕಾರಿ ಮರಗಳ ನಿರ್ವಹಣೆಯ ಕೊರತೆಯಿಂದ ಮತ್ತೊಂದು ಗಂಭೀರ ಅವಘಡ ಸಂಭವಿಸಿದೆ. ರಾಜಾಜಿನಗರದ ರಾಮಮಂದಿರ ರಸ್ತೆಯಲ್ಲಿ…

12 hours ago

ವೈರಲ್ ವಿಡಿಯೋ ಕುರಿತು ಸ್ಪಷ್ಟನೆ: ಮಗುವಿಗೆ ಹೊಡೆದ ಮಹಿಳೆ ಅಂಗನವಾಡಿ ಕಾರ್ಯಕರ್ತೆ ಅಲ್ಲ, ಮಗುವಿನ ತಾಯಿಯೇ ಎಂಬ ಮಾಹಿತಿ

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪುಟ್ಟ ಮಗುವಿಗೆ ಮಹಿಳೆಯೊಬ್ಬರು ಕಾಲಿನಿಂದ ಒದ್ದಿರುವ ವಿಡಿಯೋ ವೈರಲ್ ಆಗಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ವಿಡಿಯೋವನ್ನು…

12 hours ago

ವೃದ್ಧ ದೂರುದಾರನ ಎದುರು ಮೇಜಿನ ಮೇಲೆ ಕಾಲು: ಮಹಿಳಾ ಕಾನ್‌ಸ್ಟೇಬಲ್ ಅಮಾನತು, ವೈರಲ್ ಫೋಟೋಗೆ ಇಲಾಖೆ ಕಂಗಾಲು

ರಾಜಸ್ಥಾನದ ಡುಂಗರಪುರ ಜಿಲ್ಲೆಯ ಬಿಚ್ಚಿವಾಡ ಪೊಲೀಸ್ ಠಾಣೆಯಲ್ಲಿ ನಡೆದ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ವೃದ್ಧ ದೂರುದಾರನ…

12 hours ago