ಉತ್ತರ ಪ್ರದೇಶದ ಹಮೀರ್ ಪುರದಲ್ಲಿ ಇಂಜಿನಿಯರ್ ಒಬ್ಬ ಮೊದಲ ರಾತ್ರಿಯಲ್ಲಿ ಕಾಮೋತೇಜಕ ಮಾತ್ರೆಗಳನ್ನು ಸೇವಿಸಿ, ಮದವೇರಿದವನಂತೆ ಪತ್ನಿಯ ಮೇಲೆ ಎರಗಿದ ಪರಿಣಾಮ ಮಹಿಳೆ ಮೃತಪಟ್ಟಿರುವ ಘಟನೆ ನಡೆದಿದೆ.
ಮಹಿಳೆಯ ಪೋಷಕರು ಯಾರು ಇಲ್ಲದ ಕಾರಣ ಸರ್ಕಾರಿ ಹುದ್ದೆಯಲ್ಲಿರುವ ಆಕೆಯ ಸಹೋದರ ಹಾಗೂ ಸಂಬಂಧಿಕರೇ ಮುಂದೆ ನಿಂತು ಫೆಬ್ರವರಿ 3ರಂದು ಇಂಜಿನಿಯರ್ ನ ಜೊತೆ ಆಕೆಯ ಮದುವೆಯನ್ನು ಮಾಡಿಸಿರುತ್ತಾರೆ. ಫೆಬ್ರವರಿ 4ರಂದು ಮಹಿಳೆ ಅತ್ತೆಯ ಮನೆ ಸೇರುತ್ತಾಳೆ.
ಮೊದಲ ರಾತ್ರಿಯಂದು ಕಾಮೋತೇಜಕ ಮಾತ್ರೆಗಳನ್ನು ಸೇವಿಸಿದ ಇಂಜಿನಿಯರ್ ವರ, ವಧುವಿನ ಮೇಲೆ ಲೈಂಗಿಕ ದೌರ್ಜನ್ಯವನ್ನು ನಡೆಸಿದ್ದಾನೆ. ಇದರ ಪರಿಣಾಮವಾಗಿ ತೀವ್ರ ಗಾಯಗೊಂಡ ಆಕೆಯನ್ನು ಫೆಬ್ರವರಿ 7ರಂದು ಆಸ್ಪತ್ರೆಗೆ ದಾಖಲಿಸುತ್ತಾರೆ.
ಕಾನ್ಪುರದ ಖಾಸಗಿ ನರ್ಸಿಂಗ್ ಹೋಂ ಗೆ ಆಕೆಯನ್ನು ಕರೆದೊಯ್ಯಲಾಗಿದ್ದು ಆಕೆ ತೀವ್ರ ಅಸ್ವಸ್ಥಗೊಂಡಿದ್ದು, ಮಹಿಳಾ ಸ್ಥಿತಿ ತೀವ್ರ ಹದಗೆಟ್ಟಿರುತ್ತದೆ ಅದನ್ನು ನೋಡಿದ ಗಂಡ ಕಾಮೋತೇಜಕ ಮಾತ್ರೆ ಸೇವಿಸಿ ಆಕೆಯ ಜೊತೆ ಲೈಂಗಿಕ ಕ್ರಿಯೆ ನಡೆಸಿರುವುದಾಗಿ ತಪ್ಪನ್ನು ಒಪ್ಪಿಕೊಂಡಿರುತ್ತಾನೆ.
ಆಕೆಗೆ ಚಿಕಿತ್ಸೆ ನೀಡಿದ ಸ್ತ್ರೀರೋಗ ತಜ್ಞರು ಮಹಿಳೆ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗುವಷ್ಟು ದೌರ್ಜನ್ಯಕ್ಕೆ ಒಳಗಾಗಿದ್ದಾಳೆ ಎಂದು ಹೇಳಿರುತ್ತಾರೆ.
ಮೊದಲ ರಾತ್ರಿಯಂದು ಗಂಡ ನಡೆಸಿದ ಲೈಂಗಿಕ ಕ್ರಿಯೆಯಿಂದ ಮಹಿಳೆಯ ಖಾಸಗಿ ಭಾಗದಲ್ಲಿ ಆಗಿರುವ ಗಾಯಗಳು ಸೋಂಕಿಗೆ ಕಾರಣವಾಗಿ ಚಿಕಿತ್ಸೆ ಫಲಿಸದೆ ಫೆಬ್ರವರಿ 10ರಂದು ಆಸ್ಪತ್ರೆಯಲ್ಲಿ ಮಹಿಳೆ ಮೃತಪಟ್ಟಿರುತ್ತಾಳೆ.
ಮೊದಲ ರಾತ್ರಿಯಂದು ಗಂಡ ಕಾಮೋತೇಜಕ ಮಾತ್ರೆ ಸೇವಿಸಿ ಲೈಂಗಿಕ ದೌರ್ಜನ್ಯ ಎಸಗಿದ ಪರಿಣಾಮ ಮಹಿಳೆ ಮದುವೆಯಾದ ಒಂದೇ ವಾರಕ್ಕೆ ಮೃತಪಟ್ಟಿದ್ದಾಳೆ.
ಇಂಜಿನಿಯರ್ ಗಂಡ ಮನೆಗೆ ಬೀಗ ಹಾಕಿಕೊಂಡು ಪೋಷಕರೊಂದಿಗೆ ಪರಾಗಿದ್ದು, ಮಹಿಳೆ ಸಹೋದರ ಹಾಗೂ ಸಂಬಂಧಿಕರು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿರುತ್ತಾರೆ.
ಇಂದು ಬೆಂಗಳೂರಿನಲ್ಲಿ ‘ಟಾಕ್ಸಿಕ್’ ಟ್ರೇಲರ್ ಬಿಡುಗಡೆ ಕಾರ್ಯಕ್ರಮ | ಆಗಸ್ಟ್ 26ರಂದು ವಿಶ್ವಾದ್ಯಂತ ತೆರೆಗೆ ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್…
ಅಮೃತಸರ: ಉನ್ನತ ಶಿಕ್ಷಣಕ್ಕಾಗಿ ದೂರದ ನಗರಕ್ಕೆ ಮಕ್ಕಳನ್ನು ಕಳುಹಿಸುವ ಪೋಷಕರು ಅವರ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿರುತ್ತಾರೆ. ಆದರೆ ಕೆಲವೊಮ್ಮೆ…
ಹೆತ್ತ ಮಕ್ಕಳ ಸುಖ-ಸಂತೋಷಕ್ಕಾಗಿ ತಮ್ಮ ಇಡೀ ಜೀವನವನ್ನೇ ತ್ಯಾಗ ಮಾಡುವ ತಂದೆ-ತಾಯಿಯರಿಗೆ ವೃದ್ಧಾಪ್ಯದಲ್ಲಿ ಸಿಗುವ ಪ್ರತಿಫಲ ಕೆಲವೊಮ್ಮೆ ಎಷ್ಟು ನೋವಿನದ್ದಾಗಿರುತ್ತದೆ…
ಮಂಡ್ಯದಲ್ಲಿ ರಸ್ತೆ ಅಪಘಾತವೆಂದು ಆರಂಭದಲ್ಲಿ ದಾಖಲಾಗಿದ್ದ ಯುವತಿಯ ಸಾವಿನ ಪ್ರಕರಣ ಇದೀಗ ಮಹತ್ವದ ತಿರುವು ಪಡೆದುಕೊಂಡಿದೆ. ಆರಂಭದಲ್ಲಿ ಸಾಮಾನ್ಯ ಅಪಘಾತ…
ಕನ್ನೌಜ್ (ಉತ್ತರ ಪ್ರದೇಶ): ಶಿಕ್ಷಣ ಕ್ಷೇತ್ರದ ಗೌರವಕ್ಕೆ ಧಕ್ಕೆ ತರುವಂತಹ ಘಟನೆಯೊಂದು ಉತ್ತರ ಪ್ರದೇಶದ ಕನ್ನೌಜ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.…
ಬೆಂಗಳೂರು: ನಗರದ ಅಪಾರ್ಟ್ಮೆಂಟ್ನಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಯುವತಿಗೆ ಪಾರ್ಸಲ್ ಡೆಲಿವರಿ ವೇಳೆ ಆತಂಕಕಾರಿ ಅನುಭವ ಎದುರಾಗಿರುವ ಘಟನೆ ಬೆಳಕಿಗೆ ಬಂದಿದೆ.…