Categories: CrimeLatestWorld

ಜಾಗತಿಕ ಬ್ಯಾಂಕಿಂಗ್ ದಿಗ್ಗಜ JPMorganನಲ್ಲಿ ಲೈಂಗಿಕ ಕಿರುಕುಳ ಆರೋಪ: ಭಾರತೀಯ ಉದ್ಯೋಗಿಗೆ ಸೆಕ್ಸ್ ಮಾಡುವುದಕ್ಕೆ ನಿರ್ದೇಶಕಿಯಿಂದ ಒತ್ತಾಯ

ಜಾಗತಿಕ ಬ್ಯಾಂಕಿಂಗ್ ಕ್ಷೇತ್ರದ ಪ್ರಮುಖ ಸಂಸ್ಥೆಯಾದ JPMorgan Chase ನಲ್ಲಿ ಗಂಭೀರ ವಿವಾದವೊಂದು ಸ್ಫೋಟಗೊಂಡಿದೆ. ಸಂಸ್ಥೆಯ ಲಿವರೇಜ್ಡ್ ಫೈನಾನ್ಸ್ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕಿ ಲೋರ್ನಾ ಹೆಜ್ಡ್ಜಿನಿ ವಿರುದ್ಧ ಭಾರತೀಯ ಮೂಲದ ಕಿರಿಯ ಉದ್ಯೋಗಿಯೊಬ್ಬರು ಲೈಂಗಿಕ ಕಿರುಕುಳ, ಜನಾಂಗೀಯ ಅವಹೇಳನ ಹಾಗೂ ವೃತ್ತಿಪರ ಬೆದರಿಕೆ ಆರೋಪಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

‘ಜಾನ್ ಡೋ’ ಎಂಬ ಹೆಸರಿನಲ್ಲಿ ಗುರುತಿಸಿಕೊಂಡಿರುವ ಸಂತ್ರಸ್ತರು, ಲೋರ್ನಾ ಅವರು ಲೈಂಗಿಕ ಸಂಬಂಧಕ್ಕೆ ಒತ್ತಾಯಿಸಿ, ನಿರಾಕರಿಸಿದರೆ ವೃತ್ತಿ ಜೀವನ ಹಾಳುಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. “ನಿನ್ನ ಬಡ್ತಿ ತಡೆಹಿಡಿಯುತ್ತೇನೆ, ಮ್ಯಾನೇಜ್‌ಮೆಂಟ್ ಭಾರತೀಯರನ್ನು ಉನ್ನತ ಹುದ್ದೆಗಳಿಗೆ ಒಪ್ಪುವುದಿಲ್ಲ” ಎಂದು ಹೇಳಿ ಒತ್ತಡ ಹೇರಲಾಗುತ್ತಿತ್ತು ಎಂದು ಆರೋಪಿಸಲಾಗಿದೆ.

ಈ ಸಂಬಂಧ New York County Supreme Court ನಲ್ಲಿ ಏಪ್ರಿಲ್ 27ರಂದು ಮೊಕದ್ದಮೆ ದಾಖಲಾಗಿದ್ದು, ಲೈಂಗಿಕ ದೌರ್ಜನ್ಯ ಮಾತ್ರವಲ್ಲದೆ ಜನಾಂಗೀಯ ಕಿರುಕುಳ ಮತ್ತು ವೃತ್ತಿಪರ ಬಲವಂತದ ಆರೋಪಗಳೂ ಸೇರಿವೆ.

ಮೊಕದ್ದಮೆಯ ವಿವರಗಳ ಪ್ರಕಾರ, 2024ರಲ್ಲಿ ಇಬ್ಬರೂ ಒಂದೇ ವಿಭಾಗದಲ್ಲಿ ಕೆಲಸ ಆರಂಭಿಸಿದ ಬಳಿಕ ಕಿರುಕುಳಗಳು ಆರಂಭಗೊಂಡವು. ಅನೇಕ ಸಂದರ್ಭಗಳಲ್ಲಿ ಅಸಭ್ಯ ವರ್ತನೆ, ಅನಾವಶ್ಯಕ ಸ್ಪರ್ಶ ಮತ್ತು ಅವಮಾನಕಾರಿ ಮಾತುಗಳನ್ನು ಬಳಕೆ ಮಾಡಲಾಗಿದೆ ಎಂದು ಸಂತ್ರಸ್ತರು ತಿಳಿಸಿದ್ದಾರೆ.

ಇದರ ಜೊತೆಗೆ, ಖಾಸಗಿ ಭೇಟಿಗಳು ಹಾಗೂ ಪಾನೀಯಗಳಿಗೆ ಒತ್ತಾಯಿಸಿ, ನಿರಾಕರಿಸಿದಾಗ “ನನ್ನ ಮಾತಿಗೆ ಒಪ್ಪದಿದ್ದರೆ ನಿನ್ನ ವೃತ್ತಿ ಜೀವನ ನಾಶ ಮಾಡುತ್ತೇನೆ” ಎಂದು ಬೆದರಿಕೆ ಹಾಕಲಾಗುತ್ತಿತ್ತಂತೆ. ಸೆಪ್ಟೆಂಬರ್ 2024ರವರೆಗೂ ಈ ಒತ್ತಡ ಮುಂದುವರಿದಿದ್ದು, ಕಚೇರಿಯಲ್ಲಿಯೇ ಅವಮಾನಕಾರಿ ವರ್ತನೆ ತೋರಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.

ಇನ್ನೂ ಗಂಭೀರವಾಗಿ, ಒಂದು ಸಂದರ್ಭದಲ್ಲಿ ಆರೋಪಿತ ಅಧಿಕಾರಿ ಸಂತ್ರಸ್ತನ ನಿವಾಸಕ್ಕೂ ತೆರಳಿ ಅಸಭ್ಯವಾಗಿ ವರ್ತಿಸಿ, ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದರೆಂದು ಹಾಗೂ ಸಂತ್ರಸ್ತನ ಪತ್ನಿಯನ್ನು ಜನಾಂಗೀಯವಾಗಿ ಅವಹೇಳನ ಮಾಡಿದ್ದಾಗಿ ದೂರಿನಲ್ಲಿ ಹೇಳಲಾಗಿದೆ.

ಮೇ 2025ರಲ್ಲಿ ಸಂತ್ರಸ್ತರು ಸಂಸ್ಥೆಗೆ ಲಿಖಿತ ದೂರು ಸಲ್ಲಿಸಿದ್ದರೂ, JPMorgan Chase ನಡೆಸಿದ ಆಂತರಿಕ ತನಿಖೆಯಲ್ಲಿ ಆರೋಪಗಳನ್ನು ಸಮರ್ಥಿಸುವ ಪುರಾವೆಗಳು ದೊರಕಲಿಲ್ಲವೆಂದು ಹೇಳಿ ದೂರು ತಳ್ಳಿ ಹಾಕಲಾಗಿದೆ.

ಸಂಸ್ಥೆಯ ವಕ್ತಾರರ ಪ್ರಕಾರ, “ವಿಸ್ತೃತ ತನಿಖೆಯ ಬಳಿಕ ಯಾವುದೇ ಸತ್ಯಾಂಶ ಪತ್ತೆಯಾಗಿಲ್ಲ. ಅನೇಕ ಉದ್ಯೋಗಿಗಳು ಸಹಕರಿಸಿದ್ದರೂ, ದೂರುದಾರರು ತನಿಖೆಯಲ್ಲಿ ಸಂಪೂರ್ಣವಾಗಿ ಭಾಗವಹಿಸಲಿಲ್ಲ” ಎಂದು ಸ್ಪಷ್ಟಪಡಿಸಲಾಗಿದೆ.

ಈ ಘಟನೆ ಕಾರ್ಪೋರೇಟ್ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದ್ದು, ಪ್ರಕರಣದ ಮುಂದಿನ ಹಂತಗಳತ್ತ ಎಲ್ಲರ ಗಮನ ಸೆಳೆಯುತ್ತಿದೆ.

ಭ್ರಷ್ಟರ ಬೇಟೆ

Recent Posts

ಲಿಂಗಸಗೂರು ತಾಲೂಕಿನಲ್ಲಿ ಕಳ್ಳಭಟ್ಟಿ ದಂಧೆ ವಿರುದ್ಧ ಅಬಕಾರಿ ದಾಳಿ: 4 ಲೀಟರ್ ಸರಾಯಿ ವಶ, ಮೂವರು ಬಂಧನ

ಲಿಂಗಸಗೂರು ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಕಳ್ಳಭಟ್ಟಿ ಸರಾಯಿ ದಂಧೆಗೆ ಕಡಿವಾಣ ಹಾಕಲು ಅಬಕಾರಿ ಇಲಾಖೆ ಚುರುಕಾಗಿ ಕಾರ್ಯಾಚರಣೆ ನಡೆಸುತ್ತಿದ್ದು,…

3 hours ago

ಚಲಿಸುವ ರೈಲು ಕೆಳಗೆ ಸಿಲುಕಿದ ತಂದೆ-ಮಗು: ಅದಮ್ಯ ಧೈರ್ಯದಿಂದ ಪಾರಾದ ಜೀವಗಳು!

ಬಾಂಗ್ಲಾದೇಶದ ಕಿಶೋರ್‌ಗಂಜ್ ಜಿಲ್ಲೆಯ ಭೈರಬ್ ರೈಲು ನಿಲ್ದಾಣದಲ್ಲಿ ನಡೆದ ಹೃದಯ ಕಲುಕುವ ಘಟನೆ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ…

1 day ago

ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆ: ಅಥಣಿಯಲ್ಲಿ ಹೃದಯವಿದ್ರಾವಕ ಘಟನೆ

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಶಂಕರಮಠ ಗಲ್ಲಿಯಲ್ಲಿ 15 ವರ್ಷಗಳ ದಾಂಪತ್ಯ ಜೀವನ ನಡೆಸಿದ್ದ ಮಹಿಳೆಯೊಬ್ಬಳು ಗಂಡನ ವರದಕ್ಷಿಣೆ ಕಿರುಕುಳಕ್ಕೆ…

1 day ago

ಬಿಜೆಪಿ ಯುವ ಮೋರ್ಚಾ ನಾಯಕ ವೆಂಕಟೇಶ್ ಕೊಲೆ ಪ್ರಕರಣ: ಆರು ಅಪರಾಧಿಗಳಿಗೆ ಗಲ್ಲು ಶಿಕ್ಷೆ

ಬಿಜೆಪಿ ಯುವ ಮೋರ್ಚಾದ ನಗರ ಘಟಕದ ಅಧ್ಯಕ್ಷ ವೆಂಕಟೇಶ ಕುರುಬರ್ ಅಲಿಯಾಸ್ ಜೆಎನ್‌ಎನ್ ವೆಂಕಿ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರು…

1 day ago

66ರ ವೃದ್ಧನಿಗೆ 35ರ ಯುವತಿಯೊಂದಿಗೆ ಮದುವೆ! ವಯಸ್ಸು ಕೇವಲ ಸಂಖ್ಯೆ ಮಾತ್ರವೇ?

66 ವರ್ಷದ ಸೋಮ್ ದೇವ್ ಮತ್ತು 35 ವರ್ಷದ ಯುವತಿಯ ವಿವಾಹ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.…

1 day ago

ವಿಮೆ-ಆಸ್ತಿ ಲಾಭಕ್ಕಾಗಿ ಗಂಡನ ಕೊಲೆ: ಹರಿಯಾಣದಲ್ಲಿ ಪ್ರಿಯಕರ ನೊಂದಿಗೆ ಪತ್ನಿ ರಚಿಸಿದ್ದ ಸಂಚು ಬಯಲು.!

ಹರಿಯಾಣದ ಚರ್ಕಿ ದಾದ್ರಿ ಜಿಲ್ಲೆಯಲ್ಲಿ ನಡೆದ ಭೀಕರ ಘಟನೆಯೊಂದು ಮಾನವ ಸಂಬಂಧಗಳನ್ನೇ ಪ್ರಶ್ನಿಸುವಂತೆ ಮಾಡಿದೆ. ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ,…

1 day ago