Latest

ಅಮೃತಹಳ್ಳಿಯಲ್ಲಿ ರಸ್ತೆ ಬದಿಯ ಸೂಟ್‌ಕೇಸ್‌ನಲ್ಲಿ 30 ಲಕ್ಷ ರೂ. ನಗದು ಪತ್ತೆ!

ಬೆಂಗಳೂರು: ಅಮೃತಹಳ್ಳಿ ಠಾಣಾ ವ್ಯಾಪ್ತಿಯ ಜಂಕ್ಷನ್‌ನಲ್ಲಿ ಬುಧವಾರ ರಾತ್ರಿ ಸಂಭವಿಸಿದ ಘಟನೆಯೊಂದು ಸ್ಥಳೀಯರಲ್ಲಿ ಕುತೂಹಲ ಮೂಡಿಸಿತು. ರಸ್ತೆ ಬದಿಯಲ್ಲಿ ಬಿಟ್ಟಿದ್ದ ಸೂಟ್‌ಕೇಸ್‌ನಿಂದ ಅಪಾರ ಪ್ರಮಾಣದ ನಗದು ಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ.

ಮೂಲಗಳ ಪ್ರಕಾರ, ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್‌ನಲ್ಲಿದ್ದ ಒಬ್ಬ ಪ್ರಯಾಣಿಕ ತನ್ನ ಮದುವೆ ಖರ್ಚಿಗಾಗಿ ಬ್ಯಾಂಕ್‌ನಿಂದ 30 ಲಕ್ಷ ರೂ. ತೆಗೆಯಲಾಗಿತ್ತು. ಬಸ್ ಮೆಜೆಸ್ಟಿಕ್ ತಲುಪಿದಾಗ ಅವರು ತಮ್ಮ ಸೂಟ್‌ಕೇಸ್‌ ಕಾಣೆಯಾಗಿರುವುದು ಗಮನಿಸಿದರು. ತಕ್ಷಣವೇ ಬಸ್ ಕ್ಲೀನರ್‌ಗೆ ಮಾಹಿತಿ ನೀಡಲಾಯಿತು.

ಇದರ ನಡುವೆ, ಅಮೃತಹಳ್ಳಿ ಜಂಕ್ಷನ್ ಬಳಿ ಕೆಲವರು ಬಸ್‌ನಿಂದ ಇಳಿಯುವಾಗ ತಪ್ಪಾಗಿ ಆ ನಗದು ತುಂಬಿದ ಸೂಟ್‌ಕೇಸ್ ಸಹ ಇಳಿಸಲ್ಪಟ್ಟಿತ್ತು. ತಮಗೆ ಸೇರಿದ ವಸ್ತು ಅಲ್ಲವೆಂದು ಭಾವಿಸಿದವರು ಅದನ್ನು ರಸ್ತೆ ಬದಿಯಲ್ಲಿ ಬಿಟ್ಟು ತೆರಳಿದ್ದರು.

ಸ್ಥಳೀಯರು ಅನುಮಾನಾಸ್ಪದವಾಗಿ ಬಿದ್ದಿದ್ದ ಸೂಟ್‌ಕೇಸ್‌ ನೋಡಿ ಹೊಯ್ಸಳ ಗಸ್ತು ಸಿಬ್ಬಂದಿಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ, ಅದರೊಳಗೆ ದೊಡ್ಡ ಪ್ರಮಾಣದ ನಗದು ಇರುವುದನ್ನು ಪತ್ತೆಹಚ್ಚಿದರು.

ನಂತರ, ಬಸ್ ಕ್ಲೀನರ್‌ ಹಾಗೂ ಮಾಲೀಕರು ಅಮೃತಹಳ್ಳಿ ಠಾಣೆಗೆ ಬಂದು, ಬ್ಯಾಂಕ್‌ನಿಂದ ಹಣ ತೆಗೆಯಲಾದ ದಾಖಲೆಗಳನ್ನು ನೀಡಿದರು. ಎಲ್ಲಾ ಪರಿಶೀಲನೆಗಳ ಬಳಿಕ, ಪೊಲೀಸರು 30 ಲಕ್ಷ ರೂಪಾಯಿಗಳ ನಗದು ಮಾಲೀಕರಿಗೆ ಹಸ್ತಾಂತರಿಸಿದರು.

ಈ ಘಟನೆ ಸ್ಥಳೀಯರಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಪೊಲೀಸರ ತ್ವರಿತ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತವಾಗಿದೆ.

***

ಭ್ರಷ್ಟರ ಬೇಟೆ ಪತ್ರಿಕೆಗೆ ರಾಜ್ಯಾದ್ಯಂತ ವರದಿಗಾರರು ಬೇಕಾಗಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 80 88070392

nazeer ahamad

Recent Posts

ಮುಖ್ಯಮಂತ್ರಿಗಳ ಸೂಚನೆ ಕಟ್ಟುನಿಟ್ಟಾಗಿ ಪಾಲಿಸಿ: ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ

ಕಾರವಾರ: ಜಿಲ್ಲೆಯಲ್ಲಿ ಪಾರದರ್ಶಕ, ಜನಪರ ಹಾಗೂ ಪರಿಣಾಮಕಾರಿ ಆಡಳಿತ ನೀಡಲು ಎಲ್ಲಾ ಸರ್ಕಾರಿ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಮುಖ್ಯಮಂತ್ರಿಗಳು…

16 hours ago

ಬಸ್‌ನಲ್ಲಿ ಅಸಭ್ಯವಾಗಿ ಯುತಿಯ ಮೈ ಮುಟ್ಟಿ ಕಿರುಕುಳ; ಧೈರ್ಯವಾಗಿ ವಿಡಿಯೋ ಮಾಡಿದ ಯುವತಿ, ಆರೋಪಿಯನ್ನು ಕೆಳಗಿಳಿಸಿದ ಕಂಡಕ್ಟರ್!

ಮಾರುಕಟ್ಟೆಯಿಂದ ಮನೆಗೆ ತೆರಳಲು ಖಾಸಗಿ ಬಸ್ ಹತ್ತಿದ್ದ ಯುವತಿಗೆ ಮಾರ್ಗಮಧ್ಯೆ ಕಿರುಕುಳ ನೀಡಿದ ಘಟನೆ ನಡೆದಿದೆ. ಬಸ್ ಚಲಿಸಲು ಆರಂಭಿಸಿದ…

16 hours ago

₹65 ಸಾವಿರ ಸಂಬಳದ ಮುಖ್ಯೋಪಾಧ್ಯಾಯರಿಗೆ ಶಾಲೆಗೆ ಬರಲು ಸಮಯವಿಲ್ಲ; ₹4,500ಕ್ಕೆ ಯುವತಿಯನ್ನು ನೇಮಿಸಿ ಪಾಠ ಮಾಡಿಸಿದ ‘ಸರ್ಕಾರಿ ಶಾಲೆ’ ವಂಚನೆ!

ಮಧ್ಯಪ್ರದೇಶ: ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಣ ವ್ಯವಸ್ಥೆಯನ್ನೇ ಅಣಕಿಸುವಂತಹ ಆಘಾತಕಾರಿ ಪ್ರಕರಣವೊಂದು ಮಧ್ಯಪ್ರದೇಶದ ಮುರೈನಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ತಿಂಗಳಿಗೆ ₹65…

16 hours ago

ಇನ್‌ಸ್ಟಾಗ್ರಾಮ್ ಕ್ಯೂಟ್ ಕಪಲ್ ಕಥೆಗೆ ಬಿಗ್ ಟ್ವಿಸ್ಟ್: ಕೋಟ್ಯಾಧಿಪತಿ ಪತ್ನಿ ಕಂಡಕ್ಟರ್ ಜೊತೆ ಪರಾರಿ ಆರೋಪ!

ಸೋಷಿಯಲ್ ಮೀಡಿಯಾದಲ್ಲಿ ಸದಾ ನಗುನಗುತ್ತಾ ಕಾಣಿಸಿಕೊಳ್ಳುತ್ತಿದ್ದ ಕೇರಳದ ಜನಪ್ರಿಯ ಜೋಡಿ ಅಖಿಲ್ (Akhil NRD) ಮತ್ತು ಮೇಘಾ ಅವರ ದಾಂಪತ್ಯ…

16 hours ago

ಟೊರೊಂಟೊದಲ್ಲಿ ಭಾರತೀಯ ಮೂಲದ ಯುವತಿ ಹತ್ಯೆ: 7 ತಿಂಗಳ ಬಳಿಕ ಆಪ್ತ ವ್ಯಕ್ತಿ ಅರೆಸ್ಟ್‌!

ಟೊರೊಂಟೊ: ಕೆನಡಾದ ಟೊರೊಂಟೊದಲ್ಲಿ ಭಾರತೀಯ ಮೂಲದ 30 ವರ್ಷದ ಯುವತಿ ಹಿಮಾಂಶಿ ಖುರಾನಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು…

2 days ago

ಇನ್‌ಸ್ಟಾಗ್ರಾಂ ಪ್ರೇಮಿಗಾಗಿ 6 ತಿಂಗಳ ಕಂದಮ್ಮನನ್ನೇ ಕೊಲ್ಲಿಸಿದ ತಾಯಿ! ಮೀರಾಟ್‌ನಲ್ಲಿ ಬೆಚ್ಚಿಬೀಳಿಸಿದ ಘಟನೆ

ಮೀರಾಟ್: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಪ್ರೇಮಿಗಾಗಿ ತಾಯಿಯೊಬ್ಬಳು ತನ್ನ ಆರು ತಿಂಗಳ ಹಸುಗೂಸಿನ ಸಾವಿಗೆ ಕಾರಣಳಾದ ಆರೋಪ ಕೇಳಿಬಂದಿದ್ದು, ಉತ್ತರ…

2 days ago