ನವದೆಹಲಿ: ಡ್ರೆಸ್ ಕೋಡ್ ನಿಯಮವನ್ನು ನೆಪವಿಟ್ಟು, ದೆಹಲಿಯೊಂದು ರೆಸ್ಟೋರೆಂಟ್ ದಂಪತಿಗೆ ಪ್ರವೇಶ ನಿರಾಕರಿಸಿದ ಘಟನೆ ಭಾರೀ ವಿವಾದಕ್ಕೆ ಕಾರಣವಾಗಿದೆ. ವಿಶೇಷವಾಗಿ ಮಹಿಳೆ ಚೂಡಿದಾರ್ ಧರಿಸಿದ್ದಕ್ಕಾಗಿ ಒಳಗೆ ಬಿಡದಿರುವ ವಿಡಿಯೋವೈರಲ್ ಆಗಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆ ಆಗಸ್ಟ್ 3ರಂದು ಪಿತಂಪುರ ಪ್ರದೇಶದಲ್ಲಿರುವ ಟುಬಾಟ ಬಾರ್ ಅಂಡ್ ರೆಸ್ಟೋರೆಂಟ್ನಲ್ಲಿ ನಡೆದಿದೆ. ವಿಡಿಯೋದಲ್ಲಿ, ಪುರುಷ ಟೀ-ಶರ್ಟ್ ಮತ್ತು ಪ್ಯಾಂಟ್ ಧರಿಸಿದ್ದರೆ, ಮಹಿಳೆ ಸಲ್ವಾರ್-ಕಮೀಜ್ ತೊಟ್ಟಿದ್ದಾರೆ. ಆದರೆ, ರೆಸ್ಟೋರೆಂಟ್ ಸಿಬ್ಬಂದಿ ‘ತುಂಡು ತುಂಡು ಬಟ್ಟೆ ಹಾಕಿದರೆ ಮಾತ್ರ ಪ್ರವೇಶ’ ಎಂದು ಹೇಳಿ, ದಂಪತಿಯನ್ನು ಒಳಗೆ ಬಿಡಲಿಲ್ಲ ಎಂಬ ಆರೋಪ ಬಂದಿದೆ.
ವಿಡಿಯೋದಲ್ಲಿ ವ್ಯಕ್ತಿಯೊಬ್ಬರು, “ಪಾಶ್ಚಿಮಾತ್ಯ ಉಡುಗೆ ತೊಟ್ಟವರಿಗೆ ಎಂಟ್ರಿ, ಆದರೆ ನಮ್ಮ ದೇಸಿ ಉಡುಗೆ ತೊಟ್ಟವರಿಗೆ ನೋ ಎಂಟ್ರಿ ಯಾಕೆ? ಶಾರ್ಟ್ಸ್ ಹಾಕಿದವರಿಗೆ ಒಳಗೆ ಬಿಡ್ತೀರ, ಚೂಡಿದಾರ್ ಹಾಕಿದವರಿಗೆ ಬೇಡ ಅಂತೀರ” ಎಂದು ಪ್ರಶ್ನಿಸಿರುವುದು ಕೇಳಿಸಿತು. ಇನ್ನೊಬ್ಬರು ತಮಾಷೆಯಾಗಿ, “ರಾಷ್ಟ್ರಪತಿ ಅಥವಾ ದೆಹಲಿ ಸಿಎಂ ಸೀರೆ ಧರಿಸಿ ಬಂದರೂ ಒಳಗೆ ಬಿಡ್ತೀರಾ?” ಎಂದು ಕೇಳಿರುವುದು ಸಹ ವೈರಲ್ ಆಗಿದೆ.
ಘಟನೆಯ ಬಳಿಕ, ದೆಹಲಿ ಸಚಿವ ಕಪಿಲ್ ಮಿಶ್ರಾ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿ, “ಈಗಿನಿಂದ ಡ್ರೆಸ್ ಕೋಡ್ ಆಧಾರಿತ ನಿರ್ಬಂಧಗಳನ್ನು ಕೈಬಿಡಲಾಗುತ್ತದೆ. ಭಾರತೀಯ ಉಡುಗೆ ತೊಟ್ಟವರಿಗೂ ಸಂಪೂರ್ಣ ಸ್ವಾಗತ” ಎಂದು ಹೇಳಿದ್ದಾರೆ.
ಸಚಿವರ ಮಧ್ಯಸ್ಥಿಕೆ ಮತ್ತು ಜನರ ಒತ್ತಡದ ಬಳಿಕ, ರೆಸ್ಟೋರೆಂಟ್ ಆಡಳಿತ ಕ್ಷಮೆ ಕೇಳಿದ್ದು, ಮುಂದಿನ ದಿನಗಳಲ್ಲಿ ಯಾವುದೇ ಉಡುಗೆ ಆಧಾರದ ಮೇಲೆ ಗ್ರಾಹಕರಿಗೆ ತೊಂದರೆ ಉಂಟಾಗದಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ.
ಈ ಘಟನೆ ಡ್ರೆಸ್ ಕೋಡ್ಗಳನ್ನು ಹೇಗೆ ಜಾರಿಗೊಳಿಸಬೇಕು ಎಂಬ ಪ್ರಶ್ನೆಯನ್ನು ಮತ್ತೆ ಎಬ್ಬಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಹಲವರು, “ಉಡುಗೆ ವ್ಯಕ್ತಿತ್ವವನ್ನು ಅಳೆಯುವ ಮಾಪಕವಾಗಬಾರದು” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
***
ಭ್ರಷ್ಟರ ಬೇಟೆ ಪತ್ರಿಕೆಗೆ ರಾಜ್ಯಾದ್ಯಂತ ವರದಿಗಾರರು ಬೇಕಾಗಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 80 88070392
ಗದಗ ಜಿಲ್ಲೆಯ ಡಿವೈಎಸ್ಪಿ ಮುರ್ತುಜಾ ಖಾದ್ರಿ ಮತ್ತು ಗ್ರಾಮೀಣ ಪೊಲೀಸ್ ಠಾಣೆಯ ಸಿಪಿಐ ಸಿದ್ದರಾಮೇಶ್ವರ ಗಡದ ವಿರುದ್ಧ ಗದಗ ಜೆಎಂಎಫ್ಸಿ…
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಓಲಾ, ಉಬರ್ ಹಾಗೂ ರಾಪಿಡೋ ಬೈಕ್ ಟ್ಯಾಕ್ಸಿ ಸೇವೆಗಳನ್ನು ತಕ್ಷಣವೇ ನಿಷೇಧಿಸಬೇಕು ಎಂದು ಆಗ್ರಹಿಸಿ…
ಶಿರಸಿ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರ ಬ್ಯಾಗ್ನಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಪ್ರಕರಣವನ್ನು ಶಿರಸಿ ನಗರ…
ಲೋಕಾಯುಕ್ತ ಕಚೇರಿಯ ಹಿರಿಯ ಅಧಿಕಾರಿ ಎಂದು ಸುಳ್ಳು ಪರಿಚಯ ನೀಡಿ, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ನಿಂದ ಹಣ ವಸೂಲಿ ಮಾಡಲು ಯತ್ನಿಸಿದ…
ಜಮೀನಿನ ಖಾತಾ ಉತಾರ ನೀಡಲು ಲಂಚ ಸ್ವೀಕರಿಸಿದ ಆರೋಪದಲ್ಲಿ ಬಿಜನಗೇರಾ ಗ್ರಾಮ ಪಂಚಾಯಿತಿ ಪಿಡಿಒ ಲಕ್ಷ್ಮೀ ಪ್ಯಾಟಿ ಲೋಕಾಯುಕ್ತ ಅಧಿಕಾರಿಗಳ…
ಅಯೋಧ್ಯೆಯ ರಾಮಮಂದಿರವನ್ನು ಗುರಿಯಾಗಿಸಿಕೊಂಡು ಸಂಚು ರೂಪಿಸಿದ್ದಾನೆ ಎಂಬ ಆರೋಪದ ಮೇಲೆ ಬಂಧಿತನಾಗಿರುವ ಶಂಕಿತ ಉಗ್ರ ಸುಹೇಲ್ ಪ್ರಕರಣಕ್ಕೆ ಹೊಸ ತಿರುವು…