ಕುಂದಗೋಳ; ತಾಲೂಕಿನ ಯರಗುಪ್ಪಿಯಿಂದ ರೊಟ್ಟಿಗವಾಡ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಮಳೆಗೆ ಹಾನಿಗೀಡಾಗಿ ವಾಹನ ಸವಾರರಿಗೆ ತ್ರೀವ ಆಘಾತವನ್ನಂಟು ಮಾಡಿದೆ.

ಲೋಕೋಪಯೋಗಿ ಇಲಾಖೆಗೆ ವ್ಯಾಪ್ತಿಗೆ ರಸ್ತೆ ಸೇರಿದ್ದು ವಿಪರೀತ ಮಳೆಗೆ ರಸ್ತೆ ಕೊಚ್ಚಿ ಡಾಂಬರು ಮೇಲೆ ಪದರು ಕಿತ್ತು ಹೋಗಿದ ದೊಡ್ಡ ಗುಂಡಿ ಬಿದ್ದು ವಾಹನ ಸವಾರರಿಗೆ ಭಯದ ವಾತಾವರಣ ಶುರುವಾಗಿದೆ.

ರಸ್ತೆ ನಡುವೆ ಬೆಣ್ಣ ಹಳ್ಳ ಇದ್ದು ಇದರ ಪಕ್ಕಕ್ಕೆ ಈ ರಸ್ತೆ ದೊಡ್ಡಮಟ್ಟದಲ್ಲಿ ಗುಂಡಿ ಬಿದಿದ್ದೆ ರಾತ್ರಿ ಸಮಯದಲ್ಲಿ ವಾಹನ ಸವಾರರು ಓಡಾಡಲು ಹರಸಾಹಸ ಪಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಅಂತ ಇಲ್ಲಿ ಸಾರ್ವಜನಿಕರು ನಿಟ್ಟುಸಿರು ಬಡ್ತಾ ಇದ್ದಾರೆ.

ಕೂಡಲೇ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಈ ವರದಿ ಗಮನಿಸಿ ಸಂಚಾರಕ್ಕೆ ಅನುವು ಮಾಡಿಬೇಕೆಂದು ಇಲ್ಲ ಜನರ ಒತ್ತಾಯ ವಾಗಿದೆ.

ವರದಿ;ಶಾನು ಯಲಿಗಾರ

Related News

error: Content is protected !!