ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಿಂದಾಗಿ ಅವರ ಕುಟುಂಬ ದಿಕ್ಕೆಟ್ಟು ಹೋಗಿದೆ. ದರ್ಶನ್ ಹಾಗೂ ಗ್ಯಾಂಗ್ನಿಂದ ನರಹತ್ಯೆಗೆ ಒಳಗಾದ ಯುವಕನ ಸಾವಿನ ಸುದ್ದಿ ಪತ್ನಿ, ತಾಯಿ, ತಂದೆಗೆ ತಲುಪಿದಾಗ ಉಂಟಾದ ಆಘಾತ ಅಳತೆಗಟ್ಟದಂತಿತ್ತು.
ಹಿಂಸಾಚಾರದ ತೀವ್ರತೆಯಿಂದ ಶವವನ್ನು ಗುರುತಿಸುವುದೇ ಕಷ್ಟವಾಗಿತ್ತು. ‘ಅವನನ್ನು ಬದುಕಿದ್ದರೂ, ಕೈಕಾಲು ಕುಂಟಾದರೂ ತರುವಿರಿ. ನಾನು ನೋಡಿಕೊಳ್ಳುತ್ತೇನೆ’ ಎಂದು ಕಣ್ಣೀರು ಹಾಕಿದ್ದ ಪತ್ನಿ ಸಹನಾ, ಆಗ ಐದು ತಿಂಗಳ ಗರ್ಭಿಣಿಯಾಗಿದ್ದರು. ಆದರೆ ಆಕೆಗೆ ಆಘಾತಕರ ಸತ್ಯವನ್ನು ಮೊದಲೇ ತಿಳಿಸಲಾಗಿರಲಿಲ್ಲ. ಕೇವಲ ಜಗಳವಾಗಿದೆ ಎಂದು ಹೇಳಿ ವಿಷಯವನ್ನು ಕುಟುಂಬ ಮುಚ್ಚಿಟ್ಟಿತ್ತು.
“ಮಗನನ್ನು ಬದುಕಾಗಿ ತರುವೆವೆಂದಿದ್ದೆವು, ಆದರೆ ಹೆಣವಾಗಿ ತರುವಂತಾಯಿತು”
ಆ ದಿನದ ನೋವನ್ನು ನೆನಪಿಸಿಕೊಂಡ ರೇಣುಕಾಸ್ವಾಮಿಯ ತಂದೆ-ತಾಯಿ ಹೇಳುವುದೇ ಹೃದಯ ಬಡಿದಿಡುವಂತಿದೆ.
“ಸೊಸೆಗೆ ನಾವು ಅವನನ್ನು ಕರೆದುಕೊಂಡು ಬರುತ್ತೇವೆ ಎಂದಿದ್ದೆವು. ಆದರೆ ಹೆಣವಾಗಿ ತರುತ್ತೇವೆ ಎನ್ನುವಂತಿರಲಿಲ್ಲ. ನಂತರ ಪೊಲೀಸರ ಮೂಲಕ ಸತ್ಯ ಗೊತ್ತಾಯಿತು. ಆಸ್ಪತ್ರೆಗೆ ಕರೆದೊಯ್ದು ಶವದ ಮೇಲೆ ಸಹಿ ಮಾಡಿಸಿಕೊಂಡರು. ಮೊದಲಿಗೆ ಗುರುತು ಹಿಡಿಯಲು ಆಗಲಿಲ್ಲ. ಬಾಯಿ, ತುಟಿಯನ್ನು ನಾಯಿಗಳು ಕಚ್ಚಿದ್ದವು. ಮುಖ, ದೇಹದ ತುಂಬಾ ಗುರುತು ಮಾಡಿದ್ದರು. ದೇಹವೇ ಊದಿಕೊಂಡಿತ್ತು. ಕೊನೆಗೆ ಧರಿಸಿದ್ದ ಬಟ್ಟೆ ನೋಡಿ ಅವನೇ ನಮ್ಮ ಮಗನೆಂದು ತಿಳಿಯಬೇಕಾಯಿತು” ಎಂದು ಕಣ್ಣೀರು ಹಾಕಿದ್ದಾರೆ.
“ತಪ್ಪು ಮಾಡಿದ್ರೆ ಶಿಕ್ಷೆ ಕೊಡಬಹುದಿತ್ತು, ಪ್ರಾಣ ಕಸಿಯಬೇಕಿತ್ತಾ?”
ಮಗನ ತಪ್ಪನ್ನು ಸಮರ್ಥಿಸಿಕೊಳ್ಳುವುದಿಲ್ಲ ಎಂದು ಹೇಳಿದ ತಂದೆ ಕಾಶಿನಾಥಯ್ಯ, ದರ್ಶನ್ ಮತ್ತು ಪವಿತ್ರಾ ಗೌಡನ ಕ್ರೌರ್ಯವನ್ನು ಪ್ರಶ್ನಿಸಿದ್ದಾರೆ.
“ಅವನ ತಪ್ಪಿಗೆ ತಕ್ಕ ಶಿಕ್ಷೆ ಕೊಡಬಹುದಿತ್ತು. ಪವಿತ್ರಾ ಬ್ಲಾಕ್ ಮಾಡಬಹುದಿತ್ತು, ಪೊಲೀಸರಿಗೆ ಮಾಹಿತಿ ಕೊಡಬಹುದಿತ್ತು. ಆದರೆ ಅಷ್ಟು ಕ್ರೂರವಾಗಿ ಕೊಲ್ಲಬೇಕಿತ್ತಾ? 8-10 ಜನರು ಸೇರಿಕೊಂಡು ಮಗನನ್ನು ಕೊಲ್ಲಲು ಏನು ಅಗತ್ಯವಿತ್ತು?” ಎಂದು ಕಣ್ಣೀರಲ್ಲಿ ಮುಳುಗಿದ್ದಾರೆ.
ಇತ್ತೀಚೆಗೆ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಪ್ರಮುಖ ಆರೋಪಿಗಳ ಜಾಮೀನು ರದ್ದುಗೊಂಡಿದ್ದು, ಅವರನ್ನು ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ. ಆದರೆ ರೇಣುಕಾಸ್ವಾಮಿ ಕುಟುಂಬಕ್ಕೆ ಈ ನಿರ್ಧಾರ ತಾತ್ಕಾಲಿಕ ನೆಮ್ಮದಿಯನ್ನು ನೀಡಿದರೂ, ಕಳೆದುಕೊಂಡ ಮಗನ ನೋವು ಶಾಶ್ವತವಾಗಿ ಉಳಿದಿದೆ.
ಲೋಕಾಯುಕ್ತ ಕಚೇರಿಯ ಹಿರಿಯ ಅಧಿಕಾರಿ ಎಂದು ಸುಳ್ಳು ಪರಿಚಯ ನೀಡಿ, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ನಿಂದ ಹಣ ವಸೂಲಿ ಮಾಡಲು ಯತ್ನಿಸಿದ…
ಜಮೀನಿನ ಖಾತಾ ಉತಾರ ನೀಡಲು ಲಂಚ ಸ್ವೀಕರಿಸಿದ ಆರೋಪದಲ್ಲಿ ಬಿಜನಗೇರಾ ಗ್ರಾಮ ಪಂಚಾಯಿತಿ ಪಿಡಿಒ ಲಕ್ಷ್ಮೀ ಪ್ಯಾಟಿ ಲೋಕಾಯುಕ್ತ ಅಧಿಕಾರಿಗಳ…
ಅಯೋಧ್ಯೆಯ ರಾಮಮಂದಿರವನ್ನು ಗುರಿಯಾಗಿಸಿಕೊಂಡು ಸಂಚು ರೂಪಿಸಿದ್ದಾನೆ ಎಂಬ ಆರೋಪದ ಮೇಲೆ ಬಂಧಿತನಾಗಿರುವ ಶಂಕಿತ ಉಗ್ರ ಸುಹೇಲ್ ಪ್ರಕರಣಕ್ಕೆ ಹೊಸ ತಿರುವು…
ಉತ್ತರ ಪ್ರದೇಶದ ಅಲಿಗಢ್ನಲ್ಲಿ ಅಪ್ರಾಪ್ತ ಬಾಲಕನ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ತನ್ನದೇ 17…
ಬೆಂಗಳೂರಿನ ರಾಜರಾಜೇಶ್ವರಿ ನಗರದ ಐಷಾರಾಮಿ ಅಪಾರ್ಟ್ಮೆಂಟ್ನಲ್ಲಿ ಉದ್ಯಮಿ ವೈಶಾಕ್ (45) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಹಲವು ಅನುಮಾನಗಳಿಗೆ…
ಮೈಸೂರು ನಗರದ ದಟ್ಟಗಳ್ಳಿ ಪ್ರದೇಶದಲ್ಲಿರುವ ಸಚಿವ ಸತೀಶ್ ಜಾರಕಿಹೊಳಿ ಅವರ ಸಂಬಂಧಿ ವೈ. ಮಂಜುನಾಥ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ…