Latest

ಕಳಪೆ ಕಾಮಗಾರಿಯಾದ ಹುಬ್ಬಳ್ಳಿ ಡಾ. ಬಿ ಆರ್ ಅಂಬೇಡ್ಕರ್ ಸಮುದಾಯ ಭವನ!

ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯಿಂದ ಹಲವಾರು ಸತ್ಕಾರ್ಯಗಳು ನಡೆಯುತ್ತವೆ. ಎಂದರೇ ಯಾರಿಗೇ ಆಗಲೀ ಖುಷಿ ಆಗುತ್ತದೆ. ಹಾಗೆಯೇ ಧಾರವಾಡ ಜಿಲ್ಲೆಯ ಹುಬ್ಬಳ್ಳಿಯಲ್ಲಿರುವ ಕರ್ಕಿ ಬಸವೇಶ್ವರ ನಗರದಲ್ಲಿ ಕಳೆದ 2017 ರಲ್ಲಿ ಅಂದಾಜು 2 ಕೋಟಿ ರೂ ಗಳ ವೆಚ್ಚದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಸಮುದಾಯ ಭವನ ನಿರ್ಮಿಸಲಾಗಿತ್ತು ಆದರೇ ಅದೂ ಕೇವಲ 4-5 ವರ್ಷದಲ್ಲಿ ಅವ್ಯವಸ್ಥೆಯಿಂದ ಕೂಡಿದೆ ಹಾಗೂ ಸಂಪೂರ್ಣ ಕಳಪೆ ಕಾಮಗಾರಿಯಾಗಿರುವುದು ನಿಜಕ್ಕೂ ಬೇಸರವಾಗುತ್ತಿದೆ.


ಹೌದು ಈ ಸಮುದಾಯ ಭವನ ನಿರ್ಮಾಣವಾದ ಮೇಲೆ ತುಂಬಾ ಸುಂದರವಾಗಿ ಕಾಣುತ್ತಿತ್ತು. ಆದರೇ ಇತ್ತೀಚಿನ ದಿನಗಳಲ್ಲಿ ಅಲ್ಲಿ ಸಮುದಾಯ ಭವನದ ಕಡೆ ಸಂಬಂಧ ಪಟ್ಟ ಯಾವ ಅಧಿಕಾರಿಗಳೂ ಗಮನ ಹರಿಸುತ್ತಿಲ್ಲ. ಕಟ್ಟಡದ ಗೋಡೆಗಳು ಬಿರುಕು ಬಿಟ್ಟಿವೆ. ಹಾಗೂ ಕಿಡಕಿಯ ಗಾಜೂ ಒಡೆದಿವೆ. ಇನ್ನೂ ಮಳೆ ಬಂದರೆ ಮುಗೀತು. ಮಳೆಯ ನೀರು ಸಮುದಾಯ ಭವನದ ಒಳಗೆ ಬರುತ್ತದೆ ಅದರಿಂದ ಕಟ್ಟಡದ ಒಳಗಡೆ ಮಳೆ ನೀರಿನಿಂದ ಹಾಗೂ ಕಿಡಕಿಯಿಂದ ಕಸ ಬಿದ್ದು ಸ್ವಚ್ಛತೆ ಇಲ್ಲದಂತಾಗಿದೆ ಕೆಲ ಕಿಡಿಗೇಡಿಗಳು ಕಟ್ಟಡದ ಗೋಡೆಗಳ ಮೇಲೆ ಎಲೆ ಅಡಿಕೆ, ಗುಟ್ಕಾ ತಿಂದು ಉಗುಳಿದ್ದಾರೆ ಈ ಕಟ್ಟಡದ ಒಳಗಡೆ ಹೋಗಬೇಕೆಂದರೆ ಒಂದು ಕಡೆ ಸರಿಯಾದ ಮೆಟ್ಟಿಲುಗಳೇ ಇಲ್ಲಾ ತುಂಬಾ ಮಣ್ಣಿನ ಧೂಳಿನಿಂದ ಕೂಡಿದೆ ಇನ್ನೂ ಸಮುದಾಯ ಭವನದ ಅಕ್ಕ ಪಕ್ಕದಲ್ಲಿ ಸ್ವಚ್ಛತೆಯೇ ಇಲ್ಲಾ ಕಟ್ಟಡದ ಎದುರು ಮಳೆ ಬಂದಾಗ ಕೆಸರಿನಿಂದ ತುಂಬಿರುತ್ತದೆ ಇಷ್ಟೆಲ್ಲಾ ಸಮಸ್ಯೆಗಳಿರುವ ಕಾರಣ ಸಂಬಂಧ ಪಟ್ಟ ಅಧಿಕಾರಿಗಳು ಇನ್ನು ಮೇಲಾದರೂ ಎಚ್ಚೆತ್ತುಕೊಂಡು ಅವ್ಯವಸ್ಥೆಯಿಂದ ಕೂಡಿದ ಡಾ. ಬಿ ಆರ್ ಅಂಬೇಡ್ಕರ್ ಸಮುದಾಯ ಭವನವನ್ನು ವ್ಯೆವಸ್ಥಿತ ವಾಗಿ ಸರಿಪಡಿಸುತ್ತಾರಾ ಕಾದು ನೋಡಬೇಕಾಗಿದೆ.

ವರದಿ: ಶಿವರಾಜ್

ಭ್ರಷ್ಟರ ಬೇಟೆ

Recent Posts

ಮೋದಿ ಭೇಟಿ ಮುನ್ನ ಜಿಲೆಟಿನ್-ಟೈಮರ್ ಪತ್ತೆ! ಉಗ್ರ ಸಂಚೋ? ಗೃಹ ಸಚಿವ ಪರಮೇಶ್ವರ್ ಸ್ಪಷ್ಟನೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬೆಂಗಳೂರು ಭೇಟಿಗೆ ಮುನ್ನವೇ ಮಾರ್ಗದ ಸಮೀಪ ಜಿಲೆಟಿನ್ ಕಡ್ಡಿ ಪತ್ತೆಯಾಗಿದ್ದ ಘಟನೆ ಹೊಸ ಆತಂಕಕ್ಕೆ…

23 hours ago

ಕಿರುತೆರೆ-ಬೆಳ್ಳಿತೆರೆಗೆ ಶಾಕ್‌: ನಟ ದಿಲೀಪ್‌ ರಾಜ್ ಹೃದಯಾಘಾತದಿಂದ ನಿಧನ

ಕನ್ನಡ ಕಿರುತೆರೆ ಹಾಗೂ ಸಿನಿಮಾರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ನಟ, ನಿರ್ಮಾಪಕ ಮತ್ತು ಕಂಠದಾನ ಕಲಾವಿದ ದಿಲೀಪ್‌ ರಾಜ್…

1 day ago

ಭೂದಾಖಲೆಗಳ ನಕಲು ಶುಲ್ಕ ಪರಿಷ್ಕರಣೆ: ಸರ್ಕಾರದಿಂದ ಹೊಸ ಏಕರೂಪದ ದರ ಜಾರಿ

ಭೂಮಾಪನ ಇಲಾಖೆಯಲ್ಲಿ ಲಭ್ಯವಿರುವ ವಿವಿಧ ಮೂಲ ದಾಖಲೆಗಳ ನಕಲುಗಳನ್ನು ಪಡೆಯಲು ಸಾರ್ವಜನಿಕರು ಪಾವತಿಸಬೇಕಾದ ಶುಲ್ಕವನ್ನು ರಾಜ್ಯ ಸರ್ಕಾರ ಪರಿಷ್ಕರಿಸಿದೆ. ವಿವಿಧ…

2 days ago

ಮದರಸಾದಿಂದ 24 ಮಕ್ಕಳು ಪರಾರಿ! ತುಮಕೂರಿನಲ್ಲಿ ಬಯಲಾಯ್ತು ಅಮಾನವೀಯ ಹಿಂಸೆ

ತುಮಕೂರು ಜಿಲ್ಲೆಯ ಮದರಸಾವೊಂದರಲ್ಲಿ ಅಪ್ರಾಪ್ತ ಮಕ್ಕಳ ಮೇಲೆ ಅಮಾನವೀಯ ದೌರ್ಜನ್ಯ ಮತ್ತು ಬಾಲಕಾರ್ಮಿಕ ಶೋಷಣೆ ನಡೆಸಲಾಗುತ್ತಿದ್ದ ಬೆಚ್ಚಿಬೀಳಿಸುವ ಪ್ರಕರಣ ಬೆಳಕಿಗೆ…

2 days ago

ಅಟ್ರಾಸಿಟಿ ಪ್ರಕರಣದಲ್ಲಿ ಆರೋಪಿಗಳ ಬಂಧನಕ್ಕೆ ಲಂಚ ಬೇಡಿಕೆ: ಸಿಪಿಐ ಲೋಕಾಯುಕ್ತ ಬಲೆಗೆ

ಅಟ್ರಾಸಿಟಿ ಪ್ರಕರಣದ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವ ವಿಚಾರದಲ್ಲಿ ಲಂಚ ಸ್ವೀಕರಿಸಿದ ಆರೋಪದಡಿ ಗುರುಮಠಕಲ್ ಪೊಲೀಸ್ ಠಾಣೆಯ ಸಿಪಿಐ ವೀರಣ್ಣ…

3 days ago

ಕರ್ಕಶ ಶಬ್ದದ ಬೈಕ್ ವಿಚಾರಕ್ಕೆ ಪೊಲೀಸರ ಮೇಲೆಯೇ ವಿದ್ಯಾರ್ಥಿಗಳ ಹಲ್ಲೆ

ಚಿಕ್ಕಬಳ್ಳಾಪುರ ನಗರ ಹೊರವಲಯದ ಬೀಡಗಾನಹಳ್ಳಿ ಸಮೀಪದ ನಾಗಾರ್ಜುನ ಕಾಲೇಜು ಬಳಿ ಕರ್ತವ್ಯದಲ್ಲಿದ್ದ ಎಎಸ್‌ಐ ಹಾಗೂ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಕಾಲೇಜು…

3 days ago