Latest

18 ದೇವಸ್ಥಾನಗಳಲ್ಲಿ ಕಳ್ಳತನ ಮಾಡಿದ ಕಳ್ಳರನ್ನು ಬೇಟೆಯಾಡಿದ ಪೊಲೀಸರು

ಉತ್ತರಕನ್ನಡ ಜಿಲ್ಲೆಯಲ್ಲಿ ನಮಗೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸುತ್ತಮುತ್ತಲಿನ ಪ್ರದೇಶದಲ್ಲಿ ತಾಲೂಕು ವ್ಯಾಪ್ತಿಯಲ್ಲಿ ಹಾಗೂ ಗ್ರಾಮಗಳಲ್ಲಿ ಸಾಕಷ್ಟು ದೇವಸ್ಥಾನಗಳಿವೆ .ನಾವೆಲ್ಲರೂ ಪುಣ್ಯ ಕ್ಷೇತ್ರಗಳಿಗೆ ತೆರಳುವುದು ನಮ್ಮ ಜೀವನದಲ್ಲಿ ಬರುವ ಸಮಸ್ಯೆಗೆ ಪರಿಹಾರ ನೀಡಲು ನೆಮ್ಮದಿಯಿಂದ ಜೀವನ ಸಾಗುವಂತೆ ಮಾಡು ಹೀಗೆ ಮುಂತಾದವುಗಳನ್ನು ಬೇಡಿಕೊಳ್ಳಲು ದೇವಸ್ಥಾನಕ್ಕೆ ಹೋಗುತ್ತೇವೆ .ಆದರೆ ಇದೊಂದು ಘಟನೆ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ನಡೆದಿದೆ. ದಿ: 18/11/2022 ರಂದು ಬೆಳಿಗ್ಗೆ ಮಂಚಿಕೆರಿಯಲ್ಲಿ ಮಹಗಜಲಕ್ಷ್ಮೀ ದೇವಸ್ಥಾನದ ಬೀಗವನ್ನು ಮುರಿದು ಯಾರೋ ಕಳ್ಳರು ಒಳಗಿರುವ ಮೂರು ಸಾವಿರ ಕಾಣಿಕೆ ಹಣ ಹಾಗೂ ದೇವರಿಗೆ ಉಪಯೋಗಿಸುವ ಸುಮಾರು ಹತ್ತು ಸಾವಿರ ಬೆಲೆ ಬಾಳುವ ಹಿತ್ತಾಳೆ ಗಂಟೆ ಮತ್ತು ಇಪ್ಪತ್ತು ಸಾವಿರ ಬೆಲೆ ಬಾಳುವ ತಾಮ್ರದ ಕಡಾಯಿ ಹಾಗೂ ಡಿವಿಆರ್. ನನ್ನ ಕದ್ದು ಪರಾರಿಯಾಗಿದ್ದರು . ದೀ 19/11/2022 ರಂದು ಶ್ರೀ ಗಣೇಶ ತಂದೆ ನಾಗೇಶ ಭಂಡಾರ್ಕರ್ ಹತ್ತಿರವಿರುವ ಯಲ್ಲಾಪುರ ಪೋಲೀಸ್ ಠಾಣೆಗೆ ಬೇಟಿ ನೀಡಿ ದೂರನ್ನು ದಾಖಲಿಸಿದ್ದರು. ಇಂತಹದೇ ಇನ್ನೊಂದು ಘಟನೆ ಅದೇ ದಿನ 18/11/2022 ಯಲ್ಲಾಪುರ ತಾಲೂಕುನ ಗುಳ್ಳಪುರದಲ್ಲಿ ನಡೆದಿದೆ ಶಿವವ್ಯಾಘ್ರೆಶ್ವರ ದೇವಸ್ಥಾನದ ಬೀಗವನ್ನು ಯಾವುದೋ ಗಟ್ಟಿಯಾದ ವಸ್ತುವಿನಿಂದ ಮೀಟಿ ಮುರಿದು ಒಳಗೆ ನುಗ್ಗಿ ಅಲ್ಲಿ ಇರುವ 13500 ಬೆಲೆ ಬಾಳುವ ದೇವರ ಸಾಮಗ್ರಿ ಕಳ್ಳತನ ವಾಗಿರುವ ಬಗ್ಗೆ ಶ್ರೀ ನಾರಾಯಣ ತಂದೆ ಸೀತಾರಾಮ ಭಟ್ ರವರು ಯಲ್ಲಾಪುರ ಪೋಲಿಸ್ ಠಾಣೆಗೆ ತೆರಳಿ ದೂರು ನೀಡಿದ್ದರು.
ಈ ಎರಡು ಘಟನೆಯ ದೂರನ್ನು ತೆಗದುಕೊಂಡು ಶ್ರೀ ವಿಷ್ಣುವರ್ಧನ್ ಐ ಪೀ ಎಸ್ ಮಾನ್ಯ ಪೋಲಿಸ್ ಅದಿಕ್ಷಕರು ಅವರ ಸಲಹೆ ಸೂಚನೆಗಳ ಮೇರೆಗೆ ಆರೋಪಿಗಳಾದ 1)ವಸಂತ ಕುಮಾರ್ ತಂದೆ ಶಿವಪ್ಪ ತಂಬಕದ 40 2) ಸಲಿಮ್ ತಂದೆ ಜಮಲಸಾಬ ವರ್ಷ 28 ಇವರು ಇದು ವರೆಗೆ 18 ದೇವಸ್ಥಾನಗಳ ಕಳ್ಳತನ ಮಾಡಿದ್ದು ಕೃತ್ಯಕ್ಕೆ ಬಳಸಿದ ಮಾರುತಿ ನೆಕ್ಸಾ ಕಂಪನಿಯ ಕಾರು ಹಾಗೂ ಬಜಾಜ್ ಪ್ಲಾಟಿನಂ ದ್ವಿಚಕ್ರ ವಾಹನ ದೇವರ ಒಡವೆ ಬೆಳ್ಳಿ ಹಿತ್ತಾಳೆ ಪಾತ್ರೆಗಳು ಒಟ್ಟು 19,20, 285 ಬೆಲೆಯ ಸಾಮಗ್ರಿಗಳನ್ನು ಜಪ್ತು ಪಡಿಸಿಕೊಂಡಿರುತ್ತಾರೆ.
ಶ್ರೀ ವಿಷ್ಣುವರ್ಧನ್ ಐಪಿಎಸ್ ಮಾನ್ಯ ಪೋಲಿಸ ಅಧೀಕ್ಷಕರು ಉತ್ತರಕನ್ನಡ ಜಿಲ್ಲೆ ಕಾರವಾರ .ಶ್ರೀ ಸಿಟಿ ಜಯಕುಮಾರ್ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಕಾರವಾರ ಶ್ರೀ ರವಿ ಡಿ ನಾಯ್ಕ ಮಾನ್ಯ ಪೋಲೀಸ್ ಉಪಆದಿಕ್ಷಕರು ಶಿರಸಿ ಉಪವಿಭಾಗ ಇವರ ಮಾರ್ಗರ್ಶನದಲ್ಲಿ ಶ್ರೀ ಸುರೇಶ ಯಳ್ಳೂರು ಸಿಪಿಐ ಯಲ್ಲಾಪುರ ಪೀ ಎಸ್ ಐ ಶ್ರೀ ಮಂಜುನಾಥ ಗೌಡರ ಅಮಿನಸಬ ಅತ್ತಾರ್ ಶ್ಯಾಮ ಪವಸ್ಕರ್ ಹಾಗೂ ಸಿಬ್ಬಂದಿ ವರ್ಗದವರು ಸೇರಿ ಆರೋಪಿಗಳ ಹೆಡೆಮುರಿಕಟ್ಟಿ ಕಾನೂನು ಕ್ರಮ ಜರುಗಿಸಿದ್ದಾರೆ.

ವರದಿ: ಶ್ರೀಪಾದ್ ಎಸ್ ಏಚ್

ಭ್ರಷ್ಟರ ಬೇಟೆ

Recent Posts

ರಾಂಪೂರ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರ ಬದಲಾವಣೆಗೆ ವಿದ್ಯಾರ್ಥಿಗಳ ಪಟ್ಟು

ಬಾಗಲಕೋಟೆ: ಜಿಲ್ಲೆಯ ಬಾಗಲಕೋಟೆ ತಾಲೂಕಿನ ಸರ್ಕಾರಿ ಪದವಿ ಪೂರ್ವ ಕಾಲೇಜು ರಾಂಪೂರ (ಆರ್.ಸಿ) ಗ್ರಾಮದಲ್ಲಿ ಇಂದು ವಿದ್ಯಾರ್ಥಿಗಳು ಅತಿಥಿ ಉಪನ್ಯಾಸಕರ…

16 hours ago

ಫೇಕ್ ಅಟ್ರಾಸಿಟಿ ಕೇಸ್ ಆರೋಪ: ಮನನೊಂದು ವಿಷ ಸೇವಿಸಿದ ವ್ಯಾಪಾರಿ ಸಾವು, ಹಲವು ಮಂದಿ ಪೊಲೀಸರ ವಶಕ್ಕೆ

ಬೆಂಗಳೂರು ಹೊರವಲಯದ ಕಾಡುಗೋಡಿ ಸಮೀಪದ ಚನ್ನಸಂದ್ರದ ಎಕೆಜಿ ಕಾಲೋನಿಯಲ್ಲಿ ಫೇಕ್ ಅಟ್ರಾಸಿಟಿ ಕೇಸ್‌ನಿಂದ ಮನನೊಂದು ವ್ಯಕ್ತಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ…

20 hours ago

ತಾಯಿ-ಮಗಳು ಪ್ರೇಮಕಥೆಯ ಶಾಕ್ ಟ್ವಿಸ್ಟ್: ಒಂದೇ ಕುಟುಂಬದಲ್ಲಿ ಬಯಲಾದ ಅಕ್ರಮ ಸಂಬಂಧದ ಜಾಲ, ತಾಯಿ ಸಾವಿನಲ್ಲಿ ಅಂತ್ಯ!

ಜೈಪುರದ ಅರಂಗೇರಿ ಪ್ರದೇಶದಲ್ಲಿ ನಡೆದ ವಿಚಿತ್ರ ಘಟನೆ ಕುಟುಂಬದೊಳಗಿನ ಅಕ್ರಮ ಸಂಬಂಧಗಳ ಜಾಲವನ್ನು ಬಹಿರಂಗಪಡಿಸಿದ್ದು, ಕೊನೆಗೆ ಮಹಿಳೆಯೊಬ್ಬಳ ಸಾವಿನಲ್ಲಿ ಅಂತ್ಯಗೊಂಡಿದೆ.…

20 hours ago

ಬೈಕ್ ಪಾರ್ಕಿಂಗ್ ಜಗಳಕ್ಕೆ ರಕ್ತರಂಜಿತ ಅಂತ್ಯ: ಮಹಿಳೆ ಹತ್ಯೆ, ಪತಿ ಗಂಭೀರ

ದೆಹಲಿಯ ನೈಋತ್ಯ ಭಾಗದ ಬಿಂದಾಪುರದಲ್ಲಿ ಬೈಕ್ ಪಾರ್ಕಿಂಗ್ ವಿಚಾರವಾಗಿ ಆರಂಭವಾದ ಜಗಳ ಭೀಕರ ಹತ್ಯೆಯಲ್ಲಿ ಅಂತ್ಯಗೊಂಡಿದೆ. ನೆರೆಹೊರೆಯವರೊಂದಿಗೆ ಉಂಟಾದ ವಾಗ್ವಾದದ…

20 hours ago

ಪತ್ನಿಯೊಂದಿಗೆ ಸಂಬಂಧದ ಶಂಕೆ: ವ್ಯಕ್ತಿಯ ಹತ್ಯೆ, ಇಬ್ಬರು ಆರೋಪಿಗಳು ಪೊಲೀಸರ ವಶಕ್ಕೆ

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಅನೈತಿಕ ಸಂಬಂಧದ ಶಂಕೆ ಹಿನ್ನೆಲೆ ವ್ಯಕ್ತಿಯೊಬ್ಬರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ…

20 hours ago

ಗೋಹತ್ಯೆ ಪ್ರಕರಣಗಳ ಹಿನ್ನೆಲೆ: ಭಟ್ಕಳದ ಇಸ್ಮಾಯಿಲ್ ಹವ್ವಾ 6 ತಿಂಗಳು ಗಡಿಪಾರು, ರಾಯಚೂರಿಗೆ ಸ್ಥಳಾಂತರ

ಭಟ್ಕಳ: ಭಟ್ಕಳ ಶಹರ ಪೊಲೀಸ್ ಠಾಣಾ ವ್ಯಾಪ್ತಿಯ ಮೂಸಾನಗರ ನಿವಾಸಿ ಇಸ್ಮಾಯಿಲ್ ಹವ್ವಾ (46) ಅವರನ್ನು ಆರು ತಿಂಗಳ ಅವಧಿಗೆ…

21 hours ago