Latest

18 ದೇವಸ್ಥಾನಗಳಲ್ಲಿ ಕಳ್ಳತನ ಮಾಡಿದ ಕಳ್ಳರನ್ನು ಬೇಟೆಯಾಡಿದ ಪೊಲೀಸರು

ಉತ್ತರಕನ್ನಡ ಜಿಲ್ಲೆಯಲ್ಲಿ ನಮಗೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸುತ್ತಮುತ್ತಲಿನ ಪ್ರದೇಶದಲ್ಲಿ ತಾಲೂಕು ವ್ಯಾಪ್ತಿಯಲ್ಲಿ ಹಾಗೂ ಗ್ರಾಮಗಳಲ್ಲಿ ಸಾಕಷ್ಟು ದೇವಸ್ಥಾನಗಳಿವೆ .ನಾವೆಲ್ಲರೂ ಪುಣ್ಯ ಕ್ಷೇತ್ರಗಳಿಗೆ ತೆರಳುವುದು ನಮ್ಮ ಜೀವನದಲ್ಲಿ ಬರುವ ಸಮಸ್ಯೆಗೆ ಪರಿಹಾರ ನೀಡಲು ನೆಮ್ಮದಿಯಿಂದ ಜೀವನ ಸಾಗುವಂತೆ ಮಾಡು ಹೀಗೆ ಮುಂತಾದವುಗಳನ್ನು ಬೇಡಿಕೊಳ್ಳಲು ದೇವಸ್ಥಾನಕ್ಕೆ ಹೋಗುತ್ತೇವೆ .ಆದರೆ ಇದೊಂದು ಘಟನೆ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ನಡೆದಿದೆ. ದಿ: 18/11/2022 ರಂದು ಬೆಳಿಗ್ಗೆ ಮಂಚಿಕೆರಿಯಲ್ಲಿ ಮಹಗಜಲಕ್ಷ್ಮೀ ದೇವಸ್ಥಾನದ ಬೀಗವನ್ನು ಮುರಿದು ಯಾರೋ ಕಳ್ಳರು ಒಳಗಿರುವ ಮೂರು ಸಾವಿರ ಕಾಣಿಕೆ ಹಣ ಹಾಗೂ ದೇವರಿಗೆ ಉಪಯೋಗಿಸುವ ಸುಮಾರು ಹತ್ತು ಸಾವಿರ ಬೆಲೆ ಬಾಳುವ ಹಿತ್ತಾಳೆ ಗಂಟೆ ಮತ್ತು ಇಪ್ಪತ್ತು ಸಾವಿರ ಬೆಲೆ ಬಾಳುವ ತಾಮ್ರದ ಕಡಾಯಿ ಹಾಗೂ ಡಿವಿಆರ್. ನನ್ನ ಕದ್ದು ಪರಾರಿಯಾಗಿದ್ದರು . ದೀ 19/11/2022 ರಂದು ಶ್ರೀ ಗಣೇಶ ತಂದೆ ನಾಗೇಶ ಭಂಡಾರ್ಕರ್ ಹತ್ತಿರವಿರುವ ಯಲ್ಲಾಪುರ ಪೋಲೀಸ್ ಠಾಣೆಗೆ ಬೇಟಿ ನೀಡಿ ದೂರನ್ನು ದಾಖಲಿಸಿದ್ದರು. ಇಂತಹದೇ ಇನ್ನೊಂದು ಘಟನೆ ಅದೇ ದಿನ 18/11/2022 ಯಲ್ಲಾಪುರ ತಾಲೂಕುನ ಗುಳ್ಳಪುರದಲ್ಲಿ ನಡೆದಿದೆ ಶಿವವ್ಯಾಘ್ರೆಶ್ವರ ದೇವಸ್ಥಾನದ ಬೀಗವನ್ನು ಯಾವುದೋ ಗಟ್ಟಿಯಾದ ವಸ್ತುವಿನಿಂದ ಮೀಟಿ ಮುರಿದು ಒಳಗೆ ನುಗ್ಗಿ ಅಲ್ಲಿ ಇರುವ 13500 ಬೆಲೆ ಬಾಳುವ ದೇವರ ಸಾಮಗ್ರಿ ಕಳ್ಳತನ ವಾಗಿರುವ ಬಗ್ಗೆ ಶ್ರೀ ನಾರಾಯಣ ತಂದೆ ಸೀತಾರಾಮ ಭಟ್ ರವರು ಯಲ್ಲಾಪುರ ಪೋಲಿಸ್ ಠಾಣೆಗೆ ತೆರಳಿ ದೂರು ನೀಡಿದ್ದರು.
ಈ ಎರಡು ಘಟನೆಯ ದೂರನ್ನು ತೆಗದುಕೊಂಡು ಶ್ರೀ ವಿಷ್ಣುವರ್ಧನ್ ಐ ಪೀ ಎಸ್ ಮಾನ್ಯ ಪೋಲಿಸ್ ಅದಿಕ್ಷಕರು ಅವರ ಸಲಹೆ ಸೂಚನೆಗಳ ಮೇರೆಗೆ ಆರೋಪಿಗಳಾದ 1)ವಸಂತ ಕುಮಾರ್ ತಂದೆ ಶಿವಪ್ಪ ತಂಬಕದ 40 2) ಸಲಿಮ್ ತಂದೆ ಜಮಲಸಾಬ ವರ್ಷ 28 ಇವರು ಇದು ವರೆಗೆ 18 ದೇವಸ್ಥಾನಗಳ ಕಳ್ಳತನ ಮಾಡಿದ್ದು ಕೃತ್ಯಕ್ಕೆ ಬಳಸಿದ ಮಾರುತಿ ನೆಕ್ಸಾ ಕಂಪನಿಯ ಕಾರು ಹಾಗೂ ಬಜಾಜ್ ಪ್ಲಾಟಿನಂ ದ್ವಿಚಕ್ರ ವಾಹನ ದೇವರ ಒಡವೆ ಬೆಳ್ಳಿ ಹಿತ್ತಾಳೆ ಪಾತ್ರೆಗಳು ಒಟ್ಟು 19,20, 285 ಬೆಲೆಯ ಸಾಮಗ್ರಿಗಳನ್ನು ಜಪ್ತು ಪಡಿಸಿಕೊಂಡಿರುತ್ತಾರೆ.
ಶ್ರೀ ವಿಷ್ಣುವರ್ಧನ್ ಐಪಿಎಸ್ ಮಾನ್ಯ ಪೋಲಿಸ ಅಧೀಕ್ಷಕರು ಉತ್ತರಕನ್ನಡ ಜಿಲ್ಲೆ ಕಾರವಾರ .ಶ್ರೀ ಸಿಟಿ ಜಯಕುಮಾರ್ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಕಾರವಾರ ಶ್ರೀ ರವಿ ಡಿ ನಾಯ್ಕ ಮಾನ್ಯ ಪೋಲೀಸ್ ಉಪಆದಿಕ್ಷಕರು ಶಿರಸಿ ಉಪವಿಭಾಗ ಇವರ ಮಾರ್ಗರ್ಶನದಲ್ಲಿ ಶ್ರೀ ಸುರೇಶ ಯಳ್ಳೂರು ಸಿಪಿಐ ಯಲ್ಲಾಪುರ ಪೀ ಎಸ್ ಐ ಶ್ರೀ ಮಂಜುನಾಥ ಗೌಡರ ಅಮಿನಸಬ ಅತ್ತಾರ್ ಶ್ಯಾಮ ಪವಸ್ಕರ್ ಹಾಗೂ ಸಿಬ್ಬಂದಿ ವರ್ಗದವರು ಸೇರಿ ಆರೋಪಿಗಳ ಹೆಡೆಮುರಿಕಟ್ಟಿ ಕಾನೂನು ಕ್ರಮ ಜರುಗಿಸಿದ್ದಾರೆ.

ವರದಿ: ಶ್ರೀಪಾದ್ ಎಸ್ ಏಚ್

ಭ್ರಷ್ಟರ ಬೇಟೆ

Recent Posts

ದಾಂಡೇಲಿ ದುರಂತ: ಮಲೇಷ್ಯಾದಿಂದ ಬಂದ ಪತಿ; ಪತ್ನಿಗೆ ಬೇರೊಬ್ಬನೊಂದಿಗಿದ್ದ ಸಂಬಂಧ ತಿಳಿದು ಆತ್ಮಹತ್ಯೆ

ರಾಜ್ಯದ ಉತ್ತರ ಕನ್ನಡ ಜಿಲ್ಲೆಯಲ್ಲಿ ಮನಕಲಕುವ ಘಟನೆ ಒಂದು ಬೆಳಕಿಗೆ ಬಂದಿದೆ. ದಾಂಡೇಲಿ ನಗರದಲ್ಲಿ ಕುಟುಂಬ ಕಲಹ ಮತ್ತು ಮಾನಸಿಕ…

5 minutes ago

ಬರ್ಗಿ ಅಣೆಕಟ್ಟು ದುರಂತ: ಸಾವಿನ ಕ್ಷಣದಲ್ಲೂ ಮಗುವಿಗೆ ಗುರಾಣಿಯಾದ ತಾಯಿ

ಮಧ್ಯಪ್ರದೇಶದ ಬರ್ಗಿ ಅಣೆಕಟ್ಟಿನಲ್ಲಿ ಸಂಭವಿಸಿದ ಭೀಕರ ಬೋಟ್ ದುರಂತವು ದೇಶವನ್ನೇ ದುಃಖದ ಮೌನಕ್ಕೆ ತಳ್ಳಿದೆ. ಆದರೆ ಈ ದುರ್ಘಟನೆಯ ನಂತರ…

56 minutes ago

ಅಕ್ಕ-ತಂಗಿಯರ ವಿಚಿತ್ರ ನಿರ್ಧಾರ: ಪತಿಗಳ ಅದಲು-ಬದಲು ಪ್ರಕರಣಕ್ಕೆ ಹೈಕೋರ್ಟ್ ತೀರ್ಪು

ಮಧ್ಯ ಪ್ರದೇಶದ ಗ್ವಾಲಿಯರ್ ಹೈಕೋರ್ಟ್ ಪೀಠದ ಮುಂದೆ ಅಪರೂಪದ ಹಾಗೂ ಅಚ್ಚರಿ ಮೂಡಿಸುವ ಪ್ರಕರಣವೊಂದು ವಿಚಾರಣೆಗೆ ಬಂದಿದ್ದು, ಇದು ಸಾರ್ವಜನಿಕ…

1 hour ago

ಲವ್ ಅಂಡ್ ಸೆಕ್ಸ್ ದೋಖಾ: ಮಾಜಿ ಪುರಸಭಾ ಅಧ್ಯಕ್ಷನಿಂದ ವಂಚನೆ?

ಮೈಸೂರು ಜಿಲ್ಲೆಯ ಟಿ. ನರಸೀಪುರ ಪಟ್ಟಣದಲ್ಲಿ ಗಂಭೀರ ಆರೋಪವೊಂದು ಬೆಳಕಿಗೆ ಬಂದಿದೆ. ಪುರಸಭೆಯ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ನಾಯಕ…

1 hour ago

ವೈದ್ಯಕೀಯ ಕ್ಷೇತ್ರದಲ್ಲಿ ಮಹಾ ವಂಚನೆ: ಆಪರೇಷನ್ ಥಿಯೇಟರ್‌ನಲ್ಲೇ ಯುವತಿಯ ಖಾಸಗಿ ಫೋಟೋ ಲೀಕ್!

ಉತ್ತರ ಪ್ರದೇಶದ ಕೌಶಂಬಿಯ ಸರ್ಕಾರಿ ಸ್ವಾಯತ್ತ ವೈದ್ಯಕೀಯ ಕಾಲೇಜಿನಲ್ಲಿ ರೋಗಿಯ ಖಾಸಗಿತನ ಉಲ್ಲಂಘನೆಯ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಶಸ್ತ್ರಚಿಕಿತ್ಸೆ…

6 hours ago

ಕುಣಿಗಲ್‌ನಲ್ಲಿ ಹೃದಯವಿದ್ರಾವಕ ದುರಂತ: ಬೇರೊಬ್ಬನೊಂದಿಗೆ ಓಡಿ ಹೋದ ಪತ್ನಿ, ಇಬ್ಬರು ಮಕ್ಕಳನ್ನು ಕೊಂದು ಅರ್ಚಕ ಆತ್ಮಹತ್ಯೆ

ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಆಲ್ಕೆರೆ ಗ್ರಾಮದಲ್ಲಿ ಮನಕಲಕುವ ಘಟನೆ ನಡೆದಿದೆ. ಕೌಟುಂಬಿಕ ಕಲಹದಿಂದ ಮನನೊಂದ ಅರ್ಚಕನೊಬ್ಬ ತನ್ನ ಇಬ್ಬರು…

7 hours ago