ಧಾರವಾಡದಲ್ಲಿ ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿದ್ದ ವಿಜಯ್ ಉಣಕಲ್ನ್ನು ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಬೆನ್ನಲ್ಲೇ, ಪೊಲೀಸರು ಆತನನ್ನು ಜೈಲಿಗೆ ಕರೆದೊಯ್ಯಲು ಮುಂದಾದರು. ಆದರೆ, ಈ ವೇಳೆ ಆತ ತಪ್ಪಿಸಿಕೊಂಡು ಕಟ್ಟಡವೊಂದರ ಮೇಲೇರಿದ್ದು, ಆತ್ಮಹತ್ಯೆ ಧಮ್ಕಿ ನೀಡಿ ಪೊಲೀಸರಿಗೆ ತಲೆನೋವನ್ನು ಉಂಟುಮಾಡಿದ.
ಆರೋಪಿ ತಪ್ಪಿಸಿಕೊಂಡು ಹೈಡ್ರಾಮಾ
2021ರಲ್ಲಿ ಧಾರವಾಡದ ಉಪನಗರ ಪೊಲೀಸ್ ಠಾಣೆಯಲ್ಲಿ ವಿಜಯ್ ಉಣಕಲ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಆರೋಪಿ ಜಾಮೀನಿನ ಮೇಲೆ ಹೊರಬಂದ ಬಳಿಕ ನಿರಂತರವಾಗಿ ಕೋರ್ಟ್ಗೆ ಹಾಜರಾಗದೇ ತಪ್ಪಿಸಿಕೊಳ್ಳುತ್ತಿದ್ದರಿಂದ, ನ್ಯಾಯಾಲಯವು ಅವನ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಜಾರಿಗೊಳಿಸಿತು.
ಈ ಆಧಾರದಲ್ಲಿ, ಧಾರವಾಡ ಉಪನಗರ ಠಾಣೆಯ ಪೊಲೀಸರು ವಿಜಯ್ ಉಣಕಲ್ನ್ನು ಬಂಧಿಸಿ ಕೋರ್ಟ್ಗೆ ಹಾಜರುಪಡಿಸಿದರು. ವಿಚಾರಣೆ ಮುಗಿದ ನಂತರ, ನ್ಯಾಯಾಲಯ ಆರೋಪಿ ವಿರುದ್ಧ ನ್ಯಾಯಾಂಗ ಬಂಧನ ವಿಧಿಸಿತು. ಹೀಗಾಗಿ, ಆತನನ್ನು ಜೈಲಿಗೆ ಕರೆದೊಯ್ಯಲು ಪೊಲೀಸರು ಮುಂದಾದರು.
ಆದರೆ, ಕುಮಾರೇಶ್ವರ ಬಡಾವಣೆಯ ಬಳಿ ಬಂದಾಗ, ಆರೋಪಿ ವಿಜಯ್ ಉಣಕಲ್ ಇದ್ದಕ್ಕಿದ್ದಂತೆ ತಪ್ಪಿಸಿಕೊಂಡು ಕಟ್ಟಡವೊಂದರ ಮೇಲೆ ಏರಿ, “ನ್ಯಾಯಾಧೀಶರು ಇಲ್ಲಿಗೆ ಬರಬೇಕು, ಇಲ್ಲವಾದರೆ ನಾನು ಹಾರಿಬಿಡುತ್ತೇನೆ,” ಎಂದು ಆತ್ಮಹತ್ಯೆ ಧಮ್ಕಿ ನೀಡಿದ. ಈ ಘಟನೆ ಸ್ಥಳೀಯರಲ್ಲಿ ಕುತೂಹಲ ಮೂಡಿಸಿ, ಭಾರೀ ಜನಸಂದಣಿ ಸೇರುವಂತೆ ಮಾಡಿತು.
ಪೊಲೀಸರ ಬುದ್ಧಿವಂತಿಕೆ – ಖದರ್ ಪ್ಲಾನ್!
ಹೈಡ್ರಾಮಾ ಮುಂದುವರಿದಂತೆ, ಆರೋಪಿ ನ್ಯಾಯಾಧೀಶರ ಆಗಮನವಿಲ್ಲದೆ ಕೆಳಗೆ ಇಳಿಯುವುದಿಲ್ಲ ಎಂದು ಪಟ್ಟುಹಿಡಿದ. ಈ ಪರಿಸ್ಥಿತಿಯಲ್ಲಿ, ಪೊಲೀಸರು ತಕ್ಷಣವೇ ಯೋಚಿಸಿ, ಅಲ್ಲಿಯೇ ಹಾಜರಿದ್ದ ಉಪನ್ಯಾಸಕ ಚಿಂತಾಮಣಿ ಎಂಬವರನ್ನು ಕೋರ್ಟ್ ಹಾಕಿಸಿ, ‘ನ್ಯಾಯಾಧೀಶರು’ ಎಂದು ನಂಬಿಸುವ ಗೇಮ್ ಆಡಿದರು.
ಆರೋಪಿ ಈ ಮೋಸವನ್ನು ಗುರುತಿಸದೇ, ‘ನ್ಯಾಯಾಧೀಶ’ ಎಂದು ಭಾವಿಸಿ ಅವರೊಂದಿಗೆ ಮಾತನಾಡಲು ತೊಡಗಿದ. ಈ ಸಂದರ್ಭವನ್ನು ಬಳಸಿಕೊಂಡ ಪೊಲೀಸರು, ಹಿಂದೆಂದಿನಿಂದ ತೆರಳಿ, ತಕ್ಷಣವೇ ಅವನನ್ನು ವಶಕ್ಕೆ ಪಡೆದುಕೊಂಡರು.
ಸೇಫಾಗಿ ಸೆಂಟ್ರಲ್ ಜೈಲಿಗೆ
ಪೊಲೀಸರ ಈ ಯುಕ್ತಿಯ ಹಿಂದೆಂದು ನಿರೀಕ್ಷೆ ಮಾಡಿರಲಾರ ಆತ, ಬಂಧನದಿಂದ ತಪ್ಪಿಸಿಕೊಳ್ಳಲು ಕೊನೆಯತನಕ ಪ್ರಯತ್ನಿಸಿದರೂ, ಕೊನೆಗೂ ವಶಕ್ಕೆ ದೊರಕಿದ. ಇದೀಗ, ಆತನನ್ನು ಧಾರವಾಡ ಸೆಂಟ್ರಲ್ ಜೈಲಿಗೆ ಸ್ಥಳಾಂತರಿಸಲಾಗಿದೆ.
ಈ ಘಟನೆಯು ಮತ್ತೊಮ್ಮೆ ಪೊಲೀಸರ ಬುದ್ಧಿವಂತಿಕೆಯ ಪುರಾವೆಯಾಗಿದ್ದು, ಕಾನೂನು ಸುವ್ಯವಸ್ಥೆ ಹಾಗೂ ನ್ಯಾಯಾಂಗದ ಮುಂದೆ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ ಎಂಬ ಸಂದೇಶವನ್ನು ವ್ಯಕ್ತಪಡಿಸಿದೆ.
₹4.50 ಲಕ್ಷ ಮೌಲ್ಯದ ಚಿನ್ನ, ಕೃತ್ಯಕ್ಕೆ ಬಳಸಿದ್ದ ಬೈಕ್ ವಶ ಹಳಿಯಾಳ: ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಮಹಿಳೆಯೊಬ್ಬರ ಕೊರಳಲ್ಲಿದ್ದ ಚಿನ್ನದ…
ಸಿಸಿಟಿವಿ ಹಾಗೂ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯ ಪತ್ತೆ; ಬೈಕ್, ಹಣ ವಶ ಹೊನ್ನಾವರ: ಬ್ಯಾಂಕ್ನಿಂದ ಹಣ ಪಡೆದು ಹೊರಬಂದ…
ಮುಂಡಗೋಡ ಪಟ್ಟಣ ಸೇರಿ ಬಾಚಣಕಿ, ಪಾಳಾ ಗ್ರಾಮಗಳಲ್ಲಿ ನಿಗಾ; ಸಾರ್ವಜನಿಕರ ಸಹಕಾರಕ್ಕೆ ಮನವಿ ಮುಂಡಗೋಡ: ತಾಲೂಕಿನಲ್ಲಿ ಕಳ್ಳತನ ಸೇರಿದಂತೆ ಅಹಿತಕರ…
ತಿರುಪತಿ: ಬೆಳಗ್ಗೆ ಹೆದ್ದಾರಿ ಪಕ್ಕದಲ್ಲಿ ವ್ಯಕ್ತಿಯೊಬ್ಬ ರಕ್ತದ ಮಡುವಿನಲ್ಲಿ ಶವವಾಗಿ ಪತ್ತೆಯಾದಾಗ, ಸ್ಥಳೀಯರು ಹಾಗೂ ಪೊಲೀಸರು ಇದೊಂದು ಭೀಕರ ರಸ್ತೆ…
ಪ್ರಯಾಗ್ರಾಜ್: ಡೇಟಿಂಗ್ ಆ್ಯಪ್ಗಳು ಹಾಗೂ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಶ್ರೀಮಂತ ಪುರುಷರನ್ನು ಹನಿ ಟ್ರ್ಯಾಪ್ ಬಲೆಗೆ ಬೀಳಿಸಿ, ಬಳಿಕ ಬೆದರಿಕೆ…
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಲು…