Latest

ಪಿ ಡಿ ಓ ಮಂಜುನಾಥನ ಕಮಿಷನ್ ದಂಧೆ; ಸರ್ಕಾರಿ ಹಣ ಕೊಳ್ಳೆ ಹೊಡೆದು ಟ್ರಿಪ್ ಹೊಡೆಯಲು ಪಿಡಿಒ ಹಾಕಿದ್ದ ಸ್ಕೆಚ್!

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಅಣೆಗೆರೆ ಗ್ರಾಮ ಪಂಚಾಯಿತಿಯ ಪಿಡಿಒ ಮಂಜುನಾಥ್ ಸರ್ಕಾರದ ಯೋಜನೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಾ ಕಾಮಗಾರಿ ಕಳಪೆ ಮಾಡಿಸಿ ಕಮಿಷನ್ ಹೊಡೆಯುತ್ತಿರುವ ಬಗ್ಗೆ ಆಡಿಯೋ ಒಂದು ಹೊರ ಬಿದ್ದಿದೆ.
ಆಡಿಯೋದಲ್ಲಿ ಪಿಡಿಒ ಮಂಜುನಾಥ್ ಬಿಜೆಪಿ ಕಾರ್ಯಕರ್ತ ರವಿಯ ಬಳಿ ಕಾಮಗಾರಿಗಳಲ್ಲಿ ಹಾಗೂ ಕೆಲವು ಯೋಜನೆಗಳಲ್ಲಿ ಹಣ ಹೊಡೆಯುವುದರ ಬಗ್ಗೆ ಚರ್ಚಿಸಿರುವುದು ಹಾಗೂ ಸದಸ್ಯರುಗಳಿಗೆ ಹಣ ಕೊಟ್ಟು ತಮ್ಮತ ಸೆಳೆಯಬೇಕೆಂಬುದರ ಬಗ್ಗೆ ಮಾತನಾಡಿರುವುದು ಕಂಡುಬಂದಿರುತ್ತದೆ.
ಹಾಗೂ ನಡೆಯುತ್ತಿರುವಂತಹ ಎಲ್ಲಾ ಅಕ್ರಮಗಳು ಸಹ ತಾಲೂಕು ಪಂಚಾಯಿತಿ ಇ ಒ ರವರಿಗೆ ತಿಳಿದಿದ್ದು ಅವರು ಸಹ ಇವರಿಗೆ ಬೆಂಬಲಿಸುತ್ತಿದ್ದಾರೆ ಎಂಬ ರೀತಿಯಲ್ಲಿ ಆಡಿಯೋದಲ್ಲಿ ಇದೆ.
ಕೆಲವು ತಿಂಗಳ ಹಿಂದೆ ಅಣೆಗೆರೆ ಗ್ರಾಮ ಪಂಚಾಯಿತಿಗೆ ನುಗ್ಗಿ ಡಾಟಾ ಎಂಟ್ರಿ ಆಪರೇಟರ್ ಚಂದ್ರಪ್ಪನಿಗೆ ಬಿಜೆಪಿ ಕಾರ್ಯಕರ್ತ ರವಿ ಹೊಡೆದಿದ್ದರೂ ಸಹ ಪಿಡಿಒ ಯಾವುದೇ ರೀತಿಯ ದೂರನ್ನು ನೀಡದೆ ರವಿಯ ಪರವಾಗಿ ನಿಂತು ಪ್ರಕರಣವನ್ನು ಮುಚ್ಚಿ ಹಾಕಿದ್ದಾನೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಇವರಿಬ್ಬರೂ ಚರ್ಚಿಸುವಂತಹ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಜನರು ಪಿಡಿಓಗೆ ಚಿಮಾರಿ ಹಾಕುತ್ತಿದ್ದಾರೆ.

ಈ ಆಡಿಯೋದಲ್ಲಿ ಪಿಡಿಒ ಸದಸ್ಯರುಗಳನ್ನು ಹಣ ಕೊಟ್ಟು ತಮ್ಮತ ಸೆಳೆದುಕೊಳ್ಳೋಣ ಹಾಗೂ ಸರ್ಕಾರದ ಯಾವುದಾದರೂ ಯೋಜನೆಯಲ್ಲಿ ತಕ್ಕಮಟ್ಟಿಗೆ ಹಣ ಹೊಡೆಯುತ್ತೇನೆ ಅದರಲ್ಲಿ ಟ್ರಿಪ್ ಗೆ ಹೋಗೋಣ ಎಂದು ಸಹ ಹೇಳಿಕೊಂಡಿದ್ದಾನೆ.
ಕೆಲವು ದಿನಗಳಿಂದ ಈ ಆಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದರು ಸಹ ತಾಲೂಕು ಪಂಚಾಯಿತಿ ಇಒ ಯಾವುದೇ ರೀತಿ ಪ್ರತಿಕ್ರಿಯೆ ನೀಡಿರುವುದಿಲ್ಲ.
ತಾಲೂಕು ಪಂಚಾಯಿತಿ ಇ ಒ ರವರು ಮೌನವಾಗಿ ಇರುವುದಕ್ಕೆ ಕಾರಣ ಏನು?
ಆಡಿಯೋದಲ್ಲಿ ಮಾತನಾಡಿಕೊಳ್ಳುವ ಹಾಗೆ ಇ ಒ ರವರು ಸಹ ಅವರ ಜೊತೆ ಏನಾದರೂ ಕೈ ಜೋಡಿಸಿದ್ದಾರಾ?
ಜಿಲ್ಲಾಡಳಿತ ಈ ಕೂಡಲೇ ಎಚ್ಚೆತ್ತು ಇಂಥವರ ವಿರುದ್ಧ ತನಿಖೆ ನಡೆಸಬೇಕು ಹಾಗೂ ರಾಜಾರೋಷವಾಗಿ ಭ್ರಷ್ಟಾಚಾರ ನಡೆಸುತ್ತಿರುವ ಇಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಮುಂದಾಗ ಬೇಕಿದೆ.

ಭ್ರಷ್ಟರ ಬೇಟೆ

Recent Posts

ಮದ್ಯಪಾನ ಮಾಡಿ ಶಾಲಾ ಮಕ್ಕಳನ್ನು ಸಾಗಿಸುತ್ತಿದ್ದ ಚಾಲಕರ ವಿರುದ್ಧ ಕ್ರಮ: ಬೆಂಗಳೂರು ಸಂಚಾರ ಪೊಲೀಸರ ದಾಳಿ

ಬೆಂಗಳೂರು ನಗರದಲ್ಲಿ ಮಕ್ಕಳ ಸುರಕ್ಷತೆಗಾಗಿ ಸಂಚಾರ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಶಾಲಾ ಮಕ್ಕಳನ್ನು ಸಾಗಿಸುತ್ತಿದ್ದ ವೇಳೆಯಲ್ಲಿ ಮದ್ಯಪಾನ ಮಾಡಿಕೊಂಡು…

15 hours ago

ಮೈಸೂರಿನಲ್ಲಿ ಐಷಾರಾಮಿ ಕಾರುಗಳ ಮೇಲೆ ಆರ್‌ಟಿಒ ದಾಳಿ: ₹3 ಕೋಟಿ ದಂಡ, ₹15 ಕೋಟಿ ಮೌಲ್ಯದ ವಾಹನ ವಶ

ಮೈಸೂರು: ನಕಲಿ ದಾಖಲೆಗಳ ಆಧಾರದಲ್ಲಿ ನೋಂದಣಿ ಮಾಡಿಕೊಂಡು ತೆರಿಗೆ ವಂಚನೆ ಮಾಡುತ್ತಿದ್ದ ದುಬಾರಿ ಕಾರುಗಳ ಮೇಲೆ ಸಾರಿಗೆ ಇಲಾಖೆಯ ಅಧಿಕಾರಿಗಳು…

16 hours ago

ಕೆ.ಆರ್.ಪೇಟೆ: ಜಮೀನಿನಲ್ಲಿ ಗಾಂಜಾ ಬೆಳೆಯುತ್ತಿದ ವ್ಯಕ್ತಿ ಬಂಧನ

ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಹೋಬಳಿಯ ಕಾಶಿ ಮುರುಕನಹಳ್ಳಿಯಲ್ಲಿ ಗಾಂಜಾ ಬೆಳೆದಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಜಮೀನಿನಲ್ಲಿ ಸುಮಾರು 17 ಕಿಲೋಗ್ರಾಂ…

16 hours ago

ರ್‍ಯಾಶ್ ಡ್ರೈವಿಂಗ್ ಪ್ರಶ್ನಿಸಿದ ಮಹಿಳೆಗೆ ರ‍್ಯಾಪಿಡೋ ಬೈಕ್ ಚಾಲಕನಿಂದ ಹಲ್ಲೆ: ಪ್ರಕರಣ ದಾಖಲು

ರಾಜ್ಯ ಸರ್ಕಾರ ಓಲಾ, ಉಬರ್ ಹಾಗೂ ರ‍್ಯಾಪಿಡೋ ಸೇರಿದಂತೆ ಎಲ್ಲ ಬೈಕ್ ಟ್ಯಾಕ್ಸಿ ಸೇವೆಗಳನ್ನು ಬೆಂಗಳೂರಿನಲ್ಲಿ ರ‍್ಯಾಪಿಡೋ ಚಾಲಕನಿಂದ ಮಹಿಳೆಯ…

18 hours ago

ಪುತ್ತೂರಿನಲ್ಲಿ ಆತ್ಮಹತ್ಯೆ ಆಘಾತ: ಏಳು ತಿಂಗಳ ಗರ್ಭಿಣಿ ನೇಣುಬಿಗಿದುಕೊಂಡು ಜೀವವಿಡುವ ದುರ್ಘಟನೆ

ಪುತ್ತೂರು, ಜೂನ್ 16 – ಪುತ್ತೂರು ಹೊರವಲಯದ ಚಿಕ್ಕಪುತ್ತೂರಿನಲ್ಲಿ ಏಳು ತಿಂಗಳ ಗರ್ಭಿಣಿಯಾಗಿದ್ದ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಬೆಳಕಿಗೆ…

19 hours ago

ಕೋಲಾರ್ ಎಸ್‌ಬಿಐ ಎಟಿಎಂ ದರೋಡೆ: ಕಳ್ಳರು ₹27 ಲಕ್ಷ ನಗದು ದೋಚಿ ಪರಾರಿ.!

ಕೋಲಾರ್ (ಜೂನ್ 16): ನಗರದ ಸಹಕಾರ ನಗರದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂ ಕೇಂದ್ರವೊಂದರಲ್ಲಿ ಭಾನುವಾರ ರಾತ್ರಿ ಸಂಭವಿಸಿದ…

22 hours ago