Latest

ಒಂದು ಮಾಡುವುದಾಗಿ ನಂಬಿಸಿ ಪ್ರೇಮಿಗಳಿಬ್ಬರನ್ನು ಕೊಂದ ಕುಟುಂಬಸ್ಥರು!

ಬಾಗಲಕೋಟೆಯಲ್ಲಿ ಕಾಣೆಯಾಗಿದ್ದ ಪ್ರೇಮಿಗಳ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಮಗಳ ಪ್ರೀತಿಗೆ ವಿರೋಧಿಸಿ ಕುಟುಂಬದವರಿಂದಲೇ ಇಬ್ಬರನ್ನು ಕೊಲೆ ಮಾಡಲಾಗಿದೆ.
ವಿಶ್ವನಾಥ(22), ರಾಜೇಶ್ವರಿ(17) ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ರವಿ, ಹನುಮಂತ, ಬೀರಪ್ಪ ಅವರನ್ನು ಬಂಧಿಸಲಾಗಿದೆ. ವೇಲ್ ನಿಂದ ಕತ್ತು ಬಿಗಿದು ರಾಜೇಶ್ವರಿಯ ಕೊಲೆ ಮಾಡಲಾಗಿದೆ. ಸಹೋದರ ಹಾಗೂ ಮಾವಂದಿರು ರಾಜೇಶ್ವರಿ ಕೊಲೆ ಮಾಡಿದ್ದಾರೆ. ವಿಶ್ವನಾಥನ ಮರ್ಮಾಂಗ, ಎದೆಗೆ ಕಲ್ಲಿನಿಂದ ಹೊಡೆದು ಕೊಲೆ ಮಾಡಲಾಗಿದೆ.
ಇಬ್ಬರನ್ನು ಒಂದು ಮಾಡುವುದಾಗಿ ನಂಬಿಸಿ ವಾಹನದಲ್ಲಿ ಕರೆದುಕೊಂಡು ಬಂದಿದ್ದು, ವಾಹನದಲ್ಲೇ ಇಬ್ಬರನ್ನು ಕೊಲೆ ಮಾಡಿದ್ದಾರೆ. ನಂತರ ಕೃಷ್ಣಾ ನದಿಗೆ ಮೃತ ದೇಹಗಳನ್ನು ಎಸೆದಿದ್ದಾರೆ. ಅಕ್ಟೋಬರ್ 11 ರಂದು ರಾತ್ರಿ ಪುತ್ರಿ ಅಪಹರಣದ ಬಗ್ಗೆ ಕೊಲೆಯಾದ ರಾಜೇಶ್ವರಿ ತಂದೆ ಪರಸಪ್ಪ ದೂರು ನೀಡಿದ್ದ. ಬಾಗಲಕೋಟೆ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಅಕ್ಟೋಬರ್ 3 ರಂದು ವಿಶ್ವನಾಥ ಕಾಣೆಯಾದ ಬಗ್ಗೆ ಗದಗ ಜಿಲ್ಲೆ ನರಗುಂದ ಠಾಣೆಗೆ ವಿಶ್ವನಾಥನ ತಂದೆ ದೂರು ನೀಡಿದ್ದರು. ಅಕ್ಟೋಬರ್ 15 ರಂದು ರಾಜೇಶ್ವರಿ ಅಣ್ಣ ರವಿಯನ್ನು ಸಂಶಯದ ಮೇಲೆ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬೆಳಕು ಬಂದಿದೆ. ನದಿಯಲ್ಲಿ ಇನ್ನು ವಿಶ್ವನಾಥ, ರಾಜೇಶ್ವರಿ ಶವ ಪತ್ತೆಯಾಗಿಲ್ಲವೆನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಭ್ರಷ್ಟರ ಬೇಟೆ

Recent Posts

ಜಾತ್ರೆಯಲ್ಲಿ ಮಹಿಳೆಯ ಮಂಗಳಸೂತ್ರ ಕಳವು: ಮೂವರು ಆರೋಪಿಗಳ ಬಂಧನ

₹4.50 ಲಕ್ಷ ಮೌಲ್ಯದ ಚಿನ್ನ, ಕೃತ್ಯಕ್ಕೆ ಬಳಸಿದ್ದ ಬೈಕ್ ವಶ ಹಳಿಯಾಳ: ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಮಹಿಳೆಯೊಬ್ಬರ ಕೊರಳಲ್ಲಿದ್ದ ಚಿನ್ನದ…

14 hours ago

ಬೈಕ್‌ನಲ್ಲಿ ಕರೆದೊಯ್ದು ಹಣ ಕಸಿದು ಜೀವ ಬೆದರಿಕೆ: 24 ಗಂಟೆಯಲ್ಲೇ ಆರೋಪಿ ಬಂಧನ

ಸಿಸಿಟಿವಿ ಹಾಗೂ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯ ಪತ್ತೆ; ಬೈಕ್, ಹಣ ವಶ ಹೊನ್ನಾವರ: ಬ್ಯಾಂಕ್‌ನಿಂದ ಹಣ ಪಡೆದು ಹೊರಬಂದ…

14 hours ago

ಕಳ್ಳತನ ತಡೆಗೆ ಮುಂಡಗೋಡ ಪೊಲೀಸರ ಕಟ್ಟೆಚ್ಚರ; ರಾತ್ರಿ ಗಸ್ತು, ವಾಹನ ತಪಾಸಣೆ ಚುರುಕು

ಮುಂಡಗೋಡ ಪಟ್ಟಣ ಸೇರಿ ಬಾಚಣಕಿ, ಪಾಳಾ ಗ್ರಾಮಗಳಲ್ಲಿ ನಿಗಾ; ಸಾರ್ವಜನಿಕರ ಸಹಕಾರಕ್ಕೆ ಮನವಿ ಮುಂಡಗೋಡ: ತಾಲೂಕಿನಲ್ಲಿ ಕಳ್ಳತನ ಸೇರಿದಂತೆ ಅಹಿತಕರ…

14 hours ago

ಹೆದ್ದಾರಿ ಬದಿಯಲ್ಲಿ ಪತಿಯ ಶವ… ರಸ್ತೆ ಅಪಘಾತವೆಂದು ನಂಬಿಸಿದ್ದರು! ತನಿಖೆಯಲ್ಲಿ ಬಯಲಾಯ್ತು ಹೆಂಡತಿಯೇ ಹೆಣೆದ ಭೀಕರ ಕೊಲೆ ಸಂಚು

ತಿರುಪತಿ: ಬೆಳಗ್ಗೆ ಹೆದ್ದಾರಿ ಪಕ್ಕದಲ್ಲಿ ವ್ಯಕ್ತಿಯೊಬ್ಬ ರಕ್ತದ ಮಡುವಿನಲ್ಲಿ ಶವವಾಗಿ ಪತ್ತೆಯಾದಾಗ, ಸ್ಥಳೀಯರು ಹಾಗೂ ಪೊಲೀಸರು ಇದೊಂದು ಭೀಕರ ರಸ್ತೆ…

14 hours ago

ಡೇಟಿಂಗ್ ಆ್ಯಪ್‌ ಮೂಲಕ ‘ಹನಿ ಟ್ರ್ಯಾಪ್’! ಶ್ರೀಮಂತ ಪುರುಷರನ್ನು ಬಲೆಗೆ ಬೀಳಿಸಿ ₹6 ಕೋಟಿಗೂ ಅಧಿಕ ಲೂಟಿ

ಪ್ರಯಾಗ್‌ರಾಜ್: ಡೇಟಿಂಗ್ ಆ್ಯಪ್‌ಗಳು ಹಾಗೂ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಶ್ರೀಮಂತ ಪುರುಷರನ್ನು ಹನಿ ಟ್ರ್ಯಾಪ್ ಬಲೆಗೆ ಬೀಳಿಸಿ, ಬಳಿಕ ಬೆದರಿಕೆ…

14 hours ago

ರೇಣುಕಾಸ್ವಾಮಿ ಮೇಲೆ ದರ್ಶನ್‌ ಹಲ್ಲೆ ಆರೋಪ: ಜನನಾಂಗಕ್ಕೆ ಒದ್ದು, ಎದೆ ಮೇಲೆ ಕಾಲಿಟ್ಟು ತುಳಿದಿದ್ದರೆಂದು ಮಾಫಿ ಸಾಕ್ಷಿ ಹೇಳಿಕೆ!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಲು…

14 hours ago