Categories: CrimeLatest

ಒಂದು ಅನುಮಾನ… ಚಿನ್ನದಂತ ಸಂಸಾರವೇ ಚೂರುಚೂರು: ಪತ್ನಿಯನ್ನು ಕೊಂದು ಸಿಮೆಂಟ್‌ನಲ್ಲಿ ಮುಚ್ಚಿದ ಗಂಡ!

ಸೂರತ್ (ಗುಜರಾತ್): ಒಂದು ಸಣ್ಣ ಅನುಮಾನ ಹೇಗೆ ವರ್ಷಗಳ ಕಾಲ ಸುಖವಾಗಿದ್ದ ಸಂಸಾರವನ್ನೇ ನಾಶಮಾಡಬಹುದು ಎಂಬುದಕ್ಕೆ ಗುಜರಾತ್‌ನ ಸೂರತ್‌ನಲ್ಲಿ ನಡೆದ ಭೀಕರ ಘಟನೆ ಉದಾಹರಣೆಯಾಗಿದೆ. ಖ್ಯಾತ ಆಹಾರ ತಜ್ಞೆಯಾಗಿದ್ದ ಶಿಲ್ಪಾ ಸಾಲ್ಪಿ ಅವರ ಅನುಮಾನಾಸ್ಪದ ನಾಪತ್ತೆ ಪ್ರಕರಣವು ಇದೀಗ ಹತ್ಯೆ ಪ್ರಕರಣವಾಗಿ ತಿರುಗಿದ್ದು, ಪತಿಯ ಕ್ರೂರ ಕೃತ್ಯ ಬೆಳಕಿಗೆ ಬಂದಿದೆ.

ಶಿಲ್ಪಾ ಹಾಗೂ ಅವರ ಪತಿ ವಿಶಾಲ್ ಇಬ್ಬರೂ ಸಮಾಜದಲ್ಲಿ ಹೆಸರಾಂತ ದಂಪತಿಯಾಗಿದ್ದರು. ಇವರಿಗೆ ಒಬ್ಬ ಮುದ್ದಾದ ಮಗನೂ ಇದ್ದ. ಎಲ್ಲವೂ ಸುಖವಾಗಿದ್ದರೂ, ವಿಶಾಲ್‌ಗೆ ಪತ್ನಿಯ ಮೇಲೆ ಹುಟ್ಟಿದ ಅನುಮಾನ ದಿನದಿಂದ ದಿನಕ್ಕೆ ಗಂಭೀರವಾಗುತ್ತಿತ್ತು. ಇದೇ ಕಾರಣಕ್ಕೆ ದಂಪತಿಗಳ ನಡುವೆ ಆಗಾಗ ಜಗಳಗಳು ನಡೆಯುತ್ತಿದವು.

ಘಟನೆಯ ದಿನವೂ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ನಡೆದಿದ್ದು, ಆರೋಪಿಯು ಪೂರ್ವಯೋಜಿತವಾಗಿ ಪತ್ನಿಯನ್ನು ಕೊಲೆ ಮಾಡಿದ್ದಾನೆ ಎಂಬ ಅನುಮಾನ ವ್ಯಕ್ತವಾಗಿದೆ. ನಂತರ ಶಿಲ್ಪಾ ನಾಪತ್ತೆಯಾಗಿದ್ದಾಳೆ ಎಂದು ಪೊಲೀಸರಿಗೆ ದೂರು ನೀಡುವ ಮೂಲಕ ಪ್ರಕರಣವನ್ನು ಬೇರೆ ದಿಕ್ಕಿಗೆ ತಳ್ಳಲು ಯತ್ನಿಸಿದ್ದಾನೆ.

ತನಿಖೆ ಆರಂಭಿಸಿದ ಪೊಲೀಸರಿಗೆ ವಿಶಾಲ್‌ನ ವರ್ತನೆ ಮೇಲೆಯೇ ಮೊದಲಿನಿಂದಲೇ ಅನುಮಾನ ಹುಟ್ಟಿತ್ತು. ಬಳಿಕ ಆತ ತನ್ನ ಮಗನಿಗೆ ಬರೆದ ಪತ್ರದಲ್ಲಿ ಕೃತ್ಯದ ಸುಳಿವು ಸಿಕ್ಕಿದ್ದು, ತನಿಖೆ ಮತ್ತಷ್ಟು ಗಂಭೀರಗೊಂಡಿತು. ಪೊಲೀಸರ ತಂಡ ಆರೋಪಿಯನ್ನು ಬೆನ್ನಟ್ಟಿ ಪಾಳುಬಿದ್ದ ಮನೆಯನ್ನು ತಲುಪಿದಾಗ ಅಲ್ಲಿ ದುರ್ವಾಸನೆ ಕಾಣಿಸಿಕೊಂಡಿತು.

ಮನೆಯಲ್ಲಿ ಇದ್ದ ಮರದ ಪೆಟ್ಟಿಗೆ ಪೊಲೀಸರ ಗಮನ ಸೆಳೆದಿದ್ದು, ಅದನ್ನು ತೆರೆಯುತ್ತಿದ್ದಂತೆ ಬೆಚ್ಚಿಬೀಳಿಸುವ ದೃಶ್ಯ ಎದುರಾಯಿತು. ಪೆಟ್ಟಿಗೆಯೊಳಗೆ ಶಿಲ್ಪಾ ಅವರ ಶವವನ್ನು ಇಟ್ಟು, ಅದರ ಮೇಲೆ ಸಿಮೆಂಟ್ ಸುರಿದು ಮರೆಮಾಚಲಾಗಿತ್ತು.

ಪ್ರಸ್ತುತ ಆರೋಪಿ ವಿಶಾಲ್ ತಲೆಮರೆಸಿಕೊಂಡಿದ್ದು, ಪೊಲೀಸರು ಅವನ ಪತ್ತೆಗೆ ಬಲೆ ಬೀಸಿದ್ದಾರೆ. ಈ ಘಟನೆ ಕುಟುಂಬದಲ್ಲಿ ನಂಬಿಕೆ ಕುಸಿದಾಗ ಅದರ ಪರಿಣಾಮ ಎಷ್ಟು ಭೀಕರವಾಗಿರಬಹುದು ಎಂಬುದನ್ನು ಮತ್ತೊಮ್ಮೆ ಮನಗಾಣಿಸಿದೆ.

ಭ್ರಷ್ಟರ ಬೇಟೆ

Recent Posts

ಪರಪ್ಪನ ಅಗ್ರಹಾರ ಜೈಲಿನಲ್ಲಿ ಪವಿತ್ರ ಗೌಡಗೆ ವಿಶೇಷ ಸೌಲಭ್ಯ ಆರೋಪ: ಸಂಧ್ಯಾ ನಾಗರಾಜ್ ಮತ್ತೊಂದು ಆಡಿಯೋ ಬಿಡುಗಡೆ

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೆಲ ಕೈದಿಗಳಿಗೆ ವಿಶೇಷ ಸೌಲಭ್ಯಗಳು ಹಾಗೂ ರಾಜಾತಿಥ್ಯದ ರೀತಿಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂಬ…

21 hours ago

ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕ ಹಾಗೂ ಮುಖ್ಯೋಪಾಧ್ಯಾಯರ ವಿರುದ್ಧ ಪ್ರಕರಣ

ಕಡೂರು: ತಾಲೂಕಿನ ಹಳ್ಳಿಯೊಂದರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂವರು ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಶಿಕ್ಷಕ ಹಾಗೂ ಮುಖ್ಯೋಪಾಧ್ಯಾಯರ…

21 hours ago

ರುಕ್ಮಿಣಿ ವಸಂತ್ ಡೀಪ್‌ಫೇಕ್ ಪ್ರಕರಣ: ಹೈಟೆಕ್ ಆರೋಪಿಗಳ ಬಂಧನ, ಹಿನ್ನೆಲೆ ತಿಳಿದು ಪೊಲೀಸರಿಗೂ ಶಾಕ್!

ಬೆಂಗಳೂರು: ನಟಿ ರುಕ್ಮಿಣಿ ವಸಂತ್ ಅವರ ಫೋಟೋಗಳನ್ನು ದುರ್ಬಳಕೆ ಮಾಡಿಕೊಂಡು ಎಐ ತಂತ್ರಜ್ಞಾನದ ಮೂಲಕ ಅಶ್ಲೀಲ ಡೀಪ್‌ಫೇಕ್ ಫೋಟೋ ಹಾಗೂ…

21 hours ago

8 ತಿಂಗಳು ಸೋಲುಗಳ ಸರಮಾಲೆ… ಕೊನೆಗೆ ಆಕ್ಸ್‌ಫರ್ಡ್‌ನಿಂದ ಬಂದ ಒಂದೇ ಇ-ಮೇಲ್ ಬದುಕೇ ಬದಲಿಸಿತು! ₹2 ಕೋಟಿ ಸ್ಕಾಲರ್‌ಶಿಪ್ ಪಡೆದ ಭಾರತದ ಮೊದಲ ಮಹಿಳೆ

ಚೆನ್ನೈ: ಜೀವನದಲ್ಲಿ ಒಂದೆರಡು ಬಾರಿ ಸೋತರೆ ಸಾಕು, "ನನ್ನಿಂದ ಏನೂ ಆಗುವುದಿಲ್ಲ" ಎಂದು ಕನಸುಗಳನ್ನು ಅರ್ಧದಲ್ಲೇ ಕೈಬಿಡುವವರು ನಮ್ಮ ನಡುವೆ…

21 hours ago

₹2 ಕೋಟಿ ವಿಮೆ ಹಣದ ಆಸೆಗೆ ಪತಿಯ ಕೊಲೆ: ಮಗಳ ಕೃತ್ಯದಿಂದ ಮನನೊಂದ ತಾಯಿ ಆತ್ಮಹತ್ಯೆ

ಬೆಳಗಾವಿ: ₹2 ಕೋಟಿ ಜೀವ ವಿಮೆ ಹಣಕ್ಕಾಗಿ ಮಾಜಿ ಸೈನಿಕನನ್ನು ಪತ್ನಿ ಹಾಗೂ ಆಕೆಯ ಪ್ರಿಯಕರ ಸೇರಿ ಕೊಲೆ ಮಾಡಿದ…

23 hours ago

ಪೊಲೀಸ್ ಅಧಿಕಾರಿ ಡಿವೈಎಸ್ಪಿ ಗೀತಾ ಪಾಟೀಲ, ಪಿಐ ಸೀತಾರಾಮ ಅಮಾನತಿಗೆ ಆಗ್ರಹಿಸಿ ಬೀದಿಗಿಳಿದ ಸಾರ್ವಜನಿಕರು

ಸಿದ್ದಾಪುರ: ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ ಹಾಗೂ ಸಿದ್ದಾಪುರ ಪೊಲೀಸ್ ಠಾಣೆಯ ಪಿಐ ಸೀತಾರಾಮ ಅವರನ್ನು ಅಮಾನತುಗೊಳಿಸಿ ಇಲಾಖಾ ತನಿಖೆ…

2 days ago