ಬಿಹಾರ್ನ ಪೂರ್ಣಿಯಾ ಜಿಲ್ಲೆಯ ಒಂದು ಕುಟುಂಬದಲ್ಲಿ ಅಸಾಮಾನ್ಯ ಒಪ್ಪಂದದ ಮೂಲಕ ವಿವಾದಕ್ಕೆ ಪರಿಹಾರ ಕಂಡುಕೊಳ್ಳಲಾಗಿದೆ. ಇಲ್ಲೊಬ್ಬ ವ್ಯಕ್ತಿ, ಇಬ್ಬರು ಹೆಂಡತಿಯರ ನಡುವೆ ಸಮಯವನ್ನು ಹಂಚಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿದ್ದಾರೆ.
ಎಲ್ಲವೂ ಹೇಗೆ ಶುರುವಾಯಿತು?
ಪೂರ್ಣಿಯಾದ ರೂಪೌಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಈ ಪತಿ ಸುಮಾರು ಏಳು ವರ್ಷಗಳ ಹಿಂದೆ ಎರಡನೇ ಮದುವೆಯನ್ನು ಮಾಡಿದ್ದರು. ಆದರೆ, ಈ ವಿಷಯವನ್ನು ತನ್ನ ಮೊದಲ ಹೆಂಡತಿಗೆ ಮರೆಮಾಚಿದ್ದರು. ಈ ಸತ್ಯ ತಿಳಿಯುತ್ತಿದ್ದಂತೆಯೇ, ಮನೆಯಲ್ಲಿ ಭಾರೀ ಕಲಹಗಳು ಶುರುವಾಯಿತು. ಮೊದಲ ಹೆಂಡತಿ ಆಕ್ರೋಶಗೊಂಡು, ಪತಿಯನ್ನು ಮನೆ ಬಿಟ್ಟು ಹೋಗುವುದಕ್ಕೆ ಕಾರಣೆಂದೂ ಆರೋಪಿಸಿದರು. ಇದರಿಂದಾಗಿ ಗಂಡ ಎರಡನೇ ಹೆಂಡತಿಯ ಜತೆ ವಾಸಿಸಲು ಪ್ರಾರಂಭಿಸಿದರು.
ಪೊಲೀಸ್ ಮಧ್ಯಸ್ಥಿಕೆ – ಹೊಸ ನಿಯಮಗಳು!
ಈ ಪ್ರಕರಣ ಎಷ್ಟೋ ತಿರುವುಗಳ ನಂತರ ಪೊಲೀಸ್ ಸ್ಟೇಷನ್ಗೆ ಬಂದು ತಲುಪಿತು. ನಂತರ ಫ್ಯಾಮಿಲಿ ಕೌನ್ಸೆಲಿಂಗ್ ಸೆಂಟರ್ ಮಧ್ಯಸ್ಥಿಕೆ ವಹಿಸಿ, ಇಬ್ಬರು ಹೆಂಡತಿಯರಿಗೂ ನ್ಯಾಯ ಒದಗಿಸಲು ಒಂದು ನಿರ್ಧಾರ ಕೈಗೊಂಡಿತು.
ನಿರ್ಧಾರದ ಪ್ರಕಾರ:
ಪತಿ ವಾರದಲ್ಲಿ ಮೂರು ದಿನ ಮೊದಲ ಹೆಂಡತಿಯ ಜತೆ, ಮೂರು ದಿನ ಎರಡನೇ ಹೆಂಡತಿಯ ಜತೆ ಕಳೆಯಬೇಕು.
ಉಳಿದ ಒಂದು ದಿನ ಪತಿಗೆ ಸ್ವತಂತ್ರವಾಗಿರಲು ಅವಕಾಶ ನೀಡಲಾಗಿದೆ.
ಮೊದಲ ಹೆಂಡತಿ ವಿದ್ಯಾಭ್ಯಾಸಕ್ಕಾಗಿ ಪ್ರತಿ ತಿಂಗಳು ₹4000 ಹಣ ನೀಡಬೇಕೆಂದು ಪತಿಗೆ ಸೂಚಿಸಲಾಗಿದೆ.
ಸಮಾಧಾನಕರ ಅಂತ್ಯ?
ಈ ತೀರ್ಮಾನದಿಂದಾಗಿ, ಇಬ್ಬರು ಹೆಂಡತಿಯರೂ ಮತ್ತು ಗಂಡನೂ ಒಟ್ಟಾಗಿ ಜೀವನವನ್ನು ಮುಂದುವರಿಸಲು ಒಪ್ಪಿಕೊಂಡಿದ್ದಾರೆ. ಈ ವಿಚಿತ್ರ ಒಪ್ಪಂದ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಒಂದೇ ಹೆಂಡತಿಯ ಜತೆ ಜೀವನ ಸಾಗಿಸುವುದೇ ತಲೆನೋವು ಎಂಬ ಮಾತಿದೆ. ಆದರೆ ಈ ವ್ಯಕ್ತಿ ಇಬ್ಬರಿಗೂ ನ್ಯಾಯ ಕೊಡಲು ಈಗ ಹೊಸ ಜೀವನ ಶೈಲಿಯನ್ನು ಅಳವಡಿಸಿಕೊಂಡಿದ್ದಾನೆ!
ಬೆಂಗಳೂರು: ಬಿಡದಿ ಟೌನ್ಶಿಪ್ ಯೋಜನೆಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವ್ಯಕ್ತಪಡಿಸುತ್ತಿರುವ ವಿರೋಧ ರಾಜಕೀಯ ಪ್ರೇರಿತವಾಗಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್…
ಬಳ್ಳಾರಿ: ಆದಾಯಕ್ಕಿಂತ ಅಧಿಕ ಪ್ರಮಾಣದಲ್ಲಿ ಆಸ್ತಿ ಸಂಪಾದಿಸಿರುವ ಆರೋಪದ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (ಆರ್ಡಿಪಿಆರ್) ಇಲಾಖೆಯ ಸಹಾಯಕ…
ಬೆಳಗಾವಿ: ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ಅವರ ನಿವಾಸ ಸೇರಿದಂತೆ ರಾಜ್ಯದ ವಿವಿಧ ಆರು ಸ್ಥಳಗಳಲ್ಲಿ ಜಾರಿ…
ಪುಣೆಯಲ್ಲಿ ನಡೆದ ಭೀಕರ ಘಟನೆ ಒಂದು ದೇಶವನ್ನೇ ಬೆಚ್ಚಿಬೀಳಿಸಿದೆ. ಮದುವೆಗೆ ಸಕಲ ಸಿದ್ಧತೆಗಳು ನಡೆಯುತ್ತಿದ್ದ ಸಂದರ್ಭದಲ್ಲಿ, ತನ್ನನ್ನು ಮದುವೆಯಾಗಬೇಕಿದ್ದ ಯುವಕನನ್ನೇ…
ಬೆಂಗಳೂರು ನಗರವನ್ನು ಬೆಚ್ಚಿಬೀಳಿಸುವಂತ ದಾರುಣ ಘಟನೆ ಪೂರ್ವ ಭಾಗದ ಕೆ.ಆರ್.ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಸೀಗೇಹಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಲಿವ್-ಇನ್…
ಆನೇಕಲ್ನಲ್ಲಿ ಸಿನಿಮಾವನ್ನು ನೆನಪಿಸುವ ರೀತಿಯಲ್ಲಿ ನಡೆದ ಲಾರಿ ದರೋಡೆ ಪ್ರಕರಣವನ್ನು ಸೂರ್ಯನಗರ ಪೊಲೀಸರು ಕೇವಲ 24 ಗಂಟೆಗಳೊಳಗೆ ಭೇದಿಸಿ ಮೂವರು…