Latest

ಮೂಲಸೌಕರ್ಯ ವಂಚಿತ ಮುಳ್ಳೊಳ್ಳಿ ಗ್ರಾಮ ಕಣ್ಮುಚ್ಚಿ ಕುಳಿತಿ ಅಧಿಕಾರಿಗಳು, ಜನಪ್ರತಿನಿಧಿಗಳು

ಕುಂದಗೋಳ: ಗ್ರಾಮ ಅಂದಮೇಲೆ ಮೂಲ ಸೌಕರ್ಯಗಳು ಇರಬೇಕು. ರಸ್ತೆ ಚರಂಡಿ. ಶುದ್ದ ಕುಡಿಯುವ ನೀರು ಇರಲೇಬೇಕು ಆದರೆ ಇಲ್ಲೊಂದು ಗ್ರಾಮದಲ್ಲಿ ಮೂಲಸೌಕರ್ಯಗಳಿಲ್ಲದೆ ಜನರು ಪರಿತಪ್ಪಿಸುತ್ತಿದ್ದಾರೆ.

ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಳ್ಳೊಳ್ಳಿ ಗ್ರಾಮದಲ್ಲಿ ಸಮರ್ಪಕ ರಸ್ತೆ, ಚರಂಡಿ ಇಲ್ಲದೆ ಜನ ಆಡಳಿತ ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ. ರಾಜ್ಯ ಸರಕಾರ ಹಳ್ಳಿಗಳ ಉದ್ಧಾರಕ್ಕಾಗಿ ಕೋಟ್ಯಾಂತರ ಹಣ ಖರ್ಚು ಮಾಡುತ್ತದೆ. ಆದರೆ ಆ ಹಣ ಈ ಗ್ರಾಮಕ್ಕೆ ತಲುಪಿತ್ತಿಲ್ಲ. ಇದಕ್ಕೆ ಉದಾಹರಣೆ ಮುಳ್ಳೊಳ್ಳಿ ಗ್ರಾಮ.

2009 -10ರ ಸಾಲಿನಲ್ಲಿ ಪುನರ್ವಸತಿ ಗ್ರಾಮವಾಗಿ ಮಾರ್ಪಾಡು ಹೊಂದಿ 15 ವರ್ಷ ಕಳೆದರೂ ಸಹ ಇಂದಿಗೂ ಬೆರಳೆಣಿಕೆಯಷ್ಟು ರಸ್ತೆ ಮಾತ್ರ ಇದೆ. ಮಳೆ ಬಂದ ಸಂದರ್ಭದಲ್ಲಿ ಅಂತು ಗ್ರಾಮಸ್ಥರು ತಮ್ಮ ವಾಹನಗಳನ್ನು ಮುಖ್ಯರಸ್ತೆಯಲ್ಲಿ ನಿಲುಗಡೆ ಮಾಡಿ ತೆರಳುತ್ತಾರೆ. ಇಂದಿಗೂ ಈ ಕುಗ್ರಾಮದಲ್ಲಿ ಅಭಿವೃದ್ಧಿ ಭಾಗ್ಯ ಒಲಿದು ಬಂದಿಲ್ಲ. ಎರಡ್ಮೂರು ಕಾಲೋನಿಯಲ್ಲಿ ಸಿಸಿ ರಸ್ತೆ ಮಾಡಲಾಗಿದೆ. ಇದೀಗ ಆ ರಸ್ತೆಗಳು ಬಿರುಕು ಬಿಟ್ಟು ಅವ್ಯವಸ್ಥೆ ಹಾದಿ ಹಿಡಿದಿದೆ. ಜನಪ್ರತಿನಿಧಿಗಳೇ ಈ ಭಾಗಕ್ಕೆ ಬೇಟೆ ನೀಡಿ ಅಭಿವೃದ್ಧಿಗೆ ಮುಂದಾಗಿ. ಎನ್ನುತ್ತಿದ್ದಾರೆ ಇಲ್ಲಿನ ಗ್ರಾಮಸ್ಥರು.

ಕುಡಿಯಲು ಶುದ್ದ ನೀರಿಲ್ಲ: ಲಕ್ಷಾಂತರ ವೆಚ್ಚ ಭರಸಿ ಶುದ್ದ ನೀರಿನ ಘಟಕ ನಿರ್ಮಾಣ ಮಾಡಲಾಗಿದೆ. ಇಂದಿಗೂ ಶುದ್ದ ನೀರು ಗ್ರಾಮಸ್ಥರಿಗೆ ಒದಗಿಸಿಲ್ಲ. ಮಲಪ್ರಭಾ ನೀರು ಮಾತ್ರ ಪೂರೈಸಿಲಾಗುತ್ತದೆ. ಶುದ್ದ ನೀರು ಒದಗಿಸಿ ಎಂದು ಗ್ರಾಮಸ್ಥರು ಆಗ್ರಹ ಮಾಡಿದ್ದಾರೆ.

ರಸ್ತೆ ನಿರ್ಮಾಣ ಮಾಡಿ: ನವಗ್ರಾಮವಾಗಿ ಸುಮಾರು ಹದಿನೈದು ವರ್ಷಗಳೆ ಕಳಿದಿವೆ. ನಿತ್ಯ ನೂರಾರು ಕುಟುಂಬಗಳು ಜನಜೀವನ ನಡೆಸುತ್ತಾರೆ. ಮಳೆ ಬಂದ ಸಂದರ್ಭದಲ್ಲಿ ಅಂತು ಪರದಾಟಕ್ಕೀಡಾಗಿ ಹಪಹಪಿಸುತ್ತಾರೆ. ನಮ್ಮ ಕಷ್ಟ ದೇವರೇ ಬಲ್ಲ ಚುನಾವಣೆ ಮತ ಕೇಳಲು ದುಂಬಾಲು ಬಿಳ್ಳುತ್ತಾರೆ. ಆದರೆ ರಸ್ತೆ ಅಭಿವೃದ್ಧಿಗೆ ಮುಂದಾಗಿಲ್ಲ ಎಂದು ಸುನೀಲ ನಾಯ್ಕರ ತಿಳಿಸಿದರು.

ಒಟ್ಟಾರೆ ಗ್ರಾಮದಲ್ಲಿ ರಸ್ತೆ, ಚರಂಡಿ, ಅಂಗನವಾಡಿ ಕೇಂದ್ರ, ಶುದ್ದ ನೀರಿನ ಘಟಕ, ಸಮಸ್ಯೆಗಳು ಇದ್ದರು ತಾಲೂಕ ಆಡಳಿತ ಅಭಿವೃದ್ಧಿಗೆ ಕಿಂಚಿತ್ತೂ ಕಾಳಜಿ ವಹಿಸಿಲ್ಲ. ಈಗಲಾದರೋ ಎಚ್ಚೆತ್ತು ಅಭಿವೃದ್ಧಿಗೆ ಮುಂದಾಗಬೇಕಾಗಿದೆ. ವರದಿ: ಶಾನು ಯಲಿಗಾರ

nazeer ahamad

Recent Posts

ಮಕ್ಕಳಾಗಿಲ್ಲ ಎಂಬ ವಿಚಾರಕ್ಕೆ ಗಂಡನ ಹತ್ಯೆ: ಪತ್ನಿ ಬಂಧನ

ಮೈಸೂರಿನಲ್ಲಿ ದಂಪತಿ ನಡುವಿನ ಕುಟುಂಬ ಕಲಹ ದಾರುಣ ಅಂತ್ಯ ಕಂಡಿದ್ದು, ಮಕ್ಕಳಾಗಿಲ್ಲ ಎಂಬ ವಿಚಾರಕ್ಕೆ ಉಂಟಾದ ಜಗಳದಲ್ಲಿ ಪತ್ನಿಯೇ ಗಂಡನನ್ನು…

24 minutes ago

ಸತತ 3 ಬಾರಿ UPSC ಫೇಲ್.. ಒಂದೇ ಅಭ್ಯಾಸ ಬದಲಿಸಿ 24ನೇ ವಯಸ್ಸಿಗೆ IAS ಆದ ನೇಹಾ ಬ್ಯಾಡ್ವಲ್!

UPSC ಪರೀಕ್ಷೆಯಲ್ಲಿ ಯಶಸ್ಸು ಸಾಧಿಸುವ ಕನಸು ಲಕ್ಷಾಂತರ ಯುವಕರದ್ದಾಗಿದ್ದರೂ, ಅದನ್ನು ನನಸು ಮಾಡುವುದು ಕೆಲವೇ ಮಂದಿಗೆ ಸಾಧ್ಯವಾಗುತ್ತದೆ. ಹಲವು ಮಂದಿ…

26 minutes ago

ಹಳ್ಳಿಯ ಹುಡುಗಿಯಿಂದ ಐಎಎಸ್‌ ಅಧಿಕಾರಿ ತನಕ: ಪ್ರಿಯಾ ರಾಣಿ ಅವರ ಸ್ಪೂರ್ತಿದಾಯಕ ಸಾಧನೆ

ಬಿಹಾರದ ಒಂದು ಸಣ್ಣ ಹಳ್ಳಿಯಿಂದ ಆರಂಭವಾದ ಪ್ರಯಾಣ, ಇಂದು ದೇಶದ ಅತ್ಯುನ್ನತ ನಾಗರಿಕ ಸೇವೆಯಾದ ಐಎಎಸ್‌ ಹುದ್ದೆ ತಲುಪಿದೆ. ದೃಢ…

28 minutes ago

ಆರೋಪಿಯ ಬಾಯಿಗೆ ಮರ್ಮಾಂಗ ಇರಿಸಿ ವಿಕೃತ ಮೆರೆದಿದ್ದ ಪಿಎಸ್ಐ ಅರೆಸ್ಟ್..!

ಬೆಂಗಳೂರು ನಗರವನ್ನು ಬೆಚ್ಚಿಬೀಳಿಸುವಂತಹ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ. ಸಾರ್ವಜನಿಕರ ರಕ್ಷಣೆಗಾಗಿ ಕರ್ತವ್ಯ ನಿರ್ವಹಿಸಬೇಕಿದ್ದ ಪೊಲೀಸ್ ಅಧಿಕಾರಿಯೇ ಅಪ್ರಾಪ್ತ ಬಾಲಕರ…

29 minutes ago

ಗರ್ಭದಲ್ಲಿರುವ ಮಗುವಿನ ಡಿಎನ್ಎ ಪರೀಕ್ಷೆಗೆ ಒತ್ತಾಯ: ಅನುಮಾನದ ಬೆಂಕಿಗೆ ಬಲಿಯಾದ ಗರ್ಭಿಣಿ, ಪತಿ ಬಂಧನ

ತೆಲಂಗಾಣದಲ್ಲಿ ಮನಕಲಕುವ ಘಟನೆೊಂದು ಬೆಳಕಿಗೆ ಬಂದಿದೆ. ಗರ್ಭದಲ್ಲಿರುವ ಮಗುವಿನ ಪಿತೃತ್ವವನ್ನು ಪ್ರಶ್ನಿಸಿ ಡಿಎನ್‌ಎ ಪರೀಕ್ಷೆ ಮಾಡಿಸಬೇಕೆಂದು ಪತಿ ಪಟ್ಟು ಹಿಡಿದ…

31 minutes ago

ಇನ್‌ಸ್ಟಾಗ್ರಾಮ್ ಪ್ರೀತಿ: ಮೂರು ಮಕ್ಕಳನ್ನು ಬಿಟ್ಟು ಪ್ರಿಯಕರನೊಂದಿಗೆ ಓಡಿ ಹೋದ ತಾಯಿ, ಹರಿಯಾಣದಲ್ಲಿ ಪೊಲೀಸ್ ವಶಕ್ಕೆ

ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆ ಕುಟುಂಬಗಳ ಮೇಲೆಯೇ ಪರಿಣಾಮ ಬೀರುತ್ತಿರುವ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಮೂರು ಮಕ್ಕಳ ತಾಯಿಯಾಗಿದ್ದ…

32 minutes ago