Latest

ದಲಿತ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ನವ ತಿರುವು: ಮುಸ್ಲಿಂ ಯುವಕನ ಕಿರುಕುಳದಿಂದ ನೇಣಿಗೆ ಶರಣಾದ ಯುವತಿ.!

ಬೆಳಗಾವಿಯ ಮಹಾಂತೇಶ ನಗರದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ ಬಿಸಿಎ ಓದುತ್ತಿದ್ದ ದಲಿತ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇದೀಗ ಸ್ಪೋಟಕ ತಿರುವು ಪಡೆದಿದೆ. ತಡವಾಗಿ ಬೆಳಕಿಗೆ ಬಂದ ಈ ಘಟನೆಗೆ ನವೀನ್ ಎಂಬ ಯುವಕನ ಪ್ರೇಮ ಸಂಬಂಧ ಹಾಗೂ ಮತ್ತೊಬ್ಬ ವ್ಯಕ್ತಿಯ ಕಿರುಕುಳವೇ ಕಾರಣ ಎನ್ನಲಾಗಿದೆ.

ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಚಿಕ್ಕಮಲ್ಲೂರು ಗ್ರಾಮದ ಶಿಲ್ಪಾ (22) ಎಂಬವರು ಸಾವಿಗೀಡಾದ ವಿದ್ಯಾರ್ಥಿನಿ. ಬೆಳಗಾವಿಯ ಕಾಲೇಜಿನಲ್ಲಿ ಬಿಸಿಎ ವ್ಯಾಸಂಗ ಮಾಡುತ್ತಿದ್ದ ಈಕೆ, ಶಿಗ್ಗಾವಿಯ ಫರ್ನಿಚರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ನವೀನ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಮೂರು ವರ್ಷಗಳ ಕಾಲ ಇವರಿಬ್ಬರ ನಡುವೆ ಪ್ರೇಮಸಂಬಂಧ ಮುಂದುವರಿದಿತ್ತು.

ಆದರೆ ಇತ್ತೀಚೆಗೆ ಶಿಲ್ಪಾಗೆ ಅನಾಮಿಕ ಕರೆಗಳು ಬರುತ್ತಿದ್ದು, ಕಿರುಕುಳಕ್ಕೆ ಒಳಗಾಗಿದ್ದಳು ಎಂಬ ಆಕ್ಷೇಪಣೆ ಕೇಳಿಬಂದಿದೆ. ಈ ಹಿಂದಿನ ಪ್ರಾಥಮಿಕ ತನಿಖೆಯಲ್ಲಿ, ರಂಜಾನ್ ನದಾಫ್ ಎಂಬ ವ್ಯಕ್ತಿ ಶಿಲ್ಪಾಗೆ ನಿರಂತರವಾಗಿ ಕರೆ ಮಾಡಿ ಮಾನಸಿಕ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ. ಯುವತಿಯ ಮೇಲೆ ನಡೆದ ಮಾನಸಿಕ ಹಿಂಸೆ ಹಾಗೂ ದಬ್ಬಾಳಿಕೆಯಿಂದಾಗಿ, ಕಳೆದ ಒಂದು ವಾರದ ಹಿಂದೆ ಆತ್ಮಹತ್ಯೆಗೆ ಶರಣಾದ ಶಿಲ್ಪಾ, ಹಾಸ್ಟೆಲ್ ನಲ್ಲಿ ನೇಣು ಬಿಗಿದುಕೊಂಡಿದ್ದಳು.

ಈ ಘಟನೆ ಈಗ ತಡವಾಗಿ ಸಾರ್ವಜನಿಕ ಬೆಳಕಿಗೆ ಬಂದಿದ್ದು, ಪ್ರಕರಣಕ್ಕೆ ಗಂಭೀರ ತಿರುವು ಸಿಕ್ಕಿದೆ. ಪ್ರಕರಣ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದು, ಎಲ್ಲಾ ಆಯಾಮಗಳಿಂದ ವಿಚಾರಣೆ ನಡೆಯುತ್ತಿದೆ.

ಸಂಬಂಧಿತ ವ್ಯಕ್ತಿಗಳ ವಿಚಾರಣೆ, ಮೊಬೈಲ್ ಕಾಲ್ ಡೇಟಾ ಪರಿಶೀಲನೆ ಮತ್ತು ಹಾಸ್ಟೆಲ್ ಸಹವಾಸಿಗಳ ಹೇಳಿಕೆಗಳು ಪ್ರಕರಣದ ಮೌಲ್ಯಮಾಪನಕ್ಕೆ ಸಹಕಾರಿಯಾಗಲಿವೆ.

nazeer ahamad

Recent Posts

ಮುಖ್ಯಮಂತ್ರಿಗಳ ಸೂಚನೆ ಕಟ್ಟುನಿಟ್ಟಾಗಿ ಪಾಲಿಸಿ: ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ

ಕಾರವಾರ: ಜಿಲ್ಲೆಯಲ್ಲಿ ಪಾರದರ್ಶಕ, ಜನಪರ ಹಾಗೂ ಪರಿಣಾಮಕಾರಿ ಆಡಳಿತ ನೀಡಲು ಎಲ್ಲಾ ಸರ್ಕಾರಿ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಮುಖ್ಯಮಂತ್ರಿಗಳು…

16 hours ago

ಬಸ್‌ನಲ್ಲಿ ಅಸಭ್ಯವಾಗಿ ಯುತಿಯ ಮೈ ಮುಟ್ಟಿ ಕಿರುಕುಳ; ಧೈರ್ಯವಾಗಿ ವಿಡಿಯೋ ಮಾಡಿದ ಯುವತಿ, ಆರೋಪಿಯನ್ನು ಕೆಳಗಿಳಿಸಿದ ಕಂಡಕ್ಟರ್!

ಮಾರುಕಟ್ಟೆಯಿಂದ ಮನೆಗೆ ತೆರಳಲು ಖಾಸಗಿ ಬಸ್ ಹತ್ತಿದ್ದ ಯುವತಿಗೆ ಮಾರ್ಗಮಧ್ಯೆ ಕಿರುಕುಳ ನೀಡಿದ ಘಟನೆ ನಡೆದಿದೆ. ಬಸ್ ಚಲಿಸಲು ಆರಂಭಿಸಿದ…

16 hours ago

₹65 ಸಾವಿರ ಸಂಬಳದ ಮುಖ್ಯೋಪಾಧ್ಯಾಯರಿಗೆ ಶಾಲೆಗೆ ಬರಲು ಸಮಯವಿಲ್ಲ; ₹4,500ಕ್ಕೆ ಯುವತಿಯನ್ನು ನೇಮಿಸಿ ಪಾಠ ಮಾಡಿಸಿದ ‘ಸರ್ಕಾರಿ ಶಾಲೆ’ ವಂಚನೆ!

ಮಧ್ಯಪ್ರದೇಶ: ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಣ ವ್ಯವಸ್ಥೆಯನ್ನೇ ಅಣಕಿಸುವಂತಹ ಆಘಾತಕಾರಿ ಪ್ರಕರಣವೊಂದು ಮಧ್ಯಪ್ರದೇಶದ ಮುರೈನಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ತಿಂಗಳಿಗೆ ₹65…

16 hours ago

ಇನ್‌ಸ್ಟಾಗ್ರಾಮ್ ಕ್ಯೂಟ್ ಕಪಲ್ ಕಥೆಗೆ ಬಿಗ್ ಟ್ವಿಸ್ಟ್: ಕೋಟ್ಯಾಧಿಪತಿ ಪತ್ನಿ ಕಂಡಕ್ಟರ್ ಜೊತೆ ಪರಾರಿ ಆರೋಪ!

ಸೋಷಿಯಲ್ ಮೀಡಿಯಾದಲ್ಲಿ ಸದಾ ನಗುನಗುತ್ತಾ ಕಾಣಿಸಿಕೊಳ್ಳುತ್ತಿದ್ದ ಕೇರಳದ ಜನಪ್ರಿಯ ಜೋಡಿ ಅಖಿಲ್ (Akhil NRD) ಮತ್ತು ಮೇಘಾ ಅವರ ದಾಂಪತ್ಯ…

16 hours ago

ಟೊರೊಂಟೊದಲ್ಲಿ ಭಾರತೀಯ ಮೂಲದ ಯುವತಿ ಹತ್ಯೆ: 7 ತಿಂಗಳ ಬಳಿಕ ಆಪ್ತ ವ್ಯಕ್ತಿ ಅರೆಸ್ಟ್‌!

ಟೊರೊಂಟೊ: ಕೆನಡಾದ ಟೊರೊಂಟೊದಲ್ಲಿ ಭಾರತೀಯ ಮೂಲದ 30 ವರ್ಷದ ಯುವತಿ ಹಿಮಾಂಶಿ ಖುರಾನಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು…

2 days ago

ಇನ್‌ಸ್ಟಾಗ್ರಾಂ ಪ್ರೇಮಿಗಾಗಿ 6 ತಿಂಗಳ ಕಂದಮ್ಮನನ್ನೇ ಕೊಲ್ಲಿಸಿದ ತಾಯಿ! ಮೀರಾಟ್‌ನಲ್ಲಿ ಬೆಚ್ಚಿಬೀಳಿಸಿದ ಘಟನೆ

ಮೀರಾಟ್: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಪ್ರೇಮಿಗಾಗಿ ತಾಯಿಯೊಬ್ಬಳು ತನ್ನ ಆರು ತಿಂಗಳ ಹಸುಗೂಸಿನ ಸಾವಿಗೆ ಕಾರಣಳಾದ ಆರೋಪ ಕೇಳಿಬಂದಿದ್ದು, ಉತ್ತರ…

2 days ago