Latest

ಬಾಲಿವುಡ್ ನಟಿಗೆ 3 ಕೋಟಿ ಬಂಗ್ಲೆ ಗಿಫ್ಟ್ ಮಾಡಿದ ಕುಖ್ಯಾತ ಕತರ್ನಾಕ್ ಕಳ್ಳ!

ಬೆಂಗಳೂರು: ಅಂತರಾಜ್ಯ ಕುಖ್ಯಾತ ಕಳ್ಳನನ್ನು ಮಡಿವಾಳ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈತ ಕೇವಲ ಸಾಮಾನ್ಯ ಕಳ್ಳನಲ್ಲ, ತನ್ನ ವೃತ್ತಿಯನ್ನೇ ಕಳ್ಳತನವಾಗಿ ಪರಿಗಣಿಸಿದ್ದ ಖತರ್ನಾಕ್ ಅಪರಾಧಿ. ಜಗತ್ತಿಗೆ ಗೊತ್ತಾಗದಷ್ಟು ಸಣ್ಣ 400 ಚದರ ಅಡಿ ಮನೆಗೆ ಸೀಮಿತನಾಗಿದ್ದ ಈತ, ಕಳ್ಳತನದ ಹಣದಿಂದ ಬಾಲಿವುಡ್ ನಟಿಗೆ ವಿಲಾಸಿ ಬಂಗಲೆ ಕಟ್ಟಿಸಿ ಕೊಟ್ಟಿದ್ದಾನೆ!

ಕಳ್ಳತನದ ಹಣದಲ್ಲಿ ಬಂಗಲೆ ಭೇಟೆ!

ಬಂಧಿತನ ಹೆಸರು ಪಂಚಾಕ್ಷರಿ ಎಂದು ಗುರುತಿಸಲಾಗಿದ್ದು, ಬಾಲಿವುಡ್ ನಟಿಯೊಬ್ಬಳೊಂದಿಗೆ ಈತನ ಪ್ರೀತಿ ಸಂಬಂಧವಿತ್ತು. ಈ ಸಂಬಂಧವನ್ನು ಹೆಚ್ಚಿಸಲು ಈತ ಕಳ್ಳತನ ಮಾಡಿದ ಹಣದಿಂದ ಸುಮಾರು 3 ಕೋಟಿ ರೂಪಾಯಿ ಮೌಲ್ಯದ ಬಂಗಲೆ ಗಿಫ್ಟ್ ಆಗಿ ನೀಡಿದ್ದಾನೆ. ತಾನು ತಂಗುತ್ತಿದ್ದ ಕಿರುಮನೆಯಲ್ಲಿ ಬದುಕುತ್ತಿದ್ದರೂ, ತನ್ನ ಪ್ರೇಯಸಿಗೆ ಐಷಾರಾಮಿ ಜೀವನ ಕಲ್ಪಿಸಿದ್ದಾನೆ.

ಕಳ್ಳತನದ ಬದುಕಿಗೆ 20 ವರ್ಷಗಳ ಇತಿಹಾಸ

2003ರಲ್ಲಿ ಕಳ್ಳತನವನ್ನು ಪ್ರಾರಂಭಿಸಿದ ಪಂಚಾಕ್ಷರಿ, 2009ರಿಂದ ಸಂಪೂರ್ಣ ಪ್ರೊಫೆಷನಲ್ ಕಳ್ಳನಾಗಿ ಬದಲಾಗಿದ್ದ. ಈತನ ತಂದೆಯೇ ರೈಲ್ವೆ ಪೊಲೀಸ್ ಆಗಿದ್ದು, ಅವರ ಮಗನೇ ಅಪರಾಧ ಲೋಕದಲ್ಲಿ ಹೆಸರು ಮಾಡಿದ ಭಿನ್ನ ಕಥೆ!

2016: ಗುಜರಾತ್ ಪೊಲೀಸರಿಂದ ಬಂಧನ, 6 ವರ್ಷ ಸಬರಮತಿ ಜೈಲಿನಲ್ಲಿ ಶಿಕ್ಷೆ

ಬಿಡುಗಡೆಯಾದ ಬಳಿಕ: ಮತ್ತೆ ಮಹಾರಾಷ್ಟ್ರದಲ್ಲಿ ಕಳ್ಳತನ

2024: ಮತ್ತೆ ಬೆಂಗಳೂರಿನಲ್ಲಿ ಕಳ್ಳತನ ಮುಂದುವರಿಸಿ, ಕೊನೆಗೂ ಮಡಿವಾಳ ಪೊಲೀಸರ ಬಲೆಗೆ

ಈತನ ವಿರುದ್ಧ ಹಲವಾರು ರಾಜ್ಯಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರಿನ ಮಡಿವಾಳ ಪೊಲೀಸರು ಆತನನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಈತನ ಬಂಧನದೊಂದಿಗೆ ಅಂತರಾಜ್ಯ ಕಳ್ಳತನ ಮಾಫಿಯಾಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ.

nazeer ahamad

Recent Posts

ಲೋಕಾಯುಕ್ತ ಅಧಿಕಾರಿ ಎಂದು ಎಂಜಿನಿಯರ್‌ಗೆ ಹಣ ಬೇಡಿಕೆ ಇಟ್ಟ ಆರೋಪಿ ಬಂಧನ

ಲೋಕಾಯುಕ್ತ ಕಚೇರಿಯ ಹಿರಿಯ ಅಧಿಕಾರಿ ಎಂದು ಸುಳ್ಳು ಪರಿಚಯ ನೀಡಿ, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ನಿಂದ ಹಣ ವಸೂಲಿ ಮಾಡಲು ಯತ್ನಿಸಿದ…

29 minutes ago

ಉತಾರ ನೀಡಲು ₹1.5 ಲಕ್ಷ ಲಂಚ: ಪಿಡಿಒ ಲಕ್ಷ್ಮೀ ಪ್ಯಾಟಿ ಲೋಕಾಯುಕ್ತ ಬಲೆಗೆ

ಜಮೀನಿನ ಖಾತಾ ಉತಾರ ನೀಡಲು ಲಂಚ ಸ್ವೀಕರಿಸಿದ ಆರೋಪದಲ್ಲಿ ಬಿಜನಗೇರಾ ಗ್ರಾಮ ಪಂಚಾಯಿತಿ ಪಿಡಿಒ ಲಕ್ಷ್ಮೀ ಪ್ಯಾಟಿ ಲೋಕಾಯುಕ್ತ ಅಧಿಕಾರಿಗಳ…

5 hours ago

‘ಉಗ್ರ ಎಂದು ಗೊತ್ತಿದ್ದರೆ ಮನೆ ಕೊಡುತ್ತಿರಲಿಲ್ಲ’; ಶಂಕಿತ ಸುಹೇಲ್ ಬಂಧನದಿಂದ ಬೆಚ್ಚಿಬಿದ್ದ ಮನೆ ಮಾಲೀಕರು

ಅಯೋಧ್ಯೆಯ ರಾಮಮಂದಿರವನ್ನು ಗುರಿಯಾಗಿಸಿಕೊಂಡು ಸಂಚು ರೂಪಿಸಿದ್ದಾನೆ ಎಂಬ ಆರೋಪದ ಮೇಲೆ ಬಂಧಿತನಾಗಿರುವ ಶಂಕಿತ ಉಗ್ರ ಸುಹೇಲ್ ಪ್ರಕರಣಕ್ಕೆ ಹೊಸ ತಿರುವು…

5 hours ago

17 ವರ್ಷದ ಸೋದರಳಿಯನ ಬ್ಲಾಕ್ ಮೇಲ್ ಮಾಡಿ ಸೆಕ್ಸ್ ಮಾಡುತ್ತಿದ್ದ 40 ವರ್ಷದ ಅತ್ತೆ..! ಪೋಕ್ಸೋ ಪ್ರಕರಣ ದಾಖಲು.

ಉತ್ತರ ಪ್ರದೇಶದ ಅಲಿಗಢ್‌ನಲ್ಲಿ ಅಪ್ರಾಪ್ತ ಬಾಲಕನ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ತನ್ನದೇ 17…

5 hours ago

ನಟಿ ಕೃಷಿ ತಾಪಾಂಡ ನಿವಾಸದಲ್ಲಿ ಉದ್ಯಮಿ ವೈಶಾಕ್ ಮೃತದೇಹ ಪತ್ತೆ; ಸಾವಿನ ಸುತ್ತ ಹಲವು ಪ್ರಶ್ನೆಗಳು

ಬೆಂಗಳೂರಿನ ರಾಜರಾಜೇಶ್ವರಿ ನಗರದ ಐಷಾರಾಮಿ ಅಪಾರ್ಟ್‌ಮೆಂಟ್‌ನಲ್ಲಿ ಉದ್ಯಮಿ ವೈಶಾಕ್ (45) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಹಲವು ಅನುಮಾನಗಳಿಗೆ…

5 hours ago

ಇಡಿ ದಾಳಿ: ಸಚಿವ ಸತೀಶ್ ಜಾರಕಿಹೊಳಿ ಸಂಬಂಧಿ ಮನೆಯಿಂದ ಯಮುನಾ ವಶಕ್ಕೆ

ಮೈಸೂರು ನಗರದ ದಟ್ಟಗಳ್ಳಿ ಪ್ರದೇಶದಲ್ಲಿರುವ ಸಚಿವ ಸತೀಶ್ ಜಾರಕಿಹೊಳಿ ಅವರ ಸಂಬಂಧಿ ವೈ. ಮಂಜುನಾಥ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ…

10 hours ago