Latest

ಬಾಲಿವುಡ್ ನಟಿಗೆ 3 ಕೋಟಿ ಬಂಗ್ಲೆ ಗಿಫ್ಟ್ ಮಾಡಿದ ಕುಖ್ಯಾತ ಕತರ್ನಾಕ್ ಕಳ್ಳ!

ಬೆಂಗಳೂರು: ಅಂತರಾಜ್ಯ ಕುಖ್ಯಾತ ಕಳ್ಳನನ್ನು ಮಡಿವಾಳ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈತ ಕೇವಲ ಸಾಮಾನ್ಯ ಕಳ್ಳನಲ್ಲ, ತನ್ನ ವೃತ್ತಿಯನ್ನೇ ಕಳ್ಳತನವಾಗಿ ಪರಿಗಣಿಸಿದ್ದ ಖತರ್ನಾಕ್ ಅಪರಾಧಿ. ಜಗತ್ತಿಗೆ ಗೊತ್ತಾಗದಷ್ಟು ಸಣ್ಣ 400 ಚದರ ಅಡಿ ಮನೆಗೆ ಸೀಮಿತನಾಗಿದ್ದ ಈತ, ಕಳ್ಳತನದ ಹಣದಿಂದ ಬಾಲಿವುಡ್ ನಟಿಗೆ ವಿಲಾಸಿ ಬಂಗಲೆ ಕಟ್ಟಿಸಿ ಕೊಟ್ಟಿದ್ದಾನೆ!

ಕಳ್ಳತನದ ಹಣದಲ್ಲಿ ಬಂಗಲೆ ಭೇಟೆ!

ಬಂಧಿತನ ಹೆಸರು ಪಂಚಾಕ್ಷರಿ ಎಂದು ಗುರುತಿಸಲಾಗಿದ್ದು, ಬಾಲಿವುಡ್ ನಟಿಯೊಬ್ಬಳೊಂದಿಗೆ ಈತನ ಪ್ರೀತಿ ಸಂಬಂಧವಿತ್ತು. ಈ ಸಂಬಂಧವನ್ನು ಹೆಚ್ಚಿಸಲು ಈತ ಕಳ್ಳತನ ಮಾಡಿದ ಹಣದಿಂದ ಸುಮಾರು 3 ಕೋಟಿ ರೂಪಾಯಿ ಮೌಲ್ಯದ ಬಂಗಲೆ ಗಿಫ್ಟ್ ಆಗಿ ನೀಡಿದ್ದಾನೆ. ತಾನು ತಂಗುತ್ತಿದ್ದ ಕಿರುಮನೆಯಲ್ಲಿ ಬದುಕುತ್ತಿದ್ದರೂ, ತನ್ನ ಪ್ರೇಯಸಿಗೆ ಐಷಾರಾಮಿ ಜೀವನ ಕಲ್ಪಿಸಿದ್ದಾನೆ.

ಕಳ್ಳತನದ ಬದುಕಿಗೆ 20 ವರ್ಷಗಳ ಇತಿಹಾಸ

2003ರಲ್ಲಿ ಕಳ್ಳತನವನ್ನು ಪ್ರಾರಂಭಿಸಿದ ಪಂಚಾಕ್ಷರಿ, 2009ರಿಂದ ಸಂಪೂರ್ಣ ಪ್ರೊಫೆಷನಲ್ ಕಳ್ಳನಾಗಿ ಬದಲಾಗಿದ್ದ. ಈತನ ತಂದೆಯೇ ರೈಲ್ವೆ ಪೊಲೀಸ್ ಆಗಿದ್ದು, ಅವರ ಮಗನೇ ಅಪರಾಧ ಲೋಕದಲ್ಲಿ ಹೆಸರು ಮಾಡಿದ ಭಿನ್ನ ಕಥೆ!

2016: ಗುಜರಾತ್ ಪೊಲೀಸರಿಂದ ಬಂಧನ, 6 ವರ್ಷ ಸಬರಮತಿ ಜೈಲಿನಲ್ಲಿ ಶಿಕ್ಷೆ

ಬಿಡುಗಡೆಯಾದ ಬಳಿಕ: ಮತ್ತೆ ಮಹಾರಾಷ್ಟ್ರದಲ್ಲಿ ಕಳ್ಳತನ

2024: ಮತ್ತೆ ಬೆಂಗಳೂರಿನಲ್ಲಿ ಕಳ್ಳತನ ಮುಂದುವರಿಸಿ, ಕೊನೆಗೂ ಮಡಿವಾಳ ಪೊಲೀಸರ ಬಲೆಗೆ

ಈತನ ವಿರುದ್ಧ ಹಲವಾರು ರಾಜ್ಯಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರಿನ ಮಡಿವಾಳ ಪೊಲೀಸರು ಆತನನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಈತನ ಬಂಧನದೊಂದಿಗೆ ಅಂತರಾಜ್ಯ ಕಳ್ಳತನ ಮಾಫಿಯಾಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ.

nazeer ahamad

Recent Posts

ಜಾತ್ರೆಯಲ್ಲಿ ಮಹಿಳೆಯ ಮಂಗಳಸೂತ್ರ ಕಳವು: ಮೂವರು ಆರೋಪಿಗಳ ಬಂಧನ

₹4.50 ಲಕ್ಷ ಮೌಲ್ಯದ ಚಿನ್ನ, ಕೃತ್ಯಕ್ಕೆ ಬಳಸಿದ್ದ ಬೈಕ್ ವಶ ಹಳಿಯಾಳ: ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಮಹಿಳೆಯೊಬ್ಬರ ಕೊರಳಲ್ಲಿದ್ದ ಚಿನ್ನದ…

11 hours ago

ಬೈಕ್‌ನಲ್ಲಿ ಕರೆದೊಯ್ದು ಹಣ ಕಸಿದು ಜೀವ ಬೆದರಿಕೆ: 24 ಗಂಟೆಯಲ್ಲೇ ಆರೋಪಿ ಬಂಧನ

ಸಿಸಿಟಿವಿ ಹಾಗೂ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯ ಪತ್ತೆ; ಬೈಕ್, ಹಣ ವಶ ಹೊನ್ನಾವರ: ಬ್ಯಾಂಕ್‌ನಿಂದ ಹಣ ಪಡೆದು ಹೊರಬಂದ…

11 hours ago

ಕಳ್ಳತನ ತಡೆಗೆ ಮುಂಡಗೋಡ ಪೊಲೀಸರ ಕಟ್ಟೆಚ್ಚರ; ರಾತ್ರಿ ಗಸ್ತು, ವಾಹನ ತಪಾಸಣೆ ಚುರುಕು

ಮುಂಡಗೋಡ ಪಟ್ಟಣ ಸೇರಿ ಬಾಚಣಕಿ, ಪಾಳಾ ಗ್ರಾಮಗಳಲ್ಲಿ ನಿಗಾ; ಸಾರ್ವಜನಿಕರ ಸಹಕಾರಕ್ಕೆ ಮನವಿ ಮುಂಡಗೋಡ: ತಾಲೂಕಿನಲ್ಲಿ ಕಳ್ಳತನ ಸೇರಿದಂತೆ ಅಹಿತಕರ…

11 hours ago

ಹೆದ್ದಾರಿ ಬದಿಯಲ್ಲಿ ಪತಿಯ ಶವ… ರಸ್ತೆ ಅಪಘಾತವೆಂದು ನಂಬಿಸಿದ್ದರು! ತನಿಖೆಯಲ್ಲಿ ಬಯಲಾಯ್ತು ಹೆಂಡತಿಯೇ ಹೆಣೆದ ಭೀಕರ ಕೊಲೆ ಸಂಚು

ತಿರುಪತಿ: ಬೆಳಗ್ಗೆ ಹೆದ್ದಾರಿ ಪಕ್ಕದಲ್ಲಿ ವ್ಯಕ್ತಿಯೊಬ್ಬ ರಕ್ತದ ಮಡುವಿನಲ್ಲಿ ಶವವಾಗಿ ಪತ್ತೆಯಾದಾಗ, ಸ್ಥಳೀಯರು ಹಾಗೂ ಪೊಲೀಸರು ಇದೊಂದು ಭೀಕರ ರಸ್ತೆ…

11 hours ago

ಡೇಟಿಂಗ್ ಆ್ಯಪ್‌ ಮೂಲಕ ‘ಹನಿ ಟ್ರ್ಯಾಪ್’! ಶ್ರೀಮಂತ ಪುರುಷರನ್ನು ಬಲೆಗೆ ಬೀಳಿಸಿ ₹6 ಕೋಟಿಗೂ ಅಧಿಕ ಲೂಟಿ

ಪ್ರಯಾಗ್‌ರಾಜ್: ಡೇಟಿಂಗ್ ಆ್ಯಪ್‌ಗಳು ಹಾಗೂ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಶ್ರೀಮಂತ ಪುರುಷರನ್ನು ಹನಿ ಟ್ರ್ಯಾಪ್ ಬಲೆಗೆ ಬೀಳಿಸಿ, ಬಳಿಕ ಬೆದರಿಕೆ…

11 hours ago

ರೇಣುಕಾಸ್ವಾಮಿ ಮೇಲೆ ದರ್ಶನ್‌ ಹಲ್ಲೆ ಆರೋಪ: ಜನನಾಂಗಕ್ಕೆ ಒದ್ದು, ಎದೆ ಮೇಲೆ ಕಾಲಿಟ್ಟು ತುಳಿದಿದ್ದರೆಂದು ಮಾಫಿ ಸಾಕ್ಷಿ ಹೇಳಿಕೆ!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಲು…

11 hours ago