Categories: Latest

ಬ್ರೇಕಪ್‌ ಅಲ್ಲ, ಸ್ನೇಹಿತನ ನಿಧನದಿಂದ ದುಃಖ: ವೈರಲ್‌ ವಿವಾದಕ್ಕೆ ಸೋನು ಗೌಡ ಸ್ಪಷ್ಟನೆ

ಸೋಶಿಯಲ್‌ ಮೀಡಿಯಾದಲ್ಲಿ ಇತ್ತೀಚೆಗೆ ವೈರಲ್‌ ಆದ ಫೋಟೋ ಹಾಗೂ ವಿಡಿಯೋಗಳ ಹಿನ್ನೆಲೆ, ತಮಗೆ ಬ್ರೇಕಪ್‌ ಆಗಿದೆ ಎಂಬ ಸುದ್ದಿಗಳಿಗೆ ನಟಿ ಸೋನು ಗೌಡ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ವಿಡಿಯೋ ಮೂಲಕ ಮಾತನಾಡಿದ ಅವರು, “ನನಗೆ ಯಾವುದೇ ರೀತಿಯ ಬ್ರೇಕಪ್‌ ಆಗಿಲ್ಲ” ಎಂದು ಹೇಳಿದ್ದಾರೆ.

ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಮಾತನಾಡಿದ ಸೋನು, “ನನ್ನ ಜೀವನದಲ್ಲಿ ನನ್ನ ಮನೆಯಲ್ಲಿರುವ ನಾಯಿಗಳು ನನಗೆ ತುಂಬ ಪ್ರಿಯ. ಬ್ರೇಕಪ್‌ ಆಯಿತಾ ಎಂದು ಸಾಕಷ್ಟು ಜನ ಕಾಮೆಂಟ್‌ ಮಾಡುತ್ತಿದ್ದಾರೆ. ಆದರೆ ಇದು ನಿಜವಲ್ಲ. ಅನಾರೋಗ್ಯದಿಂದ ನನ್ನ ಸ್ನೇಹಿತನೊಬ್ಬರು ಮೃತಪಟ್ಟಿದ್ದಾರೆ. ಅದರಿಂದ ನನಗೆ ತುಂಬ ದುಃಖವಾಗಿದೆ” ಎಂದು ತಿಳಿಸಿದ್ದಾರೆ.

ಅವರು ಮುಂದುವರೆದು, “ನಾಲ್ಕು ವರ್ಷಗಳ ಹಿಂದೆ ನಾವು ರಿಲೇಶನ್‌ಶಿಪ್‌ನಲ್ಲಿ ಇದ್ದೆವು. ನಂತರ ಕೆಲ ಕಾರಣಗಳಿಂದ ಬೇರ್ಪಟ್ಟೆವು. ಆ ನೆನಪುಗಳನ್ನು ಮರೆತೇ ಬಿಡಬೇಕು ಎಂದರೂ ಸಾಧ್ಯವಾಗುತ್ತಿಲ್ಲ. ಅವರು ನನ್ನನ್ನು ಸಂಪರ್ಕಿಸಲು ಸಾಕಷ್ಟು ಪ್ರಯತ್ನಿಸಿದ್ದರು. ಆದರೆ ನಾನು ಮಾತನಾಡಲು ಸಾಧ್ಯವಾಗಲಿಲ್ಲ. ಅದಕ್ಕಾಗಿ ಈಗ ಪಶ್ಚಾತ್ತಾಪವಾಗುತ್ತಿದೆ” ಎಂದು ಹೇಳಿದ್ದಾರೆ.

ಸೋನು ಗೌಡ ಅವರು ತಮ್ಮ ಭಾವನೆಗಳನ್ನು ಹಂಚಿಕೊಂಡು, “ಅವರು ನನಗೆ ಮೇಲ್‌ ಮಾಡಿದ್ದರು. ಆದರೆ ನಾನು ಸಾಮಾನ್ಯವಾಗಿ ಮೇಲ್‌ಗಳನ್ನು ಓದುವುದಿಲ್ಲ. ಹೀಗಾಗಿ ಅದು ಗಮನಕ್ಕೆ ಬಂದಿಲ್ಲ. ಈಗ ಅದನ್ನು ಓದಿದ ಮೇಲೆ ತುಂಬ ಬೇಸರವಾಗುತ್ತಿದೆ. ಇದು ಯಾವುದೇ ನಾಟಕವಲ್ಲ, ನಿಜವಾದ ಭಾವನೆ. ನೆಗೆಟಿವ್‌ ಕಾಮೆಂಟ್‌ಗಳ ಬಗ್ಗೆ ನಾನು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ” ಎಂದು ಹೇಳಿದ್ದಾರೆ.

ಅವರ ಸ್ನೇಹಿತ ಕಳುಹಿಸಿದ್ದ ಕೊನೆಯ ಸಂದೇಶದ ಬಗ್ಗೆ ಮಾತನಾಡಿದ ಅವರು, “ನಾಳೆ ಬದುಕಿರುತ್ತೀನೋ ಇಲ್ಲವೋ ಗೊತ್ತಿಲ್ಲ. ನಿನಗೆ ಮಾತಾಡಬೇಕು ಅನ್ನಿಸುತ್ತಿದೆ, ಆದರೆ ಆಗುವುದಿಲ್ಲ ಅನಿಸುತ್ತಿದೆ. ನನಗೆ ಏನಾದರೂ ಆದರೆ ನೋಡಲು ಬರಬೇಡ, ದುಃಖಪಡಬೇಡ. ಮುಂದೆ ಜನ್ಮ ಇದ್ದರೆ ಮತ್ತೆ ಸಿಗು, ಮಿಸ್‌ ಯು” ಎಂದು ಮಾರ್ಚ್‌ 24ರಂದು ಮೇಲ್‌ ಮಾಡಿದ್ದರು. ಸಾವಿರ ಮೇಲ್‌ಗಳ ನಡುವೆ ಈ ಒಂದು ಮೇಲ್‌ ಈಗ ನನ್ನನ್ನು ಹೆಚ್ಚು ಕಾಡುತ್ತಿದೆ” ಎಂದು ತಿಳಿಸಿದ್ದಾರೆ.

ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ಭಾವನೆಗಳನ್ನು ಹಂಚಿಕೊಂಡದ್ದಕ್ಕೆ ಕೆಲವರು ನೆಗೆಟಿವ್‌ ಪ್ರತಿಕ್ರಿಯೆ ನೀಡುತ್ತಿರುವ ಬಗ್ಗೆ ಅವರು ಬೇಸರ ವ್ಯಕ್ತಪಡಿಸಿದರು. “ನಾಲ್ಕು ವರ್ಷ ಪ್ರೀತಿ ಮಾಡಿದ ವ್ಯಕ್ತಿ ಬಗ್ಗೆ ಫೀಲ್‌ ಆಗೋದು ತಪ್ಪೇನು? ನಾನು ದುಃಖದಲ್ಲಿದ್ದಾಗ ವಿಡಿಯೋ ಹಂಚಿಕೊಂಡರೆ ಅದನ್ನು ಸಿಂಪಥಿ ಎಂದು ಹೇಳುತ್ತಾರೆ. ಆದರೆ ಕೆಲವರು ಪಾಸಿಟಿವ್‌ ಆಗಿ ಮಾತನಾಡಿದ್ದು ಖುಷಿಯಾಗಿದೆ” ಎಂದು ಸೋನು ಗೌಡ ಹೇಳಿದ್ದಾರೆ.

ಭ್ರಷ್ಟರ ಬೇಟೆ

Recent Posts

ಪತ್ನಿಯ ಮೇಲಿನ ಬಲವಂತದ ಸಂಭೋಗ ಆರೋಪ: ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಿರಾಕರಣೆ

ಪ್ರತ್ಯೇಕವಾಗಿ ವಾಸಿಸುತ್ತಿದ್ದ ಪತ್ನಿಯೊಂದಿಗೆ ಬಲವಂತದ ಸಂಭೋಗ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಪತಿಯೊಬ್ಬರ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸಲು ಹೈಕೋರ್ಟ್…

1 hour ago

ಕೊಪ್ಪಳದಲ್ಲಿ ‘ಲವ್ ಜಿಹಾದ್’ ಆರೋಪ: ಮುಸ್ತಫಾ ಖಾದ್ರಿ ವಿರುದ್ಧ ಹೊಸ ವಿಡಿಯೋ ವೈರಲ್, ಬ್ಲಾಕ್‌ಮೇಲ್ ಶಂಕೆ

ಕೊಪ್ಪಳ ಜಿಲ್ಲೆಯಲ್ಲಿ ಭಾರೀ ಸಂಚಲನ ಸೃಷ್ಟಿಸಿರುವ ಮುಸ್ತಫಾ ಖಾದ್ರಿ ವಿರುದ್ಧದ ‘ಲವ್ ಜಿಹಾದ್’ ಆರೋಪ ಪ್ರಕರಣದಲ್ಲಿ ಇದೀಗ ಮತ್ತೊಂದು ಹೊಸ…

1 hour ago

ನೆಲಮಂಗಲದಲ್ಲಿ ಲಂಚದ ಜಾಲ ಬಯಲು: ಇಬ್ಬರು ಆರ್‌ಟಿಓ ಅಧಿಕಾರಿಗಳು ಲೋಕಾಯುಕ್ತ ಬಲೆಗೆ

ಬೆಂಗಳೂರು ಹೊರವಲಯದ ನೆಲಮಂಗಲದಲ್ಲಿ ವಾಹನ ಚಾಲಕರಿಂದ ಲಂಚ ಸ್ವೀಕರಿಸುತ್ತಿದ್ದ ಇಬ್ಬರು ಆರ್‌ಟಿಓ ಅಧಿಕಾರಿಗಳು ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದ ಘಟನೆ…

4 hours ago

ತಪ್ಪು ಅರ್ಥದ ದ್ವೇಷವೇ ಕಾರಣ: ಧಾರವಾಡದಲ್ಲಿ ಕಾಂಗ್ರೆಸ್ ಯುವ ಮುಖಂಡ ಫೈರೋಜ್ ಪಠಾಣ್ ಕೊಲೆ ಪ್ರಕರಣಕ್ಕೆ ತಿರುವು

ಧಾರವಾಡ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ್ದ ಕಾಂಗ್ರೆಸ್ ಯುವ ಮುಖಂಡ ಫೈರೋಜ್ ಪಠಾಣ್ ಅವರ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ…

9 hours ago

ಗಂಡನನ್ನು ಬಿಟ್ಟು ಪ್ರಿಯಕರನೊಂದಿಗೆ ಓಡಿ ಹೋದ ಯುವತಿ: ಕುಟುಂಬಸ್ಥರಿಂದ ಯುವತಿಯ ಹತ್ಯೆ, ಶವ ಸುಟ್ಟು ಸಾಕ್ಷ್ಯ ನಾಶ ಯತ್ನ

ಬೆಳಗಾವಿ ಜಿಲ್ಲೆಯ ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾನವೀಯತೆ ಮೀರಿದ ದಾರುಣ ಘಟನೆ ಬೆಳಕಿಗೆ ಬಂದಿದೆ. ಪತಿಯನ್ನು ಬಿಟ್ಟು ಪ್ರಿಯಕರನೊಂದಿಗೆ…

10 hours ago

ರಸ್ತೆ ಕಾಮಗಾರಿಯಲ್ಲಿ ನಿರ್ಲಕ್ಷ್ಯ: ಧೂಳಿನ ಕಾಟದಿಂದ ನರಳುತ್ತಿರುವ ಮೇಡ್ಲೇರಿ ಭಾಗದ ಜನರು

ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಮೇಡ್ಲೇರಿ ಹೋಬಳಿಯ ಮುಖ್ಯ ರಸ್ತೆಯಲ್ಲಿ ನಡೆಯುತ್ತಿರುವ ಕಾಮಗಾರಿ ಜನರಿಗೆ ಸಂಕಷ್ಟದ ಕಾರಣವಾಗಿದೆ. ಈಗಾಗಲೇ ಇದ್ದ…

10 hours ago