ಮಂಡ್ಯ ಜಿಲ್ಲಾ, ಕೃಷ್ಣರಾಜಪೇಟೆ ತಾಲೋಕು, ಬೂಕನಕೆರೆ ಹೋಬಳಿಯ ರಸ್ತೆಗಳ ದುಸ್ಥಿತಿ. ಬೂಕನಕೆರೆ ಗ್ರಾಮವು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನವರ ತವರು ಗ್ರಾಮವಾಗಿದ್ದರು ಸಾಕಷ್ಟು ಮೂಲಭೂತ ಸೌಕರ್ಯ ವಿಲ್ಲದೆ ಸಾಕಷ್ಟು ಸಮಸ್ಯೆಗಳು ತಾಂಡವವಡುತಿದ್ದೆ. ಈ ಗ್ರಾಮವನ್ನು ಅಭಿರುದ್ದಿ ಮಾಡುವೆವೆಂದು ರಾಜಕೀಯ ನಾಯಕರ ಆಶ್ವಾಸನೆಗಳು ಇನ್ನು ಜನರಿಗೆ ಸಿಕ್ಕಿಲ್ಲ!. ಈ ಗ್ರಾಮವು ಹೋಬಳಿಯ ಎಲ್ಲ ರೈತರ, ಕಾರ್ಮಿಕರ ಕೇಂದ್ರವಾಗಿದ್ದರು ಸಹ ಇಲ್ಲಿನ ರಸ್ತೆಗಳು ಹದಗೆಟ್ಟಿದೆ. ಬೂಕನಕೆರೆ ಸರ್ಕಲಿಂದ ಮೈಸೂರಿಗೆ ಹೋಗುವ ರಸ್ತೆಯ ಚಿತ್ರಣಗಳಿವು. ಇದೆ ರಸ್ತೆಯಲ್ಲಿ ಸಾವಿರಾರು ಜನರು, ದೊಡ್ಡ ದೊಡ್ಡ ವಾಹನಗಳು, ಲಾರಿ, ಬಸ್, ಸ್ಕೂಟರ್ ಗಳನ್ನು ದಿನನಿತ್ಯದ ಹೊಡಾಟಕಾಗಿ ಉಪಯೋಗಿಸುತ್ತಾರೆ ಹಾಗು ರೈತರು ದಿನ ನಿತ್ಯ ತಮ್ಮ ಕೆಲಸಕ್ಕಾಗಿ ಎತ್ತಿನ ಬಂಡಿ ಹಸು ಕರುಗಳ ಹೋದಾಟಕ್ಕೆ ಈ ರಸ್ತೆ ಬಳಸುತ್ತಿದಾರೆ. ಈ ರಸ್ತೆಯು ಮೈಸೂರಿಗೆ ಸಂಪರ್ಕ ಕಲ್ಪಿಸಿ ಕೊಡುವ ರಸ್ತೆಯಾಗಿದ್ದರು ಈ ರಸ್ತೆಯ ಅವ್ಯವಸ್ಥೆ ಈ ರೀತಿ ಕಾಣುತಿದೆ. ಈ ರಸ್ತೆಯಲ್ಲಿ ಸಾಕಷ್ಟು ಗುಂಡಿಗಳು ಇದ್ದರು ಅವುಗಳ ಮುಚ್ಚುವ ಹೆಸರಲ್ಲಿ ದುಡ್ಡು ಮಾಡಿದ್ದಾರೆ ವಿನಹ ಅವುಗಳನ್ನು ಸರಿ ಪಡಿಸಿಲ್ಲ ಮಳೆಯಾದರೆ ರಸ್ತೆಗಳು ಕೆರೆಯಂತೆ ಕಾಣುತ್ತವೆ ಮಳೆಗಾಲದಲ್ಲಿ ರಸ್ತೆ ಸರಿಯಾಗಿ ಕಾಣದೆ ಜನರು ಬಿದ್ದು ಕೈ ಕಾಲು ಮುರುದುಕೊಂಡಿರುತ್ತಾರೆ ಹಾಗು ಸಾಕಷ್ಟು ವಾಹನಗಳು ಕೆಟ್ಟಿದ್ದು ಉಂಟು. ಇನ್ನಾದರೂ ಇಲಾಖೆಯ ಅಧಿಕಾರಿಗಳು ಕ್ರಮವಹಿಸಬೇಕೆಂದು ಸಾಕಷ್ಟು ಸಾರ್ವಜನಿಕರು ಕೇಳುತಿದ್ದಾರೆ.
ವರದಿ: ಎಲ್.ಎನ್ ಮೂರ್ತಿ
ಹೈದರಾಬಾದ್: ಬಣ್ಣದ ಲೋಕದಲ್ಲಿ ಮತ್ತೆ ವಂಚನೆ ಆರೋಪ ಕೇಳಿಬಂದಿದ್ದು, ತೆಲುಗು ಬಿಗ್ಬಾಸ್ ಮೂಲಕ ಜನಪ್ರಿಯತೆ ಪಡೆದ ನಟಿ ಆಶು ರೆಡ್ಡಿ…
ಧಾರವಾಡ: 20 ವರ್ಷದ ಆದಿತ್ಯ ಮ್ಯಾಗೇರಿ ಆತ್ಮಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಇದೀಗ ಪೊಲೀಸರ ವಿರುದ್ಧ…
ಶೇಕ್ಪೇಟ್: ಪಶುಗಳ ಚಿಕಿತ್ಸೆಯ ಹೆಸರಿನಲ್ಲಿ ನಡೆದಿದ್ದ ಅಮಾನವೀಯ ದಂಧೆಯೊಂದು ಬೆಳಕಿಗೆ ಬಂದು ಸಾರ್ವಜನಿಕರಲ್ಲಿ ಆಕ್ರೋಶ ಹುಟ್ಟಿಸಿದೆ. ಖಾಸಗಿ ಪಶು ವೈದ್ಯಕೀಯ…
ಧಾರವಾಡ: ಗಾಂಜಾ ಪ್ರಕರಣದಲ್ಲಿ ಹೆಸರು ಸೇರಿಸಲಾಗುತ್ತದೆ ಎಂಬ ಭಯದಿಂದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ಈ ಪ್ರಕರಣದಲ್ಲಿ…
ಬೆಂಗಳೂರು: ಸಾರ್ವಜನಿಕ ಸ್ಥಳದಲ್ಲಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದ ಆರೋಪದ ಮೇರೆಗೆ ಆರು ವಿದೇಶಿ ಮಹಿಳೆಯರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ…
ಬೆಂಗಳೂರು: ರಾಜ್ಯ ಕಾಂಗ್ರೆಸ್ನೊಳಗಿನ ನಾಯಕತ್ವದ ಗೊಂದಲ ಮತ್ತು ಅಸಮಾಧಾನದ ನಡುವೆಯೇ ಅಹಿಂದ ಸಂಘಟನೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಪಕ್ಷವು ಅಹಿಂದ…