Categories: CrimeLatest

4 ವರ್ಷಗಳಾದರೂ ಬಯಲಾಗದ ACF ಸಾವು ರಹಸ್ಯ: ಪತ್ನಿ ಆರೋಪಿಯೇ, ಅಥವಾ ನಿರಪರಾಧಿಯೇ?

ಒಡಿಶಾ: ನಾಲ್ಕು ವರ್ಷಗಳ ಹಿಂದೆ ನಡೆದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF) ಸೌಮ್ಯರಂಜನ್ ಮೊಹಾಪಾತ್ರ ಅವರ ಅನುಮಾನಾಸ್ಪದ ಸಾವು ಪ್ರಕರಣ ಇಂದಿಗೂ ನಿಗೂಢವಾಗಿಯೇ ಉಳಿದಿದೆ. ಇದು ಕೊಲೆಯೋ ಅಥವಾ ಆಕಸ್ಮಿಕ ಅವಘಡವೋ ಎಂಬ ಪ್ರಶ್ನೆಗೆ ಇನ್ನೂ ಸ್ಪಷ್ಟ ಉತ್ತರ ದೊರಕಿಲ್ಲ. ಪ್ರಕರಣದಲ್ಲಿ ಮೃತರ ಪತ್ನಿ ವಿದ್ಯಾಭಾರತಿ ಪಂಡಾ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿದ್ದರೂ, ತನಿಖಾ ವರದಿಗಳು ಮತ್ತು ನ್ಯಾಯಾಂಗ ಪ್ರಕ್ರಿಯೆಗಳು ವಿಭಿನ್ನ ತಿರುವುಗಳನ್ನು ಪಡೆದುಕೊಂಡಿವೆ.

2021ರ ಜುಲೈನಲ್ಲಿ ಪಾರ್ಲಾಖೇಮುಂಡಿಯ ಸರ್ಕಾರಿ ನಿವಾಸದಲ್ಲಿ ಸೌಮ್ಯರಂಜನ್ ಅವರು ಶೇ.90ರಷ್ಟು ಸುಟ್ಟ ಗಾಯಗಳೊಂದಿಗೆ ಪತ್ತೆಯಾಗಿದ್ದರು. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮರುದಿನ ಅವರು ಮೃತಪಟ್ಟರು. ಘಟನೆ ಸಂಭವಿಸಿದ ವೇಳೆ ಅವರ ಪತ್ನಿ ವಿದ್ಯಾಭಾರತಿ ಮನೆಯಲ್ಲೇ ಇದ್ದರು ಎನ್ನಲಾಗಿದೆ.

ಘಟನೆಯ ಬಳಿಕ ಮೃತರ ತಂದೆ, ತಮ್ಮ ಸೊಸೆ ವಿದ್ಯಾಭಾರತಿ, ಸ್ಥಳೀಯ ವಿಭಾಗೀಯ ಅರಣ್ಯಾಧಿಕಾರಿ (DFO) ಸಂಗ್ರಾಮ್ ಬೆಹೆರಾ ಹಾಗೂ ಅಡುಗೆಯವ ಸೇರಿ ಸಂಚು ರೂಪಿಸಿ ತಮ್ಮ ಮಗನನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು. ಪತ್ನಿ ಮತ್ತು ಡಿಎಫ್‌ಒ ನಡುವೆ ಅಕ್ರಮ ಸಂಬಂಧವಿದ್ದು, ಅದನ್ನು ಪ್ರಶ್ನಿಸಿದ್ದರಿಂದಲೇ ಕೊಲೆ ನಡೆದಿದೆ ಎಂಬ ಆರೋಪವನ್ನೂ ಅವರು ಮುಂದಿಟ್ಟಿದ್ದರು.

ಪ್ರಕರಣದ ತನಿಖೆ ನಡೆಸಿದ ಒಡಿಶಾ ಕ್ರೈಮ್ ಬ್ರಾಂಚ್‌ಗೆ ಕೊಲೆ ಅಥವಾ ಅಕ್ರಮ ಸಂಬಂಧಕ್ಕೆ ಸಂಬಂಧಿಸಿದ ಯಾವುದೇ ದೃಢ ಸಾಕ್ಷ್ಯ ಸಿಗಲಿಲ್ಲ. ತನಿಖಾ ಸಂಸ್ಥೆ ಇದನ್ನು ಆಕಸ್ಮಿಕ ಬೆಂಕಿ ಅವಘಡ ಎಂದು ಪರಿಗಣಿಸಿ, ವಿದ್ಯಾಭಾರತಿ ವಿರುದ್ಧದ ಕೊಲೆ ಆರೋಪವನ್ನು ಕೈಬಿಟ್ಟು ನಿರ್ಲಕ್ಷ್ಯದ ಪ್ರಕರಣವನ್ನಷ್ಟೇ ದಾಖಲಿಸಿತು.

ಆದರೆ ಈ ತೀರ್ಮಾನವನ್ನು ಒಪ್ಪದ ಮೃತರ ತಂದೆ ನ್ಯಾಯಾಲಯದ ಮೊರೆ ಹೋದರು. ಅವರ ಅರ್ಜಿಯನ್ನು ಪರಿಗಣಿಸಿದ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು 2023ರಲ್ಲಿ ವಿದ್ಯಾಭಾರತಿ, ಡಿಎಫ್‌ಒ ಸಂಗ್ರಾಮ್ ಬೆಹೆರಾ ಹಾಗೂ ಅಡುಗೆಯವರ ವಿರುದ್ಧ ಕೊಲೆ ಪ್ರಕರಣದ ವಿಚಾರಣೆ ಮುಂದುವರಿಸಲು ಆದೇಶಿಸಿತು. ಈ ಆದೇಶವನ್ನು ಪ್ರಶ್ನಿಸಿ ಡಿಎಫ್‌ಒ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ್ದು, ಮುಂಗಡ ಜಾಮೀನು ನಿರಾಕರಣೆಯಾದ ಬಳಿಕ ಅವರು ನ್ಯಾಯಾಲಯಕ್ಕೆ ಶರಣಾಗಿದ್ದಾರೆ. ಇದೇ ವೇಳೆ ವಿದ್ಯಾಭಾರತಿ ಅವರಿಗೆ ಮಧ್ಯಂತರ ಕಾನೂನು ರಕ್ಷಣೆ ಲಭಿಸಿದೆ.

ಒಂದೆಡೆ ರಾಜ್ಯದ ತನಿಖಾ ಸಂಸ್ಥೆ ಇದು ಆಕಸ್ಮಿಕ ಘಟನೆ ಎಂದು ಹೇಳುತ್ತಿದ್ದರೆ, ಮತ್ತೊಂದೆಡೆ ಮೃತರ ಕುಟುಂಬ ಕೊಲೆ ಹಾಗೂ ಅಕ್ರಮ ಸಂಬಂಧದ ಆರೋಪವನ್ನು ಮುಂದುವರಿಸಿದೆ. ನಾಲ್ಕು ವರ್ಷಗಳಿಂದ ಉತ್ತರ ಸಿಗದ ಈ ಪ್ರಕರಣದ ವಿಚಾರಣೆ ಇದೀಗ ಅಂತಿಮ ಹಂತದತ್ತ ಸಾಗುತ್ತಿದ್ದು, ನ್ಯಾಯಾಲಯದ ತೀರ್ಪು ಈ ಬಹುಚರ್ಚಿತ ಪ್ರಕರಣದ ನಿಗೂಢತೆಗೆ ತೆರೆ ಎಳೆಯುವ ನಿರೀಕ್ಷೆ ಮೂಡಿಸಿದೆ.

ಭ್ರಷ್ಟರ ಬೇಟೆ

Recent Posts

ಮೀಸಲಾತಿ ಕುರಿತು ಅವಹೇಳನಕಾರಿ ಹೇಳಿಕೆ: ನಿರೂಪಕ ಅರುಣ್ ಬಡಿಗೇರ್ ವಿರುದ್ಧ ನೆಲಮಂಗಲದಲ್ಲಿ ದೂರು ದಾಖಲು

ನೆಲಮಂಗಲ: ಮೀಸಲಾತಿ ಕುರಿತು ಅವಹೇಳನಕಾರಿ ಹಾಗೂ ಸಮಾಜದಲ್ಲಿ ದ್ವೇಷ ಮತ್ತು ವಿಭಜನೆಗೆ ಕಾರಣವಾಗುವ ರೀತಿಯ ಹೇಳಿಕೆಗಳನ್ನು ನೀಡಿದ ಆರೋಪದಡಿ ಖಾಸಗಿ…

12 hours ago

ಮಲತಾಯಿ ಜೊತೆ ಆಕ್ರಮ ಸಂಬಂಧ, ಬೇರೆ ಮದುವೆಯಾಗಲು ಹೊರಟ ಸವತಿ ಮಗನನ್ನು ಕೊಲ್ಲಿಸೇ ಬಿಟ್ಟಳು..!

ತೆಲಂಗಾಣದ ನಿರ್ಮಲ್ ಜಿಲ್ಲೆಯಲ್ಲಿ ತಾಯಿ-ಮಗನ ಪವಿತ್ರ ಬಾಂಧವ್ಯಕ್ಕೆ ಕಳಂಕ ತರುವಂತಹ ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ ಬಂದಿದೆ. ಸವತಿ ಮಗನೊಂದಿಗೆ ಅನೈತಿಕ…

12 hours ago

MLC ಸ್ಥಾನ ಕೊಡಿಸುವುದಾಗಿ ₹1.5 ಕೋಟಿ ವಂಚನೆ; ಕಾಂಗ್ರೆಸ್ ನಾಯಕರ ಹೆಸರು ಬಳಸಿ ಮಹಿಳೆಗೆ ಮೋಸ, ಲೈಂಗಿಕ ಕಿರುಕುಳ ಆರೋಪ!

ಬೆಂಗಳೂರು: ಕಾಂಗ್ರೆಸ್‌ನ ಪ್ರಭಾವಿ ನಾಯಕರ ಮಾಧ್ಯಮ ಸಲಹೆಗಾರ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ, MLC ಸ್ಥಾನ ಕೊಡಿಸುವುದಾಗಿ ನಂಬಿಸಿ ಮಹಿಳೆಯೊಬ್ಬರಿಗೆ ₹1.50…

12 hours ago

ಮದುವೆಯಾಗು ಎಂದು ಪೀಡಿಸುತ್ತಿದ್ದ ಪ್ರಿಯತಮೆಯನ್ನೇ ಬೈಕ್ ನಲ್ಲಿ ಎಳೆದುಕೊಂಡು ಹೋದ ಪ್ರಿಯಕರ! 100 ಮೀಟರ್ ಭೀಕರ ದೃಶ್ಯ ವೈರಲ್

ಬಿಹಾರ: ಮದುವೆಯಾಗುವ ಭರವಸೆ ನೀಡಿ ಬಳಿಕ ನಿರಾಕರಿಸಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಜಗಳವು ಭೀಕರ ಸ್ವರೂಪ ಪಡೆದುಕೊಂಡಿದ್ದು, ಮಹಿಳೆಯೊಬ್ಬರನ್ನು ಬೈಕ್‌ನಲ್ಲಿ…

12 hours ago

ಹುಟ್ಟಿದ ಎರಡು ದಿನದಲ್ಲೇ ಮಗುವನ್ನು ಆಸ್ಪತ್ರೆಯಲ್ಲಿ ಬಿಟ್ಟು ತಾಯಿ ನಾಪತ್ತೆ; NICUನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಂದಮ್ಮ

ಚಿಕ್ಕಬಳ್ಳಾಪುರದಲ್ಲಿ ಮನಕಲಕುವ ಘಟನೆಯೊಂದು ಬೆಳಕಿಗೆ ಬಂದಿದ್ದು, ಜನಿಸಿದ ಕೇವಲ ಎರಡು ದಿನಗಳ ಗಂಡು ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ತಾಯಿ ನಾಪತ್ತೆಯಾಗಿರುವ…

12 hours ago

ಕನಸಿನ ಮನೆಯ ಸಾಲವೇ ಕುಟುಂಬಕ್ಕೆ ಸಾವಿನ ಉರುಳು; ಪತ್ನಿ, ಮಕ್ಕಳ ಬಳಿಕ ಪತಿಯೂ ಕೊನೆಯುಸಿರು

ಕೋಲಾರ ತಾಲೂಕಿನ ಬೆಗ್ಲಿಬೆಣಜೇನಹಳ್ಳಿ ಗ್ರಾಮದಲ್ಲಿ ಸಾಲದ ಹೊರೆ ಮತ್ತು ಬಡ್ಡಿ ಕಿರುಕುಳದಿಂದ ಒಂದೇ ಕುಟುಂಬ ಸಂಪೂರ್ಣವಾಗಿ ನಾಶವಾದ ಮನಕಲಕುವ ಘಟನೆ…

12 hours ago