ಮೈಸೂರು, ಆಗಸ್ಟ್ 5 – ಮೈಸೂರಿನ ಸರಗೂರು ತಾಲೂಕಿನ ಬಲದಂಡೆ ನಾಲೆ ಬಳಿ ಅತೀ ಶಿಥಿಲಗೊಂಡ ಹಳೆಯ ಸೇತುವೆ ಕುಸಿದಿದ್ದು, ತಮಿಳುನಾಡಿಗೆ ಭತ್ತ ಸಾಗಿಸುತ್ತಿದ್ದ ಲಾರಿಯೊಂದು ನದಿಗೆ ಬಿದ್ದಿದೆ. ಅದೃಷ್ಟವಶಾತ್ ಈ ಭೀಕರ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಇಟ್ನ ಗ್ರಾಮದ ಬಳಿಯಿಂದ ಭತ್ತ ತುಂಬಿಕೊಂಡು ಹೊರಟಿದ್ದ TN 52 8333 ಸಂಖ್ಯೆಯ ಲಾರಿ, ರಾತ್ರಿ ವೇಳೆ ಸಂಬಂಧಿತ ನಿಷೇಧಗಳನ್ನು ಉಲ್ಲಂಘಿಸಿ ಸೇತುವೆ ಮೂಲಕ ಸಾಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಪೊಲೀಸ್ ಇಲಾಖೆ ಹಾಗೂ ಕಬಿನಿ ಜಲಾಶಯದ ಅಧಿಕಾರಿಗಳು ಕಳೆದ ಕೆಲವು ತಿಂಗಳಿಂದ ಈ ಸೇತುವೆಯ ಸುರಕ್ಷತೆಯ ಬಗ್ಗೆ ಎಚ್ಚರಿಕೆ ನೀಡುತ್ತಾ ಬಂದಿದ್ದರು. ಆದರೆ, ರಾತ್ರಿ ಸಮಯದಲ್ಲಿ ಬ್ಯಾರಿಕೇಡ್ ತೆರಳಿಸಿ ಲಾರಿಯು ಸೇತುವೆ ಮೂಲಕ ಸಾಗಲಾಗಿದೆ.
“ಸೇತುವೆ ಶಿಥಿಲವಾಗಿದೆ ಎಂಬ ಮಾಹಿತಿ ಇದ್ದರೂ, ನಿಯಮ ಉಲ್ಲಂಘಿಸಿ ಭಾರೀ ವಾಹನಗಳು ಅಲ್ಲಿ ಸಾಗುತ್ತಿದ್ದವು. ತೂಕದ ಬಲಕ್ಕೆ ಸೇತುವೆ ಕುಸಿತವು ಸಂಭವಿಸಿದೆ,” ಎಂದು ಕಾರ್ಯಪಾಲಕ ಅಭಿಯಂತ್ರಿ ಕೆ. ಉಷಾ ಸ್ಪಷ್ಟಪಡಿಸಿದರು.
ಘಟನೆ ನಂತರ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲವೆಂದು ಆರೋಪಿಸಿದ್ದಾರೆ. ಇದೀಗ ಈ ಸೇತುವೆ ಕುಸಿತದಿಂದ ಶ್ರೀ ಚಿಕ್ಕದೇವಮ್ಮ ಬೆಟ್ಟದ ದರ್ಶನಕ್ಕೆ ಹೋಗುವ ಪ್ರಮುಖ ಸಂಪರ್ಕ ಕಡಿದುಹೋಗಿದ್ದು, ಹತ್ತಾರು ಗ್ರಾಮಗಳ ಸಂಪರ್ಕಕ್ಕೂ ವ್ಯತ್ಯಯ ಉಂಟಾಗಿದೆ.
ಟೊರೊಂಟೊ: ಕೆನಡಾದ ಟೊರೊಂಟೊದಲ್ಲಿ ಭಾರತೀಯ ಮೂಲದ 30 ವರ್ಷದ ಯುವತಿ ಹಿಮಾಂಶಿ ಖುರಾನಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು…
ಮೀರಾಟ್: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಪ್ರೇಮಿಗಾಗಿ ತಾಯಿಯೊಬ್ಬಳು ತನ್ನ ಆರು ತಿಂಗಳ ಹಸುಗೂಸಿನ ಸಾವಿಗೆ ಕಾರಣಳಾದ ಆರೋಪ ಕೇಳಿಬಂದಿದ್ದು, ಉತ್ತರ…
163 ಕಿ.ಮೀ. ಉದ್ದದ ಯೋಜನೆ; ಉತ್ತರ ಕನ್ನಡದ 40 ಗ್ರಾಮಗಳು ಭೂಸ್ವಾಧೀನ ವ್ಯಾಪ್ತಿಗೆ ಉತ್ತರ ಕನ್ನಡ: ಹಲವು ವರ್ಷಗಳಿಂದ ನನೆಗುದಿಗೆ…
ಮಳೆ ಬಂದರೆ ಕೆಸರುಗದ್ದೆ; ವಿದ್ಯಾರ್ಥಿಗಳು, ವೃದ್ಧರು, ರೋಗಿಗಳ ಸಂಚಾರಕ್ಕೆ ಸಂಕಷ್ಟ — ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ ಕಾಗವಾಡ: ಬೆಳಗಾವಿ…
₹4.50 ಲಕ್ಷ ಮೌಲ್ಯದ ಚಿನ್ನ, ಕೃತ್ಯಕ್ಕೆ ಬಳಸಿದ್ದ ಬೈಕ್ ವಶ ಹಳಿಯಾಳ: ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಮಹಿಳೆಯೊಬ್ಬರ ಕೊರಳಲ್ಲಿದ್ದ ಚಿನ್ನದ…
ಸಿಸಿಟಿವಿ ಹಾಗೂ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯ ಪತ್ತೆ; ಬೈಕ್, ಹಣ ವಶ ಹೊನ್ನಾವರ: ಬ್ಯಾಂಕ್ನಿಂದ ಹಣ ಪಡೆದು ಹೊರಬಂದ…