Categories: CrimeLatest

2 ಕೋಟಿ ವಿಮೆಗಾಗಿ ಮಾಜಿ ಸೈನಿಕನ ಹತ್ಯೆ? ಪ್ರಿಯಕರನ ಸೆಲ್ಫಿ ವಿಡಿಯೋದಿಂದ ಬಯಲಾಯ್ತು ಭೀಕರ ರಹಸ್ಯ!

ಬೆಳಗಾವಿಯಲ್ಲಿ ಮಾಜಿ ಸೈನಿಕನ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ತಿರುವು ಸಿಕ್ಕಿದ್ದು, ಮೃತನ ಪತ್ನಿಯ ಪ್ರಿಯಕರನೊಬ್ಬ ಬಿಡುಗಡೆ ಮಾಡಿದ ಸೆಲ್ಫಿ ವಿಡಿಯೋ ಇದೀಗ ಪ್ರಕರಣದ ರಹಸ್ಯಗಳನ್ನು ಬಹಿರಂಗಪಡಿಸಿದೆ.

ಮೃತ ಮಾಜಿ ಸೈನಿಕ ಸಂದೀಪ್ ಅವರ ಪತ್ನಿ ಸುಮಾ ಹಾಗೂ ಆಕೆಯ ಪ್ರಿಯಕರ ಪುಂಡಲೀಕ ಗೋಡಗೇರಿ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ. ವಿಡಿಯೋದಲ್ಲಿ ಮಾತನಾಡಿರುವ ಪುಂಡಲೀಕ, ತಾನು ಎಗ್ ರೈಸ್ ಅಂಗಡಿ ನಡೆಸುತ್ತಿದ್ದ ವೇಳೆ ಸಂದೀಪ್ ಹಾಗೂ ಸುಮಾ ಪರಿಚಯವಾಗಿದ್ದರು ಎಂದು ಹೇಳಿದ್ದಾನೆ.

ಸುಮಾ ಮನೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಮದ್ಯ ಸಂಗ್ರಹಿಸಿಟ್ಟುಕೊಂಡಿದ್ದು, ಅದರಲ್ಲಿ ನಿದ್ದೆ ಮಾತ್ರೆಗಳನ್ನು ಬೆರೆಸಿ ಸಂದೀಪ್‌ಗೆ ನೀಡುತ್ತಿದ್ದಳು ಎಂದು ಪುಂಡಲೀಕ ಆರೋಪಿಸಿದ್ದಾನೆ. ಈ ಬಗ್ಗೆ ಪ್ರಶ್ನಿಸಿದಾಗ “ಗಂಡ ಸಾಯಲಿ” ಎಂದು ಸುಮಾ ಹೇಳುತ್ತಿದ್ದಳು ಎಂದು ಆತ ವಿಡಿಯೋದಲ್ಲಿ ತಿಳಿಸಿದ್ದಾನೆ.

ಒಮ್ಮೆ ಅಪಘಾತದಲ್ಲಿ ಗಾಯಗೊಂಡು ಸಂದೀಪ್ ಆಸ್ಪತ್ರೆಗೆ ದಾಖಲಾಗಿದ್ದಾಗ, ಸುಮಾ ತನ್ನಿಂದ ಹುಳುನಾಶಕ ಔಷಧಿ ತರಿಸಿಕೊಂಡಿದ್ದಳು. ತಾನು ಔಷಧಿ ತಂದುಕೊಟ್ಟ ಮರುದಿನವೇ ಸಂದೀಪ್ ಮೃತಪಟ್ಟಿದ್ದಾನೆ. ಬಳಿಕ ಔಷಧಿ ಸೇರಿದಂತೆ ಇತರೆ ವಸ್ತುಗಳನ್ನು ಎಲ್ಲಿಯಾದರೂ ಬಿಸಾಡುವಂತೆ ಸುಮಾ ಸೂಚಿಸಿದ್ದಳು ಎಂದು ಪುಂಡಲೀಕ ಹೇಳಿದ್ದಾನೆ.

ಇದರ ಜೊತೆಗೆ, ಗಂಡನ ಹೆಸರಿನಲ್ಲಿ ಸುಮಾರು 2 ಕೋಟಿ ರೂಪಾಯಿ ವಿಮೆ ಮಾಡಿಸಿರುವುದಾಗಿ ಹಾಗೂ ಗಂಡ ಮೃತಪಟ್ಟರೆ ವಿಮೆ ಹಣ ಸಿಗುತ್ತದೆ ಎಂದು ಸುಮಾ ಹೇಳಿದ್ದಳು ಎಂದು ಆತ ಆರೋಪಿಸಿದ್ದಾನೆ. ಬಳಿಕ ಇಬ್ಬರ ಮಕ್ಕಳನ್ನು ಕರೆದುಕೊಂಡು ಊರು ಬಿಟ್ಟು ಬೇರೆಡೆ ಜೀವನ ಆರಂಭಿಸುವ ಯೋಜನೆಯನ್ನೂ ಆಕೆ ಪ್ರಸ್ತಾಪಿಸಿದ್ದಳು ಎಂದು ಪುಂಡಲೀಕ ತಿಳಿಸಿದ್ದಾನೆ.

“ನಾನು ಸುಳ್ಳು ಹೇಳುತ್ತಿದ್ದರೆ ಜೈಲಿಗೆ ಹೋಗಲು ಸಿದ್ಧನಿದ್ದೇನೆ. ಸಂದೀಪ್ ಅವರ ಮೃತದೇಹದ ಮರು ಮರಣೋತ್ತರ ಪರೀಕ್ಷೆ ನಡೆಸಬೇಕು. ಸತ್ಯ ಹೊರಬರಬೇಕು ಮತ್ತು ವಿಮೆ ಹಣ ಸುಮಾಗೆ ಸಿಗಬಾರದು” ಎಂದು ಆತ ವಿಡಿಯೋದಲ್ಲಿ ಒತ್ತಾಯಿಸಿದ್ದಾನೆ.

ಇದೇ ವೇಳೆ ಹಣಕಾಸಿನ ವಿಚಾರದಲ್ಲಿ ಸುಮಾ ಮತ್ತು ಪುಂಡಲೀಕ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು ಎನ್ನಲಾಗಿದೆ. ಹಣದ ವಿಷಯವಾಗಿ ಹಲವು ಬಾರಿ ಇಬ್ಬರ ನಡುವೆ ಗಲಾಟೆಗಳು ನಡೆದಿದ್ದು, ಈ ವೇಳೆ ಪುಂಡಲೀಕ ತನ್ನ ಸ್ನೇಹಿತರ ಬಳಿ ಪ್ರಕರಣದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾನೆ. ಸ್ನೇಹಿತರು ಪೊಲೀಸರ ಮುಂದೆ ಸತ್ಯ ಹೇಳುವಂತೆ ಸಲಹೆ ನೀಡಿದ ಬಳಿಕ ಆತ ಪೊಲೀಸರನ್ನು ಸಂಪರ್ಕಿಸಿ ಎಲ್ಲಾ ಮಾಹಿತಿಯನ್ನು ನೀಡಿದ್ದಾನೆ.

ಪುಂಡಲೀಕ ನೀಡಿದ ಮಾಹಿತಿಯ ಆಧಾರದಲ್ಲಿ ಯಮಕನಮರಡಿ ಪೊಲೀಸರು ತನಿಖೆ ಮುಂದುವರಿಸಿದ್ದು, ವಿಚಾರಣೆ ವೇಳೆ ಸುಮಾ ತನ್ನ ಪತಿ ಸಂದೀಪ್ ಹತ್ಯೆಯಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾಳೆ ಎನ್ನಲಾಗಿದೆ. ಪ್ರಿಯಕರ ಪುಂಡಲೀಕನ ಸಹಾಯದಿಂದಲೇ ಹತ್ಯೆ ನಡೆಸಿರುವುದಾಗಿ ಆಕೆ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಸ್ತುತ ಆರೋಪಿಗಳಾದ ಸುಮಾ ಹಾಗೂ ಪುಂಡಲೀಕ ಪೊಲೀಸ್ ವಶದಲ್ಲಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

ಭ್ರಷ್ಟರ ಬೇಟೆ

Recent Posts

20 ದಿನಗಳಿಂದ ನೀರಿನ ಬವಣೆ: ಮುತ್ತಗಿ ಗ್ರಾಮಸ್ಥರ ಆಕ್ರೋಶ, ಹೋರಾಟದ ಎಚ್ಚರಿಕೆ

ಮುತ್ತಗಿ: ಬಸವನ ಬಾಗೇವಾಡಿ ತಾಲ್ಲೂಕಿನ ಮುತ್ತಗಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಕಳೆದ ಸುಮಾರು 20…

2 hours ago

₹11.82 ಕೋಟಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ಜಪ್ತಿ: ‘ಮಿಸೆಸ್ ಕೇರಳ 2025’ ವಿಜೇತೆ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧನ

ಮುಂಬೈ: ಹೈಡ್ರೋಪೋನಿಕ್ ಗಾಂಜಾವನ್ನು ಅಕ್ರಮವಾಗಿ ಭಾರತಕ್ಕೆ ಸಾಗಿಸುತ್ತಿದ್ದ ಆರೋಪದ ಮೇಲೆ 28 ವರ್ಷದ ಮಾಡೆಲ್ ಹಾಗೂ ‘ಮಿಸೆಸ್ ಕೇರಳ 2025’…

7 hours ago

ಪ್ರತಿ ಅಂತ್ಯಸಂಸ್ಕಾರದಲ್ಲೂ ತಪ್ಪದೆ ಹಾಜರಿ! ಡಂಬಳ ಗ್ರಾಮದ ಬಿಳಿ ನಾಯಿ ಮೂಡಿಸಿದ ವಿಸ್ಮಯ

ಡಂಬಳ: ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದಲ್ಲಿ ಅಪರೂಪದ ಹಾಗೂ ವಿಸ್ಮಯಕಾರಿ ಘಟನೆಯೊಂದು ಗ್ರಾಮಸ್ಥರ ಗಮನ ಸೆಳೆಯುತ್ತಿದೆ. ಗ್ರಾಮದ…

7 hours ago

ದಿನಕ್ಕೆ ₹2000 ಆದಾಯ ಕೇಳಿ ಶಾಕ್ ಆದ ಯುವತಿ; ಆಟೋ ಚಾಲಕನನ್ನೇ ಗಂಡನಾಗಿ ಆಯ್ಕೆ!

ಜೀವನದಲ್ಲಿ ನಮ್ಮ ಜೀವನ ಸಂಗಾತಿ ಯಾರು ಆಗುತ್ತಾರೆ ಎಂಬುದನ್ನು ಮುಂಚಿತವಾಗಿ ಊಹಿಸುವುದು ಅಸಾಧ್ಯ. ಕೆಲವೊಮ್ಮೆ ಒಂದು ಸಣ್ಣ ಘಟನೆ ಅಥವಾ…

7 hours ago

₹10 ಸಾವಿರ ಲಂಚಕ್ಕೆ ಬೇಡಿಕೆ: ಠಾಣೆಯಲ್ಲೇ ಹಣ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಎಎಸ್‌ಐ ಶಿವಕುಮಾರ್!

ಮಂಡ್ಯ ಜಿಲ್ಲೆಯ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಭ್ರಷ್ಟಾಚಾರದ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಲಂಚ ಸ್ವೀಕರಿಸುತ್ತಿದ್ದ ವೇಳೆ ಸಹಾಯಕ ಪೊಲೀಸ್…

24 hours ago

ಜಮೀನು ಸರ್ವೆ ಸ್ಕೆಚ್‌ಗೆ ₹20 ಸಾವಿರ ಲಂಚ ಬೇಡಿಕೆ: ಹಣ ಪಡೆಯುವಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಸರ್ವೇಯರ್ ಸುಮಾ!

ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಇನ್ನೂ ಬೇರುಬಿಟ್ಟಿರುವುದಕ್ಕೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ನಡೆದ ಘಟನೆ ಮತ್ತೊಂದು ಉದಾಹರಣೆಯಾಗಿದೆ. ಜಮೀನಿನ ಸರ್ವೆ ಹಾಗೂ…

1 day ago