Latest

ದ್ವಿಭಾಷಾ ನೀತಿ ಬೆಂಬಲಕ್ಕೆ ಸಿದ್ದರಾಮಯ್ಯ:ಹೇಳಿಕೆ ವಿರುದ್ಧ ಕನ್ನಡಿಗರ ಅಸಮಾಧಾನ.

ಬೆಂಗಳೂರು: ಕರ್ನಾಟಕದಲ್ಲಿ ಕಳೆದ ಕೆಲವರ್ಷಗಳಿಂದ ದ್ವಿಭಾಷಾ ನೀತಿಯ ವಿಚಾರವಾಗಿ ತೀವ್ರ ಚರ್ಚೆ ನಡೆಯುತ್ತಿದೆ. ಹಿಂದಿ ಭಾಷೆಯ ಅನವಶ್ಯಕ ಹೇರಿಕೆಗೆ ವಿರೋಧ ವ್ಯಕ್ತವಾಗುತ್ತಿದ್ದು, ರಾಜ್ಯದ ಸಾರ್ವಜನಿಕರು “ಕನ್ನಡ ಮತ್ತು ಇಂಗ್ಲಿಷ್ ಸಾಕು” ಎಂಬ ಧೋರಣೆಯನ್ನೇ ಬೆಂಬಲಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಮಹಾರಾಷ್ಟ್ರ ಸರ್ಕಾರವೂ ದ್ವಿಭಾಷಾ ನೀತಿಯನ್ನು ಅಳವಡಿಸಿಕೊಂಡು ಹಿಂದಿ ಹೇರಿಕೆಯಿಂದ ಹಿಂದೆ ಸರಿದಿರುವುದು ಈ ಚರ್ಚೆಗೆ ಹೊಸ ಬಲ ನೀಡಿದೆ.

ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ. “ದ್ವಿಭಾಷಾ ನೀತಿ ನನ್ನ ವ್ಯಕ್ತಿಗತ ಅಭಿಪ್ರಾಯ. ಇದನ್ನು ಸರ್ಕಾರದ ನಿಲುವಾಗಿ ರೂಪಾಂತರಗೊಳಿಸಲು ನಾನು ಪ್ರಯತ್ನಿಸುತ್ತಿದ್ದೇನೆ,” ಎಂಬುದಾಗಿ ಅವರು ತಿಳಿಸಿದ್ದಾರೆ. ಅವರು ಇಂದು ಬೆಂಗಳೂರಿನಲ್ಲಿ ನಡೆದ ‘ಜನ ಪ್ರಕಾಶನ’ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಈ ಸಂದರ್ಭ, ಪ್ರೊ. ಬರಗೂರು ರಾಮಚಂದ್ರಪ್ಪ ಸಂಪಾದಿತ ‘ಕುವೆಂಪು ವಿಚಾರ ಕ್ರಾಂತಿ’ ಕೃತಿಯನ್ನು ಅವರು ಲೋಕಾರ್ಪಣೆಗೊಳಿಸಿದರು.

ಮುಖ್ಯಮಂತ್ರಿಯ ಮಾತು ಕೇವಲ ಭಾಷಾ ನೀತಿಯ ಬಗ್ಗೆ ಮಾತ್ರವಲ್ಲ, ಕುವೆಂಪು ಅವರ ಸಾಮಾಜಿಕ ಮತ್ತು ವೈಚಾರಿಕ ದೃಷ್ಟಿಕೋನಗಳತ್ತವೂ ಗಮನ ಹರಿಸಿದೆ. “ಕುವೆಂಪು ಜಾತಿ ವಿರೋಧಿ ಚಿಂತನೆ ಹಾಗೂ ವೈಜ್ಞಾನಿಕ ದೃಷ್ಟಿಕೋನ ಹೊಂದಿದ ಮಹಾನ್ ಚಿಂತಕ. ಅವರು ನಂಬಿದ ವಿಚಾರಗಳು ಇಂದು ಕೂಡ ಸಮೃದ್ಧವಾಗಿ ಅಸ್ತಿತ್ವದಲ್ಲಿವೆ,” ಎಂದು ಸಿದ್ದರಾಮಯ್ಯ ಹೇಳಿದರು.

“ಇಂದು ಶಿಕ್ಷಣದ ಮಟ್ಟ ಹೆಚ್ಚಾದರೂ ವೈಜ್ಞಾನಿಕ ಮನೋಭಾವ ಕಡಿಮೆಯಾಗುತ್ತಿದೆ. ಕಂದಾಚಾರ, ಮೌಢ್ಯತೆ ಮತ್ತೆ ಬೆಳೆಯುತ್ತಿದೆ. ಕೇವಲ ಕಾನೂನುಗಳಿಂದ ಬದಲಾವಣೆ ಸಾಧ್ಯವಿಲ್ಲ. ಜನರ ವೈಚಾರಿಕ ಬೆಳವಣಿಗೆ ಅತ್ಯಗತ್ಯ,” ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಸಾಮಾಜಿಕ ಸಂವೇದನೆಗಳ ಬಗ್ಗೆ ಮಾತನಾಡಿದ ಅವರು, “ನಾನು ದೇವಸ್ಥಾನಕ್ಕೆ ಹೋದರೆ ಕುಂಕುಮ ಇಡುತ್ತಾರೆ. ಇದಕ್ಕೂ ಕಥೆ ಕಟ್ಟುತ್ತಾರೆ. ಗ್ರಾಮೀಣ ಭಾಗದಲ್ಲಿ ದೇವಸ್ಥಾನಗಳಿಗೆ ಹೋಗದಿದ್ದರೆ ಮತ್ತೊಂದು ರೀತಿಯಲ್ಲಿ ವ್ಯಾಖ್ಯಾನಿಸುತ್ತಾರೆ. ರಾಜಕಾರಣಿಗಳಾಗಿ ನಾವಿಗೂ ಕೆಲವು ಮಿತಿಗಳು ಇರುತ್ತವೆ,” ಎಂದು ವಿವರಿಸಿದರು.

ಅವರು ಮುಂದುವರಿದು, “ಸಂವಿಧಾನದ ಪೀಠಿಕೆ ಓದುವ ಅಭಿಯಾನ ಹಾಗೂ ಸಂವಿಧಾನ ಮೌಲ್ಯಗಳ ಅರಿವಿಗೆ ನಾವು ಗಮನ ಹರಿಸುತ್ತಿದ್ದೇವೆ. ಕುವೆಂಪು, ಬಸವಣ್ಣರಂತಹ ಚಿಂತಕರ ಆಶಯಗಳು ನಮ್ಮ ಸಂವಿಧಾನದಲ್ಲಿ ಅಡಕವಾಗಿವೆ. ಇವುಗಳನ್ನು ಜನತೆಗೆ ತಲುಪಿಸುವ ಜವಾಬ್ದಾರಿ ನಮ್ಮ ಮೇಲಿದೆ,” ಎಂದರು.

“ಗುಡಿಯ ಮಿತಿಗಳನ್ನು ಮೀರಿ, ಸಮಾಜದ ಮೂಲ ಸಮಸ್ಯೆಗಳಾದ ಬಡತನ, ಅಸಮಾನತೆಯಗಳನ್ನು ಕಿತ್ತು ಹಾಕುವಂತೆ ಕುವೆಂಪು ನೀಡಿದ ಕರೆ ಇಂದು ಹೆಚ್ಚು ಪ್ರಸ್ತುತವಾಗಿದೆ. ಕೇವಲ ಕನ್ನಡಿಗರಿಗೆ ಮಾತ್ರವಲ್ಲ, ಇಡೀ ಮಾನವ ಸಮುದಾಯಕ್ಕೆ ಅನ್ವಯವಾಗುವಂತಹ ಕುವೆಂಪು ಅವರ ಮೌಲ್ಯಗಳು ಇತರೆ ಭಾಷೆಗಳಿಗೆ ಸಹ ಅನುವಾದಗೊಳ್ಳಲಿ ಎಂಬುದು ನನ್ನ ಬಯಕೆ,” ಎಂದು ಅವರು ಸಮಾರೋಪಿಸಿದರು.

 

nazeer ahamad

Recent Posts

ವೈದ್ಯಕೀಯ ಕ್ಷೇತ್ರದಲ್ಲಿ ಮಹಾ ವಂಚನೆ: ಆಪರೇಷನ್ ಥಿಯೇಟರ್‌ನಲ್ಲೇ ಯುವತಿಯ ಖಾಸಗಿ ಫೋಟೋ ಲೀಕ್!

ಉತ್ತರ ಪ್ರದೇಶದ ಕೌಶಂಬಿಯ ಸರ್ಕಾರಿ ಸ್ವಾಯತ್ತ ವೈದ್ಯಕೀಯ ಕಾಲೇಜಿನಲ್ಲಿ ರೋಗಿಯ ಖಾಸಗಿತನ ಉಲ್ಲಂಘನೆಯ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಶಸ್ತ್ರಚಿಕಿತ್ಸೆ…

2 hours ago

ಕುಣಿಗಲ್‌ನಲ್ಲಿ ಹೃದಯವಿದ್ರಾವಕ ದುರಂತ: ಬೇರೊಬ್ಬನೊಂದಿಗೆ ಓಡಿ ಹೋದ ಪತ್ನಿ, ಇಬ್ಬರು ಮಕ್ಕಳನ್ನು ಕೊಂದು ಅರ್ಚಕ ಆತ್ಮಹತ್ಯೆ

ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಆಲ್ಕೆರೆ ಗ್ರಾಮದಲ್ಲಿ ಮನಕಲಕುವ ಘಟನೆ ನಡೆದಿದೆ. ಕೌಟುಂಬಿಕ ಕಲಹದಿಂದ ಮನನೊಂದ ಅರ್ಚಕನೊಬ್ಬ ತನ್ನ ಇಬ್ಬರು…

3 hours ago

20ಕ್ಕೂ ಹೆಚ್ಚು ಮಹಿಳೆಯರ ಖಾಸಗಿ ವಿಡಿಯೋ ಇಟ್ಟು ಬ್ಲ್ಯಾಕ್‌ಮೇಲ್; ಮಕ್ಕಳ ಆಯೋಗದ ಸದಸ್ಯನ ಅಸಲಿ ಮುಖ ಬಯಲು!

ಬೆಂಗಳೂರು ನಗರದಲ್ಲಿ ಮಹಿಳೆಯರ ಖಾಸಗಿ ವಿಡಿಯೋಗಳನ್ನು ಬಳಸಿಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ವ್ಯಕ್ತಿಯನ್ನು ಆರ್‌ಆರ್ ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಚಂದ್ರೇಗೌಡ…

3 hours ago

ಬೆಚ್ಚಿಬಿದ್ದ ಗೌರಿಬಿದನೂರು ತಾಲೂಕು: ಕೆರೆಯಲ್ಲಿ ತೇಲುತ್ತಿತ್ತು ಮೃತದೇಹ!

ನಗರಗೆರೆ ಹೋಬಳಿಯ ವಾಟದಹೊಸಹಳ್ಳಿಯಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಗ್ರಾಮದ ನಿವಾಸಿ ರಾಮಚಂದ್ರಪ್ಪ (57) ಅವರು ಕಳೆದ ಮೂರು ದಿನಗಳಿಂದ…

3 hours ago

ಜಾಗತಿಕ ಬ್ಯಾಂಕಿಂಗ್ ದಿಗ್ಗಜ JPMorganನಲ್ಲಿ ಲೈಂಗಿಕ ಕಿರುಕುಳ ಆರೋಪ: ಭಾರತೀಯ ಉದ್ಯೋಗಿಗೆ ಸೆಕ್ಸ್ ಮಾಡುವುದಕ್ಕೆ ನಿರ್ದೇಶಕಿಯಿಂದ ಒತ್ತಾಯ

ಜಾಗತಿಕ ಬ್ಯಾಂಕಿಂಗ್ ಕ್ಷೇತ್ರದ ಪ್ರಮುಖ ಸಂಸ್ಥೆಯಾದ JPMorgan Chase ನಲ್ಲಿ ಗಂಭೀರ ವಿವಾದವೊಂದು ಸ್ಫೋಟಗೊಂಡಿದೆ. ಸಂಸ್ಥೆಯ ಲಿವರೇಜ್ಡ್ ಫೈನಾನ್ಸ್ ವಿಭಾಗದ…

18 hours ago

ಲಿಂಗಸಗೂರು ತಾಲೂಕಿನಲ್ಲಿ ಕಳ್ಳಭಟ್ಟಿ ದಂಧೆ ವಿರುದ್ಧ ಅಬಕಾರಿ ದಾಳಿ: 4 ಲೀಟರ್ ಸರಾಯಿ ವಶ, ಮೂವರು ಬಂಧನ

ಲಿಂಗಸಗೂರು ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಕಳ್ಳಭಟ್ಟಿ ಸರಾಯಿ ದಂಧೆಗೆ ಕಡಿವಾಣ ಹಾಕಲು ಅಬಕಾರಿ ಇಲಾಖೆ ಚುರುಕಾಗಿ ಕಾರ್ಯಾಚರಣೆ ನಡೆಸುತ್ತಿದ್ದು,…

20 hours ago