Latest

ಯುಪಿಯಲ್ಲಿ ₹100 ಕೋಟಿ ವಿದೇಶಿ ನಿಧಿಯಿಂದ ಅಕ್ರಮ ಮತಾಂತರ ಜಾಲ ಭೇದನೆ: ಚಂಗೂರ್ ಬಾಬಾ ಬಂಧನ”

ಉತ್ತರ ಪ್ರದೇಶದಲ್ಲಿ ವಿದೇಶಿ ಹಣದ ಮೂಲಕ ನಡೆಯುತ್ತಿದ್ದ ಅಕ್ರಮ ಮತಾಂತರದ ಭಾರೀ ಜಾಲವೊಂದು ಭೇದಿಸಲಾಗಿದೆ. ಈ ಕೃತ್ಯದಲ್ಲಿ ಪ್ರಮುಖ ಪಾತ್ರವಹಿಸಿದ್ದ ಚಂಗೂರ್ ಬಾಬಾ ಅಲಿಯಾಸ್ ಜಮಾಲುದ್ದೀನ್ ಮತ್ತು ನೀತು ರೋಹ್ರಾ ಅಲಿಯಾಸ್ ನಸ್ರೀನ್ ಎಂಬವರನ್ನು ಯುಪಿ ಎಸ್‌ಟಿಎಫ್ ಅಧಿಕಾರಿಗಳು ಬಂಧಿಸಿದ್ದಾರೆ.

ಪೊಲೀಸ್ ತನಿಖೆಯ ಪ್ರಕಾರ, ಈ ಜಾಲವು ವಿದೇಶಿ ನಿಧಿಗಳ ಸಹಾಯದಿಂದ ಸಂಚಾಲಿತವಾಗುತ್ತಿದ್ದು, ಮುಸ್ಲಿಂ ಯುವಕರಿಗೆ ನಕಲಿ ಹಿಂದೂ ಹೆಸರಿನ ಗುರುತು ನೀಡಿ ಅವರನ್ನು ಹಿಂದೂ ಯುವತಿಯರನ್ನು ಪ್ರೀತಿಗೆ ಸೆಳೆಯುವಂತೆ ಪ್ರೇರೇಪಿಸಲಾಗುತ್ತಿತ್ತು. ಈ ಮೂಲಕ ಮತಾಂತರಕ್ಕೆ ಪ್ರೇರಣೆ ನೀಡುವ ಸುಗಮ ಮಾರ್ಗವನ್ನು ರೂಪಿಸಲಾಗಿತ್ತು. ಪ್ರೇಮ ಸಂಬಂಧಗಳ ಮೂಲಕ ಯುವತಿಯರನ್ನು ತಪ್ಪು ದಾರಿಗೆ ಸೆಳೆಯಲಾಗುತ್ತಿದ್ದು, ಹಣದ ಆಮಿಷ ಕೂಡಾ ನೀಡಲಾಗುತ್ತಿತ್ತೆಂದು ವರದಿಯಾಗಿದೆ.

ಎಸ್‌ಟಿಎಫ್ ಮುಖ್ಯಸ್ಥ ಅಮಿತಾಭ್ ಯಶ್ ನೀಡಿದ ಮಾಹಿತಿಯ ಪ್ರಕಾರ, ಜಮಾಲುದ್ದೀನ್ ತನ್ನನ್ನು “ಹಜರತ್ ಜಮಾಲುದ್ದೀನ್ ಪೀರ್ ಬಾಬಾ” ಎಂದು ಬಿಂಬಿಸಿ, ಬಲರಾಂಪುರ್ ಜಿಲ್ಲೆಯ ಉತ್ತರೌಲಾ ಪಟ್ಟಣವನ್ನು ತನ್ನ ಕ್ರಿಯಾಶೀಲತೆಯ ಕೇಂದ್ರವನ್ನಾಗಿ ಮಾಡಿಕೊಂಡಿದ್ದ. ಅಲ್ಲಿಂದಲೇ ದೊಡ್ಡ ಮಟ್ಟದ ಮತಾಂತರ ಚಟುವಟಿಕೆಗೆ ನೇತೃತ್ವ ನೀಡುತ್ತಿದ್ದನು.

ಈ ಜಾಲದ ಹಿಂದೆ ದುಬಾರಿ ಹಣದ ಲಾಭದ ಚಟುವಟಿಕೆಗಳೂ ನಡೆದಿದೆ ಎನ್ನಲಾಗಿದೆ. ಪ್ರತಿ ಯುವತಿಯ ಮತಾಂತರಕ್ಕೆ ಸ್ಪಷ್ಟವಾದ ಹಣಕಾಸು ಧೋರಣೆ ಇತ್ತು ಎಂಬ ಸಂಗತಿಯೂ ತನಿಖೆಯಲ್ಲಿ ಹೊರಬಿದ್ದಿದೆ. ಬ್ರಾಹ್ಮಣ, ರಜಪೂತ ಅಥವಾ ಸಿಖ್ ಯುವತಿಯರ ಮತಾಂತರಕ್ಕೆ ₹16 ಲಕ್ಷ, ಒಬಿಸಿ ಯುವತಿಯರಿಗೆ ₹12 ಲಕ್ಷ ಹಾಗೂ ಇತರ ಹಿಂದುಳಿದ ಸಮುದಾಯಗಳ ಯುವತಿಯರ ಮತಾಂತರಕ್ಕೆ ₹10 ಲಕ್ಷವರೆಗೂ ಹಣ ನೀಡಲಾಗುತ್ತಿತ್ತಂತೆ.

ಇನ್ನು ಈ ಅಕ್ರಮ ಚಟುವಟಿಕೆಗೆ ವಿದೇಶದಿಂದ ಸುಮಾರು ₹100 ಕೋಟಿ ಮೊತ್ತದ ಹಣದ ವರ್ಗಾವಣೆ ನಡೆದಿದೆ ಎಂಬ ಶಂಕೆಯಿದೆ. ಪ್ರಕರಣದ ಕುರಿತಾಗಿ ಎಸ್‌ಟಿಎಫ್ ಇನ್ನಷ್ಟು ಆರೋಪಿಗಳನ್ನು ಬಂಧಿಸಲು ಕಾರ್ಯಾಚರಣೆ ಮುಂದುವರಿಸಿದೆ.

ಈ ಪ್ರಕರಣವು ಮತ್ತಷ್ಟು ರಾಜಕೀಯ ಹಾಗೂ ಸಾಮಾಜಿಕ ಹಿನ್ನಲೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗುವ ಸಾಧ್ಯತೆಯಿದೆ. ಪೊಲೀಸರು ಸಂಪೂರ್ಣ ಜಾಲವನ್ನು ನಿಖರವಾಗಿ ಬಹಿರಂಗಪಡಿಸಲು ಮುಂದಾಗಿದ್ದಾರೆ.

nazeer ahamad

Recent Posts

ವೈದ್ಯಕೀಯ ಕ್ಷೇತ್ರದಲ್ಲಿ ಮಹಾ ವಂಚನೆ: ಆಪರೇಷನ್ ಥಿಯೇಟರ್‌ನಲ್ಲೇ ಯುವತಿಯ ಖಾಸಗಿ ಫೋಟೋ ಲೀಕ್!

ಉತ್ತರ ಪ್ರದೇಶದ ಕೌಶಂಬಿಯ ಸರ್ಕಾರಿ ಸ್ವಾಯತ್ತ ವೈದ್ಯಕೀಯ ಕಾಲೇಜಿನಲ್ಲಿ ರೋಗಿಯ ಖಾಸಗಿತನ ಉಲ್ಲಂಘನೆಯ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಶಸ್ತ್ರಚಿಕಿತ್ಸೆ…

4 hours ago

ಕುಣಿಗಲ್‌ನಲ್ಲಿ ಹೃದಯವಿದ್ರಾವಕ ದುರಂತ: ಬೇರೊಬ್ಬನೊಂದಿಗೆ ಓಡಿ ಹೋದ ಪತ್ನಿ, ಇಬ್ಬರು ಮಕ್ಕಳನ್ನು ಕೊಂದು ಅರ್ಚಕ ಆತ್ಮಹತ್ಯೆ

ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಆಲ್ಕೆರೆ ಗ್ರಾಮದಲ್ಲಿ ಮನಕಲಕುವ ಘಟನೆ ನಡೆದಿದೆ. ಕೌಟುಂಬಿಕ ಕಲಹದಿಂದ ಮನನೊಂದ ಅರ್ಚಕನೊಬ್ಬ ತನ್ನ ಇಬ್ಬರು…

4 hours ago

20ಕ್ಕೂ ಹೆಚ್ಚು ಮಹಿಳೆಯರ ಖಾಸಗಿ ವಿಡಿಯೋ ಇಟ್ಟು ಬ್ಲ್ಯಾಕ್‌ಮೇಲ್; ಮಕ್ಕಳ ಆಯೋಗದ ಸದಸ್ಯನ ಅಸಲಿ ಮುಖ ಬಯಲು!

ಬೆಂಗಳೂರು ನಗರದಲ್ಲಿ ಮಹಿಳೆಯರ ಖಾಸಗಿ ವಿಡಿಯೋಗಳನ್ನು ಬಳಸಿಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ವ್ಯಕ್ತಿಯನ್ನು ಆರ್‌ಆರ್ ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಚಂದ್ರೇಗೌಡ…

5 hours ago

ಬೆಚ್ಚಿಬಿದ್ದ ಗೌರಿಬಿದನೂರು ತಾಲೂಕು: ಕೆರೆಯಲ್ಲಿ ತೇಲುತ್ತಿತ್ತು ಮೃತದೇಹ!

ನಗರಗೆರೆ ಹೋಬಳಿಯ ವಾಟದಹೊಸಹಳ್ಳಿಯಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಗ್ರಾಮದ ನಿವಾಸಿ ರಾಮಚಂದ್ರಪ್ಪ (57) ಅವರು ಕಳೆದ ಮೂರು ದಿನಗಳಿಂದ…

5 hours ago

ಜಾಗತಿಕ ಬ್ಯಾಂಕಿಂಗ್ ದಿಗ್ಗಜ JPMorganನಲ್ಲಿ ಲೈಂಗಿಕ ಕಿರುಕುಳ ಆರೋಪ: ಭಾರತೀಯ ಉದ್ಯೋಗಿಗೆ ಸೆಕ್ಸ್ ಮಾಡುವುದಕ್ಕೆ ನಿರ್ದೇಶಕಿಯಿಂದ ಒತ್ತಾಯ

ಜಾಗತಿಕ ಬ್ಯಾಂಕಿಂಗ್ ಕ್ಷೇತ್ರದ ಪ್ರಮುಖ ಸಂಸ್ಥೆಯಾದ JPMorgan Chase ನಲ್ಲಿ ಗಂಭೀರ ವಿವಾದವೊಂದು ಸ್ಫೋಟಗೊಂಡಿದೆ. ಸಂಸ್ಥೆಯ ಲಿವರೇಜ್ಡ್ ಫೈನಾನ್ಸ್ ವಿಭಾಗದ…

20 hours ago

ಲಿಂಗಸಗೂರು ತಾಲೂಕಿನಲ್ಲಿ ಕಳ್ಳಭಟ್ಟಿ ದಂಧೆ ವಿರುದ್ಧ ಅಬಕಾರಿ ದಾಳಿ: 4 ಲೀಟರ್ ಸರಾಯಿ ವಶ, ಮೂವರು ಬಂಧನ

ಲಿಂಗಸಗೂರು ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಕಳ್ಳಭಟ್ಟಿ ಸರಾಯಿ ದಂಧೆಗೆ ಕಡಿವಾಣ ಹಾಕಲು ಅಬಕಾರಿ ಇಲಾಖೆ ಚುರುಕಾಗಿ ಕಾರ್ಯಾಚರಣೆ ನಡೆಸುತ್ತಿದ್ದು,…

21 hours ago