ಮೆಲ್ಬೋರ್ನ್ (ಆಸ್ಟ್ರೇಲಿಯಾ), ಜುಲೈ 19 – ಆಸ್ಟ್ರೇಲಿಯಾದ ಮೆಲ್ಬೋರ್ನ್ನ ಆಲ್ಟೋನಾ ಮೆಡೋಸ್ ಪ್ರದೇಶದ ಸೆಂಟ್ರಲ್ ಸ್ಕ್ವೇರ್ ಶಾಪಿಂಗ್ ಸೆಂಟರ್ ಬಳಿ ಭೀಕರ ಹಲ್ಲೆ ನಡೆದಿದೆ. 33 ವರ್ಷದ ಭಾರತೀಯ ವ್ಯಕ್ತಿ ಸೌರಭ್ ಆನಂದ್ ಮೇಲೆ ಹದಿಹರೆಯದ ಐವರು ಯುವಕರ ಗುಂಪು ಮಚ್ಚೆ ಸೇರಿದಂತೆ ಮಾರಣಾಂತಿಕ ಆಯುಧಗಳಿಂದ ದಾಳಿ ನಡೆಸಿದ್ದು, ಅವರು ತೀವ್ರವಾಗಿ ಗಾಯಗೊಂಡಿದ್ದಾರೆ.
ಶನಿವಾರ ಸಂಜೆ ಸುಮಾರು 7:30ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದ್ದು, ಆನಂದ್ ತಮ್ಮ ಮನೆಗೆ ನಡೆಯುತ್ತಾ, ಫೋನ್ ಮೂಲಕ ಸ್ನೇಹಿತನೊಂದಿಗೆ ಮಾತನಾಡುತ್ತಿದ್ದಾಗ ದಾಳಿ ಸಂಭವಿಸಿದೆ. ಈ ವೇಳೆ ಯುವಕರ ಗುಂಪು ಆತನನ್ನು ಸುತ್ತುವರಿದು, ಆಕ್ರಮಣ ಆರಂಭಿಸಿದೆ.
ಆನಂದ್ನ ಹೇಳಿಕೆಗೆ ಅನುಸಾರ, ಗುಂಪಿನಲ್ಲಿ ಇದ್ದ ಒಬ್ಬನು ಜೇಬುಗಳನ್ನು ಪರಿಶೀಲಿಸುತ್ತಿದ್ದರೆ, ಇನ್ನೊಬ್ಬನು ತಲೆಗೆ ನಿರಂತರ ಹೊಡೆದು ಗಾಯಗೊಳಿಸಿದ್ದ. ಮೂರನೇ ವ್ಯಕ್ತಿ ಗದ್ದಲದ ನಡುವೆಯೇ ಆತನ ಗಂಟಲಿಗೆ ಮಚ್ಚೆ ಇಟ್ಟಿದ್ದ. ತೀವ್ರ ಆತಂಕದಲ್ಲಿ ಆತನು ರಕ್ಷಿಸಿಕೊಳ್ಳಲು ಪ್ರಯತ್ನಿಸಿದಾಗ, ಮಚ್ಚೆಯಿಂದ ಕೈಗೆ ಭೀಕರವಾಗಿ ಹೊಡೆದಿದ್ದು, ಕೈ ತುಂಡಾಗಿತ್ತು. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ತುರ್ತು ಶಸ್ತ್ರಚಿಕಿತ್ಸೆಯಿಂದ ವೈದ್ಯರು ಆ ಕೈಗೆ ಮರು ಜೋಡನೆ ಮಾಡಿದ್ದಾರೆ.
ಇದೇ ವೇಳೆ ಬೆನ್ನು ಮತ್ತು ಭುಜಕ್ಕೂ ಗುಂಪು ದಾಳಿ ನಡೆಸಿದ್ದು, ಮೂಳೆ ಮುರಿದಿದೆ ಹಾಗೂ ತಲೆಯ ಭಾಗಕ್ಕೂ ಗಾಯವಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆನಂದ್, “ಮೂರು ಬಾರಿ ಮಚ್ಚೆಯಿಂದ ಹೊಡೆದಿದ್ದಾರೆ. ಈ ಘಟನೆಯು ನನ್ನ ಜೀವನದ ಭೀಕರ ಅನುಭವ” ಎಂದು ಆಸ್ಟ್ರೇಲಿಯಾದ ‘ದಿ ಏಜ್’ ಮಾಧ್ಯಮದೊಂದಿಗೆ ಹಂಚಿಕೊಂಡಿದ್ದಾರೆ.
ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ದಾಳಿಕೋರರ ಪತ್ತೆಗೆ ತನಿಖೆ ನಡೆಸುತ್ತಿದ್ದಾರೆ. ದಾಳಿ ಹಿಂದಿನ ಉದ್ದೇಶ ಇನ್ನೂ ಬಹಿರಂಗವಾಗಿಲ್ಲದಿದ್ದರೂ, ಸ್ಥಳೀಯ ಸಮುದಾಯದಲ್ಲಿ ಭಯವ್ಯಾಪಿಸಿದೆ.
ಈ ಘಟನೆ ಪ್ರವಾಸಿಗರು ಮತ್ತು ವಿದೇಶಿ ವಲಸಿಗರ ಸುರಕ್ಷತೆಯ ಕುರಿತಂತೆ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ.
ಅಟ್ರಾಸಿಟಿ ಪ್ರಕರಣದ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವ ವಿಚಾರದಲ್ಲಿ ಲಂಚ ಸ್ವೀಕರಿಸಿದ ಆರೋಪದಡಿ ಗುರುಮಠಕಲ್ ಪೊಲೀಸ್ ಠಾಣೆಯ ಸಿಪಿಐ ವೀರಣ್ಣ…
ಚಿಕ್ಕಬಳ್ಳಾಪುರ ನಗರ ಹೊರವಲಯದ ಬೀಡಗಾನಹಳ್ಳಿ ಸಮೀಪದ ನಾಗಾರ್ಜುನ ಕಾಲೇಜು ಬಳಿ ಕರ್ತವ್ಯದಲ್ಲಿದ್ದ ಎಎಸ್ಐ ಹಾಗೂ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಕಾಲೇಜು…
ಬೆಳ್ತಂಗಡಿ ಪಟ್ಟಣದಲ್ಲಿ ಅಕ್ರಮವಾಗಿ ನಿರ್ಮಾಣಗೊಂಡಿದ್ದ ಕ್ಯಾಂಟಿನ್ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆ ಮೇಲೆ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿರುವ ಘಟನೆ…
ಭಟ್ಕಳ: ಸುಮಾರು ಒಂದು ವರ್ಷದಿನಿಂದ ಖಾಲಿಯಾಗಿದ್ದ ಭಟ್ಕಳ ಉಪ ವಿಭಾಗಾಧಿಕಾರಿ (ಎಸಿ) ಹುದ್ದೆಗೆ ಕೊನೆಗೂ ಸರ್ಕಾರ ಅಧಿಕಾರಿಯನ್ನು ನೇಮಕ ಮಾಡಿದ್ದು,…
ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರಾಗಿದ್ದ ಡಿ. ಸುಧಾಕರ್ (65) ಅವರು ಅನಾರೋಗ್ಯದಿಂದ ಇಂದು ಮುಂಜಾನೆ ನಿಧನರಾಗಿದ್ದಾರೆ. ಕಳೆದ…
ಸೋಶಿಯಲ್ ಮೀಡಿಯಾದಲ್ಲಿ ಆರಂಭವಾದ ಪ್ರೇಮಕಥೆಯೊಂದು ದುರಂತ ಅಂತ್ಯ ಕಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾದ ಮಹಿಳೆಯೊಂದಿಗೆ ಲಿವ್-ಇನ್…