ಬೆಂಗಳೂರು, ಜುಲೈ 27: ನಟ ಪ್ರಥಮ್ ಮತ್ತೆ ಸುದ್ದಿಯ ಕೇಂದ್ರಬಿಂದು ಆಗಿದ್ದಾರೆ. ಈ ಬಾರಿ ಅವರು ಸ್ಯಾಂಡಲ್ವುಡ್ ನಟ ದರ್ಶನ್ ಹಾಗೂ ಅವರ ಅಭಿಮಾನಿಗಳ ವಿರುದ್ಧ ಗಂಭೀರ ಆರೋಪ ಮಾಡಿ, ನೇರವಾಗಿ ತೀವ್ರ ಎಚ್ಚರಿಕೆ ನೀಡಿದ್ದಾರೆ. ಮಾಧ್ಯಮಗಳ ಮುಂದೆ ತಮ್ಮ ಉಜ್ಜುವ ಮನಸ್ಸನ್ನು ಹೊರಹಾಕಿದ ಪ್ರಥಮ್, ತನ್ನೆದುರು ಜೀವ ಬೆದರಿಕೆ ಮೂಡಿಸುವ ರೀತಿಯಲ್ಲಿ ಕೆಲ ದರ್ಶನ್ ಅಭಿಮಾನಿಗಳು ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
“ನಾವು ಕೂಡ ಕಲಾವಿದರೇ ಸರ್!”
“ದರ್ಶನ್ ಸರ್, ನಿಮಗೆ ಪ್ರೀತಿಯಿಂದ ಹೇಳ್ತಿದಿನಿ. ನೀವು ಒಳ್ಳೆಯವರ ಸಹವಾಸ ಇಟ್ಕೊಳ್ಳಿ. ನಿಮ್ಮ ಫ್ಯಾನ್ಸ್ ಇರುವಂತೆ ನಮಗೂ ಫ್ಯಾನ್ಸ್ ಇದ್ದಾರೆ. ನಮಗೆ ಜನಪ್ರಿಯತೆ ಪ್ರೀತಿಯಿಂದ ಸಿಕ್ಕಿದೆ. ನಿಮ್ಮ ಅಭಿಮಾನಿಗಳ ನಡೆ ನಮ್ಮೆದುರು ತೊಂದರೆ ತಂದರೆ, ಸುಮ್ಮನಿಲ್ಲ ಸರ್,” ಎಂದು ತೀವ್ರವಾಗಿ ಸ್ಪಷ್ಟಪಡಿಸಿದ ಪ್ರಥಮ್, “ನಾನು ಯಾರ ಹೆಸರನ್ನೂ ಹೇಳಲ್ಲ. ಗೌರವ ಇದೆ. ಆದರೆ ಎಸ್ಪಿಗೆ ದೂರು ನೀಡಿದ್ದೇನೆ. ತನಿಖೆ ನಡೆಯುತ್ತಿದೆ,” ಎಂದರು.
“ಡ್ರ್ಯಾಗರ್ ಹಿಡಿದು ಬಂದವ್ರು, ಬಾಸ್ ಬಗ್ಗೆ ಮಾತನಾಡಬೇಡಿ ಅಂತ ಬೆದರಿಕೆ!”
“ನಮ್ಮ ಬಾಸ್ ಬಗ್ಗೆ ಮಾತನಾಡಬೇಡಿ ಅಂತ ಡ್ರ್ಯಾಗರ್ ಹಿಡಿದು ಬಂದಿದ್ದರು. ಇದು ಎಷ್ಟು ನ್ಯಾಯಸಮ್ಮತ? 2000 ಜನ ಫೋನ್ ಮಾಡಿ ಕಂಪ್ಲೆಂಟ್ ಕೊಡಿ ಅಂತ ಹೇಳಿದ್ರು. ಇಂತಹ ಗೂಂಡಾ ನಡತೆಯ ಅಭಿಮಾನಿಗಳನ್ನು ನೀವು ಯಾಕೆ ಪಾಲಿಸಬೇಕು? ಮನೆಗೆ ನಾಯಿ, ಬೆಕ್ಕು, ಪಾರಿವಾಳ ಸಾಕಬಹುದು. ಗೂಂಡಾಗಳನ್ನುಲ್ಲ,” ಎಂದು ತೀವ್ರ ವಾಗ್ದಾಳಿ ನಡೆಸಿದರು.
“ಬಾಸ್ ಇಸಂ ಕನ್ನಡದಲ್ಲಿ ನಡೆಯಲ್ಲ!”
“ದರ್ಶನ್ ಹೆಸರನ್ನು ಕೆಲವು ಅಭಿಮಾನಿಗಳು ದುರ್ಬಳಕೆ ಮಾಡ್ತಿದ್ದಾರೆ. ‘ಬಾಸ್ ಇಸಂ’ ಎಂಬ ಟ್ರೆಂಡ್ ಬೇಡ. ಕನ್ನಡದಲ್ಲಿ ಅದರ ಸ್ಥಾನವಿಲ್ಲ. ನನ್ನ ಬಾಸ್ ನನ್ನ ಜನತೆ. ಕನ್ನಡಿಗರು ನನ್ನ ಬಾಸ್. ಪ್ರತಿಯೊಬ್ಬರಿಗೂ ಅವರ ಅಪ್ಪ-ಅಮ್ಮ ಬಾಸ್. ಕಲಾವಿದರು ಕಲಾವಿದರಾಗಿರಲಿ,” ಎಂದು ಪ್ರಥಮ್ ನೀಡಿದ ಸಂದೇಶ ಸ್ಪಷ್ಟವಾಗಿದೆ.
“ಮೀಡಿಯಾ ಅನ್ನ ತಿಂತಿದೆವಿಯಲ್ಲ!”
ಮಾಧ್ಯಮಗಳ ಪಾತ್ರವನ್ನು ಉಲ್ಲೇಖಿಸಿದ ಪ್ರಥಮ್, “ಮೀಡಿಯಾ ಅಂದ್ರೆ ಕಿರಿಟ. ಅದಕ್ಕೆ ಗೌರವ ಕೊಡಿ. ಕಲಾವಿದರು ಇಂದು ಮೀಡಿಯಾದಿಂದ ಜೀವಿಸುತ್ತಿದ್ದಾರೆ. ಅದನ್ನು ತಪ್ಪಾಗಿ ಬಳಸಬೇಡಿ,” ಎಂದು ದರ್ಶನ್ ಅಭಿಮಾನಿಗಳ ವರ್ತನೆಗೆ ತೀಕ್ಷ್ಣ ಟೀಕೆ ಸಲ್ಲಿಸಿದರು.
ಪ್ರಥಮ್ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ದರ್ಶನ್ ಕ್ಯಾಂಪ್ ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತದೋ ಎಂಬ ಕುತೂಹಲ ಇದೀಗ ಸ್ಯಾಂಡಲ್ವುಡ್ ಸುತ್ತಮುತ್ತ ಗಿರಕಿಯಾಗುತ್ತಿದೆ.
ಬೆಂಗಳೂರು: ಕುಂಬಳಗೋಡು ಠಾಣೆ ವ್ಯಾಪ್ತಿಯ ಗೇರುಪಾಳ್ಯದಲ್ಲಿ ಜುಲೈ 25ರಂದು ನಡೆದ ರೀಮಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ಧೀರಜ್…
ಉಡುಪಿ: ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ 27 ವರ್ಷದ ಯುವತಿ ಕೃತಿ ಬಂಗೇರಾ ಅವರು ಮೃತಪಟ್ಟಿರುವ ಘಟನೆ ಉಡುಪಿ ತಾಲೂಕಿನ ಕಲ್ಮಾಡಿಯಲ್ಲಿ…
ತೆಲುಗು ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಹಾಗೂ ನಟಿಯರ ಸುರಕ್ಷತೆ ಕುರಿತ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಖ್ಯಾತ ನಟಿ ಚಾಂದಿನಿ…
ನವವಿವಾಹಿತೆಯೊಬ್ಬಳ ದಾಂಪತ್ಯ ಜೀವನ ಆರಂಭವಾದ ಕೆಲವೇ ದಿನಗಳಲ್ಲಿ ನಡೆದ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮದುವೆಗೂ…
ದೆಹಲಿಯ ಮುನಿರ್ಕಾ ಪ್ರದೇಶದಲ್ಲಿ ನಡೆದ ಬೆಚ್ಚಿಬೀಳಿಸುವ ಘಟನೆಯೊಂದರಲ್ಲಿ, ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದ ಪತಿಯೊಬ್ಬ ಆಕೆಯ ಶವವನ್ನು ವಿಲೇವಾರಿ ಮಾಡಲು ಸ್ನೇಹಿತನ…
ಸೆಪ್ಟೆಂಬರ್ 1ರೊಳಗೆ ಸಮಗ್ರ ವರದಿ ಸಲ್ಲಿಸುವಂತೆ ಸೂಚನೆ | ಹಂಪಿಯ ಕೋರ್, ಬಫರ್ ಹಾಗೂ ಬಾಹ್ಯ ವಲಯಗಳಲ್ಲಿ ನಿಯಮ ಉಲ್ಲಂಘನೆ…