Latest

ನಾಯಿ, ಬೆಕ್ಕು, ಪಾರಿವಾಳ ಸಾಕಿ ಗೂಂಡಾಗಳಲ್ಲ! ದರ್ಶನ್‌ಗೆ ನಟ ಪ್ರಥಮ್ ಖಡಕ್ ಎಚ್ಚರಿಕೆ

ಬೆಂಗಳೂರು, ಜುಲೈ 27: ನಟ ಪ್ರಥಮ್ ಮತ್ತೆ ಸುದ್ದಿಯ ಕೇಂದ್ರಬಿಂದು ಆಗಿದ್ದಾರೆ. ಈ ಬಾರಿ ಅವರು ಸ್ಯಾಂಡಲ್ವುಡ್ ನಟ ದರ್ಶನ್ ಹಾಗೂ ಅವರ ಅಭಿಮಾನಿಗಳ ವಿರುದ್ಧ ಗಂಭೀರ ಆರೋಪ ಮಾಡಿ, ನೇರವಾಗಿ ತೀವ್ರ ಎಚ್ಚರಿಕೆ ನೀಡಿದ್ದಾರೆ. ಮಾಧ್ಯಮಗಳ ಮುಂದೆ ತಮ್ಮ ಉಜ್ಜುವ ಮನಸ್ಸನ್ನು ಹೊರಹಾಕಿದ ಪ್ರಥಮ್, ತನ್ನೆದುರು ಜೀವ ಬೆದರಿಕೆ ಮೂಡಿಸುವ ರೀತಿಯಲ್ಲಿ ಕೆಲ ದರ್ಶನ್ ಅಭಿಮಾನಿಗಳು ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

“ನಾವು ಕೂಡ ಕಲಾವಿದರೇ ಸರ್!”

“ದರ್ಶನ್ ಸರ್, ನಿಮಗೆ ಪ್ರೀತಿಯಿಂದ ಹೇಳ್ತಿದಿನಿ. ನೀವು ಒಳ್ಳೆಯವರ ಸಹವಾಸ ಇಟ್ಕೊಳ್ಳಿ. ನಿಮ್ಮ ಫ್ಯಾನ್ಸ್ ಇರುವಂತೆ ನಮಗೂ ಫ್ಯಾನ್ಸ್ ಇದ್ದಾರೆ. ನಮಗೆ ಜನಪ್ರಿಯತೆ ಪ್ರೀತಿಯಿಂದ ಸಿಕ್ಕಿದೆ. ನಿಮ್ಮ ಅಭಿಮಾನಿಗಳ ನಡೆ ನಮ್ಮೆದುರು ತೊಂದರೆ ತಂದರೆ, ಸುಮ್ಮನಿಲ್ಲ ಸರ್,” ಎಂದು ತೀವ್ರವಾಗಿ ಸ್ಪಷ್ಟಪಡಿಸಿದ ಪ್ರಥಮ್, “ನಾನು ಯಾರ ಹೆಸರನ್ನೂ ಹೇಳಲ್ಲ. ಗೌರವ ಇದೆ. ಆದರೆ ಎಸ್ಪಿಗೆ ದೂರು ನೀಡಿದ್ದೇನೆ. ತನಿಖೆ ನಡೆಯುತ್ತಿದೆ,” ಎಂದರು.

“ಡ್ರ್ಯಾಗರ್ ಹಿಡಿದು ಬಂದವ್ರು, ಬಾಸ್ ಬಗ್ಗೆ ಮಾತನಾಡಬೇಡಿ ಅಂತ ಬೆದರಿಕೆ!”

“ನಮ್ಮ ಬಾಸ್ ಬಗ್ಗೆ ಮಾತನಾಡಬೇಡಿ ಅಂತ ಡ್ರ್ಯಾಗರ್ ಹಿಡಿದು ಬಂದಿದ್ದರು. ಇದು ಎಷ್ಟು ನ್ಯಾಯಸಮ್ಮತ? 2000 ಜನ ಫೋನ್‌ ಮಾಡಿ ಕಂಪ್ಲೆಂಟ್‌ ಕೊಡಿ ಅಂತ ಹೇಳಿದ್ರು. ಇಂತಹ ಗೂಂಡಾ ನಡತೆಯ ಅಭಿಮಾನಿಗಳನ್ನು ನೀವು ಯಾಕೆ ಪಾಲಿಸಬೇಕು? ಮನೆಗೆ ನಾಯಿ, ಬೆಕ್ಕು, ಪಾರಿವಾಳ ಸಾಕಬಹುದು. ಗೂಂಡಾಗಳನ್ನುಲ್ಲ,” ಎಂದು ತೀವ್ರ ವಾಗ್ದಾಳಿ ನಡೆಸಿದರು.

“ಬಾಸ್ ಇಸಂ ಕನ್ನಡದಲ್ಲಿ ನಡೆಯಲ್ಲ!”

“ದರ್ಶನ್ ಹೆಸರನ್ನು ಕೆಲವು ಅಭಿಮಾನಿಗಳು ದುರ್ಬಳಕೆ ಮಾಡ್ತಿದ್ದಾರೆ. ‘ಬಾಸ್ ಇಸಂ’ ಎಂಬ ಟ್ರೆಂಡ್ ಬೇಡ. ಕನ್ನಡದಲ್ಲಿ ಅದರ ಸ್ಥಾನವಿಲ್ಲ. ನನ್ನ ಬಾಸ್ ನನ್ನ ಜನತೆ. ಕನ್ನಡಿಗರು ನನ್ನ ಬಾಸ್. ಪ್ರತಿಯೊಬ್ಬರಿಗೂ ಅವರ ಅಪ್ಪ-ಅಮ್ಮ ಬಾಸ್. ಕಲಾವಿದರು ಕಲಾವಿದರಾಗಿರಲಿ,” ಎಂದು ಪ್ರಥಮ್ ನೀಡಿದ ಸಂದೇಶ ಸ್ಪಷ್ಟವಾಗಿದೆ.

“ಮೀಡಿಯಾ ಅನ್ನ ತಿಂತಿದೆವಿಯಲ್ಲ!”

ಮಾಧ್ಯಮಗಳ ಪಾತ್ರವನ್ನು ಉಲ್ಲೇಖಿಸಿದ ಪ್ರಥಮ್, “ಮೀಡಿಯಾ ಅಂದ್ರೆ ಕಿರಿಟ. ಅದಕ್ಕೆ ಗೌರವ ಕೊಡಿ. ಕಲಾವಿದರು ಇಂದು ಮೀಡಿಯಾದಿಂದ ಜೀವಿಸುತ್ತಿದ್ದಾರೆ. ಅದನ್ನು ತಪ್ಪಾಗಿ ಬಳಸಬೇಡಿ,” ಎಂದು ದರ್ಶನ್ ಅಭಿಮಾನಿಗಳ ವರ್ತನೆಗೆ ತೀಕ್ಷ್ಣ ಟೀಕೆ ಸಲ್ಲಿಸಿದರು.

ಪ್ರಥಮ್ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ದರ್ಶನ್ ಕ್ಯಾಂಪ್ ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತದೋ ಎಂಬ ಕುತೂಹಲ ಇದೀಗ ಸ್ಯಾಂಡಲ್ವುಡ್‌ ಸುತ್ತಮುತ್ತ ಗಿರಕಿಯಾಗುತ್ತಿದೆ.

nazeer ahamad

Recent Posts

ಕರ್ಕಶ ಶಬ್ದದ ಬೈಕ್ ವಿಚಾರಕ್ಕೆ ಪೊಲೀಸರ ಮೇಲೆಯೇ ವಿದ್ಯಾರ್ಥಿಗಳ ಹಲ್ಲೆ

ಚಿಕ್ಕಬಳ್ಳಾಪುರ ನಗರ ಹೊರವಲಯದ ಬೀಡಗಾನಹಳ್ಳಿ ಸಮೀಪದ ನಾಗಾರ್ಜುನ ಕಾಲೇಜು ಬಳಿ ಕರ್ತವ್ಯದಲ್ಲಿದ್ದ ಎಎಸ್‌ಐ ಹಾಗೂ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಕಾಲೇಜು…

6 hours ago

ಕ್ಯಾಂಟಿನ್‌ನಲ್ಲಿ ವೇಶ್ಯಾವಾಟಿಕೆ ದಂಧೆ: ಬೆಳ್ತಂಗಡಿಯಲ್ಲಿ ಪೊಲೀಸರ ದಾಳಿ, ಮೂವರು ಬಂಧನ

ಬೆಳ್ತಂಗಡಿ ಪಟ್ಟಣದಲ್ಲಿ ಅಕ್ರಮವಾಗಿ ನಿರ್ಮಾಣಗೊಂಡಿದ್ದ ಕ್ಯಾಂಟಿನ್‌ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆ ಮೇಲೆ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿರುವ ಘಟನೆ…

6 hours ago

ಒಂದು ವರ್ಷದ ನಿರೀಕ್ಷೆಗೆ ತೆರೆ: ಭಟ್ಕಳಕ್ಕೆ ಖಾಯಂ ಎಸಿ, ಜೆ. ಮಹೇಶ್ ಅಧಿಕಾರ ಸ್ವೀಕಾರ

ಭಟ್ಕಳ: ಸುಮಾರು ಒಂದು ವರ್ಷದಿನಿಂದ ಖಾಲಿಯಾಗಿದ್ದ ಭಟ್ಕಳ ಉಪ ವಿಭಾಗಾಧಿಕಾರಿ (ಎಸಿ) ಹುದ್ದೆಗೆ ಕೊನೆಗೂ ಸರ್ಕಾರ ಅಧಿಕಾರಿಯನ್ನು ನೇಮಕ ಮಾಡಿದ್ದು,…

1 day ago

ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ. ಸುಧಾಕರ್ ನಿಧನ; ರಾಜಕೀಯ ವಲಯದಲ್ಲಿ ಶೋಕದ ಛಾಯೆ

ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರಾಗಿದ್ದ ಡಿ. ಸುಧಾಕರ್ (65) ಅವರು ಅನಾರೋಗ್ಯದಿಂದ ಇಂದು ಮುಂಜಾನೆ ನಿಧನರಾಗಿದ್ದಾರೆ. ಕಳೆದ…

1 day ago

ಆಂಟಿ ಹಿಂದೆ ಹೋದವನ ದುರಂತ ಅಂತ್ಯ: ಲಿವ್-ಇನ್ ಸಂಗಾತಿಯ ಕಿರುಕುಳಕ್ಕೆ ಯುವಕ ಆತ್ಮಹತ್ಯೆ!

ಸೋಶಿಯಲ್ ಮೀಡಿಯಾದಲ್ಲಿ ಆರಂಭವಾದ ಪ್ರೇಮಕಥೆಯೊಂದು ದುರಂತ ಅಂತ್ಯ ಕಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾದ ಮಹಿಳೆಯೊಂದಿಗೆ ಲಿವ್-ಇನ್…

1 day ago

ಶಸ್ತ್ರಚಿಕಿತ್ಸೆಗೆ ದಾಖಲಾಗಿದ್ದ ಮಹಿಳೆಯ ಚಿನ್ನಾಭರಣ ಕಳವು: ಖಾಸಗಿ ಆಸ್ಪತ್ರೆ ಸಿಬ್ಬಂದಿ ವಶಕ್ಕೆ

ಬೆಂಗಳೂರು: ಶಸ್ತ್ರಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯ ಚಿನ್ನಾಭರಣ ಕಳವು ಮಾಡಿದ್ದ ಆರೋಪದ ಮೇಲೆ ಆಸ್ಪತ್ರೆಯ ಮಹಿಳಾ ಸಿಬ್ಬಂದಿಯನ್ನು ಹೆಣ್ಣೂರು…

2 days ago