Latest

ಕೋಳಿ ಶೆಡ್‌ನಲ್ಲಿ ಅಕ್ರಮ ಗ್ಯಾಸ್ ಭರ್ತಿ ಅಡ್ಡೆ ಪತ್ತೆ – 137 ಸಿಲಿಂಡರ್, ಗೂಡ್ಸ್ ವಾಹನ ವಶ

ಕೊರಟಗೆರೆ ತಾಲೂಕಿನ ಸಿ.ಎನ್.ದುರ್ಗ ಹೋಬಳಿಯ ಬುಕ್ಕಾಪಟ್ಟಣ ಸಮೀಪ ಅಕ್ರಮವಾಗಿ ಗ್ಯಾಸ್ ಸಿಲಿಂಡರ್‌ಗಳನ್ನು ಭರ್ತಿ ಮಾಡುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಶನಿವಾರ ತಡರಾತ್ರಿ ಪಿಎಸ್‌ಐ ಚೇತನ್‌ ಕುಮಾರ್ ನೇತೃತ್ವದ ಪೊಲೀಸರು ಕಾರ್ಯಾಚರಣೆ ನಡೆಸಿ, 137 ಸಿಲಿಂಡರ್‌ಗಳು, ಒಂದು ಟಾಟಾ ಇಂಟ್ರಾ ಗೂಡ್ಸ್ ವಾಹನ ಹಾಗೂ ಆಕ್ಟೀವಾ ಬೈಕ್ ಸಹಿತ ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.

ಕೋಳಿ ಶೆಡ್‌ನಲ್ಲಿ ಅಕ್ರಮ ಸಿಲಿಂಡರ್ ಭರ್ತಿ

ಬುಕ್ಕಾಪಟ್ಟಣ ಸರ್ವೆ ನಂ.98 ರಲ್ಲಿರುವ ಫಾತಿಮಾ ಬಿನ್ ಸೈಯದ್ ಜಮೀಲ್ ಬಾಷ ಅವರ ಮಾಲೀಕತ್ವದ ಕೋಳಿ ಫಾರಂ ಶೆಡ್‌ನಲ್ಲಿ ಈ ಅಕ್ರಮ ಚಟುವಟಿಕೆ ನಡೆಯುತ್ತಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರಿಗೆ, ಸರ್ಕಾರದ ಉಜ್ವಲ ಯೋಜನೆಯಡಿ ಬಡವರಿಗೆ ನೀಡುವ 75 ಗೃಹಬಳಕೆಯ ಸಿಲಿಂಡರ್‌ಗಳು ಹಾಗೂ 62 ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳು ಸಿಕ್ಕಿವೆ.

ಆರೋಪಿ ಬಂಧನ, ಇನ್ನಿಬ್ಬರು ಪರಾರಿ

ಪೊಲೀಸರು ರಘು ಎಂಬಾತನನ್ನು ಬಂಧಿಸಿ, ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆದರೆ, ಇನ್ನಿಬ್ಬರು ಆರೋಪಿಗಳು ಪೊಲೀಸರು ದಾಳಿ ನಡೆಸುವ ವೇಳೆಗೆ ಪರಾರಿಯಾಗಿದ್ದಾರೆ.

ಪೊಲೀಸರ ಕಾರ್ಯಾಚರಣೆಗೆ ಡಿವೈಎಸ್ಪಿ ಭೇಟಿ

ಈ ದಾಳಿಯ ವೇಳೆ ಮಧುಗಿರಿ ಡಿವೈಎಸ್ಪಿ ಮಂಜುನಾಥ್, ಸಿಪಿಐ ಅನಿಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾರ್ಯಾಚರಣೆಯಲ್ಲಿ ಎಎಸ್‌ಐ ಗಂಗಾಧರಪ್ಪ, ಪೇದೆಗಳಾದ ದೊಡ್ಡಲಿಂಗಯ್ಯ, ಮೋಹನ್, ದಯಾನಂದ್, ರಾಮಚಂದ್ರ, ನವೀನ್, ಸಿದ್ದರಾಮು ಹಾಗೂ ಇತರ ಪೊಲೀಸರು ಭಾಗಿಯಾಗಿದ್ದರು.

ಈ ಪ್ರಕರಣದ ಬಗ್ಗೆ ಕೊರಟಗೆರೆ ಪೊಲೀಸರು ಮುಂದಿನ ತನಿಖೆಯನ್ನು ಮುಂದುವರೆಸಿದ್ದಾರೆ.

nazeer ahamad

Recent Posts

ಜಾತ್ರೆಯಲ್ಲಿ ಮಹಿಳೆಯ ಮಂಗಳಸೂತ್ರ ಕಳವು: ಮೂವರು ಆರೋಪಿಗಳ ಬಂಧನ

₹4.50 ಲಕ್ಷ ಮೌಲ್ಯದ ಚಿನ್ನ, ಕೃತ್ಯಕ್ಕೆ ಬಳಸಿದ್ದ ಬೈಕ್ ವಶ ಹಳಿಯಾಳ: ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಮಹಿಳೆಯೊಬ್ಬರ ಕೊರಳಲ್ಲಿದ್ದ ಚಿನ್ನದ…

12 hours ago

ಬೈಕ್‌ನಲ್ಲಿ ಕರೆದೊಯ್ದು ಹಣ ಕಸಿದು ಜೀವ ಬೆದರಿಕೆ: 24 ಗಂಟೆಯಲ್ಲೇ ಆರೋಪಿ ಬಂಧನ

ಸಿಸಿಟಿವಿ ಹಾಗೂ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯ ಪತ್ತೆ; ಬೈಕ್, ಹಣ ವಶ ಹೊನ್ನಾವರ: ಬ್ಯಾಂಕ್‌ನಿಂದ ಹಣ ಪಡೆದು ಹೊರಬಂದ…

12 hours ago

ಕಳ್ಳತನ ತಡೆಗೆ ಮುಂಡಗೋಡ ಪೊಲೀಸರ ಕಟ್ಟೆಚ್ಚರ; ರಾತ್ರಿ ಗಸ್ತು, ವಾಹನ ತಪಾಸಣೆ ಚುರುಕು

ಮುಂಡಗೋಡ ಪಟ್ಟಣ ಸೇರಿ ಬಾಚಣಕಿ, ಪಾಳಾ ಗ್ರಾಮಗಳಲ್ಲಿ ನಿಗಾ; ಸಾರ್ವಜನಿಕರ ಸಹಕಾರಕ್ಕೆ ಮನವಿ ಮುಂಡಗೋಡ: ತಾಲೂಕಿನಲ್ಲಿ ಕಳ್ಳತನ ಸೇರಿದಂತೆ ಅಹಿತಕರ…

12 hours ago

ಹೆದ್ದಾರಿ ಬದಿಯಲ್ಲಿ ಪತಿಯ ಶವ… ರಸ್ತೆ ಅಪಘಾತವೆಂದು ನಂಬಿಸಿದ್ದರು! ತನಿಖೆಯಲ್ಲಿ ಬಯಲಾಯ್ತು ಹೆಂಡತಿಯೇ ಹೆಣೆದ ಭೀಕರ ಕೊಲೆ ಸಂಚು

ತಿರುಪತಿ: ಬೆಳಗ್ಗೆ ಹೆದ್ದಾರಿ ಪಕ್ಕದಲ್ಲಿ ವ್ಯಕ್ತಿಯೊಬ್ಬ ರಕ್ತದ ಮಡುವಿನಲ್ಲಿ ಶವವಾಗಿ ಪತ್ತೆಯಾದಾಗ, ಸ್ಥಳೀಯರು ಹಾಗೂ ಪೊಲೀಸರು ಇದೊಂದು ಭೀಕರ ರಸ್ತೆ…

12 hours ago

ಡೇಟಿಂಗ್ ಆ್ಯಪ್‌ ಮೂಲಕ ‘ಹನಿ ಟ್ರ್ಯಾಪ್’! ಶ್ರೀಮಂತ ಪುರುಷರನ್ನು ಬಲೆಗೆ ಬೀಳಿಸಿ ₹6 ಕೋಟಿಗೂ ಅಧಿಕ ಲೂಟಿ

ಪ್ರಯಾಗ್‌ರಾಜ್: ಡೇಟಿಂಗ್ ಆ್ಯಪ್‌ಗಳು ಹಾಗೂ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಶ್ರೀಮಂತ ಪುರುಷರನ್ನು ಹನಿ ಟ್ರ್ಯಾಪ್ ಬಲೆಗೆ ಬೀಳಿಸಿ, ಬಳಿಕ ಬೆದರಿಕೆ…

12 hours ago

ರೇಣುಕಾಸ್ವಾಮಿ ಮೇಲೆ ದರ್ಶನ್‌ ಹಲ್ಲೆ ಆರೋಪ: ಜನನಾಂಗಕ್ಕೆ ಒದ್ದು, ಎದೆ ಮೇಲೆ ಕಾಲಿಟ್ಟು ತುಳಿದಿದ್ದರೆಂದು ಮಾಫಿ ಸಾಕ್ಷಿ ಹೇಳಿಕೆ!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಲು…

12 hours ago