Latest

ನಿಮ್ಮ ಜೇಬಿನಲ್ಲಿ ರೂ.20 ನೋಟು ಇದ್ರೆ, ಈ ಸುದ್ದಿಯನ್ನು ತಪ್ಪದೇ ಓದಿ!

ಹೊಸ ರೂಪದಲ್ಲಿ ಶೀಘ್ರದಲ್ಲೇ ರೂ.20 ನೋಟು ಮಾರುಕಟ್ಟೆಗೆ ಬರುತ್ತಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಸತತವಾಗಿ ನೋಟುಗಳಲ್ಲಿ ಸುಧಾರಣೆಗಳನ್ನು ಮಾಡುತ್ತಾ ಬರುತ್ತಿದ್ದು, ಇದೀಗ ಹೊಸ ರೂ.20 ನೋಟು ಬಿಡುಗಡೆಗೆ ಘೋಷಣೆ ನೀಡಿದೆ. ಈ ನೋಟಿನಲ್ಲಿ ಪ್ರಸ್ತುತ ಗವರ್ನರ್ ಸಂಜಯ್ ಮಲ್ಹೋತ್ರಾ ಅವರ ಸಹಿ ಇರುವುದು ಪ್ರಮುಖ ವೈಶಿಷ್ಟ್ಯವಾಗಿದೆ.

RBI ತಿಳಿಸಿದಂತೆ, ಈ ನೋಟು ಹೊಸ ಶ್ರೇಣಿಯ ಭಾಗವಾಗಿದ್ದು, ಹಳೆಯ ವಿನ್ಯಾಸವನ್ನು ಉಳಿಸಿಕೊಂಡಿದ್ದರೂ ಕೆಲವು ನವೀನ ವೈಶಿಷ್ಟ್ಯಗಳೊಂದಿಗೆ ಬರಲಿದೆ. ಜನಸಾಮಾನ್ಯರ ಚಲಾವಣೆಗೆ ಅನುಕೂಲವಾಗುವಂತೆ ಭದ್ರತಾ ಅಂಶಗಳಲ್ಲಿ ಸುಧಾರಣೆ ಮಾಡಲಾಗಿದೆ.

ಹೊಸ ರೂ.20 ನೋಟಿನ ಪ್ರಮುಖ ವೈಶಿಷ್ಟ್ಯಗಳು:

ಬಣ್ಣ: ಹಸಿರು-ಹಳದಿ ಮಿಶ್ರ ಛಾಯೆ

ಗಾತ್ರ: 63 ಮಿ.ಮೀ. x 129 ಮಿ.ಮೀ.

ಹಿಂಬದಿ ಚಿತ್ರ: ಮಹಾರಾಷ್ಟ್ರದ ಪ್ರಸಿದ್ಧ ಎಲ್ಲೋರಾ ಗುಹೆಗಳ ಚಿತ್ರಣ

ಸಂಖ್ಯೆ ಮುದ್ರಣ: “20” ಸಂಖ್ಯೆಯನ್ನು ಹೂವಿನ ವಿನ್ಯಾಸದಲ್ಲಿ ಮುಂಭಾಗ ಮತ್ತು ಹಿಂಭಾಗದಲ್ಲಿಯೂ ಮುದ್ರಿಸಲಾಗಿದೆ

ಲಿಪಿ: “20” ಸಂಖ್ಯೆಯನ್ನು ದೇವನಾಗರಿಯಲ್ಲಿ ಮುದ್ರಿಸಲಾಗಿದೆ

ಸೂಕ್ಷ್ಮ ಲೆಖನಗಳು: RBI, ಭಾರತ, India ಮತ್ತು “20” ಎಂಬ ಬರಹ ಸೂಕ್ಷ್ಮಾಕ್ಷರಗಳಲ್ಲಿ ಅಳವಡಿಸಲಾಗಿದೆ

ಇತರೆ ಅಂಶಗಳು:

ಮಹಾತ್ಮ ಗಾಂಧೀಜಿ ಭಾವಚಿತ್ರ

ಅಶೋಕ ಸ್ತಂಭ ಚಿಹ್ನೆ

ಸ್ವಚ್ಛ ಭಾರತ ಅಭಿಯಾನದ ಲೋಗೋ

ಭಾಷಾ ಫಲಕ

ಭದ್ರತೆಗಾಗಿ ಗವರ್ನರ್ ಸಹಿ, ಗ್ಯಾರಂಟಿ ಘೋಷಣೆ, RBI ಚಿಹ್ನೆ ಮುಂತಾದವು

ಹಳೆಯ ನೋಟುಗಳು ಎಂತು?

ಜನರಲ್ಲಿ ಆತಂಕ ಮೂಡದಂತೆ RBI ಸ್ಪಷ್ಟನೆ ನೀಡಿದ್ದು, ಈಗ ಚಲಾವಣೆಯಲ್ಲಿರುವ ಹಳೆಯ ರೂ.20 ನೋಟುಗಳು ಪೂರ್ಣ ಪ್ರಮಾಣದಲ್ಲಿ ಮಾನ್ಯವಾಗಿರುವುದೇ ಸತ್ಯ. ಹೊಸ ನೋಟು ಪರಿಚಯಿಸುವುದರಿಂದ ಹಳೆಯ ನೋಟು ಅಮಾನ್ಯವಾಗಲ್ಲ. ಎಲ್ಲ ನೋಟುಗಳೂ ಸಹಪ್ರಯೋಗಕ್ಕೆ ಲಭ್ಯವಿರುತ್ತವೆ.

RBIಯ ಉದ್ದೇಶ ಸ್ಪಷ್ಟ – ಜನರಿಗೆ ಗುಣಮಟ್ಟದ, ನಕಲಿ ನೋಟುಗಳಿಂದ ಸುರಕ್ಷಿತ ಹಾಗೂ ಸಾಂಸ್ಕೃತಿಕ ಪಾರದರ್ಶಕತೆ ಹೊಂದಿರುವ ನೋಟುಗಳನ್ನು ಒದಗಿಸುವುದು. ಈ ಹೊಸ ನೋಟು ಆರ್ಥಿಕ ಲೆನದೆನಗಳಲ್ಲಿ ಹೆಚ್ಚಿನ ನಂಬಿಕೆ ಹಾಗೂ ಭದ್ರತೆಯನ್ನು ನೀಡಲಿದ್ದು, ಭಾರತದ ಪರಂಪರೆಯ ವೈಭವವನ್ನೂ ಪ್ರತಿಬಿಂಬಿಸುತ್ತದೆ.

nazeer ahamad

Recent Posts

ಟೊರೊಂಟೊದಲ್ಲಿ ಭಾರತೀಯ ಮೂಲದ ಯುವತಿ ಹತ್ಯೆ: 7 ತಿಂಗಳ ಬಳಿಕ ಆಪ್ತ ವ್ಯಕ್ತಿ ಅರೆಸ್ಟ್‌!

ಟೊರೊಂಟೊ: ಕೆನಡಾದ ಟೊರೊಂಟೊದಲ್ಲಿ ಭಾರತೀಯ ಮೂಲದ 30 ವರ್ಷದ ಯುವತಿ ಹಿಮಾಂಶಿ ಖುರಾನಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು…

4 hours ago

ಇನ್‌ಸ್ಟಾಗ್ರಾಂ ಪ್ರೇಮಿಗಾಗಿ 6 ತಿಂಗಳ ಕಂದಮ್ಮನನ್ನೇ ಕೊಲ್ಲಿಸಿದ ತಾಯಿ! ಮೀರಾಟ್‌ನಲ್ಲಿ ಬೆಚ್ಚಿಬೀಳಿಸಿದ ಘಟನೆ

ಮೀರಾಟ್: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಪ್ರೇಮಿಗಾಗಿ ತಾಯಿಯೊಬ್ಬಳು ತನ್ನ ಆರು ತಿಂಗಳ ಹಸುಗೂಸಿನ ಸಾವಿಗೆ ಕಾರಣಳಾದ ಆರೋಪ ಕೇಳಿಬಂದಿದ್ದು, ಉತ್ತರ…

4 hours ago

ಹುಬ್ಬಳ್ಳಿ–ಅಂಕೋಲಾ ರೈಲ್ವೆ ಯೋಜನೆಗೆ ಭೂಸ್ವಾಧೀನ ಅಧಿಕೃತ ಚಾಲನೆ

163 ಕಿ.ಮೀ. ಉದ್ದದ ಯೋಜನೆ; ಉತ್ತರ ಕನ್ನಡದ 40 ಗ್ರಾಮಗಳು ಭೂಸ್ವಾಧೀನ ವ್ಯಾಪ್ತಿಗೆ ಉತ್ತರ ಕನ್ನಡ: ಹಲವು ವರ್ಷಗಳಿಂದ ನನೆಗುದಿಗೆ…

4 hours ago

ಪಾಂಡೆಗಾಂವ–ಕಂಗೋಳಿ ರಸ್ತೆ ಕೆಸರಿನ ಹೊಂಡ: ಜನರ ಆಕ್ರೋಶ, ಕಾಮಗಾರಿ ವಿಳಂಬವಾದರೆ ರಸ್ತೆ ತಡೆ ಎಚ್ಚರಿಕೆ

ಮಳೆ ಬಂದರೆ ಕೆಸರುಗದ್ದೆ; ವಿದ್ಯಾರ್ಥಿಗಳು, ವೃದ್ಧರು, ರೋಗಿಗಳ ಸಂಚಾರಕ್ಕೆ ಸಂಕಷ್ಟ — ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ ಕಾಗವಾಡ: ಬೆಳಗಾವಿ…

4 hours ago

ಜಾತ್ರೆಯಲ್ಲಿ ಮಹಿಳೆಯ ಮಂಗಳಸೂತ್ರ ಕಳವು: ಮೂವರು ಆರೋಪಿಗಳ ಬಂಧನ

₹4.50 ಲಕ್ಷ ಮೌಲ್ಯದ ಚಿನ್ನ, ಕೃತ್ಯಕ್ಕೆ ಬಳಸಿದ್ದ ಬೈಕ್ ವಶ ಹಳಿಯಾಳ: ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಮಹಿಳೆಯೊಬ್ಬರ ಕೊರಳಲ್ಲಿದ್ದ ಚಿನ್ನದ…

19 hours ago

ಬೈಕ್‌ನಲ್ಲಿ ಕರೆದೊಯ್ದು ಹಣ ಕಸಿದು ಜೀವ ಬೆದರಿಕೆ: 24 ಗಂಟೆಯಲ್ಲೇ ಆರೋಪಿ ಬಂಧನ

ಸಿಸಿಟಿವಿ ಹಾಗೂ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯ ಪತ್ತೆ; ಬೈಕ್, ಹಣ ವಶ ಹೊನ್ನಾವರ: ಬ್ಯಾಂಕ್‌ನಿಂದ ಹಣ ಪಡೆದು ಹೊರಬಂದ…

19 hours ago