Latest

ನಿಮ್ಮ ಜೇಬಿನಲ್ಲಿ ರೂ.20 ನೋಟು ಇದ್ರೆ, ಈ ಸುದ್ದಿಯನ್ನು ತಪ್ಪದೇ ಓದಿ!

ಹೊಸ ರೂಪದಲ್ಲಿ ಶೀಘ್ರದಲ್ಲೇ ರೂ.20 ನೋಟು ಮಾರುಕಟ್ಟೆಗೆ ಬರುತ್ತಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಸತತವಾಗಿ ನೋಟುಗಳಲ್ಲಿ ಸುಧಾರಣೆಗಳನ್ನು ಮಾಡುತ್ತಾ ಬರುತ್ತಿದ್ದು, ಇದೀಗ ಹೊಸ ರೂ.20 ನೋಟು ಬಿಡುಗಡೆಗೆ ಘೋಷಣೆ ನೀಡಿದೆ. ಈ ನೋಟಿನಲ್ಲಿ ಪ್ರಸ್ತುತ ಗವರ್ನರ್ ಸಂಜಯ್ ಮಲ್ಹೋತ್ರಾ ಅವರ ಸಹಿ ಇರುವುದು ಪ್ರಮುಖ ವೈಶಿಷ್ಟ್ಯವಾಗಿದೆ.

RBI ತಿಳಿಸಿದಂತೆ, ಈ ನೋಟು ಹೊಸ ಶ್ರೇಣಿಯ ಭಾಗವಾಗಿದ್ದು, ಹಳೆಯ ವಿನ್ಯಾಸವನ್ನು ಉಳಿಸಿಕೊಂಡಿದ್ದರೂ ಕೆಲವು ನವೀನ ವೈಶಿಷ್ಟ್ಯಗಳೊಂದಿಗೆ ಬರಲಿದೆ. ಜನಸಾಮಾನ್ಯರ ಚಲಾವಣೆಗೆ ಅನುಕೂಲವಾಗುವಂತೆ ಭದ್ರತಾ ಅಂಶಗಳಲ್ಲಿ ಸುಧಾರಣೆ ಮಾಡಲಾಗಿದೆ.

ಹೊಸ ರೂ.20 ನೋಟಿನ ಪ್ರಮುಖ ವೈಶಿಷ್ಟ್ಯಗಳು:

ಬಣ್ಣ: ಹಸಿರು-ಹಳದಿ ಮಿಶ್ರ ಛಾಯೆ

ಗಾತ್ರ: 63 ಮಿ.ಮೀ. x 129 ಮಿ.ಮೀ.

ಹಿಂಬದಿ ಚಿತ್ರ: ಮಹಾರಾಷ್ಟ್ರದ ಪ್ರಸಿದ್ಧ ಎಲ್ಲೋರಾ ಗುಹೆಗಳ ಚಿತ್ರಣ

ಸಂಖ್ಯೆ ಮುದ್ರಣ: “20” ಸಂಖ್ಯೆಯನ್ನು ಹೂವಿನ ವಿನ್ಯಾಸದಲ್ಲಿ ಮುಂಭಾಗ ಮತ್ತು ಹಿಂಭಾಗದಲ್ಲಿಯೂ ಮುದ್ರಿಸಲಾಗಿದೆ

ಲಿಪಿ: “20” ಸಂಖ್ಯೆಯನ್ನು ದೇವನಾಗರಿಯಲ್ಲಿ ಮುದ್ರಿಸಲಾಗಿದೆ

ಸೂಕ್ಷ್ಮ ಲೆಖನಗಳು: RBI, ಭಾರತ, India ಮತ್ತು “20” ಎಂಬ ಬರಹ ಸೂಕ್ಷ್ಮಾಕ್ಷರಗಳಲ್ಲಿ ಅಳವಡಿಸಲಾಗಿದೆ

ಇತರೆ ಅಂಶಗಳು:

ಮಹಾತ್ಮ ಗಾಂಧೀಜಿ ಭಾವಚಿತ್ರ

ಅಶೋಕ ಸ್ತಂಭ ಚಿಹ್ನೆ

ಸ್ವಚ್ಛ ಭಾರತ ಅಭಿಯಾನದ ಲೋಗೋ

ಭಾಷಾ ಫಲಕ

ಭದ್ರತೆಗಾಗಿ ಗವರ್ನರ್ ಸಹಿ, ಗ್ಯಾರಂಟಿ ಘೋಷಣೆ, RBI ಚಿಹ್ನೆ ಮುಂತಾದವು

ಹಳೆಯ ನೋಟುಗಳು ಎಂತು?

ಜನರಲ್ಲಿ ಆತಂಕ ಮೂಡದಂತೆ RBI ಸ್ಪಷ್ಟನೆ ನೀಡಿದ್ದು, ಈಗ ಚಲಾವಣೆಯಲ್ಲಿರುವ ಹಳೆಯ ರೂ.20 ನೋಟುಗಳು ಪೂರ್ಣ ಪ್ರಮಾಣದಲ್ಲಿ ಮಾನ್ಯವಾಗಿರುವುದೇ ಸತ್ಯ. ಹೊಸ ನೋಟು ಪರಿಚಯಿಸುವುದರಿಂದ ಹಳೆಯ ನೋಟು ಅಮಾನ್ಯವಾಗಲ್ಲ. ಎಲ್ಲ ನೋಟುಗಳೂ ಸಹಪ್ರಯೋಗಕ್ಕೆ ಲಭ್ಯವಿರುತ್ತವೆ.

RBIಯ ಉದ್ದೇಶ ಸ್ಪಷ್ಟ – ಜನರಿಗೆ ಗುಣಮಟ್ಟದ, ನಕಲಿ ನೋಟುಗಳಿಂದ ಸುರಕ್ಷಿತ ಹಾಗೂ ಸಾಂಸ್ಕೃತಿಕ ಪಾರದರ್ಶಕತೆ ಹೊಂದಿರುವ ನೋಟುಗಳನ್ನು ಒದಗಿಸುವುದು. ಈ ಹೊಸ ನೋಟು ಆರ್ಥಿಕ ಲೆನದೆನಗಳಲ್ಲಿ ಹೆಚ್ಚಿನ ನಂಬಿಕೆ ಹಾಗೂ ಭದ್ರತೆಯನ್ನು ನೀಡಲಿದ್ದು, ಭಾರತದ ಪರಂಪರೆಯ ವೈಭವವನ್ನೂ ಪ್ರತಿಬಿಂಬಿಸುತ್ತದೆ.

nazeer ahamad

Recent Posts

ಲೋಕಾಯುಕ್ತ ಅಧಿಕಾರಿ ಎಂದು ಎಂಜಿನಿಯರ್‌ಗೆ ಹಣ ಬೇಡಿಕೆ ಇಟ್ಟ ಆರೋಪಿ ಬಂಧನ

ಲೋಕಾಯುಕ್ತ ಕಚೇರಿಯ ಹಿರಿಯ ಅಧಿಕಾರಿ ಎಂದು ಸುಳ್ಳು ಪರಿಚಯ ನೀಡಿ, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ನಿಂದ ಹಣ ವಸೂಲಿ ಮಾಡಲು ಯತ್ನಿಸಿದ…

16 hours ago

ಉತಾರ ನೀಡಲು ₹1.5 ಲಕ್ಷ ಲಂಚ: ಪಿಡಿಒ ಲಕ್ಷ್ಮೀ ಪ್ಯಾಟಿ ಲೋಕಾಯುಕ್ತ ಬಲೆಗೆ

ಜಮೀನಿನ ಖಾತಾ ಉತಾರ ನೀಡಲು ಲಂಚ ಸ್ವೀಕರಿಸಿದ ಆರೋಪದಲ್ಲಿ ಬಿಜನಗೇರಾ ಗ್ರಾಮ ಪಂಚಾಯಿತಿ ಪಿಡಿಒ ಲಕ್ಷ್ಮೀ ಪ್ಯಾಟಿ ಲೋಕಾಯುಕ್ತ ಅಧಿಕಾರಿಗಳ…

21 hours ago

‘ಉಗ್ರ ಎಂದು ಗೊತ್ತಿದ್ದರೆ ಮನೆ ಕೊಡುತ್ತಿರಲಿಲ್ಲ’; ಶಂಕಿತ ಸುಹೇಲ್ ಬಂಧನದಿಂದ ಬೆಚ್ಚಿಬಿದ್ದ ಮನೆ ಮಾಲೀಕರು

ಅಯೋಧ್ಯೆಯ ರಾಮಮಂದಿರವನ್ನು ಗುರಿಯಾಗಿಸಿಕೊಂಡು ಸಂಚು ರೂಪಿಸಿದ್ದಾನೆ ಎಂಬ ಆರೋಪದ ಮೇಲೆ ಬಂಧಿತನಾಗಿರುವ ಶಂಕಿತ ಉಗ್ರ ಸುಹೇಲ್ ಪ್ರಕರಣಕ್ಕೆ ಹೊಸ ತಿರುವು…

21 hours ago

17 ವರ್ಷದ ಸೋದರಳಿಯನ ಬ್ಲಾಕ್ ಮೇಲ್ ಮಾಡಿ ಸೆಕ್ಸ್ ಮಾಡುತ್ತಿದ್ದ 40 ವರ್ಷದ ಅತ್ತೆ..! ಪೋಕ್ಸೋ ಪ್ರಕರಣ ದಾಖಲು.

ಉತ್ತರ ಪ್ರದೇಶದ ಅಲಿಗಢ್‌ನಲ್ಲಿ ಅಪ್ರಾಪ್ತ ಬಾಲಕನ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ತನ್ನದೇ 17…

21 hours ago

ನಟಿ ಕೃಷಿ ತಾಪಾಂಡ ನಿವಾಸದಲ್ಲಿ ಉದ್ಯಮಿ ವೈಶಾಕ್ ಮೃತದೇಹ ಪತ್ತೆ; ಸಾವಿನ ಸುತ್ತ ಹಲವು ಪ್ರಶ್ನೆಗಳು

ಬೆಂಗಳೂರಿನ ರಾಜರಾಜೇಶ್ವರಿ ನಗರದ ಐಷಾರಾಮಿ ಅಪಾರ್ಟ್‌ಮೆಂಟ್‌ನಲ್ಲಿ ಉದ್ಯಮಿ ವೈಶಾಕ್ (45) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಹಲವು ಅನುಮಾನಗಳಿಗೆ…

21 hours ago

ಇಡಿ ದಾಳಿ: ಸಚಿವ ಸತೀಶ್ ಜಾರಕಿಹೊಳಿ ಸಂಬಂಧಿ ಮನೆಯಿಂದ ಯಮುನಾ ವಶಕ್ಕೆ

ಮೈಸೂರು ನಗರದ ದಟ್ಟಗಳ್ಳಿ ಪ್ರದೇಶದಲ್ಲಿರುವ ಸಚಿವ ಸತೀಶ್ ಜಾರಕಿಹೊಳಿ ಅವರ ಸಂಬಂಧಿ ವೈ. ಮಂಜುನಾಥ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ…

1 day ago