Categories: CorruptionLatest

₹10 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ಹೆಸ್ಕಾಂ ಇಇ ಲೋಕಾಯುಕ್ತ ಬಲೆಗೆ

ಬಸವನಬಾಗೇವಾಡಿ: ಹೆಸ್ಕಾಂನ ಕಾರ್ಯನಿರ್ವಾಹಕ ಎಂಜಿನಿಯರ್ (ಇಇ) ಸಿದ್ರಾಮ ಬಿರಾದಾರ ಅವರು ಗುತ್ತಿಗೆದಾರನಿಂದ ₹10 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಸಿಕ್ಕಿಬಿದ್ದಿದ್ದಾರೆ.

ಗುತ್ತಿಗೆದಾರ ಸಂತೋಷ ಕುಮಾರ ಹುಲಸೂರು ಅವರು ಕೈಗೊಂಡಿದ್ದ ಐದು ಕಾಮಗಾರಿಗಳ ₹2 ಲಕ್ಷ ಮೊತ್ತದ ಬಿಲ್‌ ಪಾವತಿಗೆ ಸಿದ್ರಾಮ ಬಿರಾದಾರ ಅವರು ₹15 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರೆಂದು ಆರೋಪಿಸಲಾಗಿದೆ. ಈ ಪೈಕಿ ಈಗಾಗಲೇ ₹5 ಸಾವಿರವನ್ನು ಪಡೆದಿದ್ದ ಅವರು, ಉಳಿದ ₹10 ಸಾವಿರವನ್ನು ತಮ್ಮ ಕಚೇರಿಯಲ್ಲೇ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ರೆಡ್‌ಹ್ಯಾಂಡ್‌ ಆಗಿ ಬಂಧಿಸಿದ್ದಾರೆ.

ಬೆಂಗಳೂರು ಲೋಕಾಯುಕ್ತ ಡಿವೈಎಸ್ಪಿ ಪುಟ್ಟ ಓಬಳರೆಡ್ಡಿ ಹಾಗೂ ವಸಂತ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯಿತು. ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಕ್ಟರ್ ರಾಮಪ್ಪ ಸಾವಳಗಿ, ಎಸ್. ಬಿ. ಪಾಟೀಲ, ರಾಜಶೇಖರಯ್ಯ ಸೇರಿದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಪ್ರಕರಣ ದಾಖಲಿಸಿಕೊಂಡಿರುವ ಲೋಕಾಯುಕ್ತ ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

ಭ್ರಷ್ಟರ ಬೇಟೆ

Recent Posts

ಹೊಸ ಠಾಣೆಗೆ ಹೋಗುವ ಮಾರ್ಗದಲ್ಲೇ ಎಎಸ್‌ಐ ಹೃದಯಾಘಾತಕ್ಕೆ ಬಲಿ

ಬಾಗಲಕೋಟೆ: ಹೊಸ ಪೊಲೀಸ್ ಠಾಣೆಗೆ ಕರ್ತವ್ಯಕ್ಕೆ ಹಾಜರಾಗಲು ಹೊರಟಿದ್ದ ಎಎಸ್‌ಐ ಒಬ್ಬರು ಮಾರ್ಗಮಧ್ಯೆಯೇ ಹೃದಯಾಘಾತದಿಂದ ಸಾವನ್ನಪ್ಪಿರುವ ದುರ್ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ…

15 hours ago

ಪತ್ನಿ ದಪ್ಪಗಿದ್ದಾಳೆಂದು ಕ್ರೂರ ಹತ್ಯೆ: ಪತಿ ಸೇರಿ ನಾಲ್ವರು ಪೊಲೀಸರ ಬಲೆಗೆ

ಧಾರವಾಡ: ಪತ್ನಿ ದೈಹಿಕವಾಗಿ ದಪ್ಪಗಿದ್ದಾಳೆ ಎಂಬ ಕಾರಣಕ್ಕೆ ಪತಿಯೊಬ್ಬ ಆಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ ಅಮಾನುಷ ಘಟನೆ ಧಾರವಾಡ ಜಿಲ್ಲೆಯ…

15 hours ago

ಹಣಕ್ಕಾಗಿ ಬಂದಿದ್ದ ವೃದ್ಧೆಯ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು: 39 ಗ್ರಾಂ ಚಿನ್ನಾಭರಣ ವಶ

ರಾಮನಗರ: ತಾಲೂಕಿನ ಸಂಗಬಸವನದೊಡ್ಡಿ ಗ್ರಾಮದಲ್ಲಿ ಹಣ ಕೇಳಲು ಬಂದಿದ್ದ ವೃದ್ಧೆಯನ್ನು ಕೊಲೆ ಮಾಡಿ, ಶವವನ್ನು ರೈಲ್ವೆ ಹಳಿ ಬಳಿ ಎಸೆದಿದ್ದ…

15 hours ago

99 ಲಕ್ಷ ರೂ. ಸಬ್ಸಿಡಿ ಪಡೆದ ಕೇಂದ್ರ ಸಚಿವ ಭಗೀರಥ್ ಚೌಧರಿ; ‘ನಾನೂ ರೈತನೇ’ ಎಂದು ಸಮರ್ಥನೆ

ನವದೆಹಲಿ: ಸೌತೆಕಾಯಿ ಕೃಷಿ ಯೋಜನೆಗಾಗಿ ಸುಮಾರು 99 ಲಕ್ಷ ರೂ. ಸರ್ಕಾರಿ ಸಬ್ಸಿಡಿ ಪಡೆದಿರುವ ಕೇಂದ್ರ ಕೃಷಿ ಮತ್ತು ರೈತರ…

1 day ago

ವಿಚ್ಛೇದನದ ಅಂಚಿನಲ್ಲಿ ಗೌರವ್ ಖನ್ನಾ–ಆಕಾಂಕ್ಷಾ ಚಮೋಲಾ ದಾಂಪತ್ಯ? ಲಾಕ್ ಅಪ್ 2ರಲ್ಲಿ ಆಘಾತಕಾರಿ ಬಹಿರಂಗ

ಮುಂಬೈ: ನಟಿ ಆಕಾಂಕ್ಷಾ ಚಮೋಲಾ ಅವರು ಲಾಕ್ ಅಪ್ ಸೀಸನ್ 2 ಕಾರ್ಯಕ್ರಮದಲ್ಲಿ ತಮ್ಮ ವೈಯಕ್ತಿಕ ಜೀವನದ ಕುರಿತು ಆಘಾತಕಾರಿ…

1 day ago

ರಾಜ್ಯ ಸರ್ಕಾರದಿಂದ ನಾಲ್ವರು ಐಎಎಸ್ ಅಧಿಕಾರಿಗಳ ವರ್ಗಾವಣೆ; ವಿವಿಧ ಇಲಾಖೆಗಳಿಗೆ ಹೊಸ ನೇಮಕಾತಿ

ಬೆಂಗಳೂರು: ರಾಜ್ಯ ಸರ್ಕಾರ ಆಡಳಿತಾತ್ಮಕ ಪುನರ್‌ವ್ಯವಸ್ಥೆಯ ಭಾಗವಾಗಿ ಸ್ಥಳ ನಿಯುಕ್ತಿ ನಿರೀಕ್ಷೆಯಲ್ಲಿದ್ದ ನಾಲ್ವರು ಐಎಎಸ್ ಅಧಿಕಾರಿಗಳನ್ನು ವಿವಿಧ ಪ್ರಮುಖ ಹುದ್ದೆಗಳಿಗೆ…

1 day ago