Categories: CrimeLatest

ಪತ್ನಿ ದಪ್ಪಗಿದ್ದಾಳೆಂದು ಕ್ರೂರ ಹತ್ಯೆ: ಪತಿ ಸೇರಿ ನಾಲ್ವರು ಪೊಲೀಸರ ಬಲೆಗೆ

ಧಾರವಾಡ: ಪತ್ನಿ ದೈಹಿಕವಾಗಿ ದಪ್ಪಗಿದ್ದಾಳೆ ಎಂಬ ಕಾರಣಕ್ಕೆ ಪತಿಯೊಬ್ಬ ಆಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ ಅಮಾನುಷ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ಹಣಸಿ ಗ್ರಾಮದಲ್ಲಿ ನಡೆದಿದೆ.

ಹಣಸಿ ಗ್ರಾಮದ ಪ್ರಿಯಾಂಕಾ ಕಮಲಾಕರ್ (29) ಮೃತ ಮಹಿಳೆ. ಪ್ರಕರಣ ಸಂಬಂಧ ಪತಿ ಬಸವರಾಜ್ ವಡ್ಡರ್ ಸೇರಿದಂತೆ ರೇಣವ್ವ, ಸುಭಾಷ್ ಮತ್ತು ಸಿದ್ದರಾಮೇಶ್ ಎಂಬ ನಾಲ್ವರನ್ನು ನವಲಗುಂದ ಪೊಲೀಸರು ಬಂಧಿಸಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಪ್ರಿಯಾಂಕಾ ಮತ್ತು ಬಸವರಾಜ್‌ರ ವಿವಾಹ 2024ರಲ್ಲಿ ನಡೆದಿತ್ತು. ಮದುವೆಯ ಆರಂಭಿಕ ದಿನಗಳಲ್ಲಿ ದಾಂಪತ್ಯ ಜೀವನ ಸಾಮಾನ್ಯವಾಗಿದ್ದರೂ, ಬಳಿಕ ಪತ್ನಿಯ ದೈಹಿಕ ತೂಕದ ವಿಚಾರವಾಗಿ ಬಸವರಾಜ್ ಆಗಾಗ ಜಗಳ ಮಾಡುತ್ತಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ಆಕೆಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲಾಗುತ್ತಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಇದರ ಜೊತೆಗೆ ಕುಟುಂಬ ಯೋಜನೆ ಮತ್ತು ಮಗು ವಿಚಾರವಾಗಿಯೂ ದಂಪತಿ ನಡುವೆ ಭಿನ್ನಾಭಿಪ್ರಾಯಗಳಿದ್ದವು. ಸೋಮವಾರ ರಾತ್ರಿ ಇದೇ ವಿಷಯವಾಗಿ ಗಲಾಟೆ ನಡೆದಿದ್ದು, ಜಗಳ ತೀವ್ರಗೊಂಡ ವೇಳೆ ಆಕ್ರೋಶಗೊಂಡ ಬಸವರಾಜ್ ಪತ್ನಿಯ ಕುತ್ತಿಗೆ ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಬಳಿಕ ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಿದ ಪೊಲೀಸರು ಮುಖ್ಯ ಆರೋಪಿ ಬಸವರಾಜ್‌ನನ್ನು ಬಂಧಿಸಿದ್ದಾರೆ. ಜೊತೆಗೆ, ಕೊಲೆ ಪ್ರಕರಣಕ್ಕೆ ಸಹಕಾರ ಮತ್ತು ಪ್ರಚೋದನೆ ನೀಡಿದ ಆರೋಪದ ಮೇಲೆ ಉಳಿದ ಮೂವರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಕೇವಲ ದೈಹಿಕ ರೂಪ ಮತ್ತು ತೂಕದ ಕಾರಣಕ್ಕೆ ಮಹಿಳೆಯನ್ನು ಪತಿಯೇ ಹತ್ಯೆ ಮಾಡಿರುವ ಘಟನೆ ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಮಹಿಳೆಯರ ಮೇಲಿನ ಗೃಹ ಹಿಂಸಾಚಾರದ ಕುರಿತು ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ.

ಭ್ರಷ್ಟರ ಬೇಟೆ

Recent Posts

ಹೊಸ ಠಾಣೆಗೆ ಹೋಗುವ ಮಾರ್ಗದಲ್ಲೇ ಎಎಸ್‌ಐ ಹೃದಯಾಘಾತಕ್ಕೆ ಬಲಿ

ಬಾಗಲಕೋಟೆ: ಹೊಸ ಪೊಲೀಸ್ ಠಾಣೆಗೆ ಕರ್ತವ್ಯಕ್ಕೆ ಹಾಜರಾಗಲು ಹೊರಟಿದ್ದ ಎಎಸ್‌ಐ ಒಬ್ಬರು ಮಾರ್ಗಮಧ್ಯೆಯೇ ಹೃದಯಾಘಾತದಿಂದ ಸಾವನ್ನಪ್ಪಿರುವ ದುರ್ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ…

2 hours ago

ಹಣಕ್ಕಾಗಿ ಬಂದಿದ್ದ ವೃದ್ಧೆಯ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು: 39 ಗ್ರಾಂ ಚಿನ್ನಾಭರಣ ವಶ

ರಾಮನಗರ: ತಾಲೂಕಿನ ಸಂಗಬಸವನದೊಡ್ಡಿ ಗ್ರಾಮದಲ್ಲಿ ಹಣ ಕೇಳಲು ಬಂದಿದ್ದ ವೃದ್ಧೆಯನ್ನು ಕೊಲೆ ಮಾಡಿ, ಶವವನ್ನು ರೈಲ್ವೆ ಹಳಿ ಬಳಿ ಎಸೆದಿದ್ದ…

2 hours ago

99 ಲಕ್ಷ ರೂ. ಸಬ್ಸಿಡಿ ಪಡೆದ ಕೇಂದ್ರ ಸಚಿವ ಭಗೀರಥ್ ಚೌಧರಿ; ‘ನಾನೂ ರೈತನೇ’ ಎಂದು ಸಮರ್ಥನೆ

ನವದೆಹಲಿ: ಸೌತೆಕಾಯಿ ಕೃಷಿ ಯೋಜನೆಗಾಗಿ ಸುಮಾರು 99 ಲಕ್ಷ ರೂ. ಸರ್ಕಾರಿ ಸಬ್ಸಿಡಿ ಪಡೆದಿರುವ ಕೇಂದ್ರ ಕೃಷಿ ಮತ್ತು ರೈತರ…

11 hours ago

ವಿಚ್ಛೇದನದ ಅಂಚಿನಲ್ಲಿ ಗೌರವ್ ಖನ್ನಾ–ಆಕಾಂಕ್ಷಾ ಚಮೋಲಾ ದಾಂಪತ್ಯ? ಲಾಕ್ ಅಪ್ 2ರಲ್ಲಿ ಆಘಾತಕಾರಿ ಬಹಿರಂಗ

ಮುಂಬೈ: ನಟಿ ಆಕಾಂಕ್ಷಾ ಚಮೋಲಾ ಅವರು ಲಾಕ್ ಅಪ್ ಸೀಸನ್ 2 ಕಾರ್ಯಕ್ರಮದಲ್ಲಿ ತಮ್ಮ ವೈಯಕ್ತಿಕ ಜೀವನದ ಕುರಿತು ಆಘಾತಕಾರಿ…

11 hours ago

ರಾಜ್ಯ ಸರ್ಕಾರದಿಂದ ನಾಲ್ವರು ಐಎಎಸ್ ಅಧಿಕಾರಿಗಳ ವರ್ಗಾವಣೆ; ವಿವಿಧ ಇಲಾಖೆಗಳಿಗೆ ಹೊಸ ನೇಮಕಾತಿ

ಬೆಂಗಳೂರು: ರಾಜ್ಯ ಸರ್ಕಾರ ಆಡಳಿತಾತ್ಮಕ ಪುನರ್‌ವ್ಯವಸ್ಥೆಯ ಭಾಗವಾಗಿ ಸ್ಥಳ ನಿಯುಕ್ತಿ ನಿರೀಕ್ಷೆಯಲ್ಲಿದ್ದ ನಾಲ್ವರು ಐಎಎಸ್ ಅಧಿಕಾರಿಗಳನ್ನು ವಿವಿಧ ಪ್ರಮುಖ ಹುದ್ದೆಗಳಿಗೆ…

11 hours ago

ಜುಲೈನಲ್ಲಿ ಬೆಸ್ಕಾಂ ಗ್ರಾಹಕರಿಗೆ ಸರಾಸರಿ ವಿದ್ಯುತ್ ಬಿಲ್: ಮೀಟರ್ ರೀಡಿಂಗ್ ಸ್ಥಗಿತ, ಮನೆ-ಮನೆ ಪರಿಶೀಲನೆ ಆರಂಭ

ಬೆಂಗಳೂರು: ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ಮನೆ-ಮನೆ ಪರಿಶೀಲನೆ ನಡೆಸುವ ಉದ್ದೇಶದಿಂದ ಬೆಸ್ಕಾಂ ತನ್ನ ಮೀಟರ್ ರೀಡರ್‌ಗಳನ್ನು ವಿಶೇಷ ಕಾರ್ಯಕ್ಕೆ…

11 hours ago