Categories: CrimeLatest

ವೈರ್ ಕಳ್ಳತನ ಮಾಡ್ತಿದ್ದ ನಾಲ್ವರ ಬಂಧನ

ಅಲ್ಯೂಮಿನಿಯಂ ವೈರ್ ನ್ನು ಇತ್ತೀಚಿಗೆ ಕಿಡಿಗೇಡಿಗಳು ಕಳ್ಳತನ ಮಾಡಿ ಬೇರೆ ಕಡೆ ಸಾಗಿಸುತ್ತಿರುವ ಕಳ್ಳರನ್ನು ಗುಪ್ತ ಮಾಹಿತಿ ಆಧಾರದ ಮೇರೆಗೆ ಗುರುವಾರ ಪಿಎಸ್ಐ ಗೀತಾಂಜಲಿ ಶಿಂಧೆ ಯವರ ತಂಡದೊಂದಿಗೆ ಆರೋಪಿತರನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ.

ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿಯವರ ಮಾರ್ಗದರ್ಶನದಲ್ಲಿ ಸಿಪಿಐ ದುರುಗಪ್ಪ ನವರ ನೇತೃತ್ವದ ಪೊಲೀಸ್ ಸಿಬ್ಬಂದಿಯವರಾದ ಪಿಎಸ್ಐ ಗೀತಾಂಜಲಿ ಶಿಂದೆ, ನಾಗಪ್ಪ, ಯು. ಹೆಚ್ ಬಸವರಾಜ್ , ಶಶಿದರ್, ಕುಮಾರ್
ಪತ್ರಿ. ಬಸವರಾಜ್, ಕುಮಾರ್ ನಾಯ್ಕ್, ಇವರುಗಳ ತಂಡ ರಚಿಸಿ ಖಚಿತ ಮಾಹಿತಿ ಆಧಾರದ ಮೇರೆಗೆ

ಕೂಡ್ಲಿಗಿ ಉಜ್ಜಿನಿ ರಸ್ತೆಯ ಗಂಗಮ್ಮನಹಳ್ಳಿ ಕ್ರಾಸ್ ಹತ್ತಿರ ಅಶೋಕ್ ಲೈಲ್ಯಾಂಡ್ ವಾಹನದಲ್ಲಿ ಕಳ್ಳತನದ ವಸ್ತುಗಳನ್ನು ಸಾಗಿಸುವುದನ್ನು ತಡೆದು ಎ. ಮಲ್ಲಿಕಾರ್ಜುನ, ಅಂಜಿನಪ್ಪ, ಗುಡ್ಲಾ ಮರಪ್ಪರ ಬಸವರಾಜ್, ದುರುಗಪ್ಪ, ಒಟ್ಟು 4 ಜನ ಆರೋಪಿಗಳನ್ನು ಬಂಧಿಸಿ 4 ಲಕ್ಷದ ಮೌಲ್ಯದ ಆಲ್ಯೂಮಿನಿಯಂ ವೈರ್, ಮತ್ತು 3 ಲಕ್ಷ ನಗದು ಹಣ ವಶಕ್ಕೆ ಪಡೆದು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಈ ಕಾರ್ಯಚರಣೆಯನ್ನು ಗಮನಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ ಎಸ್. ರವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ವರದಿ:- ಮಣಿಕಂಠ.ಬಿ

ಭ್ರಷ್ಟರ ಬೇಟೆ

Recent Posts

ಬಿಹಾರ ಬಂದ್ ವೇಳೆ ವಿದ್ಯಾರ್ಥಿಗಳ ಮೇಲೆ ಎಕೆ-47 ಪ್ರದರ್ಶನ: ಅಧಿಕಾರಿ ಅಮಾನತು, ಲಾಠಿಚಾರ್ಜ್‌ಗೂ ಎನ್‌ಡಿಎ ಸಂಸದೆ ವಿರೋಧ

ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಜುಲೈ 25ರಂದು ನಡೆದ 'ಬಿಹಾರ ಬಂದ್' ಪ್ರತಿಭಟನೆ ವೇಳೆ ವಿದ್ಯಾರ್ಥಿಗಳ ವಿರುದ್ಧ ಪೊಲೀಸ್ ಅಧಿಕಾರಿಯೊಬ್ಬರು ಎಕೆ-47…

4 hours ago

‘ಲೀಲಮ್ಮ… ನಿನ್ನ ಗಂಡ ಯಾರಮ್ಮ?’ ಪುಸ್ತಕ ಲೋಕಾರ್ಪಣೆ: ಲೀಲಾವತಿ–ರಾಜ್‌ಕುಮಾರ್‌ ಕುರಿತ ವಿವಾದಗಳಿಗೆ ದಾಖಲೆಗಳ ಸಮೇತ ಉತ್ತರ ಎಂದ ಎನ್‌.ಆರ್‌. ರಮೇಶ್

ಕನ್ನಡದ ಹಿರಿಯ ನಟಿ ದಿವಂಗತ ಲೀಲಾವತಿ ಅವರ ಜೀವನ, ಅವರ ಪತಿ ಮಹಾಲಿಂಗ ಭಾಗವತರ್‌ ಅವರ ಹಿನ್ನೆಲೆ ಹಾಗೂ ಈ…

14 hours ago

‘ನಾನು ಪೋಸ್ಟ್ ಡಿಲೀಟ್ ಮಾಡುವುದಿಲ್ಲ’: ಧರ್ಮೇಂದ್ರ ಪ್ರಧಾನ್ ರಾಜೀನಾಮೆ ವಿಚಾರದಲ್ಲಿ ಬಿಜೆಪಿ ಸಂಸದೆ ಪುತ್ರಿಯ ಬಹಿರಂಗ ಸವಾಲ್

ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ…

14 hours ago

ತುಮಕೂರಿನಲ್ಲಿ ಭೀಕರ ಹತ್ಯೆ: ರೌಡಿಶೀಟರ್ ಮಲ್ಲನನ್ನು ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ

ತುಮಕೂರು ತಾಲೂಕಿನ ಬೆಳಗುಂಬ ರಸ್ತೆಯಲ್ಲಿರುವ ಗರುಡ ಕೆಫೆ ಸಮೀಪ ರೌಡಿಶೀಟರ್‌ವೊಬ್ಬನನ್ನು ದುಷ್ಕರ್ಮಿಗಳು ಸಿನಿಮೀಯ ರೀತಿಯಲ್ಲಿ ಹತ್ಯೆಗೈದ ಘಟನೆ ಸೋಮವಾರ ಆತಂಕ…

14 hours ago

ತೊಡೆಯ ಮೇಲೆ ಮಹಿಳೆಯನ್ನು ಕೂರಿಸಿಕೊಂಡು ಆಟೋ ಓಡಿಸಿದ ಅಪ್ರಾಪ್ತ! ವೈರಲ್ ಆದ ವಿಡಿಯೊದ ಅಸಲಿ ಸತ್ಯ ಬಹಿರಂಗ

ಹೈದರಾಬಾದ್‌ನ ಚಾದರ್‌ಘಾಟ್ ಸೇತುವೆಯಲ್ಲಿ ಅಪ್ರಾಪ್ತ ಬಾಲಕನೊಬ್ಬ ಮಹಿಳೆಯನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಂಡೇ ಆಟೋರಿಕ್ಷಾ ಚಲಾಯಿಸುತ್ತಿರುವ ವಿಡಿಯೊ ಮತ್ತೊಮ್ಮೆ ಸಾಮಾಜಿಕ…

1 day ago

ಪೊಲೀಸ್-ಪತ್ರಕರ್ತರ ಸೋಗಿನಲ್ಲಿ ₹60 ಸಾವಿರ ಸುಲಿಗೆ! ನಾಲ್ವರು ಯೂಟ್ಯೂಬರ್‌ಗಳು ಅಂದರ್

ಹುಕ್ಕೇರಿ ತಾಲ್ಲೂಕಿನಲ್ಲಿ ಪತ್ರಕರ್ತರು ಹಾಗೂ ಪೊಲೀಸರ ಸೋಗಿನಲ್ಲಿ ವ್ಯಕ್ತಿಯೊಬ್ಬರನ್ನು ಬೆದರಿಸಿ ಹಣ ಸುಲಿಗೆ ಮಾಡಿದ ಆರೋಪದಡಿ ನಾಲ್ವರು ಯೂಟ್ಯೂಬರ್‌ಗಳನ್ನು ಹುಕ್ಕೇರಿ…

1 day ago