ಅಲ್ಯೂಮಿನಿಯಂ ವೈರ್ ನ್ನು ಇತ್ತೀಚಿಗೆ ಕಿಡಿಗೇಡಿಗಳು ಕಳ್ಳತನ ಮಾಡಿ ಬೇರೆ ಕಡೆ ಸಾಗಿಸುತ್ತಿರುವ ಕಳ್ಳರನ್ನು ಗುಪ್ತ ಮಾಹಿತಿ ಆಧಾರದ ಮೇರೆಗೆ ಗುರುವಾರ ಪಿಎಸ್ಐ ಗೀತಾಂಜಲಿ ಶಿಂಧೆ ಯವರ ತಂಡದೊಂದಿಗೆ ಆರೋಪಿತರನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ.

ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿಯವರ ಮಾರ್ಗದರ್ಶನದಲ್ಲಿ ಸಿಪಿಐ ದುರುಗಪ್ಪ ನವರ ನೇತೃತ್ವದ ಪೊಲೀಸ್ ಸಿಬ್ಬಂದಿಯವರಾದ ಪಿಎಸ್ಐ ಗೀತಾಂಜಲಿ ಶಿಂದೆ, ನಾಗಪ್ಪ, ಯು. ಹೆಚ್ ಬಸವರಾಜ್ , ಶಶಿದರ್, ಕುಮಾರ್
ಪತ್ರಿ. ಬಸವರಾಜ್, ಕುಮಾರ್ ನಾಯ್ಕ್, ಇವರುಗಳ ತಂಡ ರಚಿಸಿ ಖಚಿತ ಮಾಹಿತಿ ಆಧಾರದ ಮೇರೆಗೆ

ಕೂಡ್ಲಿಗಿ ಉಜ್ಜಿನಿ ರಸ್ತೆಯ ಗಂಗಮ್ಮನಹಳ್ಳಿ ಕ್ರಾಸ್ ಹತ್ತಿರ ಅಶೋಕ್ ಲೈಲ್ಯಾಂಡ್ ವಾಹನದಲ್ಲಿ ಕಳ್ಳತನದ ವಸ್ತುಗಳನ್ನು ಸಾಗಿಸುವುದನ್ನು ತಡೆದು ಎ. ಮಲ್ಲಿಕಾರ್ಜುನ, ಅಂಜಿನಪ್ಪ, ಗುಡ್ಲಾ ಮರಪ್ಪರ ಬಸವರಾಜ್, ದುರುಗಪ್ಪ, ಒಟ್ಟು 4 ಜನ ಆರೋಪಿಗಳನ್ನು ಬಂಧಿಸಿ 4 ಲಕ್ಷದ ಮೌಲ್ಯದ ಆಲ್ಯೂಮಿನಿಯಂ ವೈರ್, ಮತ್ತು 3 ಲಕ್ಷ ನಗದು ಹಣ ವಶಕ್ಕೆ ಪಡೆದು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಈ ಕಾರ್ಯಚರಣೆಯನ್ನು ಗಮನಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ ಎಸ್. ರವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ವರದಿ:- ಮಣಿಕಂಠ.ಬಿ

Related News

error: Content is protected !!