ಇಂದಿನ ವೇಗದ ಜೀವನದಲ್ಲಿ, ಮದುವೆಯಾದ ನಂತರ ಕೆಲಸದ ಅವಶ್ಯಕತೆಗಾಗಿ ದಂಪತಿಗಳು ಕುಟುಂಬದಿಂದ ದೂರವಿರುವುದು ಸಾಮಾನ್ಯವಾಗಿದೆ. ವಿಶೇಷವಾಗಿ ಸಣ್ಣ ಮಕ್ಕಳನ್ನು ನೋಡಿಕೊಳ್ಳುವ ಸೌಕರ್ಯ ಇಲ್ಲದ ಕಾರಣ, ಹೆಚ್ಚಿನವರು ಡೇ ಕೇರ್ ಕೇಂದ್ರಗಳ ಸಹಾಯವನ್ನು ಅವಲಂಬಿಸುತ್ತಾರೆ. ಆದರೆ, ಕೆಲವೆಡೆ ಮಕ್ಕಳ ಮೇಲೆ ನಿರ್ಲಕ್ಷ್ಯ ಅಥವಾ ದುರ್ವ್ಯವಹಾರ ನಡೆಯುತ್ತಿರುವ ದೂರುಗಳು ಕೇಳಿಬರುತ್ತವೆ. ನೋಯ್ಡಾದಲ್ಲಿ ನಡೆದ ಇತ್ತೀಚಿನ ಘಟನೆ ಇದಕ್ಕೆ ನಿದರ್ಶನವಾಗಿದೆ.
ಭಯಾನಕ ಡೇ ಕೇರ್ ಕಿರುಕುಳ
ನೋಯ್ಡಾದ ಸೆಕ್ಟರ್ 137ರಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಡೇ ಕೇರ್ನಲ್ಲಿ 15 ತಿಂಗಳ ಮಗುವಿನ ಮೇಲೆ ಸಿಬ್ಬಂದಿ ಮೃಗೀಯ ವರ್ತನೆ ತೋರಿರುವ ಘಟನೆ ಬೆಳಕಿಗೆ ಬಂದಿದೆ. ಕೆಲಸದ ನಿಮಿತ್ತ ಮಗುವನ್ನು ಪ್ರತಿದಿನ ಡೇ ಕೇರ್ಗೆ ಬಿಟ್ಟು ಹೋಗುತ್ತಿದ್ದ ಪೋಷಕರು, ಕೆಲವು ದಿನಗಳ ನಂತರ ಮಗುವಿನ ದೇಹದಲ್ಲಿ ಗಾಯದ ಕಲೆಗಳು ಕಂಡು ಬಂದ ಹಿನ್ನೆಲೆಯಲ್ಲಿ ಶಂಕೆ ವ್ಯಕ್ತಪಡಿಸಿದರು. ವಿಚಾರಿಸಿದಾಗ, ಸಿಬ್ಬಂದಿ ಸಮರ್ಪಕ ಉತ್ತರ ನೀಡದೆ ಪೋಷಕರ ಮೇಲೆಯೇ ಅಹಂಕಾರದಿಂದ ವರ್ತಿಸಿದ್ದಾಳೆ.
ಸಿಸಿಟಿವಿ ದೃಶ್ಯಗಳಲ್ಲಿ ಆಘಾತ
ಸಿಟ್ಟಿಗೆದ್ದ ಪೋಷಕರು ಡೇ ಕೇರ್ ಆಡಳಿತಕ್ಕೆ ದೂರು ನೀಡಿ, ಅಲ್ಲಿ ಅಳವಡಿಸಿದ್ದ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಬೆಚ್ಚಿಬೀಳುವಂತಹ ದೃಶ್ಯಗಳು ದಾಖಲಾಗಿದ್ದವು. ವಿಡಿಯೋದಲ್ಲಿ, ಅಳುತ್ತಿದ್ದ ಮಗುವನ್ನು ಮೊದಲಿಗೆ ಸಿಬ್ಬಂದಿ ಎತ್ತಿಕೊಂಡು ಸಮಾಧಾನಪಡಿಸಲು ಪ್ರಯತ್ನಿಸಿದರೂ, ಮಗು ಅಳು ನಿಲ್ಲಿಸದಿದ್ದಾಗ ಆಕೆ ಮಗುವಿನ ಕಾಲಿಗೆ ಕೈಯಿಂದ ಚಿವುಟುವುದು, ಕೈಗೆ ಬಾಯಿಯಿಂದ ಕಚ್ಚುವುದು, ತಲೆಯನ್ನು ಗೋಡೆಗೆ ಡಿಕ್ಕಿ ಹೊಡೆಯುವುದು, ಹಾಗೂ ಮೇಲಿನಿಂದ ನೆಲಕ್ಕೆ ಎಸೆದು ಹಾಕುವಂತೆ ಕ್ರೂರ ವರ್ತನೆ ತೋರಿದ್ದಳು.
ಸಿಬ್ಬಂದಿ ಬಂಧನ
ಈ ದೃಶ್ಯಾವಳಿಯ ಆಧಾರದ ಮೇಲೆ ಪೋಷಕರು ಪೊಲೀಸರಿಗೆ ದೂರು ನೀಡಿದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಆಕ್ರೋಶ ಉಂಟುಮಾಡಿದ್ದು, ಡೇ ಕೇರ್ಗಳ ಸುರಕ್ಷತೆ ಕುರಿತು ಮತ್ತೆ ಪ್ರಶ್ನೆಗಳು ಎದ್ದಿವೆ.
ಈ ರೀತಿಯ ಕ್ರೂರ ವರ್ತನೆಗಳು ಪೋಷಕರಲ್ಲಿ ಭೀತಿಯನ್ನು ಉಂಟುಮಾಡಿ, ಡೇ ಕೇರ್ಗಳ ಮೇಲೆ ಇರುವ ನಂಬಿಕೆಗೆ ದೊಡ್ಡ ಧಕ್ಕೆಯನ್ನು ತರುತ್ತಿವೆ. ಮಕ್ಕಳ ಸುರಕ್ಷತೆಯತ್ತ ಕಡ್ಡಾಯ ನಿಗಾವಹಿಸುವ ಅಗತ್ಯ ಮತ್ತೆ ಸ್ಪಷ್ಟವಾಗಿದೆ.
***
ಭ್ರಷ್ಟರ ಬೇಟೆ ಪತ್ರಿಕೆಗೆ ರಾಜ್ಯಾದ್ಯಂತ ವರದಿಗಾರರು ಬೇಕಾಗಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 80 88070392
ಕಾರವಾರ: ಜಿಲ್ಲೆಯಲ್ಲಿ ಪಾರದರ್ಶಕ, ಜನಪರ ಹಾಗೂ ಪರಿಣಾಮಕಾರಿ ಆಡಳಿತ ನೀಡಲು ಎಲ್ಲಾ ಸರ್ಕಾರಿ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಮುಖ್ಯಮಂತ್ರಿಗಳು…
ಮಾರುಕಟ್ಟೆಯಿಂದ ಮನೆಗೆ ತೆರಳಲು ಖಾಸಗಿ ಬಸ್ ಹತ್ತಿದ್ದ ಯುವತಿಗೆ ಮಾರ್ಗಮಧ್ಯೆ ಕಿರುಕುಳ ನೀಡಿದ ಘಟನೆ ನಡೆದಿದೆ. ಬಸ್ ಚಲಿಸಲು ಆರಂಭಿಸಿದ…
ಮಧ್ಯಪ್ರದೇಶ: ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಣ ವ್ಯವಸ್ಥೆಯನ್ನೇ ಅಣಕಿಸುವಂತಹ ಆಘಾತಕಾರಿ ಪ್ರಕರಣವೊಂದು ಮಧ್ಯಪ್ರದೇಶದ ಮುರೈನಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ತಿಂಗಳಿಗೆ ₹65…
ಸೋಷಿಯಲ್ ಮೀಡಿಯಾದಲ್ಲಿ ಸದಾ ನಗುನಗುತ್ತಾ ಕಾಣಿಸಿಕೊಳ್ಳುತ್ತಿದ್ದ ಕೇರಳದ ಜನಪ್ರಿಯ ಜೋಡಿ ಅಖಿಲ್ (Akhil NRD) ಮತ್ತು ಮೇಘಾ ಅವರ ದಾಂಪತ್ಯ…
ಟೊರೊಂಟೊ: ಕೆನಡಾದ ಟೊರೊಂಟೊದಲ್ಲಿ ಭಾರತೀಯ ಮೂಲದ 30 ವರ್ಷದ ಯುವತಿ ಹಿಮಾಂಶಿ ಖುರಾನಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು…
ಮೀರಾಟ್: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಪ್ರೇಮಿಗಾಗಿ ತಾಯಿಯೊಬ್ಬಳು ತನ್ನ ಆರು ತಿಂಗಳ ಹಸುಗೂಸಿನ ಸಾವಿಗೆ ಕಾರಣಳಾದ ಆರೋಪ ಕೇಳಿಬಂದಿದ್ದು, ಉತ್ತರ…