Latest

ಸಿನಿಮಾ ಕ್ಷೇತ್ರದಲ್ಲಿ ಬಿರುಕು ಬಿಡಬೇಡಿ: ರಮ್ಯಾ–ದರ್ಶನ್ ಅಭಿಮಾನಿ ವಿವಾದಕ್ಕೆ ರಾಕ್‌ಲೈನ್ ವೆಂಕಟೇಶ್ ಗಂಭೀರ ಎಚ್ಚರಿಕೆ”

ಬೆಂಗಳೂರು – ನಟಿ ರಮ್ಯಾ ಮತ್ತು ನಟ ದರ್ಶನ್ ಅವರ ಅಭಿಮಾನಿಗಳ ನಡುವಿನ ಸಾಮಾಜಿಕ ಮಾಧ್ಯಮ ಜಟಾಪಟಿಗೆ ಸಂಬಂಧಿಸಿದಂತೆ ಇದೀಗ ಹಿರಿಯ ನಿರ್ಮಾಪಕ, ನಟ ರಾಕ್‌ಲೈನ್ ವೆಂಕಟೇಶ್ ಗಂಭೀರ ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಷಯಕ್ಕೆ ಸಂಬಂಧಪಟ್ಟಂತೆ ಕಲಾವಿದರ ಸಂಘದತ್ತ ಮನವಿ ಸಲ್ಲಿಸಿದ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಭಾಮಾ ಹರೀಶ್ ಅವರು ಚರ್ಚೆ ಪ್ರಾರಂಭವಾಗಲು ದಾರಿ ಹಾಕಿದ್ದಾರೆ.

ರಾಕ್‌ಲೈನ್ ವೇದಿಕೆ ಮೇಲೆ ಮಾತನಾಡುತ್ತಾ, “ಈ ಜಗಳಕ್ಕೆ ಕಾರಣವಾದವರಿಗೂ, ಅದನ್ನು ಮುಂದುವರಿಸಿಕೊಂಡು ಹೋಗುವವರಿಗೂ ಕಾನೂನಿನಡಿ ಶಿಕ್ಷೆಯಾಗಲೇಬೇಕು. ಎಲ್ಲೋ ಕುಳಿತು ಕೆಟ್ಟದಾಗಿ ಮಾತನಾಡೋವರು ಹೆಚ್ಚು ಅಪಾಯಕರರು. ಅವರ ಹಿಂದೆ ನಿಂತಿರುವ ಹೀರೋಗಳನ್ನ ನಾವು ನೋಡಿ ಮೌನವಾಗಬಾರದು. ಯಾರೇ ಆದ್ರೂ, ಅವರ ಫ್ಯಾನ್ಸ್ ಪೇಜ್ ಮೂಲಕ ಬಂದು ಇಂಥ ವೃತ್ತಿಯೊಂದನ್ನು ಮಾಡಿದ್ರು ಎಂದರೆ, ಶಿಕ್ಷೆ ತಪ್ಪಿಲ್ಲ,” ಎಂದು ಎಚ್ಚರಿಸಿದರು.

“ನಿಮ್ಮ ಮನೆ ಹೆಣ್ಣು ಮಕ್ಕಳ ಬಗ್ಗೆ ನೀವು ಎಷ್ಟು ಕಾಳಜಿಯಿಂದಿರುತ್ತೀರೋ, ಅಷ್ಟೇ ಕಾಳಜಿ ಇತರರ ಹೆಣ್ಣುಮಕ್ಕಳಿಗೆ ಕೂಡ ತೋರಿಸಬೇಕು. ಯಾವುದೆ ಸ್ಟಾರ್ ನಿಮ್ಮ ಮನೆಯ ಮಹಿಳೆಯರ ರಕ್ಷಣೆಗೆ ಬಾರೋದಿಲ್ಲ. ಹೀಗಾಗಿ ಯಾರ ಅಭಿಮಾನಿ ಆಗಿದ್ರೂ, ಕಾನೂನು ಮೀರಿದವರ ವಿರುದ್ಧ ಸತ್ಯದ ಬೆನ್ನಟ್ಟೋದು ಗಂಡಸ್ತನ ಕೆಲಸ,” ಎಂದರು ಅವರು.

ಚಿತ್ರರಂಗದಲ್ಲಿ ಭಯದ ವಾತಾವರಣ

ಈ ಘಟನೆಯ ಪರಿಣಾಮವಾಗಿ ಹಲವರಲ್ಲಿ ಸಿನಿಮಾ ಮಾಡುವ ಧೈರ್ಯ ಕಡಿಮೆಯಾಗುತ್ತಿದೆ ಎಂದ ಅವರು, “ಡಾ.ರಾಜ್ ಕುಮಾರ್, ಅಂಬರೀಶ್, ವಿಷ್ಣುವರ್ಧನ್ ಇವರು ಕಟ್ಟಿಕೊಟ್ಟ ಚಿತ್ರರಂಗವನ್ನು ನಾವು ಎಂತಹ ಧೋರಣೆಯಲ್ಲಿ ಬಳಸುತ್ತಿದ್ದೇವೆ ಎಂಬುದರ ಬಗ್ಗೆ ತಕ್ಷಣ ಆತ್ಮಪರಿಶೀಲನೆ ಮಾಡಬೇಕು. 200 ಸಿನಿಮಾಗಳಲ್ಲಿ 30 ಮಾತ್ರ ತೆರೆಗೆ ಬರುತ್ತಿವೆ. ಫ್ಯಾನ್ಸ್‌ಗಳಿಗೆ ಮನವಿ ಮಾಡ್ತೀನಿ – ಈ ವರ್ತನೆ ತಪ್ಪಿದೆ. ಈ ತರಹದ ಸ್ವಾರ್ಥಪೂರ್ಣ ನಡೆ ಚಿತ್ರರಂಗಕ್ಕೆ ನಷ್ಟಮಾಡಬಹುದು,” ಎಂದರು.

ಕಲಾವಿದರ ಒಗ್ಗಟ್ಟಿಗೆ ಕರೆ

ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ತಪ್ಪು ಮಾಡಿದವರು ಕ್ಷಮೆ ಕೇಳಿ ಮುನ್ನಡೆಬೇಕು. “ಚಿತ್ರರಂಗ ಸೃಜನಾತ್ಮಕತೆಯ ವೇದಿಕೆ ಆಗಬೇಕು, ಯಾರು ಬೇಕಾದರೂ ಬಂದು ಸೇರಬೇಕು. ಈ ರೀತಿ ಸಾಮಾಜಿಕ ಮಾಧ್ಯಮಗಳಲ್ಲಿ ವೈಷಮ್ಯ ಬಿತ್ತುವದೇನಾದರೂ ನಡೆದಿದ್ರೆ, ಹಿರಿಯ ಕಲಾವಿದರು ಸೇರಿ ತಕ್ಷಣ ತಡೆಹಿಡಿಯಬೇಕು,” ಎಂದು ಹೇಳಿದ್ದಾರೆ.

ಅಭಿಮಾನಿಗಳಿಗೆ ಸ್ಪಷ್ಟ ಸಂದೇಶ

ಅಭಿಮಾನಿಗಳಿಗೆ ನೇರ ಸಂದೇಶ ನೀಡಿದ ರಾಕ್‌ಲೈನ್, “ನಾವು ಕ್ಯಾಮೆರಾ ಮುಂದೆ ನೀತಿ ಭಾಷಣ ಮಾಡ್ತೀವಿ, ಅದನ್ನ ರಿಯಲ್ ಲೈಫಲ್ಲೂ ಪಾಲಿಸಬೇಕು. ದರ್ಶನ್ ಆಗಲಿ, ಸುದೀಪ್ ಆಗಲಿ – ಎಲ್ಲರೂ ಮುಂದೆ ಬಂದು ಈ ವಿಷಯದ ಬಗ್ಗೆ ಸ್ಪಷ್ಟ ನಿಲುವು ತೋರಬೇಕು,” ಎಂದರು.

ಲೀಗಲ್ ಆಕ್ಷನ್ ತೆಗೆದ ಹಿನ್ನಲೆ

ಸೋಶಿಯಲ್ ಮೀಡಿಯಾದಲ್ಲಿ ತಾನೂ ಟ್ರೋಲ್‌ಗೆ ಗುರಿಯಾದ ಬಗ್ಗೆ ಮಾತನಾಡಿದ ರಾಕ್‌ಲೈನ್, “ನನ್ನನ್ನೂ ಗೇಲಿ ಮಾಡೋಕೆ ಹೊರಟಿದ್ರು. ನನಗೆ ಸಾಬೀತು ಸಿಕ್ಕಿದ ಮೇಲೆ ಲೀಗಲ್ ಆಕ್ಷನ್ ತೆಗೆದಿದ್ದೀನಿ. ಎಂಟು ಕೇಸ್ ಹಾಕಿದ್ದೀನಿ. ಅವರು ಇನ್ನುಲ್ತು ಹಲವಾರು ವರ್ಷಗಳ ಕಾಲ ಕೋರ್ಟ್‌ಗೆ ಹೋಗಬೇಕಿದೆ. ಸಮಯ ಬಂದಾಗ ಸತ್ಯವನ್ನು ಬಹಿರಂಗಪಡಿಸುತ್ತೀನಿ. ಆವಾಗ ಯಾರ ಬೆಂಬಲ ಸಿಗುತ್ತೆ ಅಂತ ಗೊತ್ತಾಗುತ್ತದೆ,” ಎಂದರು.

ಸಮಾಪ್ತಿಗೆ ಕರೆ

“ಇದು ಕಲಾವಿದರ ವಿರುದ್ಧವೋ ಅಭಿಮಾನಿಗಳ ವಿರೋಧವೋ ಅಲ್ಲ – ಇದೊಂದು ವೈಚಾರಿಕ ಪಾಠ. ಕಲಾವಿದರು, ಅಭಿಮಾನಿಗಳು, ನಿರ್ಮಾಪಕರು, ತಂತ್ರಜ್ಞರು ಎಲ್ಲರೂ ಒಂದಾಗಿ ಚಿತ್ರರಂಗವನ್ನು ಮುಂದೆ ಕೊಂಡೊಯ್ಯೋ ಕೆಲಸ ಮಾಡಬೇಕು,” ಎಂಬ ಮೂಲಕ ರಾಕ್‌ಲೈನ್ ವೆಂಕಟೇಶ್ ಸಮಗ್ರ ಚಿತ್ರರಂಗಕ್ಕೆ ಒಂದಾದಂತ ಒಕ್ಕೂಟದ ಸಂದೇಶ ನೀಡಿದ್ದಾರೆ.

***

“ಭ್ರಷ್ಟರ ಬೇಟೆ” ಪತ್ರಿಕೆಗೆ ರಾಜ್ಯದ್ಯಂತ ವರದಿಗಾರರು ಬೇಕಾಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8088070392

nazeer ahamad

Recent Posts

ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ: ತಕ್ಷಣ ಶಾಸಕ ಸ್ಥಾನ ರದ್ದು, ಮುಂದೇನು?

ಧಾರವಾಡ ಜಿಪಂ ಮಾಜಿ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಮಹತ್ವದ ತೀರ್ಪು ಹೊರಬಿದ್ದಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕಾಂಗ್ರೆಸ್…

9 hours ago

ಪೆಟ್ರೋಲ್ ಬಂಕ್ ನಕಾಶೆ ಅಪ್ಲೋಡ್‌ಗೆ ಹಣ ಬೇಡಿಕೆ – ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ

ವಿಜಯಪುರ ಜಿಲ್ಲೆಯಲ್ಲಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಸಿಲುಕಿರುವ ಘಟನೆ ನಡೆದಿದೆ. ಪೆಟ್ರೋಲ್ ಬಂಕ್ ಜಾಗದ…

9 hours ago

ಖಾತೆಗಾಗಿ ಲಂಚ ಬೇಡಿಕೆ: ನೆಲಮಂಗಲದ ಕಳಲುಘಟ್ಟ ಪಿಡಿಓ ಲೋಕಾಯುಕ್ತ ಬಲೆಗೆ

ನಿವೇಶನದ ಖಾತೆ ಮಾಡಿಕೊಡಲು ಲಂಚ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ನೆಲಮಂಗಲ ತಾಲೂಕಿನ ಕಳಲುಘಟ್ಟ ಗ್ರಾಮ ಪಂಚಾಯಿತಿ ಪಿಡಿಓ ಲೋಕಾಯುಕ್ತ…

11 hours ago

ವಿಷು ಪೋಸ್ಟರ್ ವಿವಾದ: ಶ್ರೀಕೃಷ್ಣನ ಪಕ್ಕದಲ್ಲಿ ಚಿಕನ್ ಚಿತ್ರ – ರೆಸ್ಟೋರೆಂಟ್ ಮಾಲೀಕ ಆರೆಸ್ಟ್.!!!

ಕೇರಳದ ಅಲೆಪ್ಪಿ ಜಿಲ್ಲೆಯ ಚೆರ್ತಲಾದಲ್ಲಿ ವಿಷು ಹಬ್ಬದ ಶುಭಾಶಯ ಪೋಸ್ಟರ್ ಒಂದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಈ ಪೋಸ್ಟರ್‌ನಲ್ಲಿ ಶ್ರೀಕೃಷ್ಣನ…

13 hours ago

ಹಾರ್ಮುಝ್ ಜಲಸಂಧಿ ಮತ್ತೆ ತೆರೆಯಿತು: ಯುದ್ಧ ವಿರಾಮದ ಬಳಿಕ ಜಾಗತಿಕ ತೈಲ ಮಾರುಕಟ್ಟೆಗೆ ನೆಮ್ಮದಿ

ಇರಾನ್ ಮತ್ತು ಲೆಬನಾನ್ ನಡುವಿನ ಉದ್ವಿಗ್ನ ಪರಿಸ್ಥಿತಿ ಶಮನವಾಗುತ್ತಿರುವ ಹಿನ್ನೆಲೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಹಾರ್ಮುಝ್ ಜಲಸಂಧಿಯನ್ನು ಮತ್ತೆ ಎಲ್ಲಾ…

13 hours ago

ಇನ್‌ಸ್ಟಾಗ್ರಾಮ್ ಹನಿಟ್ರ್ಯಾಪ್: 14 ವರ್ಷದ ಬಾಲಕ ಅಪಹರಣ – 1 ಕೋಟಿ ಸುಲಿಗೆ ಯತ್ನ, ಸಂಬಂಧಿಯೇ ಮಾಸ್ಟರ್ ಮೈಂಡ್!

ಛತ್ತೀಸ್‌ಗಢದ ದುರ್ಗ್ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕನನ್ನು ಗುರಿಯಾಗಿಸಿಕೊಂಡು ಹನಿಟ್ರ್ಯಾಪ್ ಮೂಲಕ ನಡೆದ ಅಪಹರಣ ಪ್ರಕರಣ ಭಾರೀ ಸಂಚಲನ ಮೂಡಿಸಿದೆ. 14…

13 hours ago