ಬೆಂಗಳೂರು – ನಟಿ ರಮ್ಯಾ ಮತ್ತು ನಟ ದರ್ಶನ್ ಅವರ ಅಭಿಮಾನಿಗಳ ನಡುವಿನ ಸಾಮಾಜಿಕ ಮಾಧ್ಯಮ ಜಟಾಪಟಿಗೆ ಸಂಬಂಧಿಸಿದಂತೆ ಇದೀಗ ಹಿರಿಯ ನಿರ್ಮಾಪಕ, ನಟ ರಾಕ್‌ಲೈನ್ ವೆಂಕಟೇಶ್ ಗಂಭೀರ ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಷಯಕ್ಕೆ ಸಂಬಂಧಪಟ್ಟಂತೆ ಕಲಾವಿದರ ಸಂಘದತ್ತ ಮನವಿ ಸಲ್ಲಿಸಿದ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಭಾಮಾ ಹರೀಶ್ ಅವರು ಚರ್ಚೆ ಪ್ರಾರಂಭವಾಗಲು ದಾರಿ ಹಾಕಿದ್ದಾರೆ.

ರಾಕ್‌ಲೈನ್ ವೇದಿಕೆ ಮೇಲೆ ಮಾತನಾಡುತ್ತಾ, “ಈ ಜಗಳಕ್ಕೆ ಕಾರಣವಾದವರಿಗೂ, ಅದನ್ನು ಮುಂದುವರಿಸಿಕೊಂಡು ಹೋಗುವವರಿಗೂ ಕಾನೂನಿನಡಿ ಶಿಕ್ಷೆಯಾಗಲೇಬೇಕು. ಎಲ್ಲೋ ಕುಳಿತು ಕೆಟ್ಟದಾಗಿ ಮಾತನಾಡೋವರು ಹೆಚ್ಚು ಅಪಾಯಕರರು. ಅವರ ಹಿಂದೆ ನಿಂತಿರುವ ಹೀರೋಗಳನ್ನ ನಾವು ನೋಡಿ ಮೌನವಾಗಬಾರದು. ಯಾರೇ ಆದ್ರೂ, ಅವರ ಫ್ಯಾನ್ಸ್ ಪೇಜ್ ಮೂಲಕ ಬಂದು ಇಂಥ ವೃತ್ತಿಯೊಂದನ್ನು ಮಾಡಿದ್ರು ಎಂದರೆ, ಶಿಕ್ಷೆ ತಪ್ಪಿಲ್ಲ,” ಎಂದು ಎಚ್ಚರಿಸಿದರು.

“ನಿಮ್ಮ ಮನೆ ಹೆಣ್ಣು ಮಕ್ಕಳ ಬಗ್ಗೆ ನೀವು ಎಷ್ಟು ಕಾಳಜಿಯಿಂದಿರುತ್ತೀರೋ, ಅಷ್ಟೇ ಕಾಳಜಿ ಇತರರ ಹೆಣ್ಣುಮಕ್ಕಳಿಗೆ ಕೂಡ ತೋರಿಸಬೇಕು. ಯಾವುದೆ ಸ್ಟಾರ್ ನಿಮ್ಮ ಮನೆಯ ಮಹಿಳೆಯರ ರಕ್ಷಣೆಗೆ ಬಾರೋದಿಲ್ಲ. ಹೀಗಾಗಿ ಯಾರ ಅಭಿಮಾನಿ ಆಗಿದ್ರೂ, ಕಾನೂನು ಮೀರಿದವರ ವಿರುದ್ಧ ಸತ್ಯದ ಬೆನ್ನಟ್ಟೋದು ಗಂಡಸ್ತನ ಕೆಲಸ,” ಎಂದರು ಅವರು.

ಚಿತ್ರರಂಗದಲ್ಲಿ ಭಯದ ವಾತಾವರಣ

ಈ ಘಟನೆಯ ಪರಿಣಾಮವಾಗಿ ಹಲವರಲ್ಲಿ ಸಿನಿಮಾ ಮಾಡುವ ಧೈರ್ಯ ಕಡಿಮೆಯಾಗುತ್ತಿದೆ ಎಂದ ಅವರು, “ಡಾ.ರಾಜ್ ಕುಮಾರ್, ಅಂಬರೀಶ್, ವಿಷ್ಣುವರ್ಧನ್ ಇವರು ಕಟ್ಟಿಕೊಟ್ಟ ಚಿತ್ರರಂಗವನ್ನು ನಾವು ಎಂತಹ ಧೋರಣೆಯಲ್ಲಿ ಬಳಸುತ್ತಿದ್ದೇವೆ ಎಂಬುದರ ಬಗ್ಗೆ ತಕ್ಷಣ ಆತ್ಮಪರಿಶೀಲನೆ ಮಾಡಬೇಕು. 200 ಸಿನಿಮಾಗಳಲ್ಲಿ 30 ಮಾತ್ರ ತೆರೆಗೆ ಬರುತ್ತಿವೆ. ಫ್ಯಾನ್ಸ್‌ಗಳಿಗೆ ಮನವಿ ಮಾಡ್ತೀನಿ – ಈ ವರ್ತನೆ ತಪ್ಪಿದೆ. ಈ ತರಹದ ಸ್ವಾರ್ಥಪೂರ್ಣ ನಡೆ ಚಿತ್ರರಂಗಕ್ಕೆ ನಷ್ಟಮಾಡಬಹುದು,” ಎಂದರು.

ಕಲಾವಿದರ ಒಗ್ಗಟ್ಟಿಗೆ ಕರೆ

ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ತಪ್ಪು ಮಾಡಿದವರು ಕ್ಷಮೆ ಕೇಳಿ ಮುನ್ನಡೆಬೇಕು. “ಚಿತ್ರರಂಗ ಸೃಜನಾತ್ಮಕತೆಯ ವೇದಿಕೆ ಆಗಬೇಕು, ಯಾರು ಬೇಕಾದರೂ ಬಂದು ಸೇರಬೇಕು. ಈ ರೀತಿ ಸಾಮಾಜಿಕ ಮಾಧ್ಯಮಗಳಲ್ಲಿ ವೈಷಮ್ಯ ಬಿತ್ತುವದೇನಾದರೂ ನಡೆದಿದ್ರೆ, ಹಿರಿಯ ಕಲಾವಿದರು ಸೇರಿ ತಕ್ಷಣ ತಡೆಹಿಡಿಯಬೇಕು,” ಎಂದು ಹೇಳಿದ್ದಾರೆ.

ಅಭಿಮಾನಿಗಳಿಗೆ ಸ್ಪಷ್ಟ ಸಂದೇಶ

ಅಭಿಮಾನಿಗಳಿಗೆ ನೇರ ಸಂದೇಶ ನೀಡಿದ ರಾಕ್‌ಲೈನ್, “ನಾವು ಕ್ಯಾಮೆರಾ ಮುಂದೆ ನೀತಿ ಭಾಷಣ ಮಾಡ್ತೀವಿ, ಅದನ್ನ ರಿಯಲ್ ಲೈಫಲ್ಲೂ ಪಾಲಿಸಬೇಕು. ದರ್ಶನ್ ಆಗಲಿ, ಸುದೀಪ್ ಆಗಲಿ – ಎಲ್ಲರೂ ಮುಂದೆ ಬಂದು ಈ ವಿಷಯದ ಬಗ್ಗೆ ಸ್ಪಷ್ಟ ನಿಲುವು ತೋರಬೇಕು,” ಎಂದರು.

ಲೀಗಲ್ ಆಕ್ಷನ್ ತೆಗೆದ ಹಿನ್ನಲೆ

ಸೋಶಿಯಲ್ ಮೀಡಿಯಾದಲ್ಲಿ ತಾನೂ ಟ್ರೋಲ್‌ಗೆ ಗುರಿಯಾದ ಬಗ್ಗೆ ಮಾತನಾಡಿದ ರಾಕ್‌ಲೈನ್, “ನನ್ನನ್ನೂ ಗೇಲಿ ಮಾಡೋಕೆ ಹೊರಟಿದ್ರು. ನನಗೆ ಸಾಬೀತು ಸಿಕ್ಕಿದ ಮೇಲೆ ಲೀಗಲ್ ಆಕ್ಷನ್ ತೆಗೆದಿದ್ದೀನಿ. ಎಂಟು ಕೇಸ್ ಹಾಕಿದ್ದೀನಿ. ಅವರು ಇನ್ನುಲ್ತು ಹಲವಾರು ವರ್ಷಗಳ ಕಾಲ ಕೋರ್ಟ್‌ಗೆ ಹೋಗಬೇಕಿದೆ. ಸಮಯ ಬಂದಾಗ ಸತ್ಯವನ್ನು ಬಹಿರಂಗಪಡಿಸುತ್ತೀನಿ. ಆವಾಗ ಯಾರ ಬೆಂಬಲ ಸಿಗುತ್ತೆ ಅಂತ ಗೊತ್ತಾಗುತ್ತದೆ,” ಎಂದರು.

ಸಮಾಪ್ತಿಗೆ ಕರೆ

“ಇದು ಕಲಾವಿದರ ವಿರುದ್ಧವೋ ಅಭಿಮಾನಿಗಳ ವಿರೋಧವೋ ಅಲ್ಲ – ಇದೊಂದು ವೈಚಾರಿಕ ಪಾಠ. ಕಲಾವಿದರು, ಅಭಿಮಾನಿಗಳು, ನಿರ್ಮಾಪಕರು, ತಂತ್ರಜ್ಞರು ಎಲ್ಲರೂ ಒಂದಾಗಿ ಚಿತ್ರರಂಗವನ್ನು ಮುಂದೆ ಕೊಂಡೊಯ್ಯೋ ಕೆಲಸ ಮಾಡಬೇಕು,” ಎಂಬ ಮೂಲಕ ರಾಕ್‌ಲೈನ್ ವೆಂಕಟೇಶ್ ಸಮಗ್ರ ಚಿತ್ರರಂಗಕ್ಕೆ ಒಂದಾದಂತ ಒಕ್ಕೂಟದ ಸಂದೇಶ ನೀಡಿದ್ದಾರೆ.

***

“ಭ್ರಷ್ಟರ ಬೇಟೆ” ಪತ್ರಿಕೆಗೆ ರಾಜ್ಯದ್ಯಂತ ವರದಿಗಾರರು ಬೇಕಾಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8088070392

Related News

error: Content is protected !!