Categories: Latest

ಆಳವಾದ ಬಾವಿಗೆ ಬಿದ್ದ ನಾಯಿ; ಸಾಹಸದಿಂದ ರಕ್ಷಿಸಿದ ಚಿಕ್ಕಬಳ್ಳಾಪುರ ಅಗ್ನಿಶಾಮಕ ಸಿಬ್ಬಂದಿ

ಚಿಕ್ಕಬಳ್ಳಾಪುರ: ಆಕಸ್ಮಿಕವಾಗಿ ಆಳವಾದ ಬಾವಿಗೆ ಬಿದ್ದಿದ್ದ ನಾಯಿಯೊಂದನ್ನು ಚಿಕ್ಕಬಳ್ಳಾಪುರ ಅಗ್ನಿಶಾಮಕ ಇಲಾಖೆಯ ಸಿಬ್ಬಂದಿ ಸತತ ಒಂದೂವರೆ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ರಕ್ಷಿಸಿದ ಘಟನೆ ತಾಲೂಕಿನ ಕಡಶಿಗೆನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಕೃಷ್ಣಮ್ಮ ಎಂಬುವವರ ಜಮೀನಿನಲ್ಲಿರುವ ಸುಮಾರು 30×30 ಅಡಿ ವಿಸ್ತೀರ್ಣ ಹಾಗೂ 30 ಅಡಿ ಆಳದ ತೆರೆದ ಬಾವಿಗೆ ನಾಯಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿತ್ತು. ಬಾವಿಯಲ್ಲಿ ನೀರು ಇಲ್ಲದಿದ್ದರೂ, ಆಳ ಹೆಚ್ಚಾಗಿದ್ದರಿಂದ ಮೇಲಕ್ಕೆ ಬರಲಾಗದೆ ನಾಯಿ ಒದ್ದಾಡುತ್ತಾ ಅಳುತ್ತಿತ್ತು.

ನಾಯಿಯ ಸ್ಥಿತಿಯನ್ನು ಗಮನಿಸಿದ ಸ್ಥಳೀಯರು ಕೂಡಲೇ ಚಿಕ್ಕಬಳ್ಳಾಪುರ ಅಗ್ನಿಶಾಮಕ ಠಾಣೆಯ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣವೇ ಎಚ್ಚೆತ್ತ ಅಗ್ನಿಶಾಮಕ ಸಿಬ್ಬಂದಿ ಜಲವಾಹನದೊಂದಿಗೆ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು.

ಹಗ್ಗ ಹಾಗೂ ಬಲೆಗಳ ನೆರವಿನಿಂದ ಬಾವಿಯೊಳಗೆ ಇಳಿದ ಸಿಬ್ಬಂದಿ, ಸುಮಾರು ಒಂದು ಗಂಟೆ 30 ನಿಮಿಷಗಳ ಕಾಲ ಕಾರ್ಯಾಚರಣೆ ನಡೆಸಿ, ಯಾವುದೇ ಅಪಾಯವಾಗದಂತೆ ಎಚ್ಚರಿಕೆಯಿಂದ ನಾಯಿಯನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿದರು.

ಅಗ್ನಿಶಾಮಕ ಸಿಬ್ಬಂದಿಯ ತ್ವರಿತ ಸ್ಪಂದನೆ ಹಾಗೂ ಸಮಯಪ್ರಜ್ಞೆಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು. ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾದ ಬಳಿಕ ಸಿಬ್ಬಂದಿಗೆ ಹಸ್ತಲಾಘವ ನೀಡಿ ಧನ್ಯವಾದ ಅರ್ಪಿಸಿದರು.

ಪ್ರಮುಖ ಅಗ್ನಿಶಾಮಕ ರವೀಂದ್ರ ಸಂಗಮ ಅವರ ನೇತೃತ್ವದಲ್ಲಿ ಮಡಿವಾಳರ ಬಸವರಾಜ, ರಾಜು ಮುರಕುಟ್ಟಿ, ದತ್ತಾತ್ರೇಯ ಹಾಗೂ ಬೋರಗಾವಿ ಅವರು ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ನಾಯಿಯನ್ನು ಯಶಸ್ವಿಯಾಗಿ ರಕ್ಷಿಸಿದರು.

ಭ್ರಷ್ಟರ ಬೇಟೆ

Recent Posts

ಪಡಿತರ ಚೀಟಿ ಸರ್ವೇಗೆ ತಾಂತ್ರಿಕ ವಿಘ್ನ: ಹುಕ್ಕೇರಿಯಲ್ಲಿ ಸಾರ್ವಜನಿಕರು, ಸರ್ವೇಯರ್‌ಗಳ ಪರದಾಟ

ಹುಕ್ಕೇರಿ: ರಾಜ್ಯಾದ್ಯಂತ ನಡೆಯುತ್ತಿರುವ ಪಡಿತರ ಚೀಟಿ (ರೇಷನ್ ಕಾರ್ಡ್) ಸರ್ವೇ ಕಾರ್ಯಕ್ಕೆ ತಾಂತ್ರಿಕ ಸಮಸ್ಯೆಗಳು ಅಡ್ಡಿಯಾಗಿದ್ದು, ಬೆಳಗಾವಿ ಜಿಲ್ಲೆಯ ಹುಕ್ಕೇರಿ…

31 minutes ago

ಹುಬ್ಬಳ್ಳಿಯಲ್ಲಿ ಕೊಲೆ: 12 ವರ್ಷ ಸೇಡು ಹೊತ್ತ ತಾಯಿ! ಮಗನ ಹಂತಕನ ರಕ್ತ ಹರಿಸಿ ಪ್ರತೀಕಾರ ತೀರಿಸಿಕೊಂಡ ರಣಚಂಡಿ

‘ಹಾವಿನ ದ್ವೇಷ 12 ವರ್ಷ’ ಎಂಬ ಮಾತು ಇಲ್ಲಿ ಅಕ್ಷರಶಃ ನಿಜವಾದಂತಿದೆ. ತನ್ನ ಮಗನನ್ನು ಕೊಂದವನನ್ನು ಶಿಕ್ಷಿಸುವವರೆಗೂ ನೆಮ್ಮದಿ ಕಾಣದ…

33 minutes ago

17ರ ಬಾಲಕಿಯ ಧೈರ್ಯದಿಂದ ಬಯಲಾಯ್ತು 3 ಕೊಲೆಗಳ ರಹಸ್ಯ; ಮನೆಯ ಅಂಗಳ ಅಗೆದಾಗ ಸಿಕ್ಕಿದ್ದು ಅಸ್ಥಿಪಂಜರ!

ತಮಿಳುನಾಡು: ಪ್ರೀತಿಗೆ ಪೋಷಕರ ವಿರೋಧ, ಮನೆಯಿಂದ ಓಡಿಹೋದ ಅಪ್ರಾಪ್ತ ಬಾಲಕಿ, ತಂದೆಯ ವಿರುದ್ಧ ಕೇಳಿಬಂದ ಗಂಭೀರ ಆರೋಪಗಳು… ಇವೆಲ್ಲದರ ನಡುವೆ…

17 hours ago

ಬೆಂಗಳೂರಿನಲ್ಲಿ NEET ತಯಾರಿ ಮಾಡುತ್ತಿದ್ದ ವಿದ್ಯಾರ್ಥಿನಿಯರ ರೀಲ್ಸ್‌ಗೆ 9 ಕೋಟಿ ವೀಕ್ಷಣೆ; ಕೊನೆಗೆ ಓದಿಗೇ ಬಿತ್ತು ಕುತ್ತು!

ಬೆಂಗಳೂರು: ವೈದ್ಯಕೀಯ ಪ್ರವೇಶ ಪರೀಕ್ಷೆ (NEET)ಗೆ ತಯಾರಿ ನಡೆಸುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರು ಸಾಮಾಜಿಕ ಜಾಲತಾಣದ ರೀಲ್ಸ್‌ ಗೀಳಿಗೆ ಬಿದ್ದು, ತಮ್ಮ…

17 hours ago

ರಾಜ್ಯದ 101 ತಾಲೂಕುಗಳು ಬರಪೀಡಿತ ಘೋಷಣೆ; 89 ತಾಲೂಕುಗಳಲ್ಲಿ ತೀವ್ರ ಬರ, 12 ತಾಲೂಕುಗಳಲ್ಲಿ ಸಾಧಾರಣ ಬರ

ಕಾರವಾರ: ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ರಾಜ್ಯದ 101 ತಾಲೂಕುಗಳನ್ನು ಬರಪೀಡಿತ ಎಂದು ರಾಜ್ಯ ಸರ್ಕಾರ ಘೋಷಿಸಿದೆ.…

3 days ago

ಹುಬ್ಬಳ್ಳಿಯಲ್ಲಿ ಹಾಡಹಗಲೇ ನಡುರಸ್ತೆಯಲ್ಲಿ ಬರ್ಬರ ಹತ್ಯೆ: ಬೈಕ್ ಸವಾರನನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದ ದುಷ್ಕರ್ಮಿಗಳು!

ವಿದ್ಯಾನಗರದ ಬನಶಂಕರಿ ಬಡಾವಣೆಯ ಸಿದ್ದೇಶ್ವರ ಪಾರ್ಕ್ ಬಳಿ ಘಟನೆ; ಮೂವರು ಆರೋಪಿಗಳಿಗಾಗಿ ಪೊಲೀಸರ ಶೋಧ ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ…

3 days ago