Latest

40 ಕೋಟಿ ರೂ, ವಂಚನೆ ಮಾಡಿಕೊಂಡು ದಂಪತಿ ಪರಾರಿ : ಬೆಂಗಳೂರು ನಿವಾಸಿಗಳು ಶಾಕ್!

ಬೆಂಗಳೂರು, ಜುಲೈ 6 – ಚೀಟಿ ಹಣದ ಆಸೆಗೆ ಬಿದ್ದು ಕೋಟ್ಯಾಂತರ ರೂಪಾಯಿಗಳನ್ನು ಹೋದವರು ಶತಾರು. ಇದೀಗ, ಬೆಂಗಳೂರಿನ ಜರಗನಹಳ್ಳಿಯಲ್ಲಿ ದೊಡ್ಡ ಪ್ರಮಾಣದ ಚೀಟಿ ವಂಚನೆಯ ಪ್ರಕರಣ ವರದಿಯಾಗಿದೆ. ಸುಮಾರು 40 ಕೋಟಿ ರೂ. ವಂಚನೆ ಮಾಡಿದ ದಂಪತಿ ಈಗ ಗಂಭೀರ ಆರೋಪ ಎದುರಿಸುತ್ತಿದ್ದಾರೆ.

ಆರೋಪಿಗಳು ಸುಧಾ ಮತ್ತು ಸಿದ್ದಾಚಾರಿ ಎಂಬ ದಂಪತಿ. ಇವರು ಕಳೆದ 20 ವರ್ಷಗಳಿಂದ ಜರಗನಹಳ್ಳಿಯಲ್ಲಿ ಚೀಟಿ ಚಟುವಟಿಕೆಗಳನ್ನು ನಡೆಸುತ್ತಿದ್ದರು. ಇದರಲ್ಲಿ ಸುಮಾರು 600ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು, ಕೆಲವರು 5 ಲಕ್ಷದಿಂದ 10 ಲಕ್ಷ ರೂಪಾಯಿವರೆಗೂ ಹಣ ಹೂಡಿಕೆ ಮಾಡಿದ್ದರು. ಆದರೆ, ಕಳೆದ ಒಂದು ವರ್ಷದಿಂದ ಸುಧಾ ದಂಪತಿ ಚೀಟಿ ಹಣ ವಾಪಸ್ ಕೊಡದೇ ವಿಳಂಬ ಮಾಡುತ್ತಿದ್ದರು.

ಪರಾರಿ ಆಗಿರುವ ಘಟನೆ ಜೂನ್ 3ರಂದು ಮಧ್ಯರಾತ್ರಿ ನಡೆದಿದೆ. ತಮ್ಮ ಇಬ್ಬರು ಮಕ್ಕಳೊಂದಿಗೆ ದಂಪತಿ ಮನೆಯನ್ನೇ ಬಿಟ್ಟು ಓಡಿದ್ದಾರೆ. ಈ ಹಿಂದೆ ಬ್ಯಾಂಕ್‌ನಲ್ಲಿ ಇರುವ ಚಿನ್ನವಸ್ತುಗಳನ್ನು ತೆಗೆದು, ಮೊಬೈಲ್‌ಗಳನ್ನು ಮನೆಯಲ್ಲೇ ಬಿಟ್ಟು, ಬೇರೆ ವಸ್ತುಗಳೊಂದಿಗೆ ನಾಪತ್ತೆಯಾಗಿದ್ದಾರೆ.

ಅವರ ಮನೆಯವರು ಮರುದಿನವೇ ಪುಟ್ಟೇನಹಳ್ಳಿ ಠಾಣೆಗೆ ಕಾಣೆಯಾದ ದೂರು ನೀಡಿದ್ದು, ಬಳಿಕ ಹಣ ಕಳೆದುಕೊಂಡ ಸಾರ್ವಜನಿಕರೂ ಒಟ್ಟುಗೂಡಿ FIR ದಾಖಲಿಸಿದ್ದಾರೆ. ಇದೀಗ ಪುಟ್ಟೇನಹಳ್ಳಿ ಠಾಣೆಯ ಪೊಲೀಸರು ಮೂರು ವಿಶೇಷ ತಂಡಗಳನ್ನು ರಚಿಸಿ ಆರೋಪಿಗಳ ಪತ್ತೆಗೆ ಶೋಧ ಕಾರ್ಯ ನಡೆಸುತ್ತಿದ್ದಾರೆ. ಆದರೆ ಇದುವರೆಗೂ ಸುಧಾ ಮತ್ತು ಸಿದ್ದಾಚಾರಿ ಅವರು ಸುಳಿವು ಸಹ ಬಿಟ್ಟಿಲ್ಲ. ಮೊಬೈಲ್‌ ಬಳಸುವುದು ಇಲ್ಲ, ಸಂಬಂಧಿಕರಿಗೂ ಸಂಪರ್ಕವಿಲ್ಲ – ಇದರಿಂದಾಗಿ ಅವರು ಭೂಗತ ಜೀವನದತ್ತ ತಿರುಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ವಂಚನೆಗೆ ಒಳಪಟ್ಟ ಸಾರ್ವಜನಿಕರು ಗೃಹ ಸಚಿವ ಜಿ. ಪರಮೇಶ್ವರ್ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮೊರೆ ಹೋಗಿದ್ದಾರೆ. ಆರೋಪಿಗಳನ್ನು ಶೀಘ್ರ ಬಂಧಿಸಿ, ನ್ಯಾಯ ನೀಡಬೇಕೆಂದು ಮನವಿ ಸಲ್ಲಿಸಲಾಗಿದೆ.

ಈ ಪ್ರಕರಣವು ಮತ್ತೆ ಒಮ್ಮೆ ಖಾಸಗಿ ಚೀಟಿ ವ್ಯವಹಾರಗಳ ಅಪಾಯವನ್ನು ಸಾಬೀತು ಪಡಿಸಿದೆ. ಸಾರ್ವಜನಿಕರು ಈ ತರಹದ ಹೂಡಿಕೆಗಳಲ್ಲಿ ಎಚ್ಚರಿಕೆಯಿಂದ ಇರಬೇಕಾದ ಅವಶ್ಯಕತೆಯನ್ನು ನೆನಪಿಸಿದೆ.

nazeer ahamad

Recent Posts

ಭಟ್ಕಳ ಘಟನೆಗೆ ಹೊಸ ತಿರುವು: ಯುವತಿಯ ದೂರಿನ ಮೇರೆಗೆ ಮುಸ್ಲಿಂ ಯುವಕ ಬಂಧನ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಪಟ್ಟಣದಲ್ಲಿ ಮಹಿಳಾ ಸಹೋದ್ಯೋಗಿಯನ್ನು ಆಕೆಯ ಇಚ್ಛೆಗೆ ವಿರುದ್ಧವಾಗಿ ಕಾರಿನಲ್ಲಿ ಕರೆದೊಯ್ದ ಆರೋಪದ ಹಿನ್ನೆಲೆಯಲ್ಲಿ…

7 hours ago

ಅಧಿಕಾರಿಗೆ ಚಪ್ಪಲಿ ಏಟು: 20 ವರ್ಷವಾದರೂ ಭೂ ಪರಿಹಾರ ನೀಡದ ಬಾಗಲಕೋಟೆ ಅಧಿಕಾರಿಗಳಿಗೆ ಲೋಕಾಯುಕ್ತ ಸಮನ್ಸ್

ಬಾಗಲಕೋಟೆ: ಸುಮಾರು 20 ವರ್ಷಗಳ ಹಿಂದೆ ಭೂಸ್ವಾಧೀನಪಡಿಸಿಕೊಂಡ ಜಮೀನಿಗೆ ಇನ್ನೂ ಪರಿಹಾರ ನೀಡದೇ ರೈತನನ್ನು ಅಲೆದಾಡಿಸಿರುವ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ…

15 hours ago

ಸಾರ್ವಜನಿಕರ ದೂರುಗಳ ಬೆನ್ನಲ್ಲೇ ದಾಸನಪುರ ಗ್ರಾಮ ಪಂಚಾಯಿತಿ ಪಿಡಿಓ ಉಷಾ ಅಮಾನತು

ಬೆಂಗಳೂರು: ಅಧಿಕೃತ ಕರ್ತವ್ಯ ನಿರ್ವಹಣೆಯಲ್ಲಿ ಲೋಪ ಎಸಗಿರುವ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಗ್ರಾಮ ಪಂಚಾಯಿತಿಯ ಅಭಿವೃದ್ಧಿ…

15 hours ago

ರೈತರ ಹಣ ಗುಳುಂ: ತೊಂಡೇಭಾವಿ ಹಾಲು ಡೇರಿಯಲ್ಲಿ ₹2.33 ಲಕ್ಷ ಹಣ ದುರುಪಯೋಗ.!

ಗೌರಿಬಿದನೂರು: ತೊಂಡೇಭಾವಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ರೈತರ ಹಣ ದುರುಪಯೋಗವಾಗಿರುವ ಆರೋಪ ಕೇಳಿಬಂದಿದ್ದು, ಈ ವಿಚಾರವಾಗಿ ಗ್ರಾಮಸ್ಥರು ಹಾಗೂ…

15 hours ago

₹50 ಸಾವಿರ ಲಂಚ ಸ್ವೀಕರಿಸುವಾಗ ಪಿಎಸ್‌ಐ, ಕಾನ್ಸ್ಟೇಬಲ್ ಲೋಕಾಯುಕ್ತ ಬಲೆಗೆ

ಕಲಬುರಗಿ: ರಾಜ್ಯದಲ್ಲಿ ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತ ಅಧಿಕಾರಿಗಳು ನಡೆಸುತ್ತಿರುವ ಕಾರ್ಯಾಚರಣೆ ಮುಂದುವರಿದಿದ್ದು, ಕಲಬುರಗಿ ಜಿಲ್ಲೆಯಲ್ಲಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಪೊಲೀಸ್…

16 hours ago

4ನೇ ತರಗತಿ ಓದಿದ ಮೆಕ್ಯಾನಿಕ್‌ನ ಅದ್ಭುತ ಸಾಧನೆ: ಮಾರುತಿ 800 ಅನ್ನು ಲ್ಯಾಂಬೋರ್ಗಿನಿಯನ್ನಾಗಿ ಮಾಡಿದ ಕನ್ನಡಿಗ!

ಈ ಕಾಲದಲ್ಲಿ ಪ್ರತಿಭೆ ಮತ್ತು ಕ್ರಿಯೇಟಿವಿಟಿಗೆ ಯಾವುದೇ ವಿದ್ಯಾರ್ಹತೆ ಅಥವಾ ದೊಡ್ಡ ಹುದ್ದೆಗಳ ಅಗತ್ಯವಿಲ್ಲ ಎಂಬುದನ್ನು ಹಾಸನ ಜಿಲ್ಲೆಯ ಅರಸೀಕೆರೆಯ…

16 hours ago