Latest

ಸರಗಳ್ಳತನ ಮಾಡಿದ ಆರೋಪಿತರ ಬಂಧನ

ರಾಷ್ಟ್ರೀಯ ದಾರಿಯಲ್ಲಿ ನಡೆದು ಹೋಗುತ್ತಿದ್ದಾಗ ಕುತ್ತಿಗೆಯಲ್ಲಿದ್ದ ಅಂದಾಜು 20 ಗ್ರಾಂ ಬಂಗಾರದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗಿದ್ದ ಆರೋಪಿಗಳನ್ನು ಭಟ್ಕಳ ಪಡಿತರ ಬಂಧಿಸಿದ್ದಾರೆ.

17-04-2025 ರಂದು ನಾಗಮ್ಮ ಗಂಡ ಸುಕ್ರ ಮೊಗೇರ ಮುರ್ಡೇಶ್ವರ, ಭಟ್ಕಳ ತಾಲೂಕ ರವರು ರಾಷ್ಟ್ರೀಯ ಹೆದ್ದಾರಿ-66ರ ಮೇಲೆ ನಡೆದುಕೊಂಡು ಮನೆಗೆ ಹೋಗುವಾಗ ಅಪರಿಚಿತ ಇಬ್ಬರು ವ್ಯಕ್ತಿಗಳು ಬೈಕನಲ್ಲಿ ಬಂದು ಕುತ್ತಿಗೆಯಲ್ಲಿ ಇದ್ದ ಅಂದಾಜು 20 ಗ್ರಾಂ ತೂಕದ ಬಂಗಾರದ ಮಾಂಗಲ್ಯದ ಸರವನ್ನು ಕಿತ್ತುಕೊಂಡು ಹೋದ ಬಗ್ಗೆ ಭಟ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಸದ್ರಿ ಪ್ರಕರಣದಲ್ಲಿ ಆರೋಪಿತರ ಪತ್ತೆಗೆ ಶ್ರೀ ನಾರಾಯಣ ಎಂ. ಐ.ಪಿ.ಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಉತ್ತರ ಕನ್ನಡ ಶ್ರೀ ಕೃಷ್ಣಮೂರ್ತಿ, ಜಿ. ಮಾನ್ಯ ಹೆಚ್ಚುವರಿ ಪೊಲೀಸ್ ಅಧಿಕ್ಷಕರು ಉತ್ತರ ಕನ್ನಡ, ಹಾಗೂ ಶ್ರೀ ಜಗದೀಶ ಎಂ. ಮಾನ್ಯ ಹೆಚ್ಚುವರಿ ಪೊಲೀಸ್ ಅಧಿಕ್ಷಕರು ಉತ್ತರ ಕನ್ನಡ ಮತ್ತು ಶ್ರೀ ಮಹೇಶ ಎಮ್, ಪೊಲೀಸ್ ಉಪಾಧಿಕ್ಷಕರು ಭಟ್ಕಳ ಉಪ ವಿಭಾಗ ರವರ ಮಾರ್ಗ ದರ್ಶನದಲ್ಲಿ ತನಿಖಾಧಿಕಾರಿಯಾದ ಶ್ರೀ ಸಂತೋಷ ಕಾಯ್ಕಿಣಿ ಪೊಲೀಸ್ ವೃತ್ತ ನಿರೀಕ್ಷಕರು, ಭಟ್ಕಳ ಗ್ರಾಮಾಂತರ ವೃತ್ತ ಶ್ರೀ ಹಣಮಂತ ಬಿರಾದಾರ ಪೊಲೀಸ್ ಉಪ ನಿರೀಕ್ಷಕರು ಮುರ್ಡೇಶ್ವರ ಪೊಲೀಸ್ ಠಾಣೆ, ಹಾಗೂ ಸಿಬ್ಬಂದಿ ರವರ ನೇತೃತ್ವದಲ್ಲಿ ತಂಡವನ್ನು ರಚನೆ ಮಾಡಿ ಮಹೇಶ ತಂದೆ ಪರಸಪ್ಪ ಕುರಿ ಸಾ|| ಸಂತಿಸಿಗ್ಲಿ, ಲಕ್ಷೇಶ್ವರ, ಗದಗ ಜಿಲ್ಲೆ ಹಾಗೂ ಮಣಿಕಂಠ ತಂದೆ ಹಣಮಂತ ಶಿರಹಟ್ಟಿ ಸಾ|| ಆನಂದ ನಗರ. ಕೃಷ್ಣಾ ಕಾಲೋನಿ ರವರನ್ನು ಬಂಧಿಸಿದ್ದಾರೆ.ಹುಬ್ಬಳ್ಳಿ ಇವರಿಬ್ಬರನ್ನು ಬಂಧಿತರಿಂದ ಕೃತ್ಯಕ್ಕೆ ಉಪಯೋಗಿಸಿದ 150000/- ರೂ ಬೆಲೆ ಬಾಳುವ ಬೈಕ,ಸರಗಳ್ಳತನ ಮಾಡಿದ್ದ 26 ಗ್ರಾಂ ತೂಕದ 220000 ರೂ ಬೆಲೆ ಬಾಳುವ ಬಂಗಾರದ ಮಾಂಗಲ್ಯ ಸರ ಹಾಗೂ ಎರಡು ಮೊಬೈಲ ಪೋನ್ ಗಳನ್ನು ಹೀಗೆ ಒಟ್ಟು ಅಂದಾಜು 3,80,000/- ರೂ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ .

ಈ ಕಾರ್ಯಾಚರಣೆಯಲ್ಲಿ, ಶ್ರೀ ನಾರಾಯಣ ಎಂ. ಐ.ಪಿ.ಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಉತ್ತರ ಕನ್ನಡ ಶ್ರೀ ಕೃಷ್ಣಮೂರ್ತಿ. ಜಿ. ಮಾನ್ಯ ಹೆಚ್ಚುವರಿ ಪೊಲೀಸ್ ಅಧಿಕ್ಷಕರು ಉತ್ತರ ಕನ್ನಡ, ಹಾಗೂ ಶ್ರೀ ಜಗದೀಶ ಎಂ. ಮಾನ್ಯ ಹೆಚ್ಚುವರಿ ಪೊಲೀಸ್ ಅಧಿಕ್ಷಕರು ಉತ್ತರ ಕನ್ನಡ ಮತ್ತು ಶ್ರೀ ಮಹೇಶ ಎಮ್, ಪೊಲೀಸ್ ಉಪಾಧಿಕ್ಷಕರು ಭಟ್ಕಳ ಉಪ ವಿಭಾಗ ರವರ ಮಾರ್ಗ ದರ್ಶನದಲ್ಲಿ ಶ್ರೀ ಸಂತೋಷ ಕಾಯ್ಕಿಣಿ, ಸಿ.ಪಿ.ಐ. ಭಟ್ಕಳ ಗ್ರಾಮಾಂತರ ವೃತ್ತ ಮತ್ತು ಶ್ರೀ ಹಣಮಂತ ಬಿರಾದಾರ ಪಿ.ಎಸ್.ಐ ಮುರ್ಡೇಶ್ವರ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಠಾಣೆಯ ಸಿಬ್ಬಂದಿಗಳಾದ ಶ್ರೀ ಸಬ್ರಮಣ್ಯ ನಾಯ್ಕ,ಮಂಜುನಾಥ ಲಕ್ಕಾಪೂರ,ವಿಜಯ ನಾಯ್ಕ, ಮಂಜುನಾಥ ಮಡಿವಾಳ, ಯೊಗೇಶ ನಾಯ್ಕ ಮಂಕಿ ಪೊಲೀಸ್ ಠಾಣೆಯ ಕಿರಣಕುಮಾರ ರೆಡ್ಡಿ, ಅಣ್ಣಪ್ಪ ಕೋರಿ ಹಾಗೂ ಶಿರಸಿ ಉಪವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿಗಳಾದ, ಶ್ರೀ ಸಂತೋಷ ಕಮಟಗೇರಿ, ಹನಮಂತ ಬರ್ಗಿ, ಪ್ರಶಾಂತ ಪಾವಸ್ಥರ, ಶಿವಲಿಂಗ ತುಪ್ಪದ, ಮಾಲತೇಶ, ರಾಮಯ್ಯ, ಮಂಜು ಪೂಜಾರಿ, ಸದ್ದಾಂ ರವರು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದು,ಸದ್ರಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಎಲ್ಲಾ ಅಧಿಕಾರಿ ಸಿಬ್ಬಂದಿಗಳಿಗೆ ಮಾನ್ಯ ಪೊಲೀಸ್ ಅಧೀಕ್ಷಕರು ಪ್ರಸಂಶೆ ವ್ಯಕ್ತಪಡಿಸಿರುತ್ತಾರೆ.

nazeer ahamad

Recent Posts

ಚಲಿಸುವ ರೈಲು ಕೆಳಗೆ ಸಿಲುಕಿದ ತಂದೆ-ಮಗು: ಅದಮ್ಯ ಧೈರ್ಯದಿಂದ ಪಾರಾದ ಜೀವಗಳು!

ಬಾಂಗ್ಲಾದೇಶದ ಕಿಶೋರ್‌ಗಂಜ್ ಜಿಲ್ಲೆಯ ಭೈರಬ್ ರೈಲು ನಿಲ್ದಾಣದಲ್ಲಿ ನಡೆದ ಹೃದಯ ಕಲುಕುವ ಘಟನೆ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ…

2 hours ago

ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆ: ಅಥಣಿಯಲ್ಲಿ ಹೃದಯವಿದ್ರಾವಕ ಘಟನೆ

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಶಂಕರಮಠ ಗಲ್ಲಿಯಲ್ಲಿ 15 ವರ್ಷಗಳ ದಾಂಪತ್ಯ ಜೀವನ ನಡೆಸಿದ್ದ ಮಹಿಳೆಯೊಬ್ಬಳು ಗಂಡನ ವರದಕ್ಷಿಣೆ ಕಿರುಕುಳಕ್ಕೆ…

2 hours ago

ಬಿಜೆಪಿ ಯುವ ಮೋರ್ಚಾ ನಾಯಕ ವೆಂಕಟೇಶ್ ಕೊಲೆ ಪ್ರಕರಣ: ಆರು ಅಪರಾಧಿಗಳಿಗೆ ಗಲ್ಲು ಶಿಕ್ಷೆ

ಬಿಜೆಪಿ ಯುವ ಮೋರ್ಚಾದ ನಗರ ಘಟಕದ ಅಧ್ಯಕ್ಷ ವೆಂಕಟೇಶ ಕುರುಬರ್ ಅಲಿಯಾಸ್ ಜೆಎನ್‌ಎನ್ ವೆಂಕಿ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರು…

2 hours ago

66ರ ವೃದ್ಧನಿಗೆ 35ರ ಯುವತಿಯೊಂದಿಗೆ ಮದುವೆ! ವಯಸ್ಸು ಕೇವಲ ಸಂಖ್ಯೆ ಮಾತ್ರವೇ?

66 ವರ್ಷದ ಸೋಮ್ ದೇವ್ ಮತ್ತು 35 ವರ್ಷದ ಯುವತಿಯ ವಿವಾಹ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.…

2 hours ago

ವಿಮೆ-ಆಸ್ತಿ ಲಾಭಕ್ಕಾಗಿ ಗಂಡನ ಕೊಲೆ: ಹರಿಯಾಣದಲ್ಲಿ ಪ್ರಿಯಕರ ನೊಂದಿಗೆ ಪತ್ನಿ ರಚಿಸಿದ್ದ ಸಂಚು ಬಯಲು.!

ಹರಿಯಾಣದ ಚರ್ಕಿ ದಾದ್ರಿ ಜಿಲ್ಲೆಯಲ್ಲಿ ನಡೆದ ಭೀಕರ ಘಟನೆಯೊಂದು ಮಾನವ ಸಂಬಂಧಗಳನ್ನೇ ಪ್ರಶ್ನಿಸುವಂತೆ ಮಾಡಿದೆ. ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ,…

2 hours ago

ಬೆಂಗಳೂರು ಡ್ರಗ್ಸ್ ಜಾಲದ ಮೇಲೆ ಭಾರೀ ದಾಳಿ: ₹36 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ, 16 ಮಂದಿ ಬಂಧನ

ರಾಜಧಾನಿ ಬೆಂಗಳೂರಿನಲ್ಲಿ ಡ್ರಗ್ಸ್ ಮಾಫಿಯಾ ವಿರುದ್ಧ ಪೊಲೀಸರು ಭರ್ಜರಿ ಕಾರ್ಯಾಚರಣೆ ಮುಂದುವರೆಸಿದ್ದು, ನಾಲ್ವರು ವಿದೇಶಿಯರು ಸೇರಿದಂತೆ ಒಟ್ಟು 16 ಮಂದಿಯನ್ನು…

7 hours ago